Public TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos

Archives

  • November 2025
  • October 2025
  • September 2025
  • August 2025
  • July 2025
  • June 2025
  • May 2025
  • April 2025
  • March 2025
  • February 2025
  • January 2025
  • December 2024
  • November 2024
  • October 2024
  • September 2024
  • August 2024
  • July 2024
  • June 2024
  • May 2024
  • April 2024
  • March 2024
  • February 2024
  • January 2024
  • December 2023
  • November 2023
  • October 2023
  • September 2023
  • August 2023
  • July 2023
  • June 2023
  • May 2023
  • April 2023
  • March 2023
  • February 2023
  • January 2023
  • December 2022
  • November 2022
  • October 2022
  • September 2022
  • August 2022
  • July 2022
  • June 2022
  • May 2022
  • April 2022
  • March 2022
  • February 2022
  • January 2022
  • December 2021
  • November 2021
  • October 2021
  • September 2021
  • August 2021
  • July 2021
  • June 2021
  • May 2021
  • April 2021
  • March 2021
  • February 2021
  • January 2021
  • December 2020
  • November 2020
  • October 2020
  • September 2020
  • August 2020
  • July 2020
  • June 2020
  • May 2020
  • April 2020
  • March 2020
  • February 2020
  • January 2020
  • December 2019
  • November 2019
  • October 2019
  • September 2019
  • August 2019
  • July 2019
  • June 2019
  • May 2019
  • April 2019
  • March 2019
  • February 2019
  • January 2019
  • December 2018
  • November 2018
  • October 2018
  • September 2018
  • August 2018
  • July 2018
  • June 2018
  • May 2018
  • April 2018
  • March 2018
  • February 2018
  • January 2018
  • December 2017
  • November 2017
  • October 2017
  • September 2017
  • August 2017
  • July 2017
  • June 2017
  • May 2017
  • April 2017
  • March 2017
  • February 2017

Categories

  • 31 Districts
  • Advertisement
  • Astrology
  • Automobile
  • Ayodhya Ram Mandir
  • Ayodhya Updates
  • Bagalkot
  • BELAKU
  • Belgaum
  • Bellary
  • Bengaluru City
  • Bengaluru Rural
  • Bidar
  • Big Bulletin
  • Bollywood
  • Chamarajanagar
  • Chikkaballapur
  • Chikkamagaluru
  • Chitradurga
  • Cinema
  • Column
  • Corona
  • Court
  • Cricket
  • Crime
  • Dakshina Kannada
  • Davanagere
  • Delhi Election 2025
  • Dharwad
  • Dina Bhavishya
  • Districts
  • Education
  • Election News
  • Entertainment Videos
  • Explainer
  • Fashion
  • Featured
  • Food
  • Gadag
  • Hassan
  • Haveri
  • Health
  • Kalaburagi
  • Karnataka
  • Karnataka Budget 2022
  • Karnataka Budget 2023
  • Karnataka Budget 2024
  • Karnataka Election
  • Karnataka Election 2023
  • Kodagu
  • Kolar
  • Koppal
  • Latest
  • Main Post
  • Mandya
  • Monsoon
  • Most Shared
  • Mysuru
  • National
  • National
  • News Videos
  • Non Veg
  • Other Sports
  • Out of the box
  • Photos
  • Political News
  • Public Hero
  • Raichur
  • Ramanagara
  • Rameshwaram Cafe
  • Sandalwood
  • Shivamogga
  • Smartphones
  • South cinema
  • Special
  • Sports
  • States
  • Stories
  • Tech
  • Telangana
  • Telecom
  • Top Stories
  • Travel
  • Tumakuru
  • TV Shows
  • Udupi
  • Uncategorized
  • Uttara Kannada
  • Veg
  • Videos
  • Vijayapura
  • World
  • Yadgir
  • ಆತ್ಮಹತ್ಯೆ
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Bengaluru City

5ನೇ ಲೆಕ್ಕಪರಿಶೋಧನಾ ದಿವಸ – 2025 ಉದ್ಘಾಟಿಸಿದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್

Public TV
Last updated: November 21, 2025 7:23 pm
Public TV
Share
Shalini Rajaneesh Audit Diwas 2025 2
SHARE

ಬೆಂಗಳೂರು: ಭಾರತೀಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯ ವತಿಯಿಂದ ಹಮ್ಮಿಕೊಳ್ಳಲಾದ 5ನೇ ಲೆಕ್ಕಪರಿಶೋಧನಾ ದಿವಸ – 2025 (Audit Diwas 2025) ಹಾಗೂ ಲೆಕ್ಕಪರಿಶೋಧನಾ ವಾರವನ್ನು ಇಂದು ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದ ಡಾ. ಶಾಲಿನಿ ರಜನೀಶ್ (Dr Shalini Rajneesh) ಉದ್ಘಾಟಿಸಿದರು.

ʼಬದಲಾವಣೆಯನ್ನು ಮುನ್ನಡೆಸುವುದು ಮತ್ತು ಮೌಲ್ಯಗಳನ್ನು ಪುನಃ ಸ್ಥಾಪಿಸುವುದು: ನಂಬಿಕೆ, ನವೀನತೆ, ಸ್ಥಿರತೆ ಮತ್ತು ಹೊಣೆಗಾರಿಕೆʼ ಈ ವರ್ಷದ ಆಯ್ಕೆಯ ವಿಷಯವಾಗಿದೆ ಎಂದು ತಿಳಿಸಿದ ಮುಖ್ಯ ಕಾರ್ಯದರ್ಶಿಗಳು, 5ನೇ ಲೆಕ್ಕಪರಿಶೋಧನಾ ದಿವಸ 2025ರ ಉದ್ಘಾಟನೆಗೆ ಭಾರತೀಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪರಿಶೋಧನಾ ಇಲಾಖೆಯ ಅಧಿಕಾರಿಗಳೊಂದಿಗೆ ಭಾಗವಹಿಸುವ ಅವಕಾಶ ನನಗೆ ಅಪಾರ ಸಂತೋಷ ನೀಡಿದೆ. ಉತ್ತಮ ಆಡಳಿತಕ್ಕಾಗಿ ಲೆಕ್ಕಪರಿಶೋಧನಾ ಕ್ಷೇತ್ರದ ಸಮರ್ಪಿತ ಸೇವೆಯನ್ನು ನಾನು ಶ್ಲಾಘಿಸುತ್ತೇನೆ ಎಂದು ತಿಳಿಸಿದರು.

