ಸಿಂಧು ನದಿ ಒಪ್ಪಂದ ರದ್ದಿನಿಂದ ಪಾಕ್ ವಿಲವಿಲ – ಭಾರತದ ಉಸಿರು ನಿಲ್ಲಿಸ್ತೇವೆಂದ ಕ್ರಿಮಿ ಹಫೀಜ್

Public TV
1 Min Read
hafiz saeed

ಶ್ರೀನಗರ: ಪಹಲ್ಗಾಮ್‌ನಲ್ಲಿ (Pahalgam) ಅಮಾಯಕ ಹಿಂದೂಗಳನ್ನ ನರಮೇಧ ಮಾಡಿ ಕ್ರೌರ್ಯ ಮೆರೆದ ಭಯೋತ್ಪಾದಕರ ವಿರುದ್ಧ ಭಾರತೀಯ ಸೇನೆ (Indian Army) ರೌದ್ರರೂಪ ತಾಳಿದೆ. ಧರ್ಮ ಕೇಳಿ, ಪ್ಯಾಂಟ್ ಬಿಚ್ಚಿ, ಕಲ್ಮಾ ಬರದಿದ್ದಕ್ಕೆ ಗುಂಡಿಟ್ಟು ಕೊಂದ ಉಗ್ರರನ್ನು ಸದೆಬಡಿಯಲು ಆಪರೇಷನ್ ಆರಂಭಿಸಿದೆ.ಇದನ್ನೂ ಓದಿ: ಶನಿವಾರ ಕ್ಯಾಥೋಲಿಕ್ ಧರ್ಮಗುರು ಪೋಪ್ ಫ್ರಾನ್ಸಿಸ್ ಅಂತ್ಯಕ್ರಿಯೆ

ಪ್ರವಾಸಿಗರ ಹತ್ಯಾಕಾಂಡ ಬೆನ್ನಲ್ಲೇ ಓರ್ವ ಉಗ್ರ ಕ್ರಿಮಿಯನ್ನ ಸೇನಾಪಡೆ ಹೊಸಕಿ ಹಾಕಿದೆ. ಜಮ್ಮು ಮತ್ತು ಕಾಶ್ಮೀರದ (Jammu Kashmir) ಬಂಡಿಪೋರಾದಲ್ಲಿ LET ಟಾಪ್ ಕಮಾಂಡರ್ ಅಲ್ತಾಫ್ ಲಲ್ಲಿಯನ್ನು ಸೇನೆ ಸಂಹರಿಸಿದೆ. ಪಹಲ್ಗಾಮ್ ದಾಳಿ ಬಳಿಕ ಉಗ್ರರನ್ನು ಹುಟ್ಟಡಗಿಸಲು ಕಾರ್ಯಾಚರಣೆ ಆರಂಭಿಸಿದ ಸೇನಾಪಡೆ ಇಂದು ಬೆಳಿಗ್ಗೆ ಪೊಲೀಸರ ಜೊತೆಗೂಡಿ ಅಲ್ತಾಫ್‌ನನ್ನು ಫಿನೀಶ್ ಮಾಡಿದೆ.

ಗುಂಡಿನ ಚಕಮಕಿ ವೇಳೆ ಇಬ್ಬರು ಯೋಧರಿಗೆ ಗಾಯಗಳಾಗಿವೆ. ಲಷ್ಕರ್ ಟಾಪ್ ಕಮಾಂಡರ್ ಅಲ್ತಾಫ್ ಲಲ್ಲಿ, ಕಾಶ್ಮೀರದಲ್ಲಿ ಉಗ್ರರ ದಾಳಿ ಹಾಗೂ ಪ್ಲ್ಯಾನ್‌ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದ. ನಿನ್ನೆ ರಾತ್ರಿ ಎಲ್‌ಒಸಿಯಲ್ಲಿ ಬಾಲ ಬಿಚ್ಚಿದ್ದ ಪಾಕ್ ಸೇನೆ ಗುಂಡಿನ ದಾಳಿ ನಡೆಸಿದೆ. ಪಾಕ್ ಸೇನಾ ಶಿಬಿರಗಳ ಮೇಲೆ ಭಾರತ ಪ್ರತಿದಾಳಿ ನಡೆಸಿದೆ. ಸೇನಾ ಮುಖ್ಯಸ್ಥ ಉಪೇಂದ್ರ ದ್ವಿವೇದಿ ಪಹಲ್ಗಾಮ್‌ಗೆ ಭೇಟಿ ಕೊಟ್ಟು, ಪರಿಶೀಲನೆ ನಡೆಸಿದ್ದಾರೆ. ಇನ್ನು ಐಎಸ್‌ಐ ದಾಳಿ ಸಾಧ್ಯತೆ ಹಿನ್ನೆಲೆ ಕಾಶ್ಮೀರದಲ್ಲಿರುವ ಸ್ಥಳೀಯರಲ್ಲದ ರೈಲ್ವೆ ಸಿಬ್ಬಂದಿ, ಬ್ಯಾಂಕ್ ಸಿಬ್ಬಂದಿ ಸೆಕ್ಯುರಿಟಿ ಅಡ್ವೈಸರಿ ಹೊರಡಿಸಲಾಗಿದೆ.ಇದನ್ನೂ ಓದಿ: Waqf Act | ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದ ಕೇಂದ್ರ – ಅರ್ಜಿಗಳನ್ನು ವಜಾಗೊಳಿಸುವಂತೆ ಮನವಿ

Share This Article