ವಿಜಯಪುರದ ಭೀಮಾ ನದಿ ನೀರಿಗೆ ಮಹಾರಾಷ್ಟ್ರ ಜನರ ಕಣ್ಣು!

Public TV
1 Min Read
BIJ 6

ವಿಜಯಪುರ: ಒಂದೆಲ್ಲೊಂದು ವಿಷಯಕ್ಕೆ ಮಹಾರಾಷ್ಟ್ರ ಸರಕಾರ ಮತ್ತು ಜನರು ಕರ್ನಾಟಕದೊಂದಿಗೆ ಕ್ಯಾತೆ ತಗಿತಾನೇ ಇರುತ್ತಾರೆ. ಈಗ ವಿಜಯಪುರದ ಭೀಮಾ ನದಿ ನೀರಿಗೆ ಮಹಾರಾಷ್ಟ್ರದ ಜನರು ದುಂಬಾಲು ಬಿದ್ದಿದ್ದಾರೆ.

BIJ BARRAGE

ಮಂಗಳವಾರ ತಡರಾತ್ರಿ ಜಿಲ್ಲೆಯ ಇಂಡಿ ತಾಲೂಕಿನ ಉಮರಾಣಿ ಗ್ರಾಮ ಬಳಿಯ ಭೀಮಾನದಿಯ ಬ್ಯಾರೇಜ್ ನ 18 