ತೆರಿಗೆಯಲ್ಲಿ ಯಾವುದೇ ಬದಲಾವಣೆ ಇಲ್ಲ
ಆದಾಯ ತೆರಿಗೆಯಲ್ಲಿ ಪದ್ದತಿಯಲ್ಲಿ ಯಾವುದೇ ಬದಲಾವಣೆ ಇಲ್ಲ. ಕಳೆದ ವರ್ಷ ಜಾರಿಯಾದ ಹಳೇ ಪದ್ದತಿಯಂತೆ ಮುಂದುವರಿಯಲಿದೆ.
F&O ಎಸ್ಟಿಟಿ ಹೆಚ್ಚಳ
ಫ್ಯೂಚರ್ ಆಂಡ್ ಆಪ್ಶನ್ ಮೇಲಿನ ಭದ್ರತಾ ವಹಿವಾಟು ತೆರಿಗೆ (ಎಸ್ಟಿಟಿ) ಹೆಚ್ಚಳ. ಮೊದಲು 0.02% ಇದ್ದ ಎಸ್ಟಿಟಿ 0.05% ಕ್ಕೆ ಏರಿಕೆ
ಪರ್ವತ ಹಾದಿ ಅಭಿವೃದ್ಧಿ
ಹಿಮಾಚಲ ಪ್ರದೇಶ, ಉತ್ತರಾಖಂಡ, ಜಮ್ಮು ಮತ್ತು ಕಾಶ್ಮೀರ, ಪೂರ್ವ ಘಟ್ಟಗಳ ಅರಕು ಕಣಿವೆ ಮತ್ತು ಪಶ್ಚಿಮ ಘಟ್ಟಗಳಲ್ಲಿ ಪರಿಸರ ಸ್ನೇಹಿ ಪರ್ವತ ಹಾದಿಗಳನ್ನು ಅಭಿವೃದ್ಧಿಪಡಿಸಲು ನಿರ್ಧಾರ
ಶೀ ಮಾರ್ಟ್ಸ್ ಯೋಜನೆ ಘೋಷಣೆ
ಸ್ವ-ಸಹಾಯ ಉದ್ಯಮಿಗಳನ್ನು ಸ್ಥಾಪಿಸಲು ಸಹಕಾರ. ಶೀ ಮಾರ್ಟ್ಸ್ ಅಡಿ ಸಮುದಾಯ ಸ್ವಾಮ್ಯದ ಚಿಲ್ಲರೆ ಮಾರಾಟ ಮಳಿಗೆಗಳಾಗಿ ಸ್ಥಾಪನೆ
ಕಂಟೆಂಟ್ ಕ್ರಿಯೇಷನ್ ಲ್ಯಾಬ್ಗಳ ಸ್ಥಾಪನೆ
ಅನಿಮೇಷನ್, ಗೇಮಿಂಗ್, ಕಾಮಿಕ್ಸ್ ವಲಯಕ್ಕೆ ಉತ್ತೇಜನ ಕೊಡಲು ಲ್ಯಾಬ್ಗಳ ಸ್ಥಾಪನೆ. 2030 ರವರೆಗೆ ಈ ವಲಯದಲ್ಲಿ 20 ಲಕ್ಷ ಉದ್ಯೋಗಗಳ ಸೃಷ್ಟಿಸುವ ಗುರಿ. ಮುಂಬೈನ ಐಐಸಿಟಿ ಸಂಸ್ಥೆಯವಸಹಯೋಗದೊಂದಿಗೆ 15 ಸಾವಿರ ಶಾಲೆ, 500 ಕಾಲೇಜುಗಳಲ್ಲಿ ಕಂಟೆಂಟ್ ಕ್ರಿಯೇಷನ್ ಲ್ಯಾಬ್ಗಳ ಸ್ಥಾಪನೆ.
ಎಲ್ಲಾ ಜಿಲ್ಲೆಗಳಲ್ಲಿ ಒಂದು ಮಹಿಳಾ ಹಾಸ್ಟೆಲ್
ಹೆಣ್ಣುಮಕ್ಕಳ ಶಿಕ್ಷಣಕ್ಕೆ ದೊಡ್ಡ ಬೆಂಬಲ ನೀಡುವ ಉದ್ದೇಶದಿಂದ ದೇಶದ ಪ್ರತಿಯೊಂದು ಜಿಲ್ಲೆಯಲ್ಲಿ ಮಹಿಳಾ ಹಾಸ್ಟೆಲ್ ನಿರ್ಮಾಣ
ಮೋಟಾರು ಆಕ್ಸಿಡೆಂಟ್ ಕ್ಲೇಮುಗಳಿಗೆ ತೆರಿಗೆ ಇಲ್ಲ
ಜಿಎಸ್ಟಿ ಸರಳಿಕರಣ, NRIಗಳ ಆಸ್ತಿ ಮಾರಾಟಕ್ಕೆ TAN ಅಗತ್ಯ ಇಲ್ಲ. ಏಪ್ರಿಲ್ 2026 ರಿಂದ ಹೊಸ ಆದಾಯ ತೆರಿಗೆ ನೀತಿ ಜಾರಿ ತೆರಿಗೆ ಪಾವತಿ ಬಳಿಕವೂ ತೆರಿಗೆ ಅಪ್ಡೇಟ್ ಘೋಷಣೆಗೆ ಅವಕಾಶ
ಖೇಲೋ ಇಂಡಿಯಾ ಮಿಷನ್
ಕ್ರೀಡೆಗಳಿಗೆ ಉತ್ತೇಜನ ಕೊಡಲು ಖೇಲೋ ಇಂಡಿಯಾ ಮಿಷನ್. ಮುಂದಿನ ಹತ್ತು ವರ್ಷಗಳಲ್ಲಿ ಕ್ರೀಡಾ ವಲಯಕ್ಕೆ ಈ ಮೂಲಕ ಒತ್ತು. ಕ್ರೀಡಾ ವಲಯದಲ್ಲಿ ಉದ್ಯೋಗ ಸೃಷ್ಟಿ, ಪ್ರತಿಭಾವಂತ ಕ್ರೀಡಾಪಟುಗಳನ್ನು ಉತ್ತೇಜಿಸಲು ಕಾರ್ಯಕ್ರಮ.