Shalini Rajaneesh Audit Diwas 2025

ಲೆಕ್ಕಪರಿಶೋಧನೆಯು ಸಾರ್ವಜನಿಕ ಹಿತವನ್ನು ಕಾಯುವ ನೈತಿಕ ದಿಕ್ಸೂಚಿಯಂತೆ, ಸಾರ್ವಜನಿಕ ಸೇವಕರು ಸತ್ಯ ಮತ್ತು ಸತ್ಯನಿಷ್ಠೆಯ ಮಾರ್ಗದಲ್ಲಿ ನಡೆಯುವಂತೆ ಮಾಡುತ್ತದೆ. ಸಾರ್ವಜನಿಕ ಸಂಸ್ಥೆಗಳ ಮೇಲೆ ನಾಗರೀಕರ ನಂಬಿಕೆ ಉಳಿಯುವುದಕ್ಕೆ, ತೆರಿಗೆದಾರರ ಹಣವನ್ನು ಅತ್ಯಂತ ಪ್ರಾಮಾಣಿಕವಾಗಿ ಬಳಸುವುದು ಪ್ರತಿಯೊಬ್ಬ ಅಧಿಕಾರಿಯ ಜವಾಬ್ದಾರಿಯಾಗಿದೆ ಎಂದರು.

ಲೆಕ್ಕಪರಿಶೋಧನಾ ದಿವಸ ಕೇವಲ ಆಚರಣೆಗೆ ಸೀಮಿತವಾದ ದಿನವಲ್ಲ- ಇದು ಸಾಂವಿಧಾನಿಕ ದೃಷ್ಟಿಕೋನದ ಜ್ಞಾಪನೆಯಾಗಿದೆ. ಡಾ. ಬಿ.ಆರ್. ಅಂಬೇಡ್ಕರ್ ಅವರು ನಿಯಂತ್ರಕರು ಮತ್ತು ಮಹಾ ಲೆಕ್ಕಪರಿಶೋಧಕರವರನ್ನು ʼಬಹುಶಃ ಸಂವಿಧಾನದ ಅತ್ಯಂತ ಮಹತ್ವದ ಅಧಿಕಾರಿʼ ಎಂದು ವರ್ಣಿಸಿದ್ದರು. ಸಾರ್ವಜನಿಕ ನಂಬಿಕೆಯ ರಕ್ಷಕ ಮತ್ತು ಸರ್ಕಾರಿ ಹಣಕಾಸಿನ ಪಾಲಕ ಎಂದೂ ಸಹ ಹೇಳಬಹುದು ಎಂದು ನುಡಿದರು.

ಭಾರತದ ಸಂವಿಧಾನಿಕ ವಿನ್ಯಾಸದಲ್ಲಿ ಲೆಕ್ಕಪರಿಶೋಧಕ ಹಾಗೂ ಮಹಾ ಲೆಕ್ಕಪರಿಶೋಧಕರ (CAG) ಸ್ಥಾನ ಅತ್ಯಂತ ಮಹತ್ವದ್ದಾಗಿದೆ. ಸಂವಿಧಾನದ 148 ರಿಂದ 151ನೇ ಅನುಚ್ಛೇದಗಳ ಅಡಿಯಲ್ಲಿ ನೀಡಲಾದ ಅಧಿಕಾರದಂತೆ, ಸರ್ಕಾರಗಳ ಹಣಕಾಸು ವ್ಯವಹಾರಗಳಲ್ಲಿ ಪಾರದರ್ಶಕತೆ, ಹೊಣೆಗಾರಿಕೆ ಮತ್ತು ಶಿಷ್ಟಾಚಾರವನ್ನು ಕಾಪಾಡುವುದು ಸಿಎಜಿ ಅವರ ಜವಾಬ್ದಾರಿಯಾಗಿದೆ. ಆದಾಯ, ವೆಚ್ಚ ಮತ್ತು ಸಾರ್ವಜನಿಕ ವಲಯ ಸಂಸ್ಥೆಗಳ ಪಕ್ಷಪಾತರಹಿತ ಲೆಕ್ಕಪರಿಶೋಧನೆ ನಡೆಸುವ ಮೂಲಕ, ಸಿಎಜಿ ಶಾಸನಾತ್ಮಕ ಮೇಲ್ವಿಚಾರಣೆಯನ್ನು ಬಲಪಡಿಸುತ್ತಾರೆ ಮತ್ತು ಪ್ರಜಾಪ್ರಭುತ್ವ ಆಡಳಿತದ ಮೇಲಿನ ನಂಬಿಕೆಯನ್ನು ದೃಢವಾಗಿಸುತ್ತಾರೆ ಎಂದು ತಿಳಿಸಿದರು.

