Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಉಬ್ಬರವಿಳಿತದ ಪ್ರವಾಹವನ್ನು ವಿಪತ್ತು ಎಂದು ಘೋಷಿಸಿದ ಕೇರಳ – ಯಾಕೆ ಗೊತ್ತಾ?
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ಉಬ್ಬರವಿಳಿತದ ಪ್ರವಾಹವನ್ನು ವಿಪತ್ತು ಎಂದು ಘೋಷಿಸಿದ ಕೇರಳ – ಯಾಕೆ ಗೊತ್ತಾ?

Latest

ಉಬ್ಬರವಿಳಿತದ ಪ್ರವಾಹವನ್ನು ವಿಪತ್ತು ಎಂದು ಘೋಷಿಸಿದ ಕೇರಳ – ಯಾಕೆ ಗೊತ್ತಾ?

Public TV
Last updated: February 23, 2026 7:40 pm
Public TV
Share
3 Min Read
SEA FLOOD
SHARE

ಏರುತ್ತಿರುವ ಸಮುದ್ರ ಮಟ್ಟ ಮತ್ತು ಹವಾಮಾನ ಬಿಕ್ಕಟ್ಟನ್ನು ಹೆಚ್ಚಾಗಿ ಜಗತ್ತಿನ ಕಡಲ ತೀರದ ಪ್ರದೇಶಗಳು ಎದುರಿಸುತ್ತಿವೆ. ಅದೇ ರೀತಿ ಕೇರಳದ ಕೊಚ್ಚಿಯ ಕರಾವಳಿ ಉಪನಗರಗಳು ಮತ್ತು ಹಳ್ಳಿಗಳು ಹಲವು ವರ್ಷಗಳಿಂದ ನಿಧಾನವಾಗಿ ನಿರಂತರ ಕಡಲ ಉಬ್ಬರವಿಳಿತದ ಪ್ರವಾಹವನ್ನು ಎದುರಿಸುತ್ತಿವೆ. ಇದರಿಂದ ಜನರಿಗೆ ಉಂಟಾಗುವ ಸಮಸ್ಯೆ ಪರಿಗಣಿಸಿ ದೇಶದಲ್ಲಿ ಮೊದಲ ಬಾರಿಗೆ ಉಬ್ಬರವಿಳಿತದ ಪ್ರವಾಹವನ್ನು ರಾಜ್ಯ ವಿಪತ್ತು ಎಂದು ಕೇರಳ ಘೋಷಿಸಿದೆ. ಇದರಿಂದ ಪ್ರಕೃತಿ ವಿಕೋಪಕ್ಕೆ ಸಿಗುವ ಪರಿಹಾರ ಕಡಲ ಪ್ರವಾಹಕ್ಕೂ ಸಿಗಲಿದೆ.

Kerala Flood 5

ಕಡಲ ಪ್ರವಾಹಕ್ಕೆ ಕಾರಣವೇನು?
ಸಾಗರಗಳು ಹಸಿರುಮನೆ ಅನಿಲ ಹೊರಸೂಸುವಿಕೆಯಿಂದ ಹೆಚ್ಚುವರಿ ಶಾಖದ 90%ಗಿಂತ ಹೆಚ್ಚಿನದನ್ನು ಹೀರಿಕೊಳ್ಳುತ್ತವೆ. ಇದು ಹಿಮ ಕರಗುವಿಕೆ ಕಾರಣವಾಗುತ್ತಿದೆ. ಅಲ್ಲದೇ ಸಮುದ್ರ ಮಟ್ಟ ವರ್ಷಕ್ಕೆ ಸುಮಾರು 5 ಮಿಲಿಮೀಟರ್‌ಗಳಷ್ಟು ಏರುತ್ತಿದೆ. ಇದು ಕಡಲ ಉಬ್ಬರವಿಳಿತದ ಪ್ರವಾಹಕ್ಕೆ ಪ್ರಮುಖ ಕಾರಣವಾಗಿದೆ. ಇದರಿಂದ ಭಾರತ, ಬಾಂಗ್ಲಾದೇಶ ಮತ್ತು ಚೀನಾ ಹೆಚ್ಚಿನ ಹೊಡೆತ ತಿನ್ನುತ್ತಿವೆ.

