– ನಮಗೆ ಅನ್ಯಾಯ ಮಾಡಬೇಡಿ – ಗೋಗರೆದ ಪಾಕ್ ಸೈನಿಕರು
– ನಾವು ಸೈನಿಕರಲ್ಲ ಎಂದು ಹೇಗೆ ಹೇಳುತ್ತೀರಿ?
ಇಸ್ಲಾಮಾಬಾದ್: ಬಲೂಚ್ ಆರ್ಮಿ (Baloch Liberation Army) ವಶದಲ್ಲಿರುವ ಪಾಕಿಸ್ತಾನದ (Pakistan) ಸೈನಿಕರು (Soldiers) ಜೀವ ಭಯದಲ್ಲಿ ಕಣ್ಣೀರಿಡುತ್ತಿದ್ದಾರೆ. ತಮ್ಮವರನ್ನು ಒಪ್ಪಿಸಿ 8 ಮಂದಿ ಸೈನಿಕರನ್ನು ಬಿಡಿಸಿಕೊಳ್ಳುವಂತೆ ಪಾಕ್ಗೆ ಬಲೂಚ್ ಆರ್ಮಿ ಒಂದು ವಾರ ಗಡವು ನೀಡಿತ್ತು. ಅದರಲ್ಲಿ ಈಗ ಕೇವಲ ಎರಡು ದಿನ ಮಾತ್ರ ಬಾಕಿ ಉಳಿದಿದೆ.
7 ದಿನಗಳ ಒಳಗೇ ತಮ್ಮವರನ್ನು ಒಪ್ಪಿಸದೇ ಇದ್ದರೆ ವಶದಲ್ಲಿರುವವರಿಗೆ ಮರಣದಂಡನೆ ವಿಧಿಸುವ ಎಚ್ಚರಿಕೆಯನ್ನೂ ಬಲೂಚ್ ನೀಡಿತ್ತು. ಗಡವು ಮುಗಿಯಲು ಇದೀಗ ಎರಡು ದಿನಗಳು ಮಾತ್ರ ಬಾಕಿ ಇದ್ದು, ಪ್ರಾಣ ಭಯದಿಂದ ಪಾಕ್ ಸೈನಿಕರು ಕಣ್ಣೀರಿಟ್ಟಿದ್ದಾರೆ. ತಮ್ಮ ಐಡಿ ಕಾರ್ಡನ್ನು ಪ್ರದರ್ಶಿಸಿ ಪಾಕ್ ಸರ್ಕಾರಕ್ಕೆ ತಮ್ಮನ್ನು ಬಚಾವ್ ಮಾಡುವಂತೆ ಬೇಡಿಕೊಂಡಿರುವ ವಿಡಿಯೋವನ್ನು ಬಲೂಚ್ ಸೇನೆ ಹಂಚಿಕೊಂಡಿದೆ. ಇದನ್ನೂ ಓದಿ: ನಮ್ಮವರನ್ನು ನಮಗೆ ಒಪ್ಪಿಸಿ, ಇಲ್ಲದಿದ್ರೆ ನಿಮ್ಮ 7 ಸೈನಿಕರಿಗೆ 6 ದಿನ ಮಾತ್ರ ಬಾಕಿ – ಪಾಕ್ಗೆ ಬಲೂಚ್ ಆರ್ಮಿ ಖಡಕ್ ಎಚ್ಚರಿಕೆ
ಪಾಕಿಸ್ತಾನ, ಬಲೂಚ್ ಆರ್ಮಿ ವಶದಲ್ಲಿರುವವರು ತಮ್ಮವರಲ್ಲ ಎಂದು ಹೇಳಿತ್ತು. ಇದರ ಬೆನ್ನಲ್ಲೇ ಬಲೂಚ್ ಆರ್ಮಿಯ ಮಾಧ್ಯಮ ವಿಭಾಗ ಹಕ್ಕಲ್ ಪಾಕ್ ಸೈನಿಕರ ದೃಶ್ಯಾವಳಿಗಳನ್ನು ಬಿಡುಗಡೆ ಮಾಡಿದೆ. ಬಂಧಿತ ಸೈನಿಕರು ತಮ್ಮ ಅಧಿಕೃತ ಸೇವಾ ಗುರುತಿನ ಚೀಟಿಗಳು ಮತ್ತು ರಾಷ್ಟ್ರೀಯ ಗುರುತಿನ ದಾಖಲೆಗಳನ್ನು ವಿಡಿಯೋದಲ್ಲಿ ಪ್ರದರ್ಶಿಸಿದ್ದಾರೆ. ಅವರು ಪಾಕ್ ಅಧಿಕಾರಿಗಳಿಗೆ ಸಹಾಯ ಮಾಡುವಂತೆ ಮನವಿ ಮಾಡಿದ್ದಾರೆ.
