Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ನವಬೃಂದಾವನ ಗಡ್ಡೆಯ ವಿವಾದ ನಿವಾರಣೆಗೆ ಉಭಯ ಮಠದ ಶ್ರೀಗಳ ಸಮಾಗಮ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | ನವಬೃಂದಾವನ ಗಡ್ಡೆಯ ವಿವಾದ ನಿವಾರಣೆಗೆ ಉಭಯ ಮಠದ ಶ್ರೀಗಳ ಸಮಾಗಮ

Districts

ನವಬೃಂದಾವನ ಗಡ್ಡೆಯ ವಿವಾದ ನಿವಾರಣೆಗೆ ಉಭಯ ಮಠದ ಶ್ರೀಗಳ ಸಮಾಗಮ

Public TV
Last updated: November 19, 2025 10:42 pm
Public TV
Share
2 Min Read
Navabrindava
SHARE

ಕೊಪ್ಪಳ: ಜಿಲ್ಲೆಯ ಗಂಗಾವತಿ (Gangavathi) ತಾಲೂಕಿನ ಆನೆಗೊಂದಿ ಗ್ರಾಮದ ತುಂಗಭದ್ರಾ ನದಿಯಲ್ಲಿರುವ ನವಬೃಂದಾವನ ಗಡ್ಡೆಯಲ್ಲಿ ಉತ್ತರಾಧಿ ಮಠ ಹಾಗೂ ರಾಯರ ಮಠದ ಶ್ರೀಗಳು ಭೇಟಿಯಾಗುವ ಮೂಲಕ ಉಭಯ ಮಠಗಳ ನಡುವೆ ಇದ್ದಂತ ಗೊಂದಲಗಳಿಗೆ ತೆರೆಎಳೆಯುವ ನಿರ್ಧಾರ ಮಾಡಿಕೊಂಡರು.

ನವಬೃಂದಾವನ ಗಡ್ಡೆಯಲ್ಲಿ ಇರುವ ಯತಿಗಳ ಬೃಂದಾವನ ವಿಚಾರಕ್ಕೆ ಹಾಗೂ ನವಬೃಂದಾವನ ಗಡ್ಡೆಯ ಮಾಲೀಕತ್ವದ ವಿಚಾರಕ್ಕೆ ಸಂಬಂಧಪಟ್ಟಂತೆ ಸುಮಾರು 50 ವರ್ಷಗಳಿಗೂ ಅಧಿಕ ಕಾಲದಿಂದ ವಿವಾದ ಮುಂದುವರೆದುಕೊಂಡು ಬಂದಿದೆ. ಆರಾಧನೆ ಸಮಯದಲ್ಲಿ ಕೋರ್ಟ್ ಮೊರೆ ಹೋಗುವ ಉಭಯ ಮಠದವರಿಗೆ ಒಂದೂವರೆ ದಿನ ಒಂದು ಮಠಕ್ಕೆ, ಇನ್ನುಳಿದ ಒಂದೂವರೆ ದಿನ ಇನ್ನೊಂದು ಮಠಕ್ಕೆ ಎಂದು ಕೋರ್ಟ್ ಆದೇಶ ನೀಡಿತ್ತು. ಸುಮಾರು ವರ್ಷಗಳಿಂದ ಇದು ಹೀಗೆ ನಡೆದುಕೊಂಡು ಬಂದಿದ್ದು, ಈ ಗೊಂದಲವನ್ನು ನಿವಾರಣೆ ಮಾಡಲು ಕೋರ್ಟ್ ಆದೇಶ ಮಾಡಿದೆ. ಈ ಕಾರಣಕ್ಕೆ ರಾಯರ ಮಠದ ಪೀಠಾಧಿಕಾರಿ ಸುಬುಧೇಂದ್ರ ಶ್ರೀಗಳು ಉತ್ತರಾಧಿ ಮಠದ ಪೀಠಾಧಿಪತಿ ಸತ್ಯಾತ್ಮ ತೀರ್ಥ ಶ್ರೀಗಳನ್ನು ಸ್ವಾಗತಿಸಿದರು. ಬಳಿಕ ನವಬೃಂದಾವನ ಗಡ್ಡೆಯಲ್ಲಿ ಒಟ್ಟಿಗೆ ಪದ್ಮನಾಭ ತೀರ್ಥರ ಬೃಂದಾವನಕ್ಕೆ ಮಹಾಮಂಗಳಾರತಿ ನೆರವೇರಿಸಿದರು.ಇದನ್ನೂ ಓದಿ: ಡಿ.27, 28 ಕೆಪಿಸಿಎಲ್ ಮರುಪರೀಕ್ಷೆ: ಕೆಇಎ