15 ಕಿಮೀ ನೀರು ನುಗ್ಗೋ ಭೀತಿ!
ಉಬ್ಬರವಿಳಿತ ಹೆಚ್ಚಾದಾಗ ಕೇರಳದ ಪುಥೇನ್‌ವೇಲಿಕ್ಕರ, ಚೆಲ್ಲಾನಂ, ಕುಂಬಳಂಗಿ ಮತ್ತು ಪರವೂರು ಮುಂತಾದ ಪ್ರದೇಶಗಳಲ್ಲಿ ಹೆಚ್ಚಿನ ಹಾನಿಗಳು ಸಂಭವಿಸುತ್ತಿವೆ. ಹಲವೆಡೆ ಸಮುದ್ರದ ನೀರು ಮನೆಗಳು, ಅಂಗಳಗಳು ಮತ್ತು ಕೃಷಿಭೂಮಿಗೆ ನುಗ್ಗುತ್ತದೆ. ಒಳನಾಡಿನ 15 ಕಿಲೋಮೀಟರ್‌ಗಳವರೆಗೆ ಸಮುದ್ರದ ನೀರು ನುಗ್ಗುವ ಸಾಧ್ಯತೆ ಇದೆ ಎಂದು ಸಹ ವರದಿಯಾಗಿದೆ.

Kerala Flood 4

ಮಳೆಗಾಲಕ್ಕೂ ಮುನ್ನವೇ ಪ್ರವಾಹ!
2012 ರಿಂದ ಕೇರಳದ ಎರ್ನಾಕುಲಂ ಜಿಲ್ಲೆಯ ಕೆಲವು ಭಾಗಗಳು ಉಬ್ಬರವಿಳಿತ ಪ್ರವಾಹದ ಪರಿಣಾಮವನ್ನು ಎದುರಿಸುತ್ತಿವೆ. ಕೊಚ್ಚಿಯ ಈಕ್ವಿನಾಕ್ಟ್ ಸಂಸ್ಥೆ ಅಧ್ಯಯನದ ಪ್ರಕಾರ ಮಾನ್ಸೂನ್ ಪ್ರಾರಂಭವಾಗುವ ಬಹಳ ಮೊದಲೇ, ಅಂದರೆ ನವೆಂಬರ್ ನಿಂದ ಜೂನ್ ವರೆಗೆ 20,000 ಕ್ಕೂ ಹೆಚ್ಚು ಮನೆಗಳಿಗೆ ಈ ಪ್ರವಾಹದಿಂದ ಹಾನಿಯಾಗುತ್ತಿದೆ ಎಂದು ಅಂದಾಜಿಸಿದೆ. ಇದರಿಂದ ಜನರಿಗೆ ಉಂಟಾಗುವ ನಷ್ಟಗಳನ್ನು ಭರಿಸಲು ಇಲ್ಲಿಯವರೆಗೆ ಯಾವುದೇ ವ್ಯವಸ್ಥೆ ಇರಲಿಲ್ಲ.

Kerala Flood 1

ಪರಿಹಾರ – 17 ಗ್ರಾಮಗಳ ಹೋರಾಟದ ಫಲ
ಜನವರಿ 30, 2026 ರಂದು, ಕೇರಳ ಸರ್ಕಾರವು ಕರಾವಳಿಯ ಉಬ್ಬರವಿಳಿತದ ಪ್ರವಾಹವನ್ನು (Coastal High-Tide Flooding/Sea Incursion) ಅಧಿಕೃತವಾಗಿ ರಾಜ್ಯ ವಿಪತ್ತು ಎಂದು ಘೋಷಿಸಿದೆ. ಈ ನಿರ್ಧಾರದಿಂದಾಗಿ, ಸಮುದ್ರದ ಅಲೆಗಳು ಜನವಸತಿ ಪ್ರದೇಶಗಳು, ಮನೆಗಳು ಮತ್ತು ಕೃಷಿ ಭೂಮಿಗೆ ಆಗುವ ಹಾನಿಗೆ ಜನ ರಾಜ್ಯ ವಿಪತ್ತು ನಿರ್ವಹಣಾ ನಿಧಿಯಿಂದ (SDRF) ಪರಿಹಾರ ಪಡೆಯಬಹುದಾಗಿದೆ. ಭಾರತದಲ್ಲೇ ಮೊದಲ ಬಾರಿಗೆ ಕರಾವಳಿ ಉಬ್ಬರವಿಳಿತದ ಪ್ರವಾಹವನ್ನು ರಾಜ್ಯ ವಿಪತ್ತು ಎಂದು ಘೋಷಿಸಿದ ಹೆಗ್ಗಳಿಕೆ ಕೇರಳ ಸರ್ಕಾರದ್ದು.

