ಬೆಂಗಳೂರು: 10 ದಿನಗಳ ಒಳಗೆ ನಿಗಮ ಮಂಡಳಿಗಳ ನಿರ್ದೇಶಕರ ನೇಮಕಾತಿ ಆಗಲಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಚಂದ್ರಶೇಖರ್ (G.C Chandrashekhar) ತಿಳಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ನಿಗಮ ಮಂಡಳಿಗಳ ನಿರ್ದೇಶಕರ ನೇಮಕವನ್ನು ಸರ್ಕಾರ ಮಾಡಲಿದೆ. ನಾವು ಈಗಾಗಲೇ ಲೀಸ್ಟ್ ಕೊಟ್ಟಿದ್ದೇವೆ. ಅಧ್ಯಕ್ಷರು ಅದನ್ನು ಸರ್ಕಾರಕ್ಕೆ ಶಿಫಾರಸು ಮಾಡ್ತಾರೆ. 10 ದಿನಗಳ ಒಳಗೆ ನಿರ್ದೇಶಕರ ನೇಮಕ ಆಗಲಿದೆ ಎಂದು ತಿಳಿಸಿದ್ದಾರೆ.
ಪರಮೇಶ್ವರ್ (G.Parameshwar) ನೇತೃತ್ವದ ಕಮಿಟಿ ಈಗಾಗಲೇ ಪಟ್ಟಿ ಕೊಟ್ಟಿದೆ. ನಾನು ಅದರಲ್ಲಿ ನಿರ್ದೇಶಕನಾಗಿದ್ದೆ. ಕೆಲವು ಬದಲಾವಣೆಗಳು ಆಗಿದೆ. ಹಾಗಾಗಿ ಸ್ವಲ್ಪ ವಿಳಂಬವಾಗಿದೆ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.