ಬಳಿಕ ರಾಯರ ಮಠದ ಪೀಠಾಧಿಪತಿಗಳಾದ ಸುಬುಧೇಂದ್ರ ಶ್ರೀಗಳು ಮಾತನಾಡಿ, ಸುಮಾರು 50 ವರ್ಷಗಳಿಗೂ ಅಧಿಕ ಕಾಲ ಇದ್ದಿದ್ದ ವಿವಾದಕ್ಕೆ ತೆರೆ ಎಳೆಯಬೇಕು ಎನ್ನುವ ಉದ್ದೇಶದಿಂದ ನಾವುಗಳು ಒಂದಾಗಿದ್ದೇವೆ. ಮೊದಲ ಹಂತದಲ್ಲಿ ಮದ್ರಾಸ್‌ನಲ್ಲಿ ಭೇಟಿಯಾಗಿ ಮಾತುಕತೆ ಮಾಡಲಾಗಿತ್ತು. ಎರಡನೇ ಹಂತದ ಮಾತುಕತೆ ಬೆಂಗಳೂರಿನಲ್ಲಿ ಮಾಡಲಾಗಿದೆ. ಸದ್ಯ ನವಬೃಂದಾವನ ಗಡ್ಡೆಯಲ್ಲಿ ಭೇಟಿಯಾಗುವ ಮೂಲಕ ವಿವಾದಕ್ಕೆ ತೆರೆ ಎಳೆಯಲು ಮುಂದಾಗುತ್ತಿದ್ದೇವೆ. ಈ ಭೇಟಿಯಲ್ಲಿ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವುದಿಲ್ಲ. ಮುಂದಿನ ದಿನಗಳಲ್ಲಿ ನಮ್ಮ ಮಠದವರು, ಅವರ ಮಠದವರು ಸೇರಿಕೊಂಡು ಮಾತುಕತೆ ಮಾಡಿ, ಒಂದು ಒಡಂಬಡಿಕೆಯನ್ನು ಮಾಡಿಕೊಳ್ಳುತ್ತೇವೆ. ಬಳಿಕ ಅದನ್ನು ಕೋರ್ಟ್ ಗಮನಕ್ಕೆ ತರುವ ಕೆಲಸ ಮಾಡುತ್ತೇವೆ ಎಂದರು.

ಇನ್ನೂ ಶ್ರೀಗಳ ನಡುವೆ, ನಮ್ಮ ನಡುವೆ ಯಾವುದೇ ವ್ಯಕ್ತಿಗತವಾದ ದ್ವೇಷ, ವಿವಾದಗಳು ಇಲ್ಲ. ಕೆಲ ಲೌಖಿಕ ವಿಚಾರಕ್ಕಾಗಿ ಭಿನ್ನಾಭಿಪ್ರಾಯಗಳು ಇವೆ. ಅವುಗಳನ್ನು ಮಾತುಕತೆಯ ಮೂಲಕ ಬಗೆಹರಿಸಿ ಕೊಳ್ಳಲಾಗುವುದು. ಇನ್ನೂ ಹಿಂದೂ ಸಂಸ್ಕಾರ, ಸಂಸ್ಕೃತಿಯನ್ನು ಉಳಿಸುವ, ಬೆಳೆಸುವ ಕೆಲಸ ಮಾಡಬೇಕಾಗಿದೆ. ಹಿಂದೂ ಧರ್ಮದವರ ಮೇಲೆ ಸಾಕಷ್ಟು ಅಕ್ರಮಣಗಳು ನಡೆಯುವ ಮೂಲಕ ಹಿಂದೂ ಧರ್ಮವನ್ನು ನಾಶ ಮಾಡುವ ಸಂಚು ಮಾಡಿದ್ದಾರೆ. ಹಾಗಾಗಿ ನಾವೆಲ್ಲರೂ ಒಗ್ಗಟ್ಟಿನಿಂದ ನಮ್ಮ ಸನಾತನ ಹಿಂದೂ ಧರ್ಮವನ್ನು ರಕ್ಷಣೆ ಮಾಡಬೇಕಾಗಿದೆ ಎಂದು ಹೇಳಿದರು.

ಉತ್ತರಾಧಿ ಮಠದ ಫೀಠಾಧಿಪತಿ ಶ್ರೀಸತ್ಯಾತ್ಮ ತೀರ್ಥ ಶ್ರೀಗಳು ಮಾತನಾಡಿ, ಉಭಯ ಮಠಗಳ ನಡುವೆ ಇರುವ ವಿವಾದಗಳಿಗೆ ಸುಮಾರು ವರ್ಷಗಳ ಇತಿಹಾಸ ಇದೆ. ಇತ್ಯರ್ಥ ಮಾಡಿಕೊಳ್ಳಲು ಕೆಲ ಸಮಯ ತೆಗೆದುಕೊಳ್ಳುತ್ತದೆ. ಆದಷ್ಟು ಬೇಗನೇ ಒಂದು ನಿರ್ಧಾರವನ್ನು ತೆಗೆದುಕೊಂಡು ಭಕ್ತರಿಗೆ ಒಳ್ಳೆಯ ಸಂದೇಶವನ್ನು ನೀಡಲಾಗುವುದು. ಧರ್ಮ ರಕ್ಷಣೆಗಾಗಿ ನಾವೆಲ್ಲರೂ ಒಂದಾಗುವುದು ತುಂಬಾ ಅವಶ್ಯಕತೆ ಇದೆ ಎಂದರು.ಇದನ್ನೂ ಓದಿ: Delhi Blast | ಕಾರಿನಲ್ಲೇ ಕುಳಿತು ಬಾಂಬ್ ರೆಡಿ ಮಾಡಿದ್ದ ಉಗ್ರ ಉಮರ್