ಈ ಕ್ರಮವು 17 ಗ್ರಾಮಸಭೆಗಳು ಸಲ್ಲಿಸಿದ ಅರ್ಜಿಗಳು ಮತ್ತು ಸಮುದಾಯಗಳ ಒತ್ತಡದ ಫಲಿತಾಂಶವಾಗಿದೆ. ಈ ಹೊಸ ನಿಯಮದಡಿ, ಮಳೆ, ಉಬ್ಬರವಿಳಿತ ಅಥವಾ ಅಲೆಗಳಿಂದ ಉಂಟಾಗುವ ಪ್ರವಾಹವಾಗಿದ್ದರೂ, ಬಾಧಿತರಿಗೆ ಪರಿಹಾರ ಲಭ್ಯವಾಗಲಿದೆ.

Kerala Flood 3

ಉಬ್ಬರವಿಳಿತದ ಪ್ರವಾಹ
ಉಬ್ಬರವಿಳಿತದ ಪ್ರವಾಹಗಳು ಚಂದ್ರ ಮತ್ತು ಸೂರ್ಯನ ಗುರುತ್ವಾಕರ್ಷಣೆಯಿಂದ ಉಂಟಾಗುವ ಸಾಗರ ನೀರಿನ ಆವರ್ತಕ ಏರಿಳಿತಗಳಾಗಿವೆ. ಇವು ದಿನಕ್ಕೆ ಎರಡು ಬಾರಿ ಸಂಭವಿಸುವ (ಅರೆ-ದೈನಿಕ) ನೀರಿನ ಹರಿವಿನ ಬದಲಾವಣೆಗಳಾಗಿದ್ದು, ಕರಾವಳಿ ಸವೆತ, ಕೆಸರು ಸಾಗಣೆ ಮತ್ತು ಮ್ಯಾಂಗ್ರೋವ್ ಕಾಡುಗಳ ಜೀವನ ಚಕ್ರಕ್ಕೆ ಅತ್ಯಗತ್ಯ. ಉಬ್ಬರವಿಳಿತದ ತೀವ್ರತೆ (ರಾಜ ಉಬ್ಬರ) ತಗ್ಗು ಪ್ರದೇಶಗಳಲ್ಲಿ ಪ್ರವಾಹಕ್ಕೆ ಕಾರಣವಾಗುವ ಸಾಧ್ಯತೆ ಇರುತ್ತದೆ.

Kerala Flood 2

ಹೆಚ್ಚಾಗಿ ಹುಣ್ಣಿಮೆ ಹಾಗೂ ಅಮಾವಾಸ್ಯೆಯ ಸಮಯದಲ್ಲಿ ಎತ್ತರದ ಉಬ್ಬರವಿಳಿತವು ಕರಾವಳಿ ತಗ್ಗು ಪ್ರದೇಶಗಳಲ್ಲಿ ಪ್ರವಾಹವನ್ನು ಉಂಟುಮಾಡುತ್ತದೆ. ಇದರಿಂದ ಉಪ್ಪು ನೀರು ಕೃಷಿ ಭೂಮಿ ಮತ್ತು ವಸತಿ ಪ್ರದೇಶಗಳಿಗೆ ನುಗ್ಗಿ ಹಾನಿ ಉಂಟುಮಾಡುತ್ತದೆ. ಪ್ರವಾಹದ ವೇಗದಿಂದಾಗಿ ಕಡಲ ತೀರದ ಮಣ್ಣು ಸವೆದು ಹೋಗುತ್ತದೆ. ಇದಕ್ಕೆ ಪರಿಹಾರವಾಗಿ ಹವಾಮಾನ ಬದಲಾವಣೆ ನಿಯಂತ್ರಣಕ್ಕೆ ವಿಶ್ವದೆಲ್ಲೆಡೆ ಚರ್ಚೆ ನಡೆಯುತ್ತಿದೆ.

