ಪಂಚಾಂಗ
ಶ್ರೀ ಪರಾಭವ ನಾಮ ಸಂವತ್ಸರ
ಉತ್ತರಾಯಣ, ವಸಂತ ಋತು
ಚೈತ್ರ ಮಾಸ, ಶುಕ್ಲ ಪಕ್ಷ
ವಾರ: ಮಂಗಳವಾರ, ತಿಥಿ: ತ್ರಯೋದಶಿ
ನಕ್ಷತ್ರ: ಪುಬ್ಬ
ರಾಹುಕಾಲ: 3.31 ರಿಂದ 5.03
ಗುಳಿಕಕಾಲ: 12.27 ರಿಂದ 1.59
ಯಮಗಂಡಕಾಲ: 9.23 ರಿಂದ 10.55
ಮೇಷ: ಈ ದಿನ ದ್ರವ್ಯ ಲಾಭ, ಕಾರ್ಯ ಸಾಧನೆ, ಮಿತ್ರರ ಭೇಟಿ, ಮಾಡುವ ಕೆಲಸದಲ್ಲಿ ಜಯ, ಆರೋಗ್ಯದಲ್ಲಿ ಏರುಪೇರು.
ವೃಷಭ: ಈ ದಿನ ಅಲ್ಪ ಪ್ರಗತಿ, ಸಂಬಂಧಿಕರಿಂದ ತೊಂದರೆ, ಮನಸ್ಸಿಗೆ ವ್ಯಥೆ, ಶರೀರದಲ್ಲಿ ಆತಂಕ, ದುಷ್ಟ ಚಿಂತನೆ.
ಮಿಥುನ: ಅನ್ಯ ಜನರ ಸಹಕಾರ, ಕೀರ್ತಿ ವೃದ್ಧಿ, ಅಧಿಕಾರಿಗಳಲ್ಲಿ ಕಲಹ, ವಿವಾಹಕ್ಕೆ ಅಡೆತಡೆ, ಅನಾರೋಗ್ಯ.
ಕಟಕ: ಈ ದಿನ ತೀರ್ಥಯಾತ್ರೆ ದರ್ಶನ, ಪರರಿಗೆ ಸಹಾಯ, ಸ್ತ್ರೀ ಲಾಭ, ವಾಹನದಿಂದ ತೊಂದರೆ, ನೌಕರಿಯಲ್ಲಿ ಕಿರಿಕಿರಿ.
ಸಿಂಹ: ಈ ದಿನ ಹೊಗಳಿಕೆಗೆ ಮರುಳಾಗದಿರಿ, ದೂರ ಪ್ರಯಾಣ, ಹಿರಿಯರ ಭೇಟಿ, ಸಂಗಾತಿಯಿಂದ ಹಿತವಚನ, ದಂಡ ಕಟ್ಟುವ ಸಾಧ್ಯತೆ.
ಕನ್ಯಾ: ಈ ದಿನ ಅಧಿಕ ಧನ ಲಾಭ, ಮಹಿಳೆಯರಿಗೆ ಶುಭ, ಮನಸ್ಸಿಗೆ ಶಾಂತಿ, ಸುಖ ಭೋಜನ, ಪತಿ ಪತ್ನಿಯರಲ್ಲಿ ಪ್ರೀತಿ ಸಮಾಗಮ.
ತುಲಾ: ಈ ದಿನ ಕುಟುಂಬ ಸೌಖ್ಯ, ವಿದ್ಯಾರ್ಥಿಗಳಲ್ಲಿ ಉತ್ತಮ ಬೆಳವಣಿಗೆ, ಆಲಸ್ಯ ಮನೋಭಾವ, ಪರರ ಧನಪ್ರಾಪ್ತಿ.
ವೃಶ್ಚಿಕ: ಹೊಸ ವಿಚಾರಗಳಲ್ಲಿ ಆಸಕ್ತಿ, ವಿದೇಶ ಪ್ರಯಾಣ, ದೇವರು ಗುರು ಹಿರಿಯರಲ್ಲಿ ಭಕ್ತಿ, ಹಿರಿಯ ವ್ಯಕ್ತಿಯಿಂದ ಬೆಂಬಲ.
ಧನಸ್ಸು: ಶ್ರಮ ಪಟ್ಟು ಕೆಲಸ ಮಾಡಿದರೆ ಅನುಕೂಲ, ಯಾರಿಗೂ ತಲೆಬಾಗುವುದಿಲ್ಲ, ಅನ್ಯಾಯದ ವಿರುದ್ಧ ಹೋರಾಡುವಿರಿ.
ಮಕರ: ವ್ಯಾಪಾರದಲ್ಲಿ ಬುದ್ಧಿವಂತಿಕೆಯಿಂದ ವ್ಯವಹರಿಸಿ, ಶತ್ರು ನಾಶ, ಹಿಡಿದ ಕೆಲಸ ಸಾಧಿಸುವಿರಿ.
ಕುಂಭ: ನಂಬಿಕಸ್ತರಿಗಾಗಿ ದುಡಿಯುವಿರಿ, ಸಾರ್ವಜನಿಕ ಕೆಲಸಗಳಲ್ಲಿ ಭಾಗಿ, ಅಧಿಕ ಖರ್ಚು, ಇತರರ ಮೂಲಕ ಧನ ಹಾನಿ.
ಮೀನ: ಈ ದಿನ ಕೋಪ ಜಾಸ್ತಿ, ಮಾತಿನ ಚಕಮಕಿ, ರಿಯಲ್ ಎಸ್ಟೇಟ್ನವರಿಗೆ ಲಾಭ, ಚಂಚಲ ಮನಸ್ಸು, ಧನ ಲಾಭ.

