Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಈ ಗ್ರಾಮದಲ್ಲಿರೋರು 3 ಚಿನ್ನಾಭರಣ  ಮಾತ್ರ ಹಾಕ್ಬೇಕು – ಉಲ್ಲಂಘಿಸಿದ್ರೆ 50 ಸಾವಿರ ದಂಡ!
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ಈ ಗ್ರಾಮದಲ್ಲಿರೋರು 3 ಚಿನ್ನಾಭರಣ  ಮಾತ್ರ ಹಾಕ್ಬೇಕು – ಉಲ್ಲಂಘಿಸಿದ್ರೆ 50 ಸಾವಿರ ದಂಡ!

Latest

ಈ ಗ್ರಾಮದಲ್ಲಿರೋರು 3 ಚಿನ್ನಾಭರಣ  ಮಾತ್ರ ಹಾಕ್ಬೇಕು – ಉಲ್ಲಂಘಿಸಿದ್ರೆ 50 ಸಾವಿರ ದಂಡ!

Public TV
Last updated: November 2, 2025 10:35 pm
Public TV
Share
3 Min Read
gold 1
SHARE

ಚಿನ್ನ ಅಂದ್ರೆ ಎಲ್ಲರಿಗೂ ಇಷ್ಟ. ಮಹಿಳೆಯರಿಗಂತೂ ಪಂಚಪ್ರಾಣ. ಚಿನ್ನದ (Gold) ಬೆಲೆ ಎಷ್ಟೇ ಗಗನಕ್ಕೇರಿದರೂ ಕೂಡ ಅದರ ಮೇಲಿನ ಆಸೆಯಂತೂ ಕಡಿಮೆಯಾಗಲ್ಲ. ದಿನೇ ದಿನೇ ಅದರ ಮೇಲಿನ ಪ್ರೀತಿ ಹೆಚ್ಚಾಗುತ್ತಲೇ ಹೋಗುತ್ತದೆ ವಿನಃ ಕಡಿಮೆಯಾಗಲ್ಲ. ಹೀಗಿರುವಾಗ ಇಲ್ಲೊಂದು ಗ್ರಾಮದಲ್ಲಿ ವಾಸಿಸುವ ಮಹಿಳೆಯರು ಕೇವಲ ಮೂರು ಆಭರಣಗಳನ್ನು ಮಾತ್ರ ಧರಿಸಬೇಕು. ಒಂದು ವೇಳೆ ಹೆಚ್ಚು ಆಭರಣವನ್ನು ಧರಿಸಿದರೆ 50,000 ರೂ. ವಿಧಿಸಲಾಗುತ್ತದೆ. ಯಾಕೆ ಈ ರೀತಿ? ಗ್ರಾಮದಲ್ಲಿ ಈ ನಿಯಮ ಜಾರಿಗೆ ಬರಲು ಕಾರಣವೇನು? ಸಂಪೂರ್ಣ ಮಾಹಿತಿ ಇಲ್ಲಿದೆ. 

gold price

ಹೌದು, ಉತ್ತರಾಖಂಡದ (Uttarkhand) ಡೆಹರಾಡೂನ್ ಜಿಲ್ಲೆಯ ಚಕ್ರತಾ ಭಾಗದಲ್ಲಿರುವ ಕಂದಾರ್ (Kandhar) ಎಂಬ ಗ್ರಾಮದಲ್ಲಿ ಈ ವಿಶಿಷ್ಟ ನಿಯಮ ಜಾರಿಯಲ್ಲಿದೆ. ಈ ಗ್ರಾಮದಲ್ಲಿ ಜಾನ್ಸರ್-ಬಾವರ್ ಬುಡಕಟ್ಟು ಸಮುದಾಯದವರು ವಾಸಿಸುತ್ತಾರೆ. ಈ ಗ್ರಾಮದ ಸದಸ್ಯರು ಎಲ್ಲರೂ ಒಟ್ಟುಗೂಡಾಗಿ, ಜನರ ಅಭಿಪ್ರಾಯಗಳನ್ನ ಸಂಗ್ರಹಿಸಿ ಈ ನಿಯಮ ಜಾರಿ ಮಾಡಿದ್ದಾರೆ. ಈ ಮೂಲಕವೇ ಮಹಿಳೆಯರು ಚಿನ್ನದ ಆಭರಣ ಧರಿಸುವುದಕ್ಕೆ ಕಡಿವಾಣ ಬಿದ್ದು, ಕೇವಲ ಮೂರು ಆಭರಣ ಹಾಕಿಕೊಳ್ಳಲು ಮಾತ್ರ ಅವಕಾಶವಿದೆ.