12.2 ಲಕ್ಷ ಕೋಟಿ ರೂ. ಸಾರ್ವಜನಿಕ ಬಂಡವಾಳ ವೆಚ್ಚ
2026-27ರಲ್ಲಿ ಸಾರ್ವಜನಿಕ ಬಂಡವಾಳ ವೆಚ್ಚವನ್ನು (Public Capital Expenditure) 12.2 ಲಕ್ಷ ಕೋಟಿ ರೂ.ಗೆ ಹೆಚ್ಚಿಸಲು ಸರ್ಕಾರ ನಿರ್ಧಾರ. ಕಳೆದ ವರ್ಷದ ಬಜೆಟ್ನಲ್ಲಿ 11.21 ಲಕ್ಷ ಕೋಟಿ ರೂ. ಹಣವನ್ನು ಮೀಸಲಿಡಲಾಗಿತ್ತು.
ವಿದೇಶಿಯರು ನೇರವಾಗಿ ಷೇರುಗಳನ್ನು ಖರೀದಿಸಿಬಹುದು
ಭಾರತದ ಹೊರಗೆ ವಾಸಿಸುವ ವ್ಯಕ್ತಿಗಳಿಗೆ ಪೋರ್ಟ್ಫೋಲಿಯೋ ಹೂಡಿಕೆ ಯೋಜನೆಯ ಮೂಲಕ ಷೇರುಗಳಲ್ಲಿ ಹೂಡಿಕೆ ಮಾಡಲು ಅವಕಾಶ. ವೈಯಕ್ತಿಕ ಮಿತಿಯನ್ನು 5% ರಿಂದ 10% ಕ್ಕೆ ಹೆಚ್ಚಿಸಲು ನಿರ್ಧರಿಸಲಾಗಿದೆ, ಆದರೆ ಅಂತಹ ಎಲ್ಲಾ ಹೂಡಿಕೆದಾರರ ಸಂಯೋಜಿತ ಮಿತಿಯನ್ನು 10% ರಿಂದ 24% ಕ್ಕೆ ಹೆಚ್ಚಿಸಲು ಪ್ರಸ್ತಾಪ
ಗೈಡ್ಗಳಿಗೆ ತರಬೇತಿ
ಹತ್ತು ಸಾವಿರ ಗೈಡ್ಗಳಿಗೆ ಹೈಬ್ರೀಡ್ ಮೂಡ್ನಲ್ಲಿ ತರಬೇತಿ. 20 ಪ್ರವಾಸಿ ತಾಣಗಳಲ್ಲಿರುವ ಗೈಡ್ ಗಳಿಗೆ ತರಬೇತಿ ನೀಡಲಾಗುತ್ತದೆ.
ಏಮ್ಸ್ ಮಾದರಿಯಲ್ಲಿ 3 ಆಯುರ್ವೇದ ಸಂಸ್ಥೆ
ಜಾಮ್ನಗರದಲ್ಲಿರುವ WHO ಸಾಂಪ್ರದಾಯಿಕ ಔಷಧ ಕೇಂದ್ರವನ್ನು ಮೇಲ್ದರ್ಜೆಗೇರಿಸಲಾಗುವುದು
ಆಯುಷ್ ಔಷಧಾಲಯಗಳು, ಔಷಧ ಪರೀಕ್ಷಾ ಪ್ರಯೋಗಾಲಯಗಳನ್ನು ಮೇಲ್ದರ್ಜೆ ಏರಿಕೆ
3 ಹೊಸ ಅಖಿಲ ಭಾರತ ಆಯುರ್ವೇದ ಸಂಸ್ಥೆಗಳನ್ನು ಸ್ಥಾಪಿಸಲು ಚರ್ಚೆ
ಪ್ರೈವೇಟ್ ವಲಯದೊಂದಿಗೆ 5 ವೈದ್ಯಕೀಯ ಪ್ರವಾಸೋದ್ಯಮ ಪ್ರಾದೇಶಿಕ ಕೇಂದ್ರಗಳನ್ನು ಸ್ಥಾಪನೆ
ಆಯುಷ್ ಕೇಂದ್ರಗಳನ್ನು ಹೊಂದಲು ವೈದ್ಯಕೀಯ ಪ್ರವಾಸೋದ್ಯಮ ಕೇಂದ್ರಗಳು
20 ಹೊಸ ರಾಷ್ಟ್ರೀಯ ಜಲಮಾರ್ಗ
ಮುಂದಿನ ಐದು ವರ್ಷಗಳಲ್ಲಿ 20 ಹೊಸ ರಾಷ್ಟ್ರೀಯ ಜಲಮಾರ್ಗಗಳನ್ನು ಕಾರ್ಯಗತಗೊಳಿಸಲು ನಿರ್ಧಾರ. ಜಲಮಾರ್ಗಗಳ ಜಾಗದಲ್ಲಿ ಪ್ರಾದೇಶಿಕ ಶ್ರೇಷ್ಠತೆಯ ಸಂಸ್ಥೆಗಳಾಗಿ ತರಬೇತಿ ಸಂಸ್ಥೆಗಳನ್ನು ಸ್ಥಾಪಿಸಲಾಗುವುದು. ಒಳನಾಡಿನ ಜಲಮಾರ್ಗಗಳನ್ನು ಪೂರೈಸುವ ಹಡಗು ದುರಸ್ತಿ ಪರಿಸರ ವ್ಯವಸ್ಥೆಯನ್ನು ವಾರಣಾಸಿ ಮತ್ತು ಪಾಟ್ನಾದಲ್ಲಿ ಸ್ಥಾಪನೆ.