Shalini Rajaneesh Audit Diwas 2025 1

ಸಿಎಜಿ ನಡೆಸುವ ಕಾರ್ಯಕ್ಷಮತೆ, ಅನುಸರಣೆ ಮತ್ತು ಹಣಕಾಸು ಲೆಕ್ಕಪರಿಶೋಧನೆಗಳು ವ್ಯವಸ್ಥಾತ್ಮಕ ಕೊರತೆಗಳನ್ನು ಗುರುತಿಸಲು, ಸಂಪನ್ಮೂಲಗಳ ಪರಿಣಾಮಕಾರಿ ಬಳಕೆಯನ್ನು ಉತ್ತೇಜಿಸಲು ಮತ್ತು ಸಾರ್ವಜನಿಕ ಆಡಳಿತದಲ್ಲಿ ಆರ್ಥಿಕತೆ ಹಾಗೂ ಪರಿಣಾಮಕಾರಿ ತತ್ವಗಳನ್ನು ಕಾಪಾಡಲು ನೆರವಾಗುತ್ತವೆ. ಸಿಎಜಿ ಅವರ ಸ್ವತಂತ್ರ ಪಾತ್ರವು ಸಾರ್ವಜನಿಕ ಹಿತಾಸಕ್ತಿಯನ್ನು ಕಾಪಾಡುವುದಷ್ಟೇ ಅಲ್ಲ, ಸರ್ಕಾರಿ ಇಲಾಖೆಗಳು ಉತ್ತಮ ಹಣಕಾಸು ಶಿಸ್ತಿನಿಂದ ಕಾರ್ಯನಿರ್ವಹಿಸಲು ಮತ್ತು ಸೇವಾ ವಿತರಣೆಯನ್ನು ಸುಧಾರಿಸಲು ದಾರಿದೀಪವಾಗುತ್ತದೆ. ಹೊಣೆಗಾರಿಕೆಗೆ ಸಂಬಂಧಿಸಿದ ಈ ಅಚಲ ಬದ್ಧತೆಯೇ, ಸಿಎಜಿ ಅನ್ನು ಭಾರತದ ಪ್ರಜಾಸತ್ತಾತ್ಮಕ ಮತ್ತು ಆಡಳಿತಾತ್ಮಕ ರಚನೆಯ ಅತ್ಯವಶ್ಯಕ ಸ್ತಂಭವಾಗಿಸಿದೆ. ಇಂದು ವೇಗವಾಗಿ ಬದಲಾಗುತ್ತಿರುವ ಪರಿಸರ ಮತ್ತು ಸಂಕೀರ್ಣ ಆಡಳಿತ ಸವಾಲುಗಳ ನಡುವಲ್ಲಿ, ಈ ಪಾತ್ರದ ಮಹತ್ವ ಇನ್ನಷ್ಟು ಹೆಚ್ಚಾಗಿದೆ ಎಂದರು.

ಸಿಎಜಿಯವರ ಲೆಕ್ಕ ಪರಿಶೋಧನಾ ವರದಿಗಳು ನಮ್ಮ ಸರ್ಕಾರಿ ಇಲಾಖೆಗಳು ಮತ್ತು ಸಾರ್ವಜನಿಕ ಸಂಸ್ಥೆಗಳ ಕಾರ್ಯಕ್ಷಮತೆಯನ್ನು ಇನ್ನಷ್ಟು ಬಲಪಡಿಸಲು ಅಮೂಲ್ಯವಾದ ಒಳನೋಟಗಳು ಮತ್ತು ಪ್ರಾಯೋಗಿಕವಾಗಿ ಉಪಯೋಗಿಸಬಹುದಾದ ಶಿಫಾರಸ್ಸುಗಳನ್ನು ಒದಗಿಸುತ್ತವೆ. ಈ ವರದಿಗಳು ಕೇವಲ ಹೊಣೆಗಾರಿಕೆಯ ಸಾಧನಗಳಷ್ಟೇ ಅಲ್ಲ, ಅವು ಪಾರದರ್ಶಕತೆಯನ್ನು ಹೆಚ್ಚಿಸುತ್ತವೆ. ಸಾರ್ವಜನಿಕ ನಂಬಿಕೆಯನ್ನು ನಿರ್ಮಿಸುತ್ತವೆ. ಆಡಳಿತದಲ್ಲಿ ನಾಗರೀಕರ ನಿಷ್ಠೆ ಮತ್ತು ಪಾಲ್ಗೊಳ್ಳುವಿಕೆಯನ್ನು ಗಾಢಗೊಳಿಸುತ್ತವೆ ಎಂದು ಹೇಳಿದರು.

ಸಿಎಜಿ ಲೆಕ್ಕ ಪರಿಶೋಧನೆಗಳು ಕೇವಲ ದೋಷಗಳನ್ನು ಗುರುತಿಸುವುದು ಅಥವಾ ವ್ಯತ್ಯಾಸಗಳನ್ನು ಸೂಚಿಸುವುದಕ್ಕೆ ಮಾತ್ರ ಸೀಮಿತವಾಗಿಲ್ಲ ಎಂಬುದನ್ನು ನಾವೆಲ್ಲರೂ ಮನಗಾಣುವುದು ಅತ್ಯಂತ ಮುಖ್ಯ. ವಾಸ್ತವವಾಗಿ ಕಾರ್ಯಕ್ಷಮತಾ ಲೆಕ್ಕಪರಿಶೋಧನೆಗಳು ಇದಕ್ಕಿಂತ ಭಿನ್ನವಾಗಿವೆ. ಅವು ಯೋಜನೆಗಳು, ನೀತಿಗಳು ಮತ್ತು ಕಾರ್ಯಕ್ರಮಗಳನ್ನು ಹೇಗೆ ಜಾರಿಗೊಳಿಸಲಾಗುತ್ತಿದೆ ಎಂಬುದರ ಕುರಿತು ರಚನಾತ್ಮಕ, ಸಾಕ್ಷ್ಯಾಧಾರಿತ ಮೌಲ್ಯಮಾಪನಗಳನ್ನು ಒದಗಿಸುತ್ತವೆ ಮತ್ತು ವ್ಯವಸ್ಥೆಗಳ ಸುಧಾರಣೆಗಾಗಿ, ಹಾಗೂ ನಮ್ಮ ಜನತೆಗೆ ಉತ್ತಮ ಫಲಿತಾಂಶಗಳನ್ನು ನೀಡಲು ಸ್ಪಷ್ಟ ಜಾರಿಗೆ ತರುವಂತ ಶಿಫಾರಸುಗಳನ್ನು ನೀಡುತ್ತವೆ ಎಂದರು.

ಲೆಕ್ಕಪರಿಶೋಧನಾ ದಿವಸವನ್ನು ಆಚರಿಸುತ್ತಿರುವ ಈ ಸಂದರ್ಭದಲ್ಲಿ, ಸಿಎಜಿ ಮತ್ತು ಸರ್ಕಾರದ ನಡುವಿನ ದೀರ್ಘಕಾಲದ ಬಾಂಧವ್ಯವನ್ನು ನಾವು ಗಟ್ಟಿಗೊಳಿಸಲು ಇದು ಸೂಕ್ತ ಸಮಯ – ಪರಸ್ಪರ ಗೌರವ ಮತ್ತು ಸಹಕಾರವನ್ನು ಬೆಳೆಸುವ ಬಂಧವಾಗಿದೆ ಎಂದು ನುಡಿದರು.