jewellery 1

ನಿಯಮ ಜಾರಿಗೆ ಕಾರಣವೇನು? 

ಜನರ ನಡುವೆ ಸಮಾನತೆಯನ್ನು ತರುವುದು ಈ ನಿಯಮದ ಮುಖ್ಯ ಉದ್ದೇಶವಾಗಿದೆ. ಸಾಮಾಜಿಕ ಸಮಾರಂಭಗಳಲ್ಲಿ ಜನರು ತಮ್ಮಲ್ಲಿರುವ ಹೆಚ್ಚಿನ ಒಡವೆ ಹಾಗೂ ಆಭರಣಗಳನ್ನ ಧರಿಸುವುದರ ಮೂಲಕ ಆಡಂಬರ ಮಾಡುತ್ತಿದ್ದಾರೆ. ಇಂತಹ ವಿಷಯಗಳಲ್ಲಿ ಮಹಿಳೆಯರ ಮೇಲೆ ಪರಿಣಾಮ ಬೀಳುವುದು ಜಾಸ್ತಿ. ಇದು ಕೇವಲ ಮಹಿಳೆಯರ ಮೇಲೆ ಪರಿಣಾಮ ಬೀರುವುದಲ್ಲದೆ, ಮನೆಯಲ್ಲಿ ಅಥವಾ ಕುಟುಂಬದಲ್ಲಿ ಆರ್ಥಿಕ ಸಮಸ್ಯೆಯನ್ನ ಉಂಟು ಮಾಡುತ್ತದೆ. ಹೀಗಾಗಿ ಈ ರೀತಿಯ ಸಮಸ್ಯೆಗಳನ್ನು ಕಡಿಮೆ ಮಾಡುವುದರ ಜೊತೆಗೆ, ಮನೆಯಲ್ಲಿನ ಖರ್ಚನ್ನ ತಡೆಯುವುದು ಇದರ ಮತ್ತೊಂದು ಗುರಿಯಾಗಿದೆ. ಜೊತೆಗೆ ಮಹಿಳೆಯರು ಸಂಪತ್ತನ್ನ ಪ್ರದರ್ಶಿಸುವ ಆಸೆಯಲ್ಲಿ ಸಾಮಾಜಿಕ ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಇದರಿಂದ ಕೌಟುಂಬಿಕ ಸಮಸ್ಯೆ ಹಾಗೂ ಆರ್ಥಿಕ ಒತ್ತಡ ಹೆಚ್ಚಾಗುತ್ತದೆ. ಎಲ್ಲ ಕಾರಣದಿಂದ ಸಮಾಜದಲ್ಲಿ ಅಸಮಾನತೆ ಉಂಟಾಗುತ್ತದೆ. ಇದನ್ನು ಕಡಿಮೆ ಮಾಡುವ ಉದ್ದೇಶದಿಂದ ಈ ನಿಯಮ ಜಾರಿಗೆ ತರಲಾಗಿದೆ.

jewellery

ಗ್ರಾಮದ ಸ್ವಯಂ ಆಡಳಿತದ ಅಡಿಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. ನಿಯಮಗಳ ಪ್ರಕಾರ ಈ ಗ್ರಾಮದ ಅಥವಾ ಇಲ್ಲಿನ ವಿವಾಹಿತ ಮಹಿಳೆಯರು ಕೇವಲ ಮೂರು ಚಿನ್ನದ ಆಭರಣಗಳನ್ನ ಮಾತ್ರ ಧರಿಸಿಕೊಳ್ಳಬೇಕು. 