ಬ್ಯಾಂಕಿಂಗ್ ಕ್ಷೇತ್ರಕ್ಕೆ ಬಲ
ವಿಕಸಿತ್ ಭಾರತ್ ಗಾಗಿ ಬ್ಯಾಂಕಿಂಗ್ ಕ್ಷೇತ್ರ ಬಲಪಡಿಸಲು ಉನ್ನತಮಟ್ಟದ ಸಮತಿ ರಚನೆ ಮಾಡಲಾಗುತ್ತದೆ. ಈ ಸಮಿತಿ ಎಲ್ಲಾ ವಲಯಗಳನ್ನು ಅಧ್ಯಯನ ಮಾಡಿ, ಹೂಡಿಕೆಗೆ ಸಲಹೆ ನೀಡುತ್ತದೆ. ಗ್ರಾಹಕರಿಗೆ ಹೂಡಿಕೆ ಭದ್ರತೆ ನೀಡುತ್ತದೆ.
ಬೆಂಗಳೂರಿಗೆ ಬುಲೆಟ್ ರೈಲು
ಬಜೆಟ್ನಲ್ಲಿ 7 ಹೈಸ್ಪೀಡ್ ರೈಲು ಕಾರಿಡಾರ್ ಘೋಷಣೆ
ಮುಂಬೈ-ಪುಣೆ
ಪುಣೆ-ಹೈದರಾಬಾದ್
ಹೈದರಾಬಾದ್ -ಬೆಂಗಳೂರು
ಚೆನ್ನೈ-ಬೆಂಗಳೂರು
ದೆಹಲಿ-ವಾರಣಾಸಿ
ವಾರಣಾಸಿ-ಸಿಲಿಗುರಿ
ಸೆಮಿಕಂಡಕ್ಟರ್ ಮಿಷನ್ 2.0
ಭಾರತ ಸೆಮಿಕಂಡಕ್ಟರ್ ಮಿಷನ್ 2.0 ಅರೆವಾಹಕಗಳಿಗೆ ಉದ್ಯಮ ನೇತೃತ್ವದ ಸಂಶೋಧನೆ ಮತ್ತು ತರಬೇತಿ ಕೇಂದ್ರಗಳಿಗೆ ಪ್ರೋತ್ಸಾಹ
ಸೆಮಿಕಂಡಕ್ಟರ್ ಮಿಷನ್ನ ವೇಗ ಹೆಚ್ಚಿಸಲು 40,000 ಕೋಟಿ ರೂ. ಅನುದಾನ
ಖನಿಜ-ಸಮೃದ್ಧ ರಾಜ್ಯಗಳಾದ ಒಡಿಶಾ, ಕೇರಳ, ಆಂಧ್ರಪ್ರದೇಶ ಮತ್ತು ತಮಿಳುನಾಡುಗಳನ್ನು ಬೆಂಬಲ
ಆರು ವಲಯಗಳ ಬಗ್ಗೆ ಮಾತು
ಪ್ರಮುಖ 7 ಕ್ಷೇತ್ರಗಳಾದ ಸೆಮಿಕಂಡಕ್ಟರ್ಗಳು ಮತ್ತು ಎಲೆಕ್ಟ್ರಾನಿಕ್ಸ್, ಬಾಹ್ಯಾಕಾಶ ತಂತ್ರಜ್ಞಾನ, ಹಸಿರು ಶಕ್ತಿ ಮತ್ತು ಬ್ಯಾಟರಿಗಳು, ಔಷಧಗಳು ಮತ್ತು ಜೈವಿಕ ಔಷಧ, ದೂರಸಂಪರ್ಕ, ಡಿಜಿಟಲ್ ತಂತ್ರಜ್ಞಾನಗಳು/ಫಿನ್ಟೆಕ್ ಕ್ಷೇತ್ರಗಳಲ್ಲಿ ಉತ್ಪಾದನೆ ಹೆಚ್ಚಿಸುವುದು
ಪರಂಪರೆಯ ಕೈಗಾರಿಕಾ ವಲಯಗಳನ್ನು ಪುನರುಜ್ಜೀವನಗೊಳಿಸುವುದು
ಚಾಂಪಿಯನ್ MSME ಗಳನ್ನು ರಚಿಸುವುದು
ಮೂಲಸೌಕರ್ಯ ಅಭಿವೃದ್ಧಿ ಪಡಿಸುವುದು
ದೀರ್ಘಾವಧಿಯ ಭದ್ರತೆ ಮತ್ತು ಸ್ಥಿರತೆಯನ್ನು ಖಚಿತಪಡಿಸುವುದು
ನಗರ ಆರ್ಥಿಕ ಪ್ರದೇಶಗಳನ್ನು ಅಭಿವೃದ್ಧಿಪಡಿಸುವುದು
ಬಜೆಟ್ಗೆ 3 ಕರ್ತವ್ಯ ಸ್ಪೂರ್ತಿ
ಮೊದಲನೆಯದು ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವ ಮೂಲಕ ಮತ್ತು ಅಸ್ಥಿರ ಜಾಗತಿಕ ಚಲನಶೀಲತೆ ನಡೆಯುವೆಯೂ ಆರ್ಥಿಕ ಬೆಳವಣಿಗೆಯನ್ನು ವೇಗಗೊಳಿಸುವುದು
ಎರಡನೆಯದು ಜನರ ಆಕಾಂಕ್ಷೆಗಳನ್ನು ಪೂರೈಸುವುದು ಮತ್ತು ಅವರ ಸಾಮರ್ಥ್ಯವನ್ನು ನಿರ್ಮಿಸಿ ಭಾರತದ ಸಮೃದ್ಧಿಯ ಹಾದಿಯಲ್ಲಿ ಅವರನ್ನು ಬಲವಾದ ಪಾಲುದಾರರನ್ನಾಗಿ ಮಾಡುವುದು.
