ಪಂಚಾಂಗ
ರಾಹುಕಾಲ: 12:11 ರಿಂದ 1:38
ಗುಳಿಕಕಾಲ: 10:40 ರಿಂದ 12:07
ಯಮಗಂಡಕಾಲ: 7:42 ರಿಂದ 9:11
ವಾರ: ಬುಧವಾರ, ತಿಥಿ: ನವಮಿ
ನಕ್ಷತ್ರ: ಪುಷ್ಯ
ಶ್ರೀ ವಿಶ್ವಾವಸು ನಾಮ ಸಂವತ್ಸರ
ದಕ್ಷಿಣಾಯನ, ಶರದ್ ಋತು
ಆಶ್ವಯುಜ ಮಾಸ, ಕೃಷ್ಣ ಪಕ್ಷ
ಮೇಷ: ಮನೆಯಲ್ಲಿ ದೇವತಾ ಕಾರ್ಯ, ಉದ್ಯೋಗದಲ್ಲಿ ಪ್ರಗತಿ, ಶೀತಸಂಬಂಧ ರೋಗಗಳು, ನಂಬಿಕೆ ದ್ರೋಹ.
ವೃಷಭ: ಹಳೆ ಸಾಲ ಮರುಪಾವತಿ, ಮಾತಿನಿಂದ ಅಸಮಾಧಾನ, ಅನಾವಶ್ಯಕ ಖರ್ಚಿನಿಂದ ದೂರವಿರಿ.
ಮಿಥುನ: ಅಧಿಕ ತಿರುಗಾಟ, ಋಣಭಾದೆ, ದುಷ್ಟ ಜನರಿಂದ ದೂರವಿರಿ, ಅಲ್ಪ ಕಾರ್ಯಸಿದ್ಧಿ, ವಿಪರೀತ ವ್ಯಸನ.
ಕಟಕ: ಅಮೂಲ್ಯ ವಸ್ತುಗಳ ಖರೀದಿ, ಮಾತೃವಿನಿಂದ ಸಹಾಯ, ಹಿತ ಶತ್ರು ಭಾದೆ, ಪರಿಶ್ರಮದಿಂದ ಅಭಿವೃದ್ಧಿ.
ಸಿಂಹ: ಕೆಲಸದಲ್ಲಿ ಏಕಾಗ್ರತೆ, ತೀರ್ಥಕ್ಷೇತ್ರ ದರ್ಶನ, ಮಾನಸಿಕ ನೆಮ್ಮದಿ, ವಿದೇಶ ಪ್ರಯಾಣ, ವೃತ್ತಿ ರಂಗದಲ್ಲಿ ಯಶಸ್ಸು.
ಕನ್ಯಾ: ನೂತನ ಕೆಲಸ ಕಾರ್ಯಗಳಲ್ಲಿ ಭಾಗಿ, ದಾಂಪತ್ಯದಲ್ಲಿ ಪ್ರೀತಿ, ತಾಳ್ಮೆ ಅಗತ್ಯ, ಆತ್ಮವಿಶ್ವಾಸ ಅತಿಯಾದಲ್ಲಿ ನಷ್ಟವಾಗಬಹುದು.
ತುಲಾ: ನಯವಂಚಕರ ಮಾತಿಗೆ ಮರುಳಾಗುವಿರಿ, ಕೆಲಸ ಕಾರ್ಯಗಳಲ್ಲಿ ವಿಳಂಬ, ಮತ್ತೊಬ್ಬರ ವಿಷಯದಲ್ಲಿ ಪ್ರವೇಶ ಮಾಡದಿರಿ.
ವೃಶ್ಚಿಕ: ಭೂ ಲಾಭ, ಸಹ ಉದ್ಯೋಗಿಗಳ ಜೊತೆ ಕಲಹ, ಚಂಚಲ ಸ್ವಭಾವ, ಪರಸ್ತ್ರೀಯಿಂದ ತೊಂದರೆ, ಅಕಾಲ ಭೋಜನ.
ಧನಸ್ಸು: ಕೆಲಸ ಕಾರ್ಯಗಳಲ್ಲಿ ಜಯ, ನಿರೀಕ್ಷೆಗೂ ಮೀರಿದ ಆದಾಯ, ಕುಲದೇವರ ಆರಾಧನೆಯಿಂದ ಶುಭಫಲ.
ಮಕರ: ಸ್ವಂತ ಉದ್ಯಮಿಗಳಿಗೆ ಲಾಭ, ವಸ್ತ್ರ ವ್ಯಾಪಾರಿಗಳಿಗೆ ಉತ್ತಮ, ಮತ್ತೊಬ್ಬರ ಮನಸ್ಸನ್ನು ನೋಯಿಸದಿರಿ.
ಕುಂಭ: ಪ್ರಯತ್ನದಿಂದ ಕಾರ್ಯ ಸಫಲ, ಭಯಭೀತಿ ನಿವಾರಣೆ, ಮಾಡುವ ಕೆಲಸದಲ್ಲಿ ಶ್ರದ್ಧೆ ಇರಲಿ.
ಮೀನ: ಯಾರನ್ನು ಹೆಚ್ಚಾಗಿ ನಂಬಬೇಡಿ, ಕೆಲಸದಲ್ಲಿ ಸ್ವಲ್ಪ ವಿಳಂಬ, ಸಂಬಂಧಿಕರಲ್ಲಿ ಕಲಹ, ಷೇರು ವ್ಯವಹಾರಗಳಲ್ಲಿ ನಷ್ಟ.