ಧರಿಸಬೇಕಾದ ಆಭರಣಗಳು: 

  • ಮಂಗಳಸೂತ್ರ 
  • ಕಿವಿಯೋಲೆ
  • ಮೂಗುತಿ 

Jewelry

ಈ ಮೂರು ಚಿನ್ನದ ಆಭರಣಗಳನ್ನು ಮಾತ್ರ ಧರಿಸಲು ಅವಕಾಶವಿದೆ. ಇದರ ಹೊರತಾಗಿ ಬೇರೆ ಮೂರು ಆಭರಣಗಳನ್ನು ಧರಿಸುವಂತಿಲ್ಲ. 

ಚಿನ್ನದ ಬೆಲೆ ಏರಿಕೆ ಆಗುತ್ತಿರುವುದರಿಂದ ಬಡ ಕುಟುಂಬಗಳು ಶ್ರೀಮಂತರನ್ನು ಅನುಕರಣೆ ಮಾಡಿ ಜೀವನ ನಡೆಸಲು ಸಾಧ್ಯವಾಗುವುದಿಲ್ಲ. ಒಂದು ವೇಳೆ ಚಿನ್ನದ ಆಸೆಗೆ ಬಿದ್ದು ಕುಟುಂಬಗಳು ಸಾಲ ಮಾಡಿ, ಚಿನ್ನವನ್ನ ಕೊಂಡುಕೊಂಡರೆ ಆ ಕುಟುಂಬದಲ್ಲಿ ಉಳಿತಾಯ ಎನ್ನುವುದು ಇರುವುದಿಲ್ಲ. 

ಮದುವೆ ಎನ್ನುವುದು ಒಂದು ಪವಿತ್ರ ಆಚರಣೆ. ಚಿನ್ನದ ಆಭರಣ ಧರಿಸುವುದರ ಮೂಲಕ ಅದು ಪ್ರದರ್ಶನವಾಗಬಾರದು. ಹೀಗಾಗಿ ಈ ಪ್ರದರ್ಶನ ಮಾಡುವಂತಹ ಚಟುವಟಿಕೆಗಳನ್ನ ತಡೆ ಹಿಡಿಯುವುದನ್ನ ಈ ನಿಯಮ ಮಾಡುತ್ತದೆ. ಇದರ ಜೊತೆಗೆ ಶ್ರೀಮಂತ ಮತ್ತು ಬಡವರ ನಡುವಿನ ಗೆರೆಯನ್ನ ಅಳಿಸಿ ಹಾಕುವುದು, ಅನಗತ್ಯ ಖರ್ಚುಗಳನ್ನ ಕಡಿಮೆ ಮಾಡುವುದು, ಸರಳ ಜೀವನವನ್ನು ನಡೆಸುವುದು ಹಾಗೂ ಸಾಮಾಜಿಕ ಒಗ್ಗಟ್ಟನ್ನು ಈ ಮೂಲಕ ಬೆಳೆಸಲಾಗುವುದು. 

gold

ಇನ್ನು ಈ ನಿಯಮವನ್ನ ಜನರು ಪಾಲಿಸಲೇಬೇಕು ಎಂಬ ಉದ್ದೇಶದಿಂದ ಕಟ್ಟು ನಿಟ್ಟಿನ ನಿಯಮವನ್ನ ಜಾರಿ ಮಾಡಿದ್ದಾರೆ. ಒಂದು ವೇಳೆ ಯಾವುದೇ ಮಹಿಳೆ ಈ ನಿಯಮವನ್ನ ಅಂದರೆ ಮೂರು ಚಿನ್ನದ ಆಭರಣಗಳನ್ನ ಮಾತ್ರ ಧರಿಸುವ ನಿಯಮವನ್ನ ಉಲ್ಲಂಘಿಸಿದರೆ 50,000 ರೂಪಾಯಿ ದಂಡ ವಿಧಿಸಲಾಗುತ್ತದೆ. ಈ ದಂಡ ಗ್ರಾಮದಲ್ಲಿ ವಾಸವಾಗಿರುವ ಪ್ರತಿಯೊಂದು ಮನೆಗೂ ಅನ್ವಯಿಸುತ್ತದೆ. 