ಮೂರನೆಯದು ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ಎಂದು ಖಚಿತಪಡಿಸಿಕೊಳ್ಳುವುದು. ಪ್ರತಿಯೊಂದು ಕುಟುಂಬ, ಸಮುದಾಯ, ಪ್ರದೇಶವು ಅರ್ಥಪೂರ್ಣ ಭಾಗವಹಿಸುವಿಕೆಗಾಗಿ ಸಂಪನ್ಮೂಲಗಳು, ಸೌಲಭ್ಯಗಳ ಪ್ರವೇಶವನ್ನು ಹೊಂದಿದೆ ಎಂದು ಖಚಿತಪಡಿಸಿಕೊಳ್ಳುವುದು
ಯುವ ಶಕ್ತಿ ಬಜೆಟ್
ಬಜೆಟ್ ಯುವ ಜನತೆಯನ್ನು ಗಮನದಲ್ಲಿಟ್ಟುಕೊಂಡು ರಚನೆ ಮಾಡಲಾಗಿದೆ. ಬೆಳವಣಿಗೆ, ಉದ್ಯೋಗಗಳು ಮತ್ತು ನಾವೀನ್ಯತೆಗಾಗಿ ಭಾರತದ ಯುವಜನರನ್ನು ಸಬಲೀಕರಣಗೊಳಿಸುವತ್ತ ಗಮನಹರಿಸುತ್ತದೆ.
ಬಜೆಟ್ ಮಂಡನೆ ಆರಂಭ
ಮೋದಿ ಸರ್ಕಾರದದಲ್ಲಿ ದೇಶದ ಆರ್ಥಿಕತೆ ಸುಭದ್ರವಾಗಿದೆ. ಕಳೆದ ಹನ್ನೇರಡುವ ವರ್ಷಗಳಿಂದ ಶಿಸ್ತುಬದ್ಧ ಆರ್ಥಿಕತೆಯನ್ನು ನಿಭಾಯಿಸಲಾಗುತ್ತಿದ್ದು ಜಿಡಿಪಿ ಏರಿಕೆಯಾಗಿ ಬಡತನ ಇಳಿಕೆಯಾಗಿದೆ. ನಾವು 12 ವರ್ಷಗಳ ಹಿಂದೆ ಅಧಿಕಾರ ವಹಿಸಿಕೊಂಡಾಗಿನಿಂದ, ದೇಶದ ಆರ್ಥಿಕ ಪಥವು ಸ್ಥಿರತೆ, ಹಣಕಾಸಿನ ಶಿಸ್ತು, ನಿರಂತರ ಬೆಳವಣಿಗೆ ದೇಶ ಪ್ರಗತಿ ಸಾಧಿಸುತ್ತಿದೆ.
ಸಂಪುಟ ಸಭೆ ಮುಕ್ತಾಯ, ಬಜೆಟ್ ಪ್ರಸ್ತಾವಕ್ಕೆ ಅನುಮೋದನೆ
ಕೇಂದ್ರ ಸಚಿವ ಸಂಪುಟ ಸಭೆ ಮುಕ್ತಾಯಗೊಂಡಿದ್ದು, 2026-27ನೇ ಸಾಲಿನ ಕೇಂದ್ರ ಬಜೆಟ್ ಪ್ರಸ್ತಾವಕ್ಕೆ ಕೇಂದ್ರ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.
ರಾಷ್ಟ್ರಪತಿಯನ್ನು ಭೇಟಿಯಾದ ಸಚಿವೆ
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆಗೂ ಮೊದಲು ಮುನ್ನ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಭವನದಲ್ಲಿ ಭೇಟಿ ಮಾಡಿದರು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಷ್ಟ್ರಪತಿ ಭವನದಲ್ಲಿ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ದಹಿ-ಚೀನಿ (ಮೊಸರು ಮತ್ತು ಸಕ್ಕರೆ) ತಿನ್ನಿಸಿದರು. ಭಾರತೀಯ ಸಂಪ್ರದಾಯದಲ್ಲಿ ಪ್ರಮುಖ ಕಾರ್ಯಗಳಿಗೆ ಅದೃಷ್ಟ ಮತ್ತು ಶುಭದ ಸಂಕೇತವಾಗಿ ಮೊಸರು ಮತ್ತು ಸಕ್ಕರೆ ತಿನ್ನಿಸಲಾಗುತ್ತದೆ.

ಆರ್ಥಿಕ ಸಮೀಕ್ಷೆಯಲ್ಲಿ ಏನಿದೆ?