ರಾಜ್ಯದ ಹಣಕಾಸು ಲೆಕ್ಕಪರಿಶೋಧನಾ ವರದಿ:
ಪ್ರಜಾಪ್ರಭುತ್ವ ಮಾದರಿ ಆಡಳಿತ ವ್ಯವಸ್ಥೆಯಲ್ಲಿ ರಾಜ್ಯದ ಕಾರ್ಯಗಳು ತೆರಿಗೆದಾರರ ಹಣದಿಂದ ನಡೆಯುತ್ತವೆ. ಅನುದಾನಗಳ ನಿರ್ವಹಣೆ ಮತ್ತು ನೀತಿಗಳ ಜಾರಿಯು ಅನುಮೋದನೆಗೊಂಡ ಆಯವ್ಯಯಕ್ಕೆ ಅನುಗುಣವಾಗಿ ಹಣವನ್ನು ಬಳಸಲಾಗುತ್ತಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಸಮರ್ಪಕ ಮೇಲ್ವಿಚಾರಣೆ ಮತ್ತು ಪರಿಶೀಲನೆಯ ಅಗತ್ಯವಿದೆ. ಜೊತೆಗೆ, ವಿವೇಕಪೂರ್ಣ ಹಣಕಾಸು ನಿರ್ವಹಣೆಗೆ ರಾಜ್ಯವು ನಿಗದಿಪಡಿಸಿರುವ ಹಣಕಾಸು ಮಾನದಂಡಗಳನ್ನು ಪಾಲಿಸುತ್ತಿದೆಯೇ ಎಂಬುದೂ ಬಹುಮುಖ್ಯವಾಗಿದೆ ಎಂದರು.

ಆದುದರಿಂದ, ಪ್ರತಿ ವರ್ಷ ರಾಜ್ಯದ ಹಣಕಾಸುಗಳ ಕುರಿತು ವಿವರವಾದ ವರದಿಗಳನ್ನು ಪ್ರಕಟಿಸುತ್ತಿರುವ ಮಹಾಲೇಖಾಪಾಲರ ಕಚೇರಿಯನ್ನು ನಾನು ಅಭಿನಂದಿಸುತ್ತೇನೆ. ಈ ವರದಿಗಳು ರಾಜ್ಯದ ಹಣಕಾಸು, ಆಯವ್ಯಯ ನಿರ್ವಹಣೆ ಮತ್ತು ಲೆಕ್ಕಪರಿಶೋಧನೆಗಳ ಗುಣಮಟ್ಟದ ಸಮಗ್ರ ಅವಲೋಕನವನ್ನು ನೀಡುವುದಲ್ಲದೆ, ಹಣಕಾಸಿನ ಸ್ಥಿರತೆಯ ಕುರಿತ ಪ್ರಮುಖ ಒಳನೋಟಗಳನ್ನು ಸಹ ಒದಗಿಸುತ್ತವೆ ಎಂದು ತಿಳಿಸಿದರು.

Shalini Rajaneesh Audit Diwas 2025 3

ಕರ್ನಾಟಕದಲ್ಲಿ ಪ್ರಾಥಮಿಕ ಶಿಕ್ಷಣ ಸಂಸ್ಥೆಗಳಕಾರ್ಯನಿರ್ವಹಣೆ ಕುರಿತು ಕಾರ್ಯಕ್ಷಮತಾ ಲೆಕ್ಕಪರಿಶೋಧನೆ:
ರಾಜ್ಯ ಸರ್ಕಾರದ ಸೇವೆಗಳು ಹಂತ ಹಂತವಾಗಿ ಡಿಜಿಟಲ್ ಆಗುತ್ತಿರುವ ಸಂದರ್ಭದಲ್ಲಿ ಮಹಾಲೇಖಾಧಿಕಾರಿಗಳ ಕಚೇರಿಗಳು ತಮ್ಮ ಲೆಕ್ಕಪರಿಶೋಧನೆ ಕಾರ್ಯಗಳಲ್ಲಿ ತಾಂತ್ರಿಕ ನವೀನತೆಗಳನ್ನು ಅಳವಡಿಸಿಕೊಂಡಿರುವುದು ಸಂತೋಷಕರವಾದ ಸಂಗತಿ. ಇತ್ತೀಚೆಗೆ ಮಂಡನೆಯಾದ ಕರ್ನಾಟಕದ ಪ್ರಾಥಮಿಕ ಶಿಕ್ಷಣ ಸಂಸ್ಥೆಗಳ ಕಾರ್ಯನಿರ್ವಹಣೆಯಕುರಿತು ಮಂಡಿಸಲಾದ ಕಾರ್ಯಕ್ಷಮತಾ ಲೆಕ್ಕಪರಿಶೋಧನೆ ಅದಕ್ಕೆ ಉತ್ತಮ ಉದಾಹರಣೆಯಾಗಿದೆ. ವಿಭಾಗೀಯ ದತ್ತಾಂಶದ ಕೊರತೆ ಇರುವ ಹಿನ್ನೆಲೆಯಲ್ಲಿ, ಲೆಕ್ಕಪತ್ರಾಧಿಕಾರಿಗಳು ಕರ್ನಾಟಕ ಶಾಲಾ ಗುಣಮಟ್ಟ ಮೌಲ್ಯಮಾಪನ ಮತ್ತು ಮಾನ್ಯತೆ ಮಂಡಳಿ (KSQAAC) ಅವರ ಸಹಕಾರದಲ್ಲಿ ಕಲಿಕೆ ಮೌಲ್ಯಮಾಪನಗಳನ್ನು ಕೈಗೊಂಡು, ನಿವಾಸ ಪ್ರದೇಶಗಳನ್ನು ಶಾಲೆಗಳೊಂದಿಗೆ ನಕ್ಷೆಗೊಳಿಸಲು GIS ತಂತ್ರಜ್ಞಾನವನ್ನು ಬಳಸುವಂತಹ ಪರ್ಯಾಯ ವಿಧಾನಗಳನ್ನು ಅನುಸರಿಸಿರುವುದು ತಿಳಿದು ಬಂದಿದೆ ಎಂದರು.

