Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ವಿಧಾನಸಭೆಯಲ್ಲಿ ʻಕುರ್ಚಿ ಕದನʼ ಪ್ರಸ್ತಾಪ; ಸಿಎಂ – ಡಿಸಿಎಂ ಒಗ್ಗಟ್ಟು ಪ್ರದರ್ಶನ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | ವಿಧಾನಸಭೆಯಲ್ಲಿ ʻಕುರ್ಚಿ ಕದನʼ ಪ್ರಸ್ತಾಪ; ಸಿಎಂ – ಡಿಸಿಎಂ ಒಗ್ಗಟ್ಟು ಪ್ರದರ್ಶನ

Districts

ವಿಧಾನಸಭೆಯಲ್ಲಿ ʻಕುರ್ಚಿ ಕದನʼ ಪ್ರಸ್ತಾಪ; ಸಿಎಂ – ಡಿಸಿಎಂ ಒಗ್ಗಟ್ಟು ಪ್ರದರ್ಶನ

Public TV
Last updated: February 2, 2026 6:04 pm
Public TV
Share
3 Min Read
DK Shivakumar
SHARE

– ಸಿದ್ರಾಮಯ್ಯ ನನ್ನ ಪರ ಇದ್ದಾರೆ, ನಾವಿಬ್ರೂ ಜೊತೆಯಾಗಿರ್ತೀವಿ ಎಂದ ಡಿಕೆಶಿ

ಬೆಂಗಳೂರು: ವಿಧಾನಸಭೆಯಲ್ಲಿ ಇಂದು ಪವರ್ ಶೇರ್ ವಿಚಾರ ಚರ್ಚೆಗೆ ಬಂದಾಗ ಸಿಎಂ ಸಿದ್ದರಾಮಯ್ಯ (Siddaramaiah) ಹಾಗೂ ಡಿಸಿಎಂ ಡಿಕೆ ಶಿವಕುಮಾರ್‌ (DK Shivakumar) ಒಗ್ಗಟ್ಟು ಪ್ರದರ್ಶಿಸಿ ವಿಪಕ್ಷಗಳಿಗೆ ಟಕ್ಕರ್ ಕೊಟ್ಟ ಪ್ರಸಂಗ ನಡೆಯಿತು.

ನಾನು ಹಾಗೂ ಸಿಎಂ ಪರಸ್ಪರರ ಕಷ್ಟದಲ್ಲಿ ಜೊತೆಯಾಗಿ ನಿಂತವರು. ಮುಂದೆಯೂ ಕಷ್ಟದಲ್ಲಿ ಪರಸ್ಪರ ಜೊತೆಯಾಗ್ತೇವೆ. ಸಿದ್ದರಾಮಯ್ಯ ನನ್ನ ಪರ ಇದ್ದಾರೆ. ನಾವಿಬ್ರೂ ಹೀಗೇ ಜೊತೆಯಾಗಿ ಇರ್ತೀವಿ. ಏನೇ ತೀರ್ಮಾನ ಇದ್ರೂ ಪಕ್ಷ ಮಾಡುತ್ತೆ. 2028ಕ್ಕೆ ಏನಾಗುತ್ತೆ ಅಂತ ನೋಡೋಣ ಎಂದು ಡಿಕೆಶಿ ಹೇಳಿದ್ರು. ಇದನ್ನೂ ಓದಿ: ಕೇಂದ್ರ ಸರ್ಕಾರ ಕರ್ನಾಟಕದ ತೆರಿಗೆ ಪಾಲು ಹೆಚ್ಚಿಸಿದೆ – ಸಚಿವ ಜೋಶಿ ಸ್ಪಷ್ಟನೆ