ಈ ನಿಯಮ ಇದೆ ಅಕ್ಟೋಬರ್ 16ರಂದು ನಡೆದ ಸಭೆಯೊಂದರಲ್ಲಿ ಜಾರಿ ಬಂದಿದೆ. ಈ ನಿರ್ಧಾರವನ್ನ ಆ ಗ್ರಾಮದ ಹೆಚ್ಚಿನ ಮಹಿಳೆಯರು ಸ್ವಾಗತಿಸಿದ್ದು, ಆಡಳಿತ ಮಂಡಳಿಯ ಈ ನಿರ್ಧಾರ ಉತ್ತಮವಾಗಿದೆ ಎಂದಿದ್ದಾರೆ. ಹೆಚ್ಚಿನ ದುಡ್ಡು, ಶ್ರೀಮಂತಿಕೆ ಇರುವ ಮಹಿಳೆಯರು ಹೆಚ್ಚಿನ ಆಭರಣಗಳನ್ನ ಧರಿಸುತ್ತಾರೆ, ಆದರೆ ಬಡ ಕುಟುಂಬಸ್ಥರು ಇದೆಲ್ಲವನ್ನ ಅನುಭವಿಸುವ ಅವಕಾಶ ಅವರಿಗಿರುವುದಿಲ್ಲ. ಹೀಗಾಗಿ ಈ ನಿರ್ಧಾರ ಒಳ್ಳೆಯದು ಎಂದು ಗ್ರಾಮಸ್ಥರು ಹೇಳಿಕೊಂಡಿದ್ದಾರೆ.

Gold

ಚಿನ್ನದ ಈ ನಿರ್ಧಾರದ ಬಳಿಕ ಗ್ರಾಮಸ್ಥರು ಮದ್ಯವನ್ನು ತಡೆಯುವಂತೆ ಹೇಳಿಕೊಂಡಿದ್ದಾರೆ. ಈ ಮೊದಲು ಗ್ರಾಮದಲ್ಲೇ ಕೆಲವು ಪಾನೀಯಗಳು ತಯಾರಾಗುತ್ತಿದ್ದವು. ಆದರೆ ಇತ್ತೀಚಿನ ದಿನಗಳಲ್ಲಿ ಬ್ರಾಂಡೆಡ್ ಮದ್ಯ ಬರುತ್ತಿದೆ. ಇದರಿಂದ  ಇದು ಕೂಡ ಕುಟುಂಬಕ್ಕೆ ಹೊರೆಯಾಗುತ್ತಿದೆ ಎಂದು ಗ್ರಾಮದ ಮಹಿಳೆಯರು ಹೇಳಿಕೊಂಡಿದ್ದಾರೆ.

TAGGED:goldgold ornamentsKhandaruttarkhandಉತ್ತರಾಖಂಡಕಂದಾರ್ಚಿನ್ನಚಿನ್ನಾಭರಣಡೆಹರಾಡೂನ್
Share This Article
Facebook Whatsapp Whatsapp Telegram