ವಿಡಿಯೋದಲ್ಲಿ, ಸೇನೆಯು ನಾವು ಅವರ ಸಿಬ್ಬಂದಿಯಲ್ಲ ಎಂದು ಹೇಗೆ ಹೇಳಲು ಸಾಧ್ಯ? ಇದು ಯಾರ ಕಾರ್ಡ್? ಎಂದು ಓರ್ವ ಪಾಕ್ ಸೈನಿಕ ಹೇಳಿದ್ದಾನೆ. ಅಲ್ಲದೇ ಪಾಕಿಸ್ತಾನ ನನಗೆ ಇದನ್ನು ನೀಡಿದೆ. ನಾನು ವಿನಂತಿಸುತ್ತೇನೆ, ನನ್ನ ತಂದೆ ಅಂಗವಿಕಲರು, ಮತ್ತು ನಾನು ಮನೆಯಲ್ಲಿ ಹಿರಿಯ. ನಾವು ನಿಮ್ಮ ಸೈನಿಕರಲ್ಲ ಎಂದು ಹೇಳುವ ಮೂಲಕ ಅನ್ಯಾಯ ಮಾಡಬೇಡಿ. ನಾವು ನಿಮ್ಮ ಸೈನಿಕರಲ್ಲ ಎಂದು ಹೇಳುವುದಾದರೆ ನೀವು ನನ್ನನ್ನು ಏಕೆ ನೇಮಿಸಿಕೊಂಡಿದ್ದೀರಿ ಎಂದು ದುಃಖ ತೋಡಿಕೊಂಡಿದ್ದಾನೆ.
ಬಂಧಿತರನ್ನು ಆಪರೇಷನ್ ಹೆರೋಫ್ 2ನೇ ಹಂತದ ಸಮಯದಲ್ಲಿ ಸೆರೆಹಿಡಿಯಲಾಗಿದೆ. ಕಾರ್ಯಾಚರಣೆಯ ವೇಳೆ ಪಾಕ್ ಪಡೆಯ ಒಟ್ಟು 18 ಸಿಬ್ಬಂದಿಯನ್ನು ವಿವಿಧ ಸ್ಥಳಗಳಲ್ಲಿ ಬಂಧಿಸಲಾಗಿತ್ತು. ಬಂಧಿತರಲ್ಲಿ 10 ಮಂದಿ ಸ್ಥಳೀಯ ಬಲೂಚ್ ಜನಾಂಗದವರು ಎಂದು ಗುರುತಿಸಲಾಗಿತ್ತು. ಅವರು ಸ್ಥಳೀಯ ಪೊಲೀಸರೊಂದಿಗೆ ಸಂಪರ್ಕ ಹೊಂದಿದ್ದರಿಂದ ಎಚ್ಚರಿಕೆ ನೀಡಿ ಬಿಡುಗಡೆ ಮಾಡಲಾಗಿತ್ತು. ಅವರ ಬಿಡುಗಡೆ ನಿರ್ಧಾರವನ್ನು ಬಲೂಚ್ ಜನರ ಹಿತಾಸಕ್ತಿ ಎಂದು ಪರಿಗಣಿಸಲಾಗಿದೆ ಎಂದು ಬಿಎಲ್ಎ ಹೇಳಿಕೊಂಡಿದೆ.
ಉಳಿದ ಏಳು ಬಂಧಿತರು ಪಾಕಿಸ್ತಾನಿ ಸೇನೆಯ ಘಟಕಗಳ ಸಿಬ್ಬಂದಿಯಾಗಿದ್ದಾರೆ. ಅವರು ತಮ್ಮ ವಶದಲ್ಲಿಯೇ ಇದ್ದಾರೆ. ಅವರನ್ನು ಬಲೂಚ್ ರಾಷ್ಟ್ರೀಯ ನ್ಯಾಯಾಲಯದ ವಿಚಾರಣೆಗೆ ಒಳಪಡಿಸಲಾಗಿದೆ. ವಿಚಾರಣೆಯ ಸಮಯದಲ್ಲಿ ಬಂಧಿತರು ನಾಗರಿಕರ ವಿರುದ್ಧದ ಕ್ರಮಗಳಲ್ಲಿ ಭಾಗಿಯಾಗಿರುವುದು ಮತ್ತು ಬಲೂಚ್ ಜನರ ಹತ್ಯೆಯ ಆರೋಪಗಳನ್ನು ಎದುರಿಸುತ್ತಿದ್ದಾರೆ. ವಿಚಾರಣೆಯ ಸಮಯದಲ್ಲಿ ಆರೋಪಿಗಳಿಗೆ ಪ್ರತಿಕ್ರಿಯಿಸಲು ಅವಕಾಶಗಳನ್ನು ನೀಡಲಾಗಿತ್ತು. ತಪ್ಪೊಪ್ಪಿಗೆ ಹೇಳಿಕೆಗಳನ್ನು ದಾಖಲಿಸಲಾಗಿತ್ತು ಎಂದು ಸಂಘಟನೆ ತಿಳಿಸಿದೆ. ಇದನ್ನೂ ಓದಿ:

