– ಪರಿಷತ್ನಲ್ಲಿ ಸೋಲಾಗಿದ್ದ ವಿಧೇಯಕ ವಿಧಾನಸಭೆಯಲ್ಲಿ ಪಾಸ್
ಬೆಂಗಳೂರು: ವಿಧಾನ ಪರಿಷತ್ನಲ್ಲಿ (Legislative Council) ಬುಧವಾರ (ಆ.20) ಸೋಲಾಗಿದ್ದ ಕರ್ನಾಟಕ ಸೌಹಾರ್ದ ಸಹಕಾರ ತಿದ್ದುಪಡಿ ವಿಧೇಯಕಕ್ಕೆ ಗುರುವಾರ (ಆ.21) ವಿಧಾನಸಭೆಯಲ್ಲಿ (Legislative Assembly) ಅಂಗೀಕಾರ ಪಡೆದುಕೊಳ್ಳಲಾಗಿದೆ.
ಬುಧವಾರ ಪರಿಷತ್ನಲ್ಲಿ ಮತ ಹಾಕಿದಾಗ ಸಂಖ್ಯಾಬಲದ ಕಾರಣದಿಂದಾಗಿ ಈ ವಿಧೇಯಕ 3 ಮತಗಳಿಂದ ಸೋತಿತ್ತು. ಸೌಹಾರ್ದ ಸಹಕಾರ ಸಂಘಗಳ ಸದಸ್ಯರ ಕುಟುಂಬ ಪ್ರತೀ ವರ್ಷ ಆಸ್ತಿ ಘೋಷಿಸಿಕೊಳ್ಳುವ ಮತ್ತು ಮೂರು ವರ್ಷಕ್ಕೊಮ್ಮೆ ಲೆಕ್ಕಪರಿಶೋಧನೆ ನಡೆಸುವ ಅಂಶಗಳಿಗೆ ಪರಿಷತ್ನಲ್ಲಿ ವಿರೋಧ ವ್ಯಕ್ತವಾಗಿತ್ತು. ಆದರೆ ಈ ವಿವಾದಿತ ಅಂಶಗಳ ಸಹಿತ ವಿಧಾನಸಭೆಯಲ್ಲಿ ವಿಧೇಯಕಕ್ಕೆ ಸರ್ಕಾರ ಅಂಗೀಕಾರ ಪಡೆದುಕೊಂಡಿದೆ.ಇದನ್ನೂ ಓದಿ: ಬೀದಿ ನಾಯಿಗಳ ಸ್ಥಳಾಂತರ ಸಂಬಂಧ ಎಂಸಿಡಿ ಅಧಿಸೂಚನೆ – ಅರ್ಜಿಯ ತುರ್ತು ವಿಚಾರಣೆ ನಿರಾಕರಿಸಿದ ಸುಪ್ರೀಂ
ಇನ್ನೂ ಅಕ್ರಮ ಗಣಿಗಾರಿಕೆ ಮತ್ತು ಅಪರಾಧ ಉತ್ಪತ್ಪಿಗಳಿಂದಾದ ಸ್ವತ್ತನ್ನು ವಶಪಡಿಸಿಕೊಳ್ಳುವುದಕ್ಕಾಗಿ ಮತ್ತು ಜಪ್ತಿಗಾಗಿ ವಸೂಲಾತಿ ಆಯುಕ್ತರ ನೇಮಕಾತಿ ವಿಧೇಯಕಕ್ಕೂ ವಿಧಾನಸಭೆಯಲ್ಲಿ ಅಂಗೀಕಾರ ಸಿಕ್ಕಿದೆ. ಅಕ್ರಮ ಗಣಿಗಾರಿಕೆಗಳಿಂದಾದ ನಷ್ಟ ವಸೂಲಾತಿ ಮತ್ತು ಆಸ್ತಿಗಳ ಜಪ್ತಿಗಾಗಿ ಸರ್ಕಾರ ಹೊಸ ಕಾಯ್ದೆ ರಚಿಸಿದೆ. ಗಣಿ ಅಕ್ರಮ ಪ್ರಕರಣಗಳಿಂದ ಸರ್ಕಾರಕ್ಕಾಗಿರುವ ನಷ್ಟ ವಸೂಲಿ ಮಾಡಲು ವಸೂಲಿ ಆಯುಕ್ತರನ್ನು ನೇಮಿಸಲು ಸರ್ಕಾರ ಮುಂದಾಗಿದೆ. ರಾಜ್ಯದಲ್ಲಿ ಲೆಕ್ಕವಿಲ್ಲದಷ್ಟು ಗುತ್ತಿಗೆದಾರರು, ಸಾಗಾಣಿಕೆದಾರರು, ರಫ್ತುದಾರರು, ದಾಸ್ತಾನುದಾರರು, ಖರೀದಿದಾರರು ಮತ್ತು ಮಧ್ಯವರ್ತಿಗಳು ಸೇರಿದಂತೆ ಬಹುವಹಿವಾಟುಗಳಿಂದ ಅಕ್ರಮ ಗಣಿಗಾರಿಕೆ ಚಟುವಟಿಕೆಗಳು ನಡೆದಿವೆ. ಅದು ವ್ಯವಸ್ಥಿತ ಒಳಸಂಚು ಹೊಂದಿರುವ ಸಂಘಟಿತ ಅಪರಾಧ. ಇದರಿಂದ ಸರ್ಕಾರಕ್ಕಾಗಿರುವ ನಷ್ಟವನ್ನು ವಸೂಲಿಗೆ ವಿಧೇಯಕ ಜಾರಿಗೊಳಿಸಲಾಗುತ್ತಿದೆ.
ಗಣಿ ನಷ್ಟ ವಸೂಲಾತಿಗಾಗಿ ವಸೂಲಾತಿ ಆಯುಕ್ತರ ನೇಮಕಕ್ಕೆ ವಿಧೇಯಕದಲ್ಲಿ ಅವಕಾಶವಿದೆ. ಎಸಿಎಸ್ ದರ್ಜೆಯ ಸೇವೆಯಲ್ಲಿ ಇರುವ ಅಥವಾ ನಿವೃತ್ತ ಅಧಿಕಾರಿಯನ್ನು ವಸೂಲಾತಿ ಆಯುಕ್ತರಾಗಿ ನೇಮಿಸಬಹುದು. ವಸೂಲಾತಿ ಆಯುಕ್ತರಿಗೆ ಸಿವಿಲ್ ನ್ಯಾಯಾಲಯದ ಅಧಿಕಾರ ಸಿಗಲಿದ್ದು, ಗಣಿ ಪ್ರದೇಶಗಳ ಪರಿಶೀಲಿಸುವ, ಶೋಧನೆ ಮಾಡುವ, ಅಕ್ರಮ ಗಣಿಗಾರಿಕೆಯಿಂದ ಗಳಿಸಿದ ಆಸ್ತಿಗಳ ತಾತ್ಕಾಲಿಕ ಜಪ್ತಿ ಮಾಡುವ ಅಧಿಕಾರ ಇದೆ.ಇದನ್ನೂ ಓದಿ: ಸು ಫ್ರಂ ಸೋ ರೀತಿ ಈ ಸರ್ಕಾರ ಬಿ ಫ್ರಂ ಸಿ – ಕಾಂಗ್ರೆಸ್ ವಿರುದ್ಧ ಸುನಿಲ್ ಕುಮಾರ್ ವಾಗ್ದಾಳಿ