ಈಶ್ವರಪ್ಪ ಬಣದ ಬಂಡಾಯಕ್ಕೆ ಯಡಿಯೂರಪ್ಪ ಥಂಡಾ!

Public TV
1 Min Read
venkatesh murthy 2

ಬೆಂಗಳೂರು: ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಈಶ್ವರಪ್ಪ ಅವರ ಬಣದ ಬಂಡಾಯವನ್ನು ಶಮನ ಮಾಡಲು ಬಿಎಸ್‍ವೈ ಮುಂದಾಗಿದ್ದು ಬೆಂಗಳೂರಿನ ಮಾಜಿ ಮೇಯರ್ ವೆಂಕಟೇಶ್ ಮೂರ್ತಿ ಅವರ ಅಮಾನತು ಆದೇಶ ನಾಲ್ಕೇ ತಿಂಗಳಿನಲ್ಲಿ ರದ್ದಾಗಿದೆ.

ಬಿಎಸ್ ಯಡಿಯೂರಪ್ಪ ಅವರ ಸೂಚನೆ ಹಿನ್ನಲೆಯಲ್ಲಿ ನಗರ ಬಿಜೆಪಿ ಅಧ್ಯಕ್ಷ ಪಿಎನ್ ಸದಾಶಿವ ಅಮಾನತು ಆದೇಶ ವಾಪಸ್ ಪಡೆದಿದ್ದಾರೆ. ವೆಂಕಟೇಶ್ ಮೂರ್ತಿ ಪಕ್ಷದ ಸಿದ್ಧಾಂತಗಳಿಗೆ ಬದ್ಧರಾಗಿರುತ್ತಾರೆ ಎಂಬ ಭರವಸೆಯಿಂದ ಅಮಾನತು ಆದೇಶ ವಾಪಸ್ ಪಡೆಯಲಾಗಿದೆ ಎಂದು ಹೇಳಲಾಗಿದೆ.

venkatesh murthy 1

ಪರಿಷತ್ ಸದಸ್ಯ ಈಶ್ವರಪ್ಪ ನೇತೃತ್ವದ ಸಂಗೊಳ್ಳಿ ರಾಯಣ್ಣ ಬ್ರಿಗೇಡ್‍ನಲ್ಲಿ ಗುರುತಿಸಿಕೊಂಡ ಕಾರಣಕ್ಕೆ ಜನವರಿ 9ರಂದು ವೆಂಕಟೇಶ್ ಮೂರ್ತಿ ಅವರನ್ನ ಅಮಾನತು ಮಾಡಲಾಗಿತ್ತು. ಆದ್ರೆ ಅಸಮಾಧಾನಿತರ ಬಂಡಾಯಕ್ಕೆ ಮಣಿದ ಬಿಎಸ್‍ವೈ ನಾಲ್ಕೇ ತಿಂಗಳಿಗೆ ವೆಂಕಟೇಶ್ ಅವರ ಅಮಾನತು ಆದೇಶ ವಾಪಸ್ ಪಡೆದಿದ್ದಾರೆ ಅಂತ ಹೇಳಲಾಗಿದೆ.

ವೆಂಕಟೇಶ್ ಮೂರ್ತಿ ಅಮಾನತುಗೊಂಡಾಗ ಇದು ಬಿಜೆಪಿಯ ಟೆಸ್ಟ್ ಡೋಸ್. ಮುಂದಿನ ದಿನಗಳಲ್ಲಿ ರಾಯಣ್ಣ ಬ್ರಿಗೇಡ್ ಜೊತೆ ಗುರುತಿಸಿಕೊಂಡಿರುವ ಮತ್ತಷ್ಟು ನಾಯಕರ ಮೇಲೆ ಬಿಜೆಪಿ ಕ್ರಮ ಕೈಗೊಳ್ಳಲಿದೆ ಎನ್ನುವ ಮಾತುಗಳು ಅಂದು ಕೇಳಿ ಬಂದಿತ್ತು.

venkatesh murthy

Share This Article
Leave a Comment

Leave a Reply

Your email address will not be published. Required fields are marked *