R Ashoka

ಡಿಕೆಶಿ ವೈರಾಗ್ಯದ ಮಾತಾಡಿಲ್ಲ, ವಾಸ್ತವಿಕ ಮಾತಾಡಿದ್ದಾರೆ, ಬಿಜೆಪಿ (BJP) ಆರೋಪಕ್ಕೆ ಸ್ಪಷ್ಟತೆ ಕೊಟ್ಟಿದ್ದಾರೆ ಅಂತ ಸಿಎಂ ಸಮರ್ಥಿಸಿಕೊಂಡ್ರು. ರಾಜ್ಯಪಾಲರ ಭಾಷಣ ಮೇಲೆ ನಡೆದ ಚರ್ಚೆಗೆ ಉತ್ತರ ಕೊಡುವಾಗ ಸಿಎಂ ಸಿದ್ದರಾಮಯ್ಯನವ್ರು ತಮ್ಮ ಹಾಗೂ ಡಿಕೆಶಿ ಮಧ್ಯೆ ಜಗಳ ಇದೆ ಅಂತ ಅಶೋಕ್ ಆರೋಪ ಬಗ್ಗೆ ಪ್ರಸ್ತಾಪಿಸಿದ್ರು. ನನ್ನ ಡಿಕೆಶಿ ಮಧ್ಯೆ ಜಗಳ ಇದೆ ಅಂತ ಆರೋಪಿಸಿದ್ದಾರೆ, ಅಂದ ಸಿಎಂ ಪಕ್ಕದಲ್ಲೇ ಕೂತಿದ್ದ ಡಿಕೆಶಿ ಕಡೆ ನೋಡಿ ನಿನಗೂ-ನನಗೂ ಹಾಲಾಹಲ ಇದೆ ಅಂತೆ ಕಣಯ್ಯ ಅಂದ್ರು. ಇದನ್ನೂ ಓದಿ: KPTCL ವ್ಯವಸ್ಥಾಪಕ ನಿರ್ದೇಶಕರಾಗಿ ಡಾ. ವಿ. ರಾಮ್ ಪ್ರಸಾತ್ ಮನೋಹರ್ ಅಧಿಕಾರ ಸ್ವೀಕಾರ

ಈ ವೇಳೆ ಡಿಕೆಶಿ, ಸಮಯ ಅದಕ್ಕೆ ಉತ್ತರ ಕೊಡುತ್ತೆ ಬಿಡಿ ಸರ್ ಅಂದ್ರು. ಆಗ ಅಶೋಕ್ ಮಧ್ಯೆಪ್ರವೇಶಿಸಿ, ಕರೆಕ್ಟ್, ಒಂದು ಮಾತು ನೂರು ಅರ್ಥ, ಇದು ಡಿಕೆಶಿ ಸ್ಟೈಲ್. ಸಮಯ ಉತ್ತರ ಕೊಡುತ್ತೆ ಅಂತ ಹೇಳಿದ್ದಾರಲ್ಲ, ಆ ಸಮಯ ಯಾವಾಗ ಬರುತ್ತೆ ಅಂತ ಹೇಳಲಿ ಅಂತ ಕುಟುಕಿದ್ರು. ಈ ವೇಳೆ ಮಧ್ಯಪ್ರವೇಶ ಮಾಡಿದ ಸಂತೋಷ್ ಲಾಡ್ ಗೆ ನೀನು ಯಾರ ಕಡೆ? ಯಾರೋ ನನಗೆ ಹೇಳಿದ್ರು, ಡಿಕೆಶಿ ಕಡೆ 56 ಶಾಸಕರು ಇದ್ದಾರೆ ಅಂತೆ. ಆದ್ರೆ ಸಂತೋಷ್ ಲಾಡ್ ಅಂಥವರು ಬೆಳಗ್ಗೆ ಅಲ್ಲಿ ರಾತ್ರಿ ಇಲ್ಲಿ ಇರ್ತಾರೆ. ಅದಕ್ಕೆ ಡಿಕೆಶಿಗೆ ಲಾಡ್ ಅಂಥವರನ್ನ ನೋಡಿ ಯಾರು ಯಾರ ಕಡೆ ಇದ್ದಾರೆ ಅಂತ ಗೊಂದಲ ಆಗಿದೆಯಂತೆ ಅಂತ ಅಶೋಕ್ ಸಂತೋಷ್ ಲಾಡ್ ಕಾಲೆಳೆದ್ರು. ಇದನ್ನೂ ಓದಿ: ಸಿದ್ರಾಮಯ್ಯ ಹೌದು ಹುಲಿಯಾ ಆಗಿ ಉಳಿದಿಲ್ಲ, ʻಹೌದು ಇಲಿಯಾʼ ಆಗಿದ್ದಾರೆ: ಅಶೋಕ್‌ ಲೇವಡಿ

