ಚಿಕ್ಕಮಗಳೂರು: ಸ್ಯಾಂಡಲ್ವುಡ್ ನಟ ಪುನೀತ್ ರಾಜ್ ಕುಮಾರ್ ಇಂದು ಚಿಕ್ಕಮಗಳೂರಿಗೆ ಭೇಟಿ ನೀಡಿದ್ದಾರೆ.
`ರಾಜಕುಮಾರ’ ಚಿತ್ರ 50 ದಿನ ಪೂರೈಸಿದ ಹಿನ್ನೆಲೆಯಲ್ಲಿ ನಟ ಪುನೀತ್ ರಾಜಕುಮಾರ್ ಹಾಗೂ ನಿರ್ದೇಶಕ ಸಂತೋಷ್ ಆನಂದ ರಾಮ್ ಚಿಕ್ಕಮಳೂರಿನ ಮಿಲನ ಚಿತ್ರಮಂದಿರಕ್ಕೆ ಚಿತ್ರದ ಪ್ರಮೋಷನ್ಗಾಗಿ ಭೇಟಿ ನೀಡಿದ್ರು. ಇದೇ ವೇಳೆ ಪುನೀತ್ ಚಿತ್ರದ ಟೈಟಲ್ ಹಾಡನ್ನ ಹಾಡಿ ಅಭಿಮಾನಿಗಳನ್ನ ರಂಜಿಸಿದ್ರು.
- Advertisement 2-
- Advertisement 3-
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪುನೀತ್, `ನಾನು ಚಿಕ್ಕಮಗಳೂರಿಗೆ ಯಾವಾಗ್ಲೂ ಬರ್ತಿರ್ತೇನೆ. ಆದ್ರೆ ಈ ಭೇಟಿ ತುಂಬಾ ವಿಶೇಷವಾದದ್ದು. ಯಾಕಂದ್ರೆ ಅಪ್ಪು ಸಿನಿಮಾದ ಬಳಿಕ ಚಿತ್ರದ ಪ್ರಮೋಷನ್ಗಾಗಿ ಇದೇ ಮೊದಲು ಚಿಕ್ಕಮಗಳೂರಿಗೆ ಬರ್ತಿದ್ರೋದು ಅಂದ್ರು. ಇನ್ನು ಇಲ್ಲಿಂದ ಹಾಸನ ಹಾಗೂ ಮೈಸೂರಿಗೆ ತೆರಳುವುದಾಗಿ ಹೇಳಿದ್ರು.
- Advertisement 4-
ಪುನೀತ್ ಭೇಟಿ ನೀಡಿದ ವಿಷಯ ತಿಳಿಯುತ್ತಿದ್ದಂತೆಯೇ ತಮ್ಮ ನೆಚ್ಚಿನ ನಟನನ್ನ ನೋಡಲು ಚಿತ್ರಮಂದಿರದ ಹೊರಗೆ ಸಾವಿರಾರು ಅಭಿಮಾನಿಗಳು ಸೇರಿದ್ರು. ಪುನೀತ್ ಭಾಷಣದುದ್ದಕ್ಕೂ ಚಿಕ್ಕಮಗಳೂರು ಅಳಿಯನಿಗೆ ಜೈ ಅಂತಾ ಅಭಿಮಾನಿಗಳು ಘೋಷಣೆ ಕೂಗಿದ್ರು.