TAGGED:DisasterFlooding StatekeralaKerala floodಕಡಲ ಪ್ರವಾಹಕೇರಳಕೇರಳ ಪ್ರವಾಹ
Share This Article
Facebook Whatsapp Whatsapp Telegram

Cinema news

3 Idiots
10 ವರ್ಷಗಳ ಬಳಿಕವೂ ಅದೇ ಪಾತ್ರಗಳೊಂದಿಗೆ ಬರಲಿದೆ 3 Idiots ಸೀಕ್ವೆಲ್
Bollywood Cinema Latest Top Stories
nikhil kumaraswamy actor chetan
ಡಾ.ರಾಜ್‌ಕುಮಾರ್ ಎಂದರೆ ಆರು ಕೋಟಿ ಕನ್ನಡಿಗರ ಭಾವನೆ: ನಟ ಚೇತನ್‌ಗೆ ನಿಖಿಲ್ ಕುಮಾರಸ್ವಾಮಿ ಕಿಡಿ
Bengaluru City Cinema Latest Sandalwood Top Stories
Sanjay Dutt
ಸರ್ಸೆ ಸೆರಗ ಸರ್ಸೆ ಹಾಡಿನ ವಿವಾದ – ಕ್ಷಮೆಯಾಚಿಸಿದ ಸಂಜಯ್ ದತ್, ಬುಡಕಟ್ಟು ಜನಾಂಗದ 50 ಹುಡುಗಿಯರ ಶಿಕ್ಷಣಕ್ಕೆ ಹಣದ ಭರವಸೆ
Bollywood Cinema Latest National Sandalwood Top Stories
ChetanKumar Ahimsa
ರಾಜ್‌ಕುಮಾರ್‌ ಸಮಾಧಿ ಬಗ್ಗೆ ವಿವಾದಾತ್ಮಕ ಪೋಸ್ಟ್‌ – ಅಭಿಮಾನಿಗಳು ಮುತ್ತಿಗೆ ಹಾಕುತ್ತಿದ್ದಂತೆ ಕ್ಷಮೆಯಾಚಿಸಿದ ಚೇತನ್‌
Cinema Karnataka Latest Top Stories

You Might Also Like

soraba bjp worker
Crime

ಶಿವಮೊಗ್ಗದ ಸೊರಬದಲ್ಲಿ ಬಿಜೆಪಿ ಮುಖಂಡನ ಪತ್ನಿ ನೇಣಿಗೆ ಶರಣು – ಪತಿ ಬಂಧನ

Public TV
By Public TV
2 hours ago
Donovan Ferreira
Cricket

ಪಂಜಾಬ್‌ ಗೆಲುವಿನ ಓಟಕ್ಕೆ ಬ್ರೇಕ್‌ – ರಾಜಸ್ಥಾನ್‌ಗೆ 6 ವಿಕೆಟ್‌ಗಳ ಜಯ

Public TV
By Public TV
2 hours ago
Apekshaben Sonis victory
Latest

100% ಮುಸ್ಲಿಂ ಮತದಾರರ ವಾರ್ಡ್‌ನಲ್ಲಿ ಸ್ವತಂತ್ರ ಹಿಂದೂ ಅಭ್ಯರ್ಥಿಗೆ ಗೆಲುವು

Public TV
By Public TV
3 hours ago
Dharwad Suicide
Dharwad

ಧಾರವಾಡ | ಮರ್ಯಾದೆಗೆ ಅಂಜಿ ವಿದ್ಯಾರ್ಥಿ ನೇಣಿಗೆ ಶರಣು

Public TV
By Public TV
3 hours ago
gundlupet inspector safari
Chamarajanagar

ನಿರ್ಬಂಧಿತ ಅರಣ್ಯಪ್ರದೇಶದಲ್ಲಿ ಪೊಲೀಸ್ ಇನ್‌ಸ್ಪೆಕ್ಟರ್ ಬಿಂದಾಸ್ ಸವಾರಿ

Public TV
By Public TV
5 hours ago
supreme Court 1
Court

ಪ್ರತಿಯೊಂದು ಧಾರ್ಮಿಕ ಸಂಸ್ಥೆಗಳಲ್ಲಿ ನಿಯಮಗಳಿರಬೇಕು, ಅರಾಜಕತೆ ಇರಬಾರದು – ಶಬರಿಮಲೆ ಕೇಸ್‌ನಲ್ಲಿ ಸುಪ್ರೀಂ ಅಭಿಪ್ರಾಯ

Public TV
By Public TV
5 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?