ಮಂಗಳೂರು: ಮಸೀದಿ(Mosque) ವಿಚಾರದಲ್ಲಿ ಭಿನ್ನಾಭಿಪ್ರಾಯದಿಂದಾಗಿ ಎರಡು ತಂಡಗಳ ಸದಸ್ಯರು ಬಡಿದಾಡಿಕೊಂಡ ನಡೆದ ಘಟನೆ ಮಂಗಳೂರಿನ ಉಳ್ಳಾಲ(Ullala) ಸಜೀಪನಡು ಎಂಬಲ್ಲಿ ನಡೆದಿದೆ.
ಸಜಿಪ ಪಡು ತಲೆಮೊಗರು ಬದ್ರಿಯಾ ಜುಮ್ಮಾ ಮಸೀದಿ ಬಳಿ ಎರಡು ತಂಡಗಳ ನಡುವೆ ಮಾರಾಮಾರಿ ನಡೆದಿದ್ದು, ಕತ್ತಿ,ದೊಣ್ಣೆ,ಕಬ್ಬಿಣದ ರಾಡ್ ಬಳಸಿ ಹಲ್ಲೆ ನಡೆಸಲಾಗಿದೆ. ಇದನ್ನೂ ಓದಿ: ಬೆಂಗ್ಳೂರಲ್ಲಿ ಇಂದಿನಿಂದ ಟೋಯಿಂಗ್ ಆರಂಭ – 5 ಜಿಬಿಎ ವ್ಯಾಪ್ತಿಗೆ ತಲಾ ಎರಡೆರಡು ವಾಹನಗಳ ವ್ಯವಸ್ಥೆ
ಹಲ್ಲೆಯಿಂದ ಗಾಯಗೊಂಡವರಿಗೆ ಬಂಟ್ವಾಳ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು,ದೂರು-ಪ್ರತಿದೂರು ಸೇರಿ 3 ಪ್ರಕರಣಗಳು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಬಿಎನ್ಎಸ್ ಮತ್ತು ಆರ್ಮ್ಸ್ ಆಕ್ಟ್ ಅಡಿ ಅಡಿ ದಾಖಲಾಗಿದೆ.