ಕರ್ನಾಟಕ ಸ್ಟೇಟ್ ಎಲೆಕ್ಟ್ರಾನಿಕ್ಸ್ ಡೆವಲಪ್‌ಮೆಂಟ್ ಕಾರ್ಪೊರೇಷನ್ (KEONICS) ಮೂಲಕ ಸರಕುಗಳ ಖರೀದಿಗೆ ಸಂಬಂಧಿಸಿದ ವಿಷಯ ವೀಕ್ಷಣಾಧಾರಿತ ಅನುಸರಣಾ ಲೆಕ್ಕಪತ್ರ. ಕಿಯೋನಿಕ್ಸ್‌ ಮೂಲಕ ನಡೆದ ಖರೀದಿಗಳ ಈ ಲೆಕ್ಕಪತ್ರವು ಲೆಕ್ಕಪರಿಶೋಧನೆಯು ಹೇಗೆ ಆಡಳಿತ ವ್ಯವಸ್ಥೆಯ ಸುಧಾರಣೆಗೆ ನೇರವಾಗಿ ಕೊಡುಗೆ ನೀಡಬಹುದು ಎಂಬುದಕ್ಕೆ ಮತ್ತೊಂದು ಉದಾಹರಣೆ. ಈ ಲೆಕ್ಕಪತ್ರದಲ್ಲಿ ಖರೀದಿ ಆದೇಶಗಳನ್ನು ವಿಭಜಿಸುವುದು, ಯೋಗ್ಯವಲ್ಲದ ಐಟಿ ರಹಿತ ವಸ್ತುಗಳ ಖರೀದಿ, ಕಲಂ 4(ಜಿ) ಅಡಿ ನೀಡಲಾದ ವಿನಾಯಿತಿಯಲ್ಲಿ ನಡೆದ ವ್ಯತ್ಯಾಸಗಳು, ಹೆಚ್ಚಿಸಿದ ಬೆಲೆಗಳು, ಮೂರನೇ ವ್ಯಕ್ತಿಯ ಪರಿಶೀಲನಾ ವರದಿಗಳ ಕೃತಕ ರಚನೆ ಮೊದಲಾದ ಹಲವು ಅಕ್ರಮಗಳನ್ನು ಬಹಿರಂಗಪಡಿಸಿದೆ. ಇವು ಖರೀದಿ ವ್ಯವಸ್ಥೆಯಲ್ಲಿದ್ದ ದುರ್ಬಲತೆಗಳನ್ನು ಸ್ಪಷ್ಟಪಡಿಸಿದ ಕಣ್ಣೆದುರಿನ ಸತ್ಯಗಳಾಗಿವೆ ಎಂದು ಅಭಿಪ್ರಾಯವ್ಯಕ್ತಪಡಿಸಿದರು.

ಈ ಪ್ರಕ್ರಿಯೆಯ ವಿಶೇಷತೆಯಾಗಿ ಹೊರಹೊಮ್ಮಿದ್ದು ಮಹಾಲೇಖಾಧಿಕಾರಿಗಳು ಮತ್ತು ಸರ್ಕಾರದ ನಡುವಿನ ಸಕಾರಾತ್ಮಕ ಹಾಗೂ ಪರಸ್ಪರಪೂರಕ ಸಂಬಂಧ. ಕರಡು ವರದಿ ಹೊರಬಂದ ತಕ್ಷಣವೇ, ಸರ್ಕಾರ ಈ ವಿಷಯಗಳ ಗಂಭೀರತೆಯನ್ನು ಮನಗಂಡು ತಕ್ಷಣ ಕ್ರಮ ಕೈಗೊಂಡಿತು. ಸ್ವತಂತ್ರ ತನಿಖಾ ಸಮಿತಿಯನ್ನು ಈಗಾಗಲೇ ರಚಿಸಲಾಗಿದ್ದು, ಟೆಂಡರ್‌ನಿಂದ ಹಿಡಿದು ಸರಕು ವಿತರಣೆಯ ತನಕ ಮತ್ತು ಪಾವತಿವರೆಗೆ ಸಂಪೂರ್ಣ ಖರೀದಿ ಪ್ರಕ್ರಿಯೆಯನ್ನು ಸರಳಗೊಳಿಸಲು ಸಮಗ್ರ ಪ್ಮಾಣೀಕೃತ ಕಾರ್ಯವಿಧಾನ (SOP)ಗಳನ್ನು ಸಿದ್ಧಪಡಿಸುವ ಕಾರ್ಯವನ್ನೂ ಸಹ ಪ್ರಾರಂಭಿಸಲಾಗಿದೆ ಎಂದು ಹೇಳಿದರು.

ಸಾರ್ವಜನಿಕ ಲೆಕ್ಕಪತ್ರ ಸಮಿತಿ (PAC), ಸಾರ್ವಜನಿಕ ಸಂಸ್ಥೆಗಳ ಸಮಿತಿ (COPU) ಮತ್ತು ಸ್ಥಳೀಯ ಸಂಸ್ಥೆಗಳ (LB) ಸಮಿತಿಗಳು:
ಮಹಾಲೇಖಾಧಿಕಾರಿ, ವಿಧಾನಮಂಡಲ ಸಮಿತಿಗಳೊಂದಿಗೆ ಹೊಂದಿರುವ ಆಪ್ತ ಮತ್ತು ರಚನಾತ್ಮಕ ಸಹಕಾರದ ಮೂಲಕ ಮೇಲ್ವಿಚಾರಣೆಯ ರಕ್ಷಕರಾಗಿ ಕಾರ್ಯನಿರ್ವಹಿಸುತ್ತಾರೆ. ಕರ್ನಾಟಕದಲ್ಲಿ ಸಾರ್ವಜನಿಕ ಖಾತೆಗಳ ಸಮಿತಿ (PAC), ಸಾರ್ವಜನಿಕ ಸಂಸ್ಥೆಗಳ ಸಮಿತಿ (COPU) ಮತ್ತು ಸ್ಥಳೀಯ ಸಂಸ್ಥೆಗಳ ಹಾಗೂ ಪಂಚಾಯತ್ ರಾಜ್ ಸಂಸ್ಥೆಗಳ ಸಮಿತಿ-ಇವು ದೇಶದಲ್ಲೇ ಅತ್ಯಂತ ಸಕ್ರಿಯವಾಗಿರುವ ಸಮಿತಿಗಳಾಗಿದ್ದು, ಹೊಣೆಗಾರಿಕೆಯನ್ನು ಬಲಪಡಿಸುವಲ್ಲಿ ಮುಂಚೂಣಿಯಲ್ಲಿವೆ ಎಂದು ನುಡಿದರು.

