ನವದೆಹಲಿ: ಸಿಂಧ್(Sindh) ಪ್ರದೇಶವು ಇಂದು ಭಾರತದ (India) ಜೊತೆ ಇಲ್ಲದೇ ಇರಬಹುದು. ಆದರೆ ಮುಂದಿನ ದಿನಗಳಲ್ಲಿ ಗಡಿಗಳು ಬದಲಾಗಬಹುದು ಮತ್ತು ಆ ಪ್ರದೇಶವು ಭಾರತಕ್ಕೆ ಮರಳಬಹುದು ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಲಾಲ್ ಕೃಷ್ಣ ಅಡ್ವಾಣಿ (LK Advani) ಅವರು ತಮ್ಮ ಪುಸ್ತಕವೊಂದರಲ್ಲಿ ಸಿಂಧಿ ಜನರು ಹಿಂದೂಗಳು ಎಂದಿದ್ದಾರೆ. ವಿಶೇಷವಾಗಿ ಅವರ ಪೀಳಿಗೆಯವರು ಇನ್ನೂ ಭಾರತದಿಂದ ಸಿಂಧ್ ಅನ್ನು ಬೇರ್ಪಡಿಸುವುದನ್ನು ಒಪ್ಪಿಕೊಂಡಿಲ್ಲ ಎಂದು ಬರೆದಿದ್ದಾರೆ” ಎಂದು ಅವರು ಹೇಳಿದರು.
ಸಿಂಧ್ನಲ್ಲಿ ಮಾತ್ರವಲ್ಲ, ಭಾರತದಾದ್ಯಂತ ಹಿಂದೂಗಳು ಸಿಂಧ್ ನದಿಯನ್ನು ಪವಿತ್ರವೆಂದು ಪರಿಗಣಿಸುತ್ತಾರೆ. ಸಿಂಧ್ನ ಅನೇಕ ಮುಸ್ಲಿಮರು ಸಿಂಧ್ನ ನೀರು ಮೆಕ್ಕಾದ ಆಬ್-ಎ-ಜಮ್ಜಾಮ್ನಷ್ಟೇ ಪವಿತ್ರವಾಗಿದೆ ಎಂದು ನಂಬುತ್ತಾರೆ. ಇದು ಅಡ್ವಾಣಿ ಅವರ ಉಲ್ಲೇಖ ಎಂದು ಅವರು ತಿಳಿಸಿದರು. ಇದನ್ನೂ ಓದಿ: ಭಾರತದ ರಫೇಲ್ ನಷ್ಟವಾಗಿದೆ ಅನ್ನೋದು ಅಪ್ಪಟ ಸುಳ್ಳು – ಪಾಕ್ ವರದಿ ಅಲ್ಲಗಳೆದ ಫ್ರಾನ್ಸ್
#WATCH | Delhi: Defence Minister Rajnath Singh says, “…Today, the land of Sindh may not be a part of India, but civilisationally, Sindh will always be a part of India. And as far as land is concerned, borders can change. Who knows, tomorrow Sindh may return to India again…”… pic.twitter.com/9Wp1zorTMt
— ANI (@ANI) November 23, 2025
ಸೆಪ್ಟೆಂಬರ್ 22 ರಂದು ಮೊರಾಕೊದಲ್ಲಿ ಭಾರತೀಯ ಸಮುದಾಯದೊಂದಿಗೆ ನಡೆದ ಸಂವಾದದಲ್ಲಿ ಸಿಂಗ್, ಪಿಒಕೆಯಲ್ಲಿರುವ ಜನರು ಸ್ವಾತಂತ್ರ್ಯವನ್ನು ಬಯಸುತ್ತಿದ್ದಾರೆ. ಭಾರತವು ಯಾವುದೇ ಆಕ್ರಮಣಕಾರಿ ಕ್ರಮಗಳನ್ನು ತೆಗೆದುಕೊಳ್ಳದೆ ಪಿಒಕೆಯನ್ನು ಮರಳಿ ಪಡೆಯುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ ನಂತರ ರಾಜನಾಥ್ ಸಿಂಗ್ ಅವರಿಂದ ಹೇಳಿಕೆ ಬಂದಿರುವುದು ವಿಶೇಷ. ಇದನ್ನೂ ಓದಿ: ಭಾರತದ ರಫೇಲ್ ನಷ್ಟವಾಗಿದೆ ಅನ್ನೋದು ಅಪ್ಪಟ ಸುಳ್ಳು – ಪಾಕ್ ವರದಿ ಅಲ್ಲಗಳೆದ ಫ್ರಾನ್ಸ್
ಸಿಂಧ್ ನದಿಯ ಬಳಿಯ ಪ್ರದೇಶವಾದ ಸಿಂಧ್ ಪ್ರಾಂತ್ಯವು 1947 ರಲ್ಲಿ ವಿಭಜನೆಯ ನಂತರ ಪಾಕಿಸ್ತಾನಕ್ಕೆ ಹೋದರೆ ಆ ಪ್ರದೇಶದಲ್ಲಿ ವಾಸಿಸುತ್ತಿದ್ದ ಸಿಂಧಿ ಜನರು ಭಾರತಕ್ಕೆ ಮರಳಿದ್ದರು.