Siddaramaiah 3

ಅಶೋಕ್ ಮಾತಿಗೆ ಸಿಡಿದ ಲಾಡ್, ನಿಮ್ಮ ಮೇಲೆ ನಮಗೆ ಗೌರವ ಇದೆ, ಆಥರ ಮಾತಾಡಬೇಡಿ ಅಂತ ಲಾಡ್ ಸಿಡಿಮಿಡಿಯಾದ್ರು. ಅಶೋಕ್ ಆರೋಪ ಬಗ್ಗೆ ಡಿಕೆಶಿ ಎದ್ದು ಸ್ಪಷ್ಟನೆ ಕೊಟ್ರು. ನಾನು ಸ್ಟೂಡೆಂಟ್ ಪಾಲಿಟಿಕ್ಸ್ ನಿಂದ ಬಂದವನು. ನಾನು ಏಟು ತಿಂದಿದೀನಿ, ನೋವುಂಡಿದೀನಿ, ಬೆಳೆದಿದ್ದೀನಿ. ಅಶೋಕ್ ನಮಗಿಂತ ಹಿರಿಯರಾಗಿದ್ರೂ ಅವರಿಗಿಂತ ಕಿರಿಯರು ಏನೇನೋ ಆಗಿಹೋಗಿದ್ದಾರೆ. ನನ್ನ ಸ್ಟ್ರೆಂತ್ 136 ಶಾಸಕರು, ಸಿದ್ದರಾಮಯ್ಯ ಸೇರಿ. ಸಿದ್ದರಾಮಯ್ಯ ನನಗೆ ಸಂಕಷ್ಟ ಬಂದಾಗ ಜತೆ ನಿಂತಿದ್ದಾರೆ, ನಾನು ಅವರ ಸಂಕಷ್ಟದಲ್ಲಿ ನಿಂತಿದೀನಿ. ನಾವಿಬ್ರೂ ಹೀಗೇ ಜೋಡಿಯಾಗಿ ಇರ್ತೀವಿ. ಹೈಕಮಾಂಡ್ ತೀರ್ಮಾನ ತಗೊಳ್ಳುವಾಗ ತಗೊಳ್ಳುತ್ತೆ, ಅದು ಬೇರೆ ಎಂದರು. ಇದನ್ನೂ ಓದಿ: ಲಡಾಖ್ ಗಡಿ ಸಂಘರ್ಷ; ನರವಾಣೆ ಅಪ್ರಕಟಿತ ಪುಸ್ತಕ ಪ್ರಸ್ತಾಪಿಸಿದ ರಾಗಾ – ಲೋಕಸಭೆಯಲ್ಲಿ ಗದ್ದಲ

ರಾಜಕಾರಣದಲ್ಲಿ ನಂಬರ್ ಮೇಲೆ ನಿರ್ಧಾರ ಆಗಲ್ಲ. ನಿಮ್ಮಲ್ಲಿ ಎಷ್ಟೋ ಜನ ಸಿಎಂಗಳು ಬದಲಾದ್ರು, ಪೂರ್ಣ ಕ್ಯಾಬಿನೆಟ್ ಬದಲಾಯ್ತು. ಸಾಧ್ಯತೆಗಳು ರಾಜಕೀಯದಲ್ಲಿ ಸಹಜ. ಒಬ್ನೇ ಸಾಕು, ದೃಢ ಸಂಕಲ್ಪ, ನಿಲುವು ಇದ್ರೆ ಸಾಕು, 140 ಜನರೂ ಇರ್ತಾರೆ, ಜಾಸ್ತೀನೂ ಆಗ್ತಾರೆ, ನೋಡೋಣ ಮುಂದೇನಾಗುತ್ತೆ 2028ಕ್ಕೆ ಅಂತ ಹೇಳಿ ಕೂತ್ರು ಡಿಕೆಶಿ. ನಿಮ್ಮ ಸ್ಟ್ರೆಂತ್ ಬಾಗಿಲು ಒದ್ದು ಮಂತ್ರಿ ತಗೊಂಡಿದ್ದು, ಅದೆರ ನಿಮ್ಮ ಸಹಜ ಗುಣ ಅಂತ ಬೆಲ್ಲದ್ ಹೇಳಿದ್ದಕ್ಕೆ ನಿಮ್ಮ ಹಾಗೂ ಅಶೋಕ್ ಮಾತಿಗೆ ನಾನು ಜಗ್ಗಲ್ಲ ಅಂತ ಡಿಕೆಶಿ ಟಕ್ಕರ್ ಕೊಟ್ರು.

ಈವೇಳೆ ಡಿಕೆಶಿ ಮಾತಿಗೆ ಸಿಎಂ ಸಮರ್ಥಿಸಿಕೊಂಡ್ರು. ಡಿಕೆಶಿ ಎಲ್ಲ ಸ್ಪಷ್ಟತೆ ಕೊಟ್ಟಿದ್ದಾರೆ. ಅವರು ವಾಸ್ತವ ಮಾತಾಡಿದ್ದಾರೆ, ವೈರಾಗ್ಯದ ಮಾತಾಡಿಲ್ಲ. ಬಿಜೆಪಿಯವ್ರು ಇದನ್ನು ವೈರಾಗ್ಯ ಅಂತ ಕರೆಯಬಹುದು, ಆದ್ರೆ ಅದು ವೈರಾಗ್ಯ ಅಲ್ಲ ಅಂದ್ರು ಸಿಎಂ. ಡಿಕೆಶಿ ಅವರು ಹೇಳಿದ್ದು ನನಗೆ ಅರ್ಥ ಆಗಿಲ್ಲ ಅಂದ ಅಶೋಕ್ ಗೆ ನಿನಗೇನೂ ಅರ್ಥ ಆಗಲ್ಲ ಬಿಡು ಅಂತ ಸಿಎಂ ಟಕ್ಕರ್ ಕೊಟ್ರು.