ಸಂಖ್ಯೆಗಳನ್ನೇ ನೋಡಿದರೆ ಈ ವರ್ಷದೊಳಗಾಗಿ PAC 22 ಸಭೆಗಳು, COPU 28 ಸಭೆಗಳು ಹಾಗೂ LB ಸಮಿತಿ 27 ಸಭೆಗಳನ್ನು ನಡೆಸಿ, ಭಾರತ ಮಹಾಸೌದ ಲೆಕ್ಕಪತ್ರಾಧಿಕಾರಿಗಳಿಂದ (CAG) ಪ್ರಕಟವಾದ ಲೆಕ್ಕಪತ್ರ ವರದಿಗಳ ಕುರಿತು ಚರ್ಚೆ ನಡೆಸಿವೆ. ಇಲ್ಲಿ ಸಮಿತಿಗಳು ಹಣಕಾಸಿನ ವ್ಯತ್ಯಾಸಗಳು, ಪ್ರಕ್ರಿಯಾತ್ಮಕ ಅಕ್ರಮಗಳು ಮತ್ತು ವ್ಯವಸ್ಥಾತ್ಮಕ ಸವಾಲುಗಳನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ಅಗತ್ಯವಾದ ಲೆಕ್ಕಪತ್ರ ಸಾಕ್ಷ್ಯಗಳು, ತಾಂತ್ರಿಕ ಸ್ಪಷ್ಟಿಕರಣಗಳು ಮತ್ತು ವಿಶ್ಲೇಷಣಾತ್ಮಕ ಒಳನೋಟಗಳನ್ನು ಒದಗಿಸುವಲ್ಲಿ ಮಹಾಲೇಖಾಧಿಕಾರಿಗಳ ಕಚೇರಿ ಮಹತ್ತರ ಪಾತ್ರ ವಹಿಸಿದೆ ಎಂದರು.

ಬಹುತೇಕ ಸಮಿತಿಗಳ ಚರ್ಚೆಗಳು ಇತ್ತೀಚೆಗೆ ಮಂಡನೆಯಾದ ಲೆಕ್ಕಪತ್ರ ವರದಿಗಳಿಗೆ ಸಂಬಂಧಿಸಿದುದಾಗಿದ್ದರೂ, ಪ್ರಸ್ತುತ ಸ್ಥಳೀಯ ಸಂಸ್ಥೆಗಳು ಮತ್ತು ಪಂಚಾಯತ್ ರಾಜ್ ಸಮಿತಿಯು ಬಾಕಿ ಇರುವ ಹಳೆಯ ವರದಿಗಳನ್ನು ತೆರವುಗೊಳಿಸುವ ಮಹತ್ತರ ಕೆಲಸವನ್ನೂ ಕೈಗೊಂಡಿದೆ. 1998-99ರಿಂದ ಆರಂಭವಾಗಿರುವ ಅತ್ಯಂತ ಹಳೆಯ ಬಾಕಿ ವರದಿಗಳನ್ನೂ ಸಮಿತಿ ಚರ್ಚೆಗೆ ತೆಗೆದುಕೊಂಡಿದೆ. ಈ ಚರ್ಚೆಗಳ ಮೂಲಕ, ಯಾವುದೇ ಬಾಕಿ ವಿಷಯ ಎಷ್ಟು ಹಳೆಯದಾಗಿದ್ದರೂ ಸರ್ಕಾರಕ್ಕೆ ಸಂಭವಿಸಿದ ನಷ್ಟವನ್ನು ವಸೂಲಿ ಮಾಡುವ ಕ್ರಮವನ್ನು ಕೈಗೊಳ್ಳಲಾಗುತ್ತದೆ ಎಂಬ ಸಂದೇಶವನ್ನು ಸಮಿತಿಯು ಸಂಬಂಧಿಸಿದ ಇಲಾಖೆಗಳಿಗೆ ಸ್ಪಷ್ಟವಾಗಿ ತಿಳಿಸಿದೆ ಎಂದು ಹೇಳಿದರು.

Shalini Rajaneesh Audit Diwas 2025 4

ಲೆಕ್ಕಗಳು ಮತ್ತು ಹಕ್ಕುಸ್ಥಾನ ಕಾರ್ಯ:
ಮಹಾಲೇಖಾಧಿಕಾರಿ (ಲೆಕ್ಕಗಳು ಮತ್ತು ಹಕ್ಕುಸ್ಥಾನ) ಕಚೇರಿ ನಮ್ಮ ರಾಜ್ಯದ ಹಣಕಾಸಿನ ಅಡಿಪಾಯವನ್ನು ಬಲಪಡಿಸುವಲ್ಲಿ ಮಾದರಿಯ ಸೇವೆಯನ್ನು ಒದಗಿಸುತ್ತದೆ. ಮಹಾಲೇಖಾಧಿಕಾರಿ (A&E) ಅವರು ನಿಖರವಾದ ಮಾಸಿಕ ಲೆಕ್ಕಗಳು, ಹಣಕಾಸು ಲೆಕ್ಕಗಳು (Finance Accounts) ಮತ್ತು ಅನುದಾನ ಲೆಕ್ಕಗಳು (Appropriation Accounts) ಮೂಲಕ ರಾಜ್ಯದ ಹಣಕಾಸನ್ನು ಸದೃಢಗೊಳಿಸುವಲ್ಲಿ ಕೇಂದ್ರೀಯ ಪಾತ್ರ ವಹಿಸುತ್ತಿದ್ದಾರೆ. ಇದರಿಂದಾಗಿ, ಹಣಕಾಸಿನ ವರದಿಗಾರಿಕೆಯಲ್ಲಿ ಪೂರ್ಣ ಪಾರದರ್ಶಕತೆ ಸಾಧ್ಯವಾಗಿದೆ. ಅದೇ ರೀತಿ, ನಿವೃತ್ತಿ ವೇತನಗಳು, ಜಿಪಿಎಫ್ ಹಾಗೂ ಇತರ ಹಕ್ಕುಸ್ಥಾನ ಸಂಬಂಧಿತ ಕಾರ್ಯಗಳನ್ನು ಪರಿಣಾಮಕಾರಿ ರೀತಿಯಲ್ಲಿ ನಿರ್ವಹಿಸುವ ಮೂಲಕ ನೌಕರರ ಹಕ್ಕುಗಳನ್ನು ಈ ಕಚೇರಿ ವಿಶ್ವಾಸಾರ್ಹವಾಗಿ ಕಾಪಾಡುತ್ತಿದೆ. ಕಚೇರಿಯು e-PPOಗಳನ್ನು ಜಾರಿ ಮಾಡುವುದು, ಜಿಪಿಎಫ್ ದಾಖಲೆಗಳನ್ನು ಡಿಜಿಟೈಸ್ ಮಾಡುವುದು, ರಾಜ್ಯದ e-HRMS ಪೋರ್ಟಲ್ ಅನ್ನು GEMS ಮೊಡ್ಯೂಲ್‌ಗೆ ಏಕೀಕರಿಸುವುದು ಮೊದಲಾದ ಕ್ರಮಗಳ ಮೂಲಕ ಹಣಕಾಸು ಪ್ರಕ್ರಿಯೆಗಳ ಡಿಜಿಟಲೀಕರಣದಲ್ಲಿ ಮುಂಚೂಣಿಯಲ್ಲಿದೆ ಎಂಬುದು ತಿಳಿದು ಸಂತೋಷವಾಗಿದೆ ಎಂದು ತಿಳಿಸಿದರು.

