ಬೆಂಗಳೂರಿನ ಈ ದೇವಸ್ಥಾನದಲ್ಲಿ ನಿಮಗೆ ಪ್ರಸಾದ ಬೇಕಿದ್ರೆ ನೀವು ಡಬ್ಬಿ ತರಲೇಬೇಕು!

Public TV
1 Min Read
KLYANA NAGAR TEMPLE F

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿರುವ ಈ ಗಣೇಶ ದೇವಸ್ಥಾನದಲ್ಲಿ ಪ್ರಸಾದ ಬೇಕು ಅಂದ್ರೆ ನೀವು ಬಟ್ಟಲು ಅಥವಾ ಡಬ್ಬಿ ತರಲೇಬೇಕು.

ಬೆಂಗಳೂರಿನ ಕಲ್ಯಾಣ ನಗರದಲ್ಲಿರೋ ಶಕ್ತಿ ಗಣಪತಿ ದೇವಸ್ಥಾನದಲ್ಲಿ ಈ ನಿಯಮಗಳನ್ನು ಅಳವಡಿಸಿಕೊಳ್ಳಲಾಗಿದೆ. ದೇವಸ್ಥಾನದ ಆಡಳಿತ ಮಂಡಳಿ ಪ್ಲಾಸ್ಟಿಕ್ ಮುಕ್ತ ದೇವಸ್ಥಾನ ಮಾಡುವ ಸಲುವಾಗಿ ಒಂದಿಷ್ಟು ನಿಯಮ ಜಾರಿ ಮಾಡಿದೆ.

KLYAN NAGARA TEMPLE 1

ದೇವರಿಗೆ ಮಾಡಿರೋ ಪಂಚಾಮೃತ ಅಭಿಷೇಕದ ಪ್ರಸಾದವನ್ನ ಸ್ಟೀಲ್ ಬಟ್ಟಲು ತಂದ್ರೆ ಮಾತ್ರ ಕೊಡ್ತಾರೆ. ದೇವರ ಅಭಿಷೇಕಕ್ಕಾಗಿ ಭಕ್ತಾದಿಗಳು ಪ್ಯಾಕೆಟ್ ಹಾಲನ್ನು ತರುವ ಹಾಗಿಲ್ಲ ಎನ್ನುವ ಮತ್ತೊಂದು ನಿಮಯವನ್ನು ತಂದಿದ್ದಾರೆ.

KLYAN NAGARA TEMPLE 9

ಶಕ್ತಿಗಣಪತಿ ಸನ್ನಿಧಿಯಲ್ಲಿ ಒಂದು ವರ್ಷದಿಂದ ಈ ನಿಯಮ ಜಾರಿಯಲ್ಲಿದೆ. ದೇವಸ್ಥಾನದಲ್ಲಿ ಅನ್ನಸಂತರ್ಪಣೆ ಮಾಡಿದ್ರು ಪ್ಲಾಸ್ಟಿಕ್ ಪ್ಲೇಟ್ ಬಳಸಲ್ಲ. ಮರುಬಳಕೆ ಮಾಡೋ ತಟ್ಟೆಗಳನ್ನೇ ಬಳಸಲಾಗುತ್ತೆ. ಇಷ್ಟೇ ಅಲ್ಲದೇ ದೇವಸ್ಥಾನದಲ್ಲಿ ಉತ್ಪತ್ತಿಯಾಗೋ ಕಸವನ್ನು ಅಲ್ಲೇ ಗೊಬ್ಬರವಾಗಿಸೋ ವ್ಯವಸ್ಥೆಯನ್ನೂ ಮಾಡಲಾಗಿದೆ. ಈ ಪರಿಸರಸ್ನೇಹಿ ದೇಗುಲದ ಬಗ್ಗೆ ಭಕ್ತರು ಮೆಚ್ಚುಗೆ ವ್ಯಕ್ತಪಡಿಸ್ತಾರೆ.

KLYAN NAGARA TEMPLE 7

ದೇವಸ್ಥಾನ ಪರಿಸರ ಸ್ನೇಹಿಯಾಗಿರೋದು ತಿಳಿದ ಬಳಿಕ ಭಕ್ತರು ಪ್ರಸಾದ ಸ್ವೀಕರಿಸೋಕೆ ಮನೆಯಿಂದಲೇ ಡಬ್ಬಿ, ಬಟ್ಟಲುಗಳನ್ನ ತೆಗೆದುಕೊಂಡು ಬರ್ತಾರೆ.

KLYAN NAGARA TEMPLE 5

KLYAN NAGARA TEMPLE 4

KLYAN NAGARA TEMPLE 3

KLYAN NAGARA TEMPLE 2

KLYAN NAGARA TEMPLE 6

 

Share This Article
Leave a Comment

Leave a Reply

Your email address will not be published. Required fields are marked *