ಭೋಪಾಲ್: ಗೆಳತಿಯ ಕೊಂದು ಆತ್ಮದ ವಶೀಕರಣಕ್ಕೆ ಯತ್ನಿಸಿರುವ ವಿಚಿತ್ರ ಘಟನೆ ಮಧ್ಯಪ್ರದೇಶದಲ್ಲಿ (Madhya Pradesh) ನಡೆದಿದೆ.
ಇಂದೋರ್ನ ದ್ವಾರಕಪುರಿಯ ಅಪಾರ್ಟ್ಮೆಂಟ್ವೊಂದರಲ್ಲಿ ತನ್ನೊಂದಿಗೆ ಸಂಬಂಧದಲ್ಲಿದ್ದ 24 ವರ್ಷದ ಗೆಳತಿಯನ್ನು ಪಿಯೂಷ್ ಧಮ್ನೋಡಿಯಾ ಹತ್ಯೆ ಮಾಡಿದ್ದ. ಕತ್ತು ಹಿಸುಕಿ ಹತ್ಯೆ ಮಾಡಿ, ಶವದ ಮೇಲೆ ಕ್ರೂರ ಹಲ್ಲೆ ನಡೆಸಿದ್ದಾನೆ. ಇದನ್ನೂ ಓದಿ: ಅಪಘಾತದಲ್ಲಿ ಪುತ್ರ ಸಾವು – ಮನನೊಂದು ದಂಪತಿ ನೇಣಿಗೆ ಶರಣು
ಮದುವೆ ವಿಚಾರಕ್ಕೆ ಇಬ್ಬರ ನಡುವೆ ಜಗಳವಾಗಿತ್ತು. ಗಲಾಟೆ ತಾರಕಕ್ಕೇರಿದ ಬಳಿಕ ಹತ್ಯೆ ನಡೆದಿದೆ. ಬಳಿಕ ಅಲ್ಲಿಂದ ಮಹಾರಾಷ್ಟ್ರದ ಪನ್ವೇಲ್ಗೆ ಆರೋಪಿ ಪ್ರಯಾಣಿಸಿದ್ದ. ಖಾಸಗಿ ಹೋಟೆಲ್ನಲ್ಲಿ ಯುವತಿ ಆತ್ಮ ವಶೀಕರಣಕ್ಕೆ ಮಾಟಮಂತ್ರ ಮಾಡಿದ್ದ. ಆತ್ಮದ ಜೊತೆಗೆ ಮಾತುಕತೆ ನಡೆಸಲು ಆರೋಪಿ ಯತ್ನಿಸಿದ್ದ.
ಯುವತಿ ನಾಪತ್ತೆಯಾದ ಬಳಿಕ ಫೆ.11 ರಂದು ಯುವತಿ ತಂದೆಯಿಂದ ದೂರು ದಾಖಲಾಗಿತ್ತು. ಫೆ.13 ರಂದು ಮೃತದೇಹ ಪತ್ತೆಯಾಗಿದೆ. ಬಳಿಕ ಪೊಲೀಸರು ಯುವತಿ ಮೃತದೇಹ ಪತ್ತೆಹಚ್ಚಿದ್ದಾರೆ. ಬಳಿಕ ಆರೋಪಿ ಪಿಯೂಷ್ನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ.
ಇಬ್ಬರೂ ಎಂಬಿಎ ಓದುತ್ತಿದ್ದರು. ಮದುವೆ ವಿಚಾರದಲ್ಲಿ ಭಿನ್ನಾಭಿಪ್ರಾಯಗಳಿದ್ದವು. ಕುಟುಂಬಸ್ಥರ ಒಪ್ಪಿಗೆ ವಿಚಾರದಲ್ಲಿ ಭಿನ್ನಾಭಿಪ್ರಾಯಗಳಿದ್ದ ಹಿನ್ನೆಲೆ ಮದುವೆಗೆ ಯುವತಿ ನಿರಾಕರಿಸಿದ್ದಳು. ಈ ಬಗ್ಗೆ ಮಾತುಕತೆಗೆ ಬಂದಾಗ ಜಗಳ ಏರ್ಪಟ್ಟು ಹತ್ಯೆ ಮಾಡಿರುವುದಾಗಿ ಆರೋಪಿ ತಿಳಿಸಿದ್ದಾನೆ. ಇದನ್ನೂ ಓದಿ: ಇರಾನ್ಗೆ ಸಂಬಂಧಿಸಿದ 3 ಅಮೆರಿಕ ನಿಷೇಧಿತ ಟ್ಯಾಂಕರ್ ವಶಕ್ಕೆ ಪಡೆದ ಭಾರತ