Cinema news

Asha Bhosle Funeral
ಸರ್ಕಾರಿ ಗೌರವಗಳೊಂದಿಗೆ ನೆರವೇರಿದ ಗಾಯಕಿ ಆಶಾ ಭೋಸ್ಲೆ ಅಂತ್ಯಕ್ರಿಯೆ
Cinema Latest National Top Stories
Jogi Prem
ಕನ್ನಡ ಸಿನಿಮಾ ಅಂತಲೇ ರಾಜಕಾರಣ – ಸೆನ್ಸಾರ್ ಬೋರ್ಡ್ ವಿರುದ್ಧ ಪ್ರೇಮ್ ಕಿಡಿ
Cinema Latest Sandalwood Top Stories
Dhruva Sarja
LPG ಗ್ಯಾಸ್‌ ಬಿಕ್ಕಟ್ಟಿನಿಂದ ಕಂಗಾಲಾದ ಆಟೋ ಚಾಲಕರಿಗೆ ಆಸರೆ – 25 ಲಕ್ಷ ನೆರವು ನೀಡಿದ ಧ್ರುವ ಸರ್ಜಾ!
Bengaluru City Cinema Latest Sandalwood Top Stories
Asha Bhosle 3
`ಅಭೀ ನಾ ಜಾವೋ ಛೋಡ್ ಕರ್’ ಗಾಯಕಿ ಸಂಗೀತದಲ್ಲಿ ಲೀನ – ಇಂದು ಆಶಾ ಭೋಸ್ಲೆ ಅಂತ್ಯಕ್ರಿಯೆ
Cinema Latest Main Post Top Stories

You Might Also Like

CSK 3
Cricket

ಕೋಲ್ಕತ್ತಾಗೆ 4ನೇ ಸೋಲು- ಚೆನ್ನೈಗೆ 32 ರನ್‌ಗಳ ಸೂಪರ್‌ ಜಯ, ಮುಂಬೈ ಹಿಂದಿಕ್ಕಿದ ಕಿಂಗ್ಸ್‌

Public TV
By Public TV
2 hours ago
Rayareddy
Districts

25 ಸಚಿವರನ್ನು ಕೈಬಿಟ್ಟು ಹೊಸಬರಿಗೆ ಅವಕಾಶ ನೀಡಲಿ: ಬಸವರಾಜ ರಾಯರೆಡ್ಡಿ

Public TV
By Public TV
3 hours ago
IPL all teams captains
Cricket

ಆಸ್ಟ್ರೇಲಿಯಾದಲ್ಲಿ ಐಪಿಎಲ್‌, ಭಾರತದಲ್ಲಿ ಬಿಗ್‌ ಬ್ಯಾಷ್‌ ಲೀಗ್‌ – ಆಡಿಲೇಡ್‌ನಲ್ಲಿ ಪಂದ್ಯ ಆಯೋಜನೆಗೆ ಭಾರೀ ಚರ್ಚೆ

Public TV
By Public TV
3 hours ago
Yogesh Gowda murder case final verdict postponed to April 15 Vinay Kulkarni
Bengaluru City

ಯೋಗೀಶ್ ಗೌಡ ಕೊಲೆ ಕೇಸ್; 10 ವರ್ಷಗಳ ಬಳಿಕ ಬುಧವಾರ ಕೋರ್ಟ್ ತೀರ್ಪು – ವಿನಯ್ ಕುಲಕರ್ಣಿಗೆ ಟೆನ್ಷನ್

Public TV
By Public TV
4 hours ago
AYODHYA
Bengaluru City

ಅಯೋಧ್ಯೆಗೆ ಭೇಟಿ ನೀಡಲಿದ್ದಾರೆ ರಾಜ್ಯದ 10 ಕಾಂಗ್ರೆಸ್‌ ಶಾಸಕರು

Public TV
By Public TV
5 hours ago
PM Narendra Modi Inaugurates Delhi Dehradun Expressway
Latest

ದೆಹಲಿ-ಡೆಹ್ರಾಡೂನ್‌ ಎಕ್ಸ್‌ಪ್ರೆಸ್‌ವೇ ಲೋಕಾರ್ಪಣೆ – ಸಂಚಾರ 6 ಗಂಟೆಯಿಂದ 2.5 ಗಂಟೆಗೆ ಇಳಿಕೆ

Public TV
By Public TV
5 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?