-ಶ್ರೀರಾಮುಲು ವಿರುದ್ಧ ಕೇಸ್ ದಾಖಲಿಸಿರೋದು ಸರಿಯಿದೆ
ಬೆಂಗಳೂರು: ನೂರಕ್ಕೆ ನೂರು ಸಿಎಂ ಸಿದ್ದರಾಮಯ್ಯ (Siddaramaiah) ಈ ಬಾರಿ ಬಜೆಟ್ ಮಂಡನೆ ಮಾಡ್ತಾರೆ. ನಾಯಕತ್ವ ಬದಲಾವಣೆಗೆ ಹೈಕಮಾಂಡ್ ನಿರ್ಧಾರವೇ ಅಂತಿಮ ಎಂದು ಸಚಿವ ಬೋಸರಾಜು (Bosaraju) ತಿಳಿಸಿದ್ದಾರೆ.
ಕಾಂಗ್ರೆಸ್ನಲ್ಲಿ ನಾಯಕತ್ವ ಬದಲಾವಣೆ ಗೊಂದಲ ವಿಚಾರಕ್ಕೆ ವಿಕಾಸಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ನಾಯಕತ್ವ ಬದಲಾವಣೆ ಅನ್ನೋದು ಮುಗಿದ ಅಧ್ಯಾಯ ಅಂತಲ್ಲ. ಸಿಎಂ, ಡಿಸಿಎಂ ಕೂಡ ಕ್ಲಿಯರ್ ಹೇಳಿದ್ದಾರೆ. ಹೈಕಮಾಂಡ್ ನಿರ್ಧಾರಕ್ಕೆ ಬದ್ಧ ಅಂದಿದ್ದಾರೆ. ಈಗ ಬದಲಾವಣೆ ಪರಿಸ್ಥಿತಿ ಇಲ್ಲ, ಅಂತಹ ಪರಿಸ್ಥಿತಿ ಬಂದರೆ ಹೈಕಮಾಂಡ್ ತೀರ್ಮಾನ ಮಾಡಲಿದೆ. ಬೆಳಿಗ್ಗೆಯಿಂದ ಸಂಜೆ ತನಕ ಬಿಜೆಪಿಯವ್ರು ಬೊಗಳುತ್ತಿರುತ್ತಾರೆ. ಲೋಪದೋಷಗಳಿದ್ರೆ ಹೇಳಲಿ, ಸುಮ್ಮನೆ ಸುಳ್ಳು ಹೇಳುವುದಲ್ಲ. ಹೊಸದಾಗಿ ಬಂದಿರುವ ಶಾಸಕರು ಉತ್ಸಾಹದಲ್ಲಿ ಹೇಳ್ತಾರೆ. ನೂರಕ್ಕೆ ನೂರು ಪರ್ಸೆಂಟ್ ಸಿಎಂ ಬಜೆಟ್ ಮಂಡಿಸುತ್ತಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಆದಷ್ಟು ಬೇಗ ಈ ಕೆಟ್ಟ ಮನಸ್ಸಿನ, ಸ್ವಾರ್ಥ ಮಹಿಳೆಗೆ ಡಿವೋರ್ಸ್ ಕೊಡ್ತೀನಿ – ಪತ್ನಿ ವಿರುದ್ಧವೇ ಸಿಡಿದ ಪ್ರತೀಕ್ ಯಾದವ್!
ಬಿಜೆಪಿಯವರು ಪಾದಯಾತ್ರೆ ಮಾಡೋಕೆ ಹೈಕಮಾಂಡ್ ಬಳಿ ಕೇಳಬೇಕು. ಪಾದಯಾತ್ರೆಗೆ ಮ್ಯಾಪ್ ರೆಡಿ ಮಾಡ್ಕೊಂಡಿದ್ರು ಆದ್ರೂ ಆಗಲಿಲ್ಲ. ನಮ್ಮ ಹೈಕಮಾಂಡ್ ಸರಿಯಾದ ಸಂದರ್ಭದಲ್ಲಿ ತೀರ್ಮಾನ ಮಾಡುತ್ತೆ. ಸಿಎಂ ಬದಲಾಗ್ತಾರೆ ಅಂತಾ ವಿಜಯೇಂದ್ರ ನೂರಾರು ಸಲ ಹೇಳಿದ್ರು. ಏನಾದ್ರೂ ಆಯ್ತಾ? ವಿಜಯೇಂದ್ರ ಬರಿ ಬಂಡಲ್ ಹೊಡೀತಾರೆ. ಅದಕ್ಕೆ ವಿಜಯೇಂದ್ರ ಅವರನ್ನು Immatured ಅಧ್ಯಕ್ಷ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ
ಎಲ್ಲಾ ಕೆಲಸಗಳು ಸರಿಯಾಗಿ ನಡೆಯುತ್ತಿವೆ. ಗ್ಯಾರಂಟಿಗಳನ್ನು ಕೊಟ್ಟಿದ್ದೇವೆ. ಎರಡು ಘಟನೆಯಲ್ಲಿ ನೋಡಿದ್ರೆ ಗೊತ್ತಾಗುತ್ತೆ ಹೈಕಮಾಂಡ್ ವೀಕ್? ಸ್ಟ್ರಾಂಗಾ? ಅಂತ. ನಮ್ಮ ಪಕ್ಷದಲ್ಲಿ ಅಧಿಕಾರಕ್ಕಾಗಿ ಯಾವುದೇ ಗೊಂದಲ ಇಲ್ಲ. ಹೈಕಮಾಂಡ್ ನಿರ್ಧಾರವೇ ಅಂತಿಮ. ನಮ್ಮ ಮಂತ್ರಿಸ್ಥಾನ ಸೇಫ್ ಅಂತಾ ಕೂಡ ನಾನು ಹೇಳಲ್ಲ. ಎಲ್ಲವನ್ನು ಹೈಕಮಾಂಡ್ ನಿರ್ಧಾರ ಮಾಡುತ್ತದೆ ಎಂದಿದ್ದಾರೆ.