ಜಾಗತಿಕ ವ್ಯಾಪಾರ ಅನಿಶ್ಚಿತತೆಯ ಹಿನ್ನೆಲೆಯಲ್ಲಿ, ಭಾರತದ ಒಟ್ಟು ರಫ್ತುಗಳು (ಸರಕು ಮತ್ತು ಸೇವೆಗಳು) 2025ರ ಹಣಕಾಸು ವರ್ಷದಲ್ಲಿ ದಾಖಲೆಯ 825.3 ಬಿಲಿಯನ್ ಡಾಲರ್ಗೆ ತಲುಪಿದೆ. 2026ರ ಹಣಕಾಸು ವರ್ಷದಲ್ಲೂ ಇದೇ ವೇಗದಲ್ಲಿ ಮುಂದುವರಿಯುತ್ತಿದೆ. ಅಮೆರಿಕದ ಹೆಚ್ಚಿನ ಸುಂಕ ವಿಧಿಸಿದರೂ ಸರಕುಗಳ ರಫ್ತು 2.4% (ಏಪ್ರಿಲ್-ಡಿಸೆಂಬರ್ 2025), ಸೇವೆಗಳ ರಫ್ತು 6.5% ಏರಿಕೆಯಾಗಿದೆ.
2026 ರಲ್ಲಿ ನೈಜ ಜಿಡಿಪಿ ಬೆಳವಣಿಗೆ 7.4% ದಾಖಲಾಗಬಹುದು ಎಂದು ಅಂದಾಜಿಸಲಾಗಿದೆ. ಈ ಪೈಕಿ ದೇಶೀಯ ಬೇಡಿಕೆಯೇ ಹೆಚ್ಚಾಗಿ ಬೆಳವಣಿಗೆಯಾಗುತ್ತದೆ. ಉತ್ಪಾದನಾ ಚಟುವಟಿಕೆ ಬಲಗೊಂಡಿದೆ ಮತ್ತು ಕೃಷಿ ಸ್ಥಿರತೆಯನ್ನು ಒದಗಿಸಿದೆ.
ಏಪ್ರಿಲ್-ಡಿಸೆಂಬರ್ 2025ರ ಸರಕು ಆಮದು 5.9% ರಷ್ಟು ಹೆಚ್ಚಾಗಿದೆ. ಚಾಲ್ತಿ ಖಾತೆ ಕೊರತೆಯು ಜಿಡಿಪಿಯ 0.8% ರಷ್ಟಿದೆ. ಜನವರಿ 16, 2026 ರ ಹೊತ್ತಿಗೆ 11 ತಿಂಗಳಿಗೆ ಆಮದು ಮಾಡುವಷ್ಟು ವಿದೇಶಿ ವಿನಿಮಯ ಮೀಸಲನ್ನು ಭಾರತ ಹೊಂದಿದೆ.
ಕೋವಿಡ್ ನಂತರ ಸರ್ಕಾರ ಹಂತ ಹಂತವಾಗಿ ಬಂಡವಾಳ ವೆಚ್ಚವನ್ನು ಏರಿಕೆ ಮಾಡುತ್ತಿದೆ. ಕೋವಿಡ್ ಪೂರ್ವ ಅವಧಿಯಲ್ಲಿ 1.7% ಇದ್ದ ವೆಚ್ಚ ನಂತರ ಜಿಡಿಪಿಯ 2.9% ರಷ್ಟು ಏರಿಕೆಯಾಗಿತ್ತು. 2025ರ ಹಣಕಾಸು ವರ್ಷದಲ್ಲಿ 4%ಗೆ ಏರಿಕೆಯಾಗಿದೆ.
ಹಣಕಾಸು ಕೊರತೆಯು 2021ರ ಹಣಕಾಸು ವರ್ಷದಲ್ಲಿ ಜಿಡಿಪಿಯ 9.2% ಇತ್ತು. ಆದರೆ 2025 ರಲ್ಲಿ ಇದು 4.8% ಇಳಿಕೆಯಾಗಿದೆ. 2026 ರಲ್ಲಿ 4.4% ಇಳಿಕೆ ಮಾಡುವಂತೆ ಬಜೆಟ್ನಲ್ಲಿ ಗುರಿಯನ್ನು ಹಾಕಲಾಗಿದೆ. ಈ ಅವಧಿಯಲ್ಲಿ ಆದಾಯ ಕೊರತೆಯು ಸ್ಥಿರವಾಗಿ ಕಡಿಮೆಯಾಗಿದೆ
2027ರಲ್ಲಿ ಹಣದುಬ್ಬರ ಹೆಚ್ಚಾಗಿರಬಹುದು ಆದರೆ ಕಳವಳಕಾರಿಯಲ್ಲ ಎಂದು ಸಮೀಕ್ಷೆ ಹೇಳಿದೆ. ಮುಖ್ಯವಾಗಿ ಬೆಲೆಬಾಳುವ ಲೋಹಗಳ ಬೆಲೆ ಏರಿಕೆಯಾಗಬಹುದು. ಪ್ರಸ್ತುತ ಹಣಕಾಸು ವರ್ಷದಲ್ಲಿ ಹಣದುಬ್ಬರವು ಮಧ್ಯಮ ಪ್ರಮಾಣದಲ್ಲಿದೆ. ಭಾರತೀಯ ರಿಸರ್ವ್ ಬ್ಯಾಂಕ್ನ ನಿಗದಿ ಮಾಡಿರುವ 4% ±2% ಗುರಿ ವ್ಯಾಪ್ತಿಯಲ್ಲೇ ಇರುವ ನಿರೀಕ್ಷೆಯಿದೆ. ಜಿಎಸ್ಟಿ ಪರಿಷ್ಕರಣೆಯಿಂದ ಬೆಲೆಗಳು ಏರಿಕೆಯಾದ ಕಾರಣ ಭಾರತದ ಆರ್ಥಿಕತೆಯು ಸ್ಥಿರವಾಗಿ ಮುಂದುವರೆಯುತ್ತಿದೆ.