ಈ ಎಲ್ಲಾ ಮಹತ್ವದ ಕಾರ್ಯ ಚಟವಟಿಕೆಗಳೊಂದಿಗೆ, ಭಾರತೀಯ ಲೆಕ್ಕಪತ್ರ ಮತ್ತು ಲೆಕ್ಕಾಧಿಕಾರಿಗಳ ಇಲಾಖೆ ತಾನೇ ಒಂದು ಶ್ರೀಮಂತ ಪರಂಪರೆಯನ್ನು ಹೊಂದಿದೆ. ಅದು ನಮ್ಮ ಸಂಸ್ಥೆಗಳ ಮೂಲ ಮೌಲ್ಯಗಳಾದ ನೈತಿಕತೆ, ಸ್ವಾಯತ್ತತೆ ಮತ್ತು ಹೊಣೆಗಾರಿಕೆಯನ್ನು ನಿರಂತರವಾಗಿ ಪುನರುಚ್ಚರಿಸುತ್ತದೆ. ಜೊತೆಗೆ, ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಬದ್ಧತೆ ಸ್ಪಷ್ಟವಾಗಿ ಕಾಣುತ್ತದೆ, ವಿಶೇಷವಾಗಿ ಲೆಕ್ಕಪತ್ರ ಹಾಗೂ ಲೆಕ್ಕಪರಿ ಕಾರ್ಯಗಳನ್ನು ಬಲಪಡಿಸುವ ಡಿಜಿಟಲ್ ಸಾಧನಗಳ ಬಳಕೆಯಲ್ಲಿ ಈ ಡಿಜಿಟಲ್ ಪರಿವರ್ತನೆಯ ಒಂದು ಮೈಲುಗಲ್ಲಾಗಿದೆ. ಸಿಎಜಿ ಸಂಪರ್ಕ ಭಾರತದಾದ್ಯಂತ ಸುಮಾರು 10 ಲಕ್ಷ ಲೆಕ್ಕಪತ್ರಕ್ಕೆ ಒಳಪಟ್ಟ ಘಟಕಗಳನ್ನು ಲೆಕ್ಕಪರಿಶೋಧನಾ ಕಚೇರಿಗಳೊಂದಿಗೆ ನೈಜ ಸಮಯದಲ್ಲಿ ಸಂಪರ್ಕಿಸುವ ಡಿಜಿಟಲ್ ಪರಿಸರ ಮತ್ತು ಪರಿಸರ ವ್ಯವಸ್ಥೆ. ಪ್ರತಿ ವರ್ಷ 20,000ಕ್ಕೂ ಹೆಚ್ಚು ಲೆಕ್ಕ ಪರಿಶೀಲನಾ ವರದಿಗಳನ್ನು ಹೊರತರುವ ಇಲಾಖೆಗೆ, ಈ ವೇದಿಕೆ ಅಪೂರ್ವ ಮಟ್ಟದ ಸಂವಹನ ಮತ್ತು ಅಗತ್ಯ ಕ್ರಮಗಳನ್ನು ತರಲಿದೆ. ಇನ್ನಷ್ಟು ಮಹತ್ವದ ಸಂಗತಿಯೆಂದರೆ, ಇದು ಇಲಾಖೆಯನ್ನು ಪರಂಪರೆಯಲ್ಲಿರುವ ವಿರಳ ಸಂವಹನ ಮಾದರಿಯಿಂದ ಹೊರಬಂದು, ಲೆಕ್ಕಪತ್ರಕ್ಕೆ ಒಳಪಡುವ ಘಟಕಗಳೊಂದಿಗೆ ನಿರಂತರ ಸಂವಾದದ ಸಂಸ್ಕೃತಿಯನ್ನು ಅಳವಡಿಸಿಕೊಳ್ಳಲು ಉತ್ತೇಜನ ನೀಡುತ್ತದೆ. ಇದರಿಂದ ಸಮಯೋಚಿತ ಹಾಗೂ ಕ್ರಿಯಾತ್ಮಕ ಪ್ರತಿಕ್ರಿಯೆಗಳ ಸಲ್ಲಿಕೆಯನ್ನು ಖಚಿತಪಡಿಸುತ್ತದೆ ಎಂದರು. ‌

ಲೆಕ್ಕಪರಿಶೋಧನೆ ಎನ್ನುವುದು ಕೇವಲ ಬಾಹ್ಯ ಪರಿಶೀಲನೆ ಅಲ್ಲ, ಅದು ಆಡಳಿತ ವ್ಯವಸ್ಥೆಯ ಅವಿಭಾಜ್ಯ ಭಾಗವಾಗಿದ್ದು, ಸರ್ಕಾರವನ್ನು ಹೆಚ್ಚು ಹೊಣೆಗಾರಿಕೆಯಿಂದ, ಪರಿಣಾಮಕಾರಿಯಾಗಿ ಮತ್ತು ನಾಗರೀಕ ಕೇಂದ್ರೀಕೃತ ಆಡಳಿತದತ್ತ ಗಮನಸೆಳೆಯುವ ಸಹಭಾಗಿಯಾಗಿರುತ್ತದೆ ಎಂದು‌ ಈ ಸಮಯದಲ್ಲಿ ಒತ್ತಿ ಹೇಳ ಬಯಸುತ್ತೇನೆ ಎಂದು ತಿಳಿಸಿದರು.