ಇದೇ ವೇಳೆ ಶ್ರೀರಾಮುಲು (Sriramulu) ವಿರುದ್ಧ ಕೇಸ್ ದಾಖಲು ಮಾಡಿರೋ ವಿಚಾರವಾಗಿ ಮಾತನಾಡಿ, ಸರ್ಕಾರ ಮಾಡುವ ಕೆಲಸಗಳನ್ನ ವಿಮರ್ಶೆ ಮಾಡುವುದು ಅವರ ಕೆಲಸ. ರಾಮುಲು ಮಂತ್ರಿಯಾಗಿ ಕೆಲಸ ಮಾಡಿದವರು. ಏನ್ ವಿಷಯದ ಬಗ್ಗೆ ಮಾತನಾಡಬೇಕು ಎಂಬುದು ತಿಳಿದು ಮಾತನಾಡಬೇಕು. ಹೀಗೆ ಮಾತಾಡಿದ್ರೆ ಆ ಹುಡುಗಿಯ ಕುಟುಂಬದ ಪರಿಸ್ಥಿತಿ ಏನಾಬೇಕು. ಕಾನೂನು ಪ್ರಕಾರ ಪೊಲೀಸರು ಎಫ್ಐಆರ್ (FIR) ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ಇನ್ನೂ ಅಬಕಾರಿ ಇಲಾಖೆ ಭ್ರಷ್ಟಾಚಾರ ಕೇಸ್ ವಿಚಾರವಾಗಿ ಮಾತನಾಡಿ, ಬಿಜೆಪಿಯವ್ರು ಆರೋಪ ಮಾಡ್ತಾರೆ ಅಂತಾರೆ ನಾವು ಮಾತನಾಡೋಕೆ ಆಗಲ್ಲ. ಜನರನ್ನು ದಾರಿತಪ್ಪಿಸುವುದು ಹೇಗೆ ಅಂತಾ ಬಿಜೆಪಿಯವ್ರು ನೋಡ್ತಿರ್ತಾರೆ. ಅಭಿವೃದ್ದಿ ಬಗ್ಗೆ ಮಾತನಾಡಲ್ಲ, ಕೇವಲ ಆಪಾದನೆ ಮಾಡ್ತಾರೆ. ಒಳ್ಳೆ ಕೆಲಸ ಮಾಡಿದ್ರೂ ಜನರನ್ನು ಮಿಸ್ ಗೈಡ್ ಮಾಡ್ತಿದ್ದಾರೆ. ಸಚಿವ ತಿಮ್ಮಾಪುರ್ ಮೇಲೆ ಸುಮ್ಮನೆ ಆರೋಪ ಮಾಡ್ತಿದ್ದಾರೆ. ತಪ್ಪು ಮಾಡಿದ್ರೆ ಶಿಕ್ಷೆ ಆಗಲಿ ಅಂತ ಅವರೇ ಹೇಳುತ್ತಿದ್ದಾರೆ. ಅಧಿಕಾರಿಗಳು ಅವರ ಹೆಸರನ್ನು ಮಿಸ್ ಯುಸ್ ಮಾಡಿಕೊಂಡಿದ್ದಾರೆ. ಸಿಎಂ ಕೂಡ ಈ ವಿಚಾರದ ಬಗ್ಗೆ ಮಾತನಾಡಿದ್ದಾರೆ ಎಂದು ತಿಮ್ಮಾಪುರ್ ಪರ ಬ್ಯಾಟಿಂಗ್ ಮಾಡಿದ್ದಾರೆ. ಇದನ್ನೂ ಓದಿ: ನಾನು ತಪ್ಪು ಮಾಡಿಲ್ಲ, ತೇಜೋವಧೆ ಮಾಡೋ ಕೆಲಸ ನಡೆಯುತ್ತಿದೆ: ಆರ್ಬಿ ತಿಮ್ಮಾಪುರ

