ಬೆಂಗಳೂರು: ಹನಿಟ್ರ್ಯಾಪ್ ಕೇಸ್ (Honey Trap Case) ಯಾರಿಗೂ ಶೋಭೆ ತರೋದಿಲ್ಲ. ದೇಶಕ್ಕೆ ಕಳಂಕ ತರುತ್ತಿರೋದೆ ಕಾಂಗ್ರೆಸ್ ಎಂದು ಕಾಂಗ್ರೆಸ್ ವಿರುದ್ಧ ಜೆಡಿಎಸ್ ಮಾಜಿ ಶಾಸಕ ಅನ್ನದಾನಿ (K Annadani) ವಾಗ್ದಾಳಿ ನಡೆಸಿದ್ದಾರೆ.
ಹನಿಟ್ರ್ಯಾಪ್ ಕೇಸ್ ವಿಚಾರವಾಗಿ ಜೆಪಿ ಭವನದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ನಮ್ಮ ಜೆಡಿಎಸ್ನಲ್ಲಿ ಟ್ರಾಪ್ ಆಗೋರು ಯಾರು ಇಲ್ಲ. ನಮ್ಮಲ್ಲಿ ಮೊದಲ ಬಾರಿಗೆ ಗೆದ್ದವರು ಜಾಸ್ತಿ ಇದ್ದಾರೆ. ಒಳ್ಳೆ ವ್ಯಕ್ತಿತ್ವದಲ್ಲಿ ಕೆಲಸ ಮಾಡುತ್ತಿದ್ದಾರೆ. ಹನಿಟ್ರ್ಯಾಪ್ ಯಾರಿಗೂ ಶೋಭೆ ತರೋದಿಲ್ಲ. ನನ್ನಂತ ಪ್ರಾಮಾಣಿಕ ರಾಜಕಾರಣ ಆದವರಿಗೆ ಇಂತಹ ವಿಷಯ ಬೇಸರ ತರಿಸುತ್ತದೆ ಎಂದು ತಿಳಿಸಿದರು. ಇದನ್ನೂ ಓದಿ: ಸಂವಿಧಾನ ಬದಲಾವಣೆ ಹೇಳಿಕೆಗೆ ಡಿಕೆಶಿ ದೇಶದ, ರಾಜ್ಯದ ಕ್ಷಮೆ ಕೇಳಿ, ರಾಜೀನಾಮೆ ಕೊಡ್ಬೇಕು – ಅನ್ನದಾನಿ
ನಾವು ಯಾವತ್ತು ರಾಜಕೀಯ ವ್ಯಭಿಚಾರದ ಕೆಲಸ ಮಾಡಿಲ್ಲ. ದೇವೇಗೌಡರ ಮಾರ್ಗದರ್ಶನಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ.ದೇಶಕ್ಕೆ ಕಳಂಕ ತರುತ್ತಿರೋರು ಕಾಂಗ್ರೆಸ್ನವರು. 48 ಜನರ ಸಿ.ಡಿ ಇದೆ ಅಂದರೆ ಯಾರದ್ದು ಸರ್ಕಾರ ಇರೋದು? ಈ ದೇಶ, ರಾಜ್ಯದ ಗೌರವವನ್ನು ಹನಿಟ್ರ್ಯಾಪ್ ಮಾಡಿ ಹಾಳು ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಅನ್ನದಾನಿ ಹರಿಹಾಯ್ದರು. ಇದನ್ನೂ ಓದಿ: ಏ.1ರಿಂದ ಗೋಧಿ ದಾಸ್ತಾನು ಘೋಷಣೆ ಕಡ್ಡಾಯ – ರಾಜ್ಯ, ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರ ಸೂಚನೆ