ಸಿಎಂ ಸಿದ್ದರಾಮಯ್ಯನವರನ್ನು ಪ್ರಥಮ್ ಭೇಟಿಯಾಗಿದ್ದು ಯಾಕೆ?

Public TV
1 Min Read
cm pratham

ಬೆಂಗಳೂರು: ಬಿಗ್ ಬಾಸ್ ಖ್ಯಾತಿಯ ಪ್ರಥಮ್ ತಮ್ಮ ಹೊಸ ಚಿತ್ರಕ್ಕೆ ಕ್ಲ್ಯಾಪ್ ಮಾಡುವಂತೆ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಆಹ್ವಾನಿಸಿದ್ದಾರೆ.

ವಿಧಾನಸೌಧದ ಸಿಎಂ ಕೊಠಡಿ ತೆರಳಿ ಪ್ರಥಮ್ ಅವರು ತಮ್ಮ ‘ಎಂಎಲ್‍ಎ-ಮದರ್ ಪ್ರಾಮಿಸ್ ಲೆಕ್ಕಕ್ಕೆ ಸಿಗದ ಆಸಾಮಿ’ ಚಿತ್ರದ ಕ್ಲ್ಯಾಪ್ ಮಾಡಲು ಸಿಎಂ ಅವರಿಗೆ ಆಹ್ವಾನಿಸಿದ್ದಾರೆ.

pratam 1

ಆಹ್ವಾನ ನೀಡಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಪ್ರಥಮ್, ನಾನು ಎಂಎಲ್‍ಎ ಪಾತ್ರ ಮಾಡುತ್ತಿರುವೆ. ಶುಕ್ರವಾರ ಮೂಹೂರ್ತ ಇದೆ. ಹೀಗಾಗಿ ರಾಜ್ಯದ ದಂಡನಾಯಕ ಸಿಎಂ ಕೈಯಲ್ಲಿ ಕ್ಲ್ಯಾಪ್ ಮಾಡುವಂತೆ ಆಹ್ವಾನಿಸಿದ್ದೆನೆ. ಜವಾಬ್ದಾರಿ ಇಲ್ಲದ ವ್ಯಕ್ತಿಯೊಬ್ಬ ಎಂಎಲ್‍ಎ ಆಗಿ ಆಯ್ಕೆಯಾದರೆ ಏನೆಲ್ಲ ಆಗಬಹುದು ಎನ್ನುವ ಕಥೆಯನ್ನು ಚಿತ್ರ ಹೊಂದಿದೆ ಎಂದು ಅವರು ತಿಳಿಸಿದರು.

 

Share This Article
Leave a Comment

Leave a Reply

Your email address will not be published. Required fields are marked *