ಈ ಲೆಕ್ಕಪರಿಶೋಧನಾ ದಿನವು ಮಹಾಲೇಖಪಾಲರ ಸಾರ್ವಜನಿಕರ ಹಿತಕ್ಕಾಗಿ ನೈಜತೆಗೆ ಸಮರ್ಪಿತರು ಎಂಬ ಧೈಯವಾಕ್ಯವನ್ನು ನಿಭಾಯಿಸುವ ನಿಮ್ಮ ಬದ್ಧತೆಯನ್ನು ಮತ್ತಷ್ಟು ಗಾಢಪಡಿಸುವ ಸಂದರ್ಭವಾಗಲಿ. ಈ ಮೂಲಕ, ನಾನು ಲೆಕ್ಕಪತ್ರ ದಿನ 2025 ಅನ್ನು ಅಧಿಕೃತವಾಗಿ ಘೋಷಿಸುತ್ತಿದ್ದೇನೆ ಎಂದರು.

ನಾವೀನ್ಯತೆಗಾಗಿ ರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದುಕೊಂಡಿರುವ ಮಹಾಲೇಖಾಧಿಕಾರಿಗಳ ಕಚೇರಿಗಳನ್ನು ಮತ್ತು ಭಾರತೀಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯ ಸಂಪೂರ್ಣ ತಂಡವನ್ನು ಅವರ ಶ್ರಮದ ಕಾರ್ಯಕ್ಕಾಗಿ ಹೃತ್ತೂರ್ವಕವಾಗಿ ಅಭಿನಂದಿಸುತ್ತೇನೆ ಎಂದು ತಿಳಿಸಿದ ಮುಖ್ಯ ಕಾರ್ಯದರ್ಶಿಗಳು ಈ ಲೆಕ್ಕಪತ್ರ ದಿನಾಚರಣೆಯು ಯಶಸ್ವಿಯಾಗಲಿ ಎಂದು ಹಾರೈಸಿ ಕರ್ನಾಟಕದ ಸಮೃದ್ಧ ಮತ್ತು ಸಹನಶೀಲ ಭವಿಷ್ಯ ನಿರ್ಮಾಣಕ್ಕಾಗಿ – ನಾವು ಕೈಜೋಡಿಸಿ, ಒಂದಾಗಿ ಮುಂದುವರಿಯೋಣ ಎಂದು ತಿಳಿಸಿದರು.

TAGGED:Audit Diwas 2025bengalurukarnatakashalini rajneesh
Share This Article
Facebook Whatsapp Whatsapp Telegram

Cinema news

Samantha Ruth Prabhu
ಆ್ಯಕ್ಷನ್ ಮೋಡ್.. ಬೀಸ್ಟ್ ಮೋಡ್‌ನಲ್ಲಿ ನಟಿ ಸಮಂತಾ
Cinema Latest South cinema
Anupama Parameswaran
ಫೋಟೋಶೂಟ್‌ನಲ್ಲಿ ಮಿಂಚಿದ `ನಟಸಾರ್ವಭೌಮʼ ನಟಿ
Cinema Latest Sandalwood
karna serial actress Namrata Gowdas solo tour in Vietnam 1
ವಿಯೆಟ್ನಾಂನಲ್ಲಿ ನಮ್ರತಾ ಗೌಡ ಒಂಟಿ ಟೂರ್?
Cinema Latest South cinema
BBK Maalu 3
BBK 12 | ಮಾಳು ಕಿರುಚಾಟಕ್ಕೆ ಮನೆಮಂದಿ ಶಾಕ್
Cinema Latest TV Shows

You Might Also Like

Chennakeshava Temple Rudrappa Lamani Visit
Districts

ಐತಿಹಾಸಿಕ ಚನ್ನಕೇಶವ ದೇವಾಲಯಕ್ಕೆ ವಿಧಾನಸಭೆ ಉಪಸಭಾಪತಿ ರುದ್ರಪ್ಪ ಲಮಾಣಿ ಭೇಟಿ

Public TV
By Public TV
23 minutes ago
Tejas 1
Bengaluru City

Explainer | 24 ವರ್ಷಗಳ ಇತಿಹಾಸದಲ್ಲಿ 2ನೇ ದುರಂತ – ಒಂದು ʻತೇಜಸ್‌ʼಗೆ ತಗುಲುವ ವೆಚ್ಚ ಎಷ್ಟು?

Public TV
By Public TV
41 minutes ago
R Ashok
Bengaluru City

ದರೋಡೆಕೋರರ ಬೆಂಗಳೂರೇ, ಹಳ್ಳದ ಬೆಂಗಳೂರೇ, ಕಸದ ಬೆಂಗಳೂರೇ: ಅಶೋಕ್ ಪ್ರಶ್ನೆ

Public TV
By Public TV
57 minutes ago
Salman Khan Sharukh Khan
Cinema

ಸಲ್ಲು-ಶಾರುಖ್ ಫ್ಯಾನ್ಸ್ ದಿಲ್ ಖುಷ್!

Public TV
By Public TV
1 hour ago
Sonu Gowda
Cinema

ಕನ್ಫ್ಯೂಸ್ ಆಗ್ಬೇಡಿ… ಇದು ʻಕನಕವತಿʼ ಅಲ್ಲ ಸೋನು ಶ್ರೀನಿವಾಸ್ ಗೌಡ!

Public TV
By Public TV
1 hour ago
Bengaluru Vidhansoudha Fight
Bengaluru City

ವಿಧಾನಸೌಧ ಮುಂದೆ ನೇಪಾಳಿ ಗ್ಯಾಂಗ್ ಪುಂಡಾಟ – 11 ಆರೋಪಿಗಳು ಅರೆಸ್ಟ್

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?