TAGGED:KoppalMantralayaraichuruಕೊಪ್ಪಳನವಬೃಂದಾವನ ಗಡ್ಡೆಮಂತ್ರಾಲಯರಾಯಚೂರು
Share This Article
Facebook Whatsapp Whatsapp Telegram

Cinema news

Rukmini Vasanth 2
ಹೂವು, ಪುಸ್ತಕಗಳೊಂದಿಗೆ ರುಕ್ಕು ಬರ್ತ್‌ಡೇ ಸೆಲೆಬ್ರೇಷನ್‌; ಫೋಟೋಸ್‌ ವೈರಲ್‌
Cinema Latest Sandalwood
Rajinikanth celebrates his birthday on the sets of Jailer 2
ಜೈಲರ್-2 ಸೆಟ್‌ನಲ್ಲಿ ತಲೈವಾ ಹುಟ್ಟುಹಬ್ಬ ಜೋರು
Cinema Latest South cinema Top Stories
NARENDRA MODI RAJINIKANTH
ಸೂಪರ್‌ಸ್ಟಾರ್‌ @75 – ರಜನಿ ಪಾತ್ರಗಳು ಬೆಂಚ್‌ಮಾರ್ಕ್‌ ಸೃಷ್ಟಿಸಿವೆ: ಮೋದಿ
Cinema Latest National Top Stories
Gilli Kavya 2
ಕಾವ್ಯನ ಅಳಿಸೋಕೆ ಊಟಾ ಬಿಟ್ರಾ ಗಿಲ್ಲಿ – ಭಾವನೆಗೆ ಬೆಲೆ ಇಲ್ಲಾ ಅಂತೀರಾ?
Cinema Latest Sandalwood Top Stories

You Might Also Like

Vinesh Phogat 1
Latest

ನಿವೃತ್ತಿಯಿಂದ ಹಿಂದೆ ಸರಿದ ವಿನೇಶ್ ಫೋಗಟ್ – 2028ರ ಒಲಿಂಪಿಕ್ಸ್‌ನಲ್ಲಿ ಅಖಾಡಕ್ಕಿಳಿಯುವುದಾಗಿ ಘೋಷಣೆ

Public TV
By Public TV
7 minutes ago
Indigo Flight
Latest

ಇಂಡಿಗೋ ಸಮಸ್ಯೆ – ವಿಮಾನಯಾನ ಸುರಕ್ಷತೆಯ ಮೇಲ್ವಿಚಾರಣೆ ಜವಾಬ್ದಾರಿ ಹೊಂದಿದ್ದ ನಾಲ್ವರು ಅಧಿಕಾರಿಗಳು ಅಮಾನತು

Public TV
By Public TV
14 minutes ago
bidar DC office
Bidar

ಬೀದರ್ ಡಿಸಿ ಕಚೇರಿಗೆ ಬಾಂಬ್ ಬೆದರಿಕೆ – ಶ್ವಾನ, ಬಾಂಬ್ ನಿಷ್ಕ್ರಿಯ ದಳದಿಂದ ತೀವ್ರ ತಪಾಸಣೆ

Public TV
By Public TV
43 minutes ago
Shashi Tharoor
Latest

ಮುಂದುವರಿದ ಮುನಿಸು – ಹೈಕಮಾಂಡ್ ಕರೆದ 3ನೇ ಸಭೆಗೂ ಶಶಿ ತರೂರ್ ಗೈರು

Public TV
By Public TV
43 minutes ago
Leopard Cub
Chikkaballapur

ಗುಡಿಬಂಡೆ ಪೊಲೀಸ್ ಠಾಣೆ ಆವರಣದ ಕಾರಿನಲ್ಲಿ ಅವಿತಿದ್ದ ಚಿರತೆ ಮರಿ

Public TV
By Public TV
54 minutes ago
Zubeen Garg
Court

ಗಾಯಕ ಜುಬೀನ್ ಗರ್ಗ್ ಸಾವಿನ ತನಿಖೆ – 3,500 ಪುಟಗಳ ಆರೋಪ ಪಟ್ಟಿ ಸಲ್ಲಿಕೆ

Public TV
By Public TV
1 hour ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?