15 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಜನರ ನಿರುದ್ಯೋಗ ದರವು ಸ್ಥಿರವಾಗಿ ಕಡಿಮೆಯಾಗಿದೆ. 2017-18 ರಲ್ಲಿ 6% ರಿಂದ 2023-24 ರಲ್ಲಿ 3.2% ಕ್ಕೆ ಇಳಿದಿದೆ. ಇದಲ್ಲದೆ ನಗರ ನಿರುದ್ಯೋಗ ದರವು ಸ್ವಲ್ಪ ಸುಧಾರಣೆಯನ್ನು ಕಂಡಿದೆ. ಅಂಕಿಅಂಶಗಳ ಪ್ರಕಾರ ಕಳೆದ ವರ್ಷ ಸರ್ಕಾರವು ತನ್ನ ಬಂಡವಾಳ ವೆಚ್ಚದ 75% ಅನ್ನು ರಕ್ಷಣಾ, ರೈಲ್ವೆ ಮತ್ತು ರಸ್ತೆ ಸಾರಿಗೆ ಮೇಲೆ ಹೂಡಿಕೆ ಮಾಡಿದೆ.
ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಒಪ್ಪಂದದ ಮಾತುಕತೆಗಳಲ್ಲಿ ಪ್ರಗತಿ ಕಂಡುಬಂದಿದೆ. ಸುಂಕ ವಿಧಿಸಿದ್ದರಿಂದ ಕೆಲ ವಲಯಗಳ ಮೇಲೆ ಪರಿಣಾಮ ಬಿದ್ದರೂ ಭಾರತದ ರಫ್ತುಗಳನ್ನು ಪರ್ಯಾಯವಾಗಿ ಬೇರೆ ಕಡೆಗೆ ತಿರುಗಿಸಲಾಗಿದೆ.
ಭಾರತವು ಈಗ ಜಪಾನ್ ಅನ್ನು ಹಿಂದಿಕ್ಕಿ ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕತೆಯಾಗಿದೆ. ಹಲವಾರು ಸವಾಲುಗಳ ಹೊರತಾಗಿಯೂ, ಭಾರತೀಯ ಆರ್ಥಿಕತೆಯು ನಾಲ್ಕು ಟ್ರಿಲಿಯನ್ ಡಾಲರ್ ಗಡಿಯನ್ನು ದಾಟುವತ್ತ ವೇಗವಾಗಿ ಸಾಗುತ್ತಿದೆ. ಟ್ರಂಪ್ ಟ್ಯಾರಿಫ್ ಯುದ್ಧದ ನಡುವೆಯೂ ಯುರೋಪ ಒಕ್ಕೂಟದ ಜೊತೆಗಿನ ಒಪ್ಪಂದ ಉತ್ಪಾದನಾ ವಲಯಕ್ಕೆ ಒಂದಷ್ಟು ರಿಯಾಯಿತಿ ಸಿಗಬಹುದು ಎಂದು ಸಮೀಕ್ಷೆ ಹೇಳಿದೆ.
ಹಿರಿಯ ನಾಗರಿಕರಿಗೆ ಮತ್ತಷ್ಟು ಗಿಫ್ಟ್?
ಹಿರಿಯ ನಾಗರಿಕರಿಗೆ ಬಜೆಟ್ನಲ್ಲಿ ಬಂಪರ್ ನಿರೀಕ್ಷೆ
ಐಟಿ ಕಾಯ್ದೆಯ ಸೆಕ್ಷನ್ 80 ಅಡಿಯಲ್ಲಿ ಇನ್ನಷ್ಟು ವಿನಾಯ್ತಿ
ಬ್ಯಾಂಕ್, ಪೋಸ್ಟ್ ಆಫೀಸ್ನಲ್ಲಿನ ಠೇವಣಿಗಳ ಮೇಲಿನ ಬಡ್ಡಿಗೆ ಸದ್ಯ 50,000ವರೆಗೆ ಕಡಿತ
ಈ ಮಿತಿಯನ್ನು 1 ಲಕ್ಷ ರೂಪಾಯಿವರೆಗೆ ಏರಿಸೋ ಸಾಧ್ಯತೆ
3 ಲಕ್ಷದವರೆಗಿನ ತೆರಿಗೆ ವಿನಾಯ್ತಿಯನ್ನು ಹೆಚ್ಚಿಸಬಹುದು
ಕೇಂದ್ರಕ್ಕಿರುವ ಸವಾಲುಗಳು?
ಟ್ರಂಪ್ ಸುಂಕ ಬೆದರಿಕೆ, ಜಾಗತಿಕ ಅಸ್ಥಿರತೆ ಸವಾಲು
ತೆರಿಗೆ ಕಡಿತವು ಸರ್ಕಾರದ ಆದಾಯಕ್ಕೆ ಹೊಡೆತ ಕೊಡಬಹುದು
ಕೆಲವು ಕ್ಷೇತ್ರಗಳಿಗೆ ಮಾತ್ರ ತೆರಿಗೆ ಕಡಿತ ಸೀಮಿತಗೊಳಿಸಬಹುದು
ಭಾರತ-ಅಮೆರಿಕಾ ವ್ಯಾಪಾರ ಒಪ್ಪಂದ ಸ್ಥಿರಗೊಳಿಸಬೇಕು
ಹೂಡಿಕೆದಾರರ ಮರುವಿಶ್ವಾಸ ಗಳಿಸುವುದು ಕಷ್ಟ
ಡಾಲರ್ ಎದುರು ಕುಸಿಯುತ್ತಿರುವ ರೂಪಾಯಿ ಮೌಲ್ಯ
ವಿದೇಶಿ ಹೂಡಿಕೆದಾರರಿಂದ ಹೆಚ್ಚಾಗಿರುವ ಷೇರು ಮಾರಾಟ
ಬಜೆಟ್ನಲ್ಲಿ ರಾಜ್ಯದ ನಿರೀಕ್ಷೆಗಳೇನು?