TAGGED:bjpchief ministercongressDK Shivakumarsiddaramaiahಕಾಂಗ್ರೆಸ್ಡಿಕೆ ಶಿವಕುಮಾರ್ಬಿಜೆಪಿಮುಖ್ಯಮಂತ್ರಿಸಿದ್ದರಾಮಯ್ಯ
Share This Article
Facebook Whatsapp Whatsapp Telegram

Cinema news

rashmika mandanna
ಮದುವೆಯಂದು ರಶ್ಮಿಕಾ ಮಿನಿಮಲ್ ಮೇಕಪ್ ಹಾಕಿದ್ದು ಯಾಕೆ – ಗುಟ್ಟು ಬಿಚ್ಚಿಟ್ಟ ಮೇಕಪ್ ಆರ್ಟಿಸ್ಟ್‌
Cinema Latest Sandalwood South cinema
Suhana Khan
ಮಗಳನ್ನೇ ಸಹೋದ್ಯೋಗಿ ಥರ ನೋಡುವ ಶಾರುಖ್ ಖಾನ್!
Bollywood Cinema Latest Top Stories
trisha krishnan
ಶ್ರೀಮಂತ ಉದ್ಯಮಿಯನ್ನ ಮದ್ವೆಯಾಗಿ, 4 ಮಕ್ಕಳನ್ನು ಬೆಳೆಸುತ್ತಿದ್ದೇನೆ – ಸಿನಿಮಾ ನಿವೃತ್ತಿ ವದಂತಿಗೆ ನಟಿ ತ್ರಿಶಾ ಕೌಂಟರ್
Cinema Latest South cinema Top Stories
Rashmika Mandanna
ಕೊಡಗಿನಲ್ಲಿ ರಶ್ಮಿಕಾ – ವಿಜಯ್‌ ಡಿನ್ನರ್‌ ಪಾರ್ಟಿ; ಕೊಡವ ಶೈಲಿಯ ಭರ್ಜರಿ ಆತಿಥ್ಯ!
Cinema Kodagu Latest Main Post Sandalwood South cinema

You Might Also Like

Delhi Assembly Bomb Threat
Crime

ದೆಹಲಿ ವಿಧಾನಸಭೆಗೆ ಮತ್ತೆ ಬಾಂಬ್ ಬೆದರಿಕೆ

Public TV
By Public TV
7 minutes ago
vinod raj auto drivers
Bengaluru Rural

ಆಟೋ ಚಾಲಕರ ಕಷ್ಟಕ್ಕೆ ಮಿಡಿದ ನಟ ವಿನೋದ್ ರಾಜ್

Public TV
By Public TV
17 minutes ago
Jail
Court

ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ – ಆರೋಪಿಗೆ 20 ವರ್ಷ ಜೈಲು ಶಿಕ್ಷೆ, 7 ಲಕ್ಷ ದಂಡ

Public TV
By Public TV
18 minutes ago
nitish kumar bihar cm oath
Latest

ರಾಜ್ಯಸಭೆ ಸದಸ್ಯರಾಗಿ ಶುಕ್ರವಾರ ನಿತೀಶ್ ಕುಮಾರ್ ಪ್ರಮಾಣ ಸ್ವೀಕಾರ – ಏ.14 ರಂದು ಬಿಹಾರಕ್ಕೆ ನೂತನ ಸಿಎಂ?

Public TV
By Public TV
35 minutes ago
congress flag
Latest

ಬಾರಾಮತಿ ಉಪಚುನಾವಣೆ; ಸ್ಪರ್ಧೆಯಿಂದ ಹಿಂದೆ ಸರಿದ ಕಾಂಗ್ರೆಸ್

Public TV
By Public TV
47 minutes ago
karnataka High Court
Bengaluru City

ಶಾಲೆಗಳಲ್ಲಿ `ವಂದೇ ಮಾತರಂ’ ಆರು ಚರಣಗಳೊಂದಿಗೆ ಹಾಡೋದು ಕಡ್ಡಾಯ – ಹೈಕೋರ್ಟ್‌ನಿಂದ ಅರ್ಜಿ ವಜಾ

Public TV
By Public TV
48 minutes ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?