ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮತ್ತೆ ಜಿಟಿಜಿಟಿ ಮಳೆ (Rain) ಆರಂಭವಾಗಿದೆ. ಮಲ್ಲೇಶ್ವರಂ, ಮೆಜೆಸ್ಟಿಕ್, ಶಾಂತಿನಗರ, ಯಶವಂತರಪುರ ಸೇರಿ ಹಲವೆಡೆ ಮಳೆ ಸುರಿಯುತ್ತಿದೆ.
ತುಂತುರು ಮಳೆಯ ನಡುವೆಯೇ ಕೆಲಸ, ಕಚೇರಿಗಳಿಗೆ ಜನ ತೆರಳುತ್ತಿದ್ದಾರೆ. ಇದನ್ನೂ ಓದಿ: ʼಸಂಚಾರ್ ಸಾಥಿʼ ಆ್ಯಪ್ ಕಡ್ಡಾಯ ಹಿಂಪಡೆದ ಕೇಂದ್ರ – ಪ್ರಯೋಜನಗಳೇನು? ವಿವಾದವೇಕೆ?
ಕಳೆದ ವಾರ ಶ್ರೀಲಂಕಾಗೆ ಅಪ್ಪಳಿಸಿದ ದಿತ್ವಾ ಚಂಡಮಾರುತದ ಪರಿಣಾಮ ಬೆಂಗಳೂರಿನಲ್ಲಿ (Bengaluru) ಉಷ್ಣಾಂಶ ಬಹಳ ಇಳಿಕೆಯಾಗಿತ್ತು. ಬೆಳಗ್ಗೆ ಮತ್ತು ರಾತ್ರಿ ವಿಪರೀತ ಚಳಿ ಇತ್ತು.
ಇಂದು(ಡಿ.5) ಬೆಂಗಳೂರಿನಲ್ಲಿ 25 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 17 ಡಿಗ್ರಿ ಸೆಲ್ಸಿಯಶ್ ಕನಿಷ್ಠ ಉಶ್ಣಾಂಶ ದಾಖಲಾಗುವ ಸಾಧ್ಯತೆಯಿದೆ.