ಚೆನ್ನೈ-ಬೆಂಗಳೂರು-ಮೈಸೂರು ಹೈಸ್ಪೀಡ್ ರೈಲು ನಿರೀಕ್ಷೆ
3ನೇ ಹಂತದ ಮೆಟ್ರೋ ವಿಸ್ತರಣೆಗೆ ಕೇಂದ್ರದ ವಿಶೇಷ ನೆರವು
ಬೆಂಗಳೂರು ಉಪನಗರ ರೈಲು ಯೋಜನೆಗೆ ವಿಶೇಷ ಅನುದಾನ
ಕೃಷ್ಣ ಮೇಲ್ದಂಡೆ, ಎತ್ತಿನಹೊಳೆ ಯೋಜನೆಗೆ ರಾಷ್ಟ್ರೀಯ ಮಾನ್ಯತೆ
ಶಿರಾಡಿ ಸುರಂಗ ಮಾರ್ಗ, ಹಾಸನ ಐಐಟಿ, ರಾಯಚೂರು ಏಮ್ಸ್ ನಿರೀಕ್ಷೆ
ಕರ್ನಾಟಕ ಬಂದರುಗಳಿಗೆ ಸಾಗರಮಾಲಾ ಯೋಜನೆಯಡಿ ವಿಶೇಷ ಪ್ಯಾಕೇಜ್
ಮಂಡ್ಯದಲ್ಲಿ ಕೈಗಾರಿಕಾ ಸ್ಥಾಪನೆ, ಮೈಸೂರು-ಕುಶಾಲನಗರ ಹೊಸ ರೈಲು ಯೋಜನೆ
ವೈದ್ಯಕೀಯ ಔಷಧ, ಉಪಕರಣಗಳ ಸುಂಕ ಕಡಿತ ಸಾಧ್ಯತೆ
ಆರೋಗ್ಯ ವಲಯಕ್ಕೆ ಬಜೆಟ್ನಲ್ಲಿ ಹೆಚ್ಚಿನ ಒತ್ತು
ರೇಡಿಯೋ ಥೆರಪಿಯಂಥಹ ಸುಧಾರಿತ ಉಪಕರಣ ಮೇಲಿನ ಸೀಮಾ ಸುಂಕ ಕಡಿಮೆ
ಔಷಧ ತಯಾರಿಕಾ ವಲಯಕ್ಕೆ ಹೆಚ್ಚಿನ ಬೆಂಬಲ ಸಿಗುವ ನಿರೀಕ್ಷೆ
2ನೇ ಮಹಾನಗರ, 3ನೇ ಮಹಾನಗರದಲ್ಲಿ ಡಯಾಗ್ನೋಸ್ಟಿಕ್ ಸೌಲಭ್ಯಗಳು
ಐವಿಎಫ್, ಸಹಾಯಕ ತಂತ್ರಜ್ಞಾನಗಳಿಗೆ ಸಬ್ಸಿಡಿ; ತೆರಿಗೆ ರಿಲೀಫ್
ಪಿಎಂ ಕಿಸಾನ್ ಯೋಜನೆಯಡಿ ನೀಡಲಾಗುವ 6000 ರೂ.ಅನ್ನು 9000 ರೂ.ವರೆಗೆ ಏರಿಸುವ ನಿರೀಕ್ಷೆ
ಕಿಸಾನ್ ಕ್ರೆಡಿಟ್ ಕಾರ್ಡ್(ಕೆಸಿಸಿ) ಸಾಲದ ಮಿತಿ 3 ಲಕ್ಷದಿಂದ 5 ಲಕ್ಷಕ್ಕೆ ಏರಿಕೆ ಸಾಧ್ಯತೆ
2047ರ ವಿಕಸಿತ ಭಾರತದ ದೃಷ್ಟಿಕೋನದಲ್ಲಿ ಮೂಲಸೌಕರ್ಯಗಳ ಅಭಿವೃದ್ಧಿಗೆ ಹೆಚ್ಚು ಒತ್ತು
ಸ್ಟಾರ್ಟ್ ಅಪ್ಗಳು ಮತ್ತು ಐಟಿ ಕಂಪನಿಗಳಿಗೆ ಹೊಸ ಅವಕಾಶಗಳನ್ನು ಸೃಷ್ಟಿಸಬಹುದು
ಮುದ್ರಾಂಕ ಶುಲ್ಕಗಳು ಕಡಿಮೆ ಮಾಡುವ ನಿರೀಕ್ಷೆ
ಆರೋಗ್ಯ ಮತ್ತು ಜೀವ ವಿಮೆಗೆ ಸಂಬಂಧಿಸಿದಂತೆ ಸುಧಾರಣೆ ಘೋಷಿಸಬಹುದು
ಚಿನ್ನಾಭರಣ ಉದ್ಯಮ: ಆಮದು ಸುಂಕ ಕಡಿತ?
ಚಿನ್ನಾಭರಣ ಖರೀದಿಗೆ ಪ್ಯಾನ್ ಮಿತಿಯಲ್ಲಿ ಬದಲಾವಣೆ ಸಾಧ್ಯತೆ
ಸದ್ಯಕ್ಕೆ 2 ಲಕ್ಷವರೆಗೆ ಆಭರಣ ಖರೀದಿಗೆ ಪ್ಯಾನ್ ಬೇಕಾಗಿಲ್ಲ
ಈ ಮಿತಿಯನ್ನು ಹೆಚ್ಚಳ ಮಾಡೋ ಸಾಧ್ಯತೆ ಇದೆ
ಆಭರಣ ಕ್ಷೇತ್ರಕ್ಕೆ ವಿಶೇಷ ರಿಯಾಯಿತಿ ನೀಡಬಹುದು
ಪ್ರಸ್ತುತ ಚಿನ್ನದ ಆಮದು ಸುಂಕ ಶೇ.6ರಷ್ಟಿದೆ
ಸುಂಕದ ಪ್ರಮಾಣವನ್ನು ಇನ್ನಷ್ಟು ಇಳಿಕೆ ನಿರೀಕ್ಷೆ
ಆಭರಣಗಳ ಮೇಲೆ ಇರುವ ಶೇ.3ರಷ್ಟು ಜಿಎಸ್ಟಿ ದರ 1.25ಕ್ಕೆ ಇಳಿಕೆ ಸಾಧ್ಯತೆ
ಬಜೆಟ್ನಲ್ಲಿ ಏನಿರಬಹುದು?
ವೈಯಕ್ತಿಕ ಆದಾಯ ತೆರಿಗೆ ಮಿತಿಯಲ್ಲಿ ಏರಿಕೆ ಸಾಧ್ಯತೆ ಕಡಿಮೆ
ಕಾರ್ಪೊರೇಟ್ ತೆರಿಗೆಯಲ್ಲಿ ಯಥಾಸ್ಥಿತಿ ಸಾಧ್ಯತೆ
ಪೆಟ್ರೋಲ್, ಡಿಸೇಲ್ ಮೇಲಿನ ಸುಂಕ ಏರಿಕೆ ಸಾಧ್ಯತೆ
ಕೃಷಿ, ಸಣ್ಣ, ಮಧ್ಯಮ ಕೈಗಾರಿಕೆಗೆ ಸಹಾಯ
ದಿನೇ ದಿನೇ ಗಗನಕ್ಕೇರುತ್ತಿರುವ ಅಗತ್ಯವಸ್ತು ಬೆಲೆಗೆ ಸ್ಥಿರತೆ
ಬಂಡವಾಳ ಹೂಡಿಕೆ ಶೇ.13ರಷ್ಟು ವೃದ್ಧಿಸಲು ಕ್ರಮ
ರಕ್ಷಣಾ ವಲಯದಲ್ಲಿ ಸ್ವದೇಶಿಗೆ ಒತ್ತು
ಸುಂಕ ಏರಿಕೆ ಗ್ರಾಹಕರಿಗೆ ನೇರ ವರ್ಗಾಹಿಸುವ ಸಾಧ್ಯತೆ ಕಡಿಮೆ
ತಮಿಳುನಾಡು, ಅಸ್ಸಾಂ, ಪ.ಬಂಗಾಳಕ್ಕೆ ವಿಶೇಷ ಪ್ಯಾಕೇಜ್
ಜಾಗತಿಕ ವ್ಯಾಪಾರ ಅಸ್ಥಿರತೆ, ಪ್ರತಿಸುಂಕ ಎದುರಿಸಲು ಕ್ರಮ
ಎಂಎಸ್ಎಂಇ ವಲಯಕ್ಕೆ ಪ್ರೋತ್ಸಾಹ ಸಾಲ ಖಾತರಿ
ಎಲೆಕ್ಟ್ರಿಕ್ ಮೊಬಿಲಿಟಿ, ಗ್ರೀನ್ ಹೈಡ್ರೋಜನ್ ವಲಯಕ್ಕೆ ಉತ್ತೇನ
ಶುದ್ಧ ಇಂಧನ ಉಪಕರಣ ವಲಯಕ್ಕೆ ಉತ್ತೇಜನ
ಇದಕ್ಕೆ ಹೆಚ್ಚಿನ ಆದ್ಯತೆ?
ಆಗತ್ಯ ವಸ್ತುಗಳ ಬೆಲೆ ಸ್ಥಿರತೆಗೆ ಅಗತ್ಯ ಕ್ರಮ
ಆದಾಯ ತೆರಿಗೆ ಮಿತಿ ಹೆಚ್ಚಳ.. ಸರಳೀಕರಣ
ದೇಶದ ವಿತ್ತೀಯ ಕೊರತೆ ಶೇ.4.4ಕ್ಕೆ ಇಳಿಸುವ ಗುರಿ
ಸಾಲದ ಮೊತ್ತ ಜಿಡಿಪಿಯ ಶೇ.50ರಷ್ಟು ಮೀರದಂತೆ ಒತ್ತು
ರಕ್ಷಣಾ ಕ್ಷೇತ್ರದಲ್ಲಿ ಆತ್ಮನಿರ್ಭರ್.. ಆಮದು ಮೇಲೂ ಗಮನ
ಟ್ರಂಪ್ ಸುಂಕಕ್ಕೆ ಸಿಲುಕಿದ ಜವಳಿ, ಆಭರಣಕ್ಕೆ ಆದ್ಯತೆ
ಐರೋಪ್ಯ ಒಕ್ಕೂಟದ ಕಾರುಗಳ ತೆರಿಗೆ ಶೇ.10 ಇಳಿಸುವ ಸಾಧ್ಯತೆ
ವಿದೇಶಿ ಉತ್ಪನ್ನ ಬದಲು ಸ್ವದೇಶಿ ಉತ್ಪನ್ನಗಳಿಗೆ ಹೆಚ್ಚಿನ ಪ್ರಾಶಸ್ತ್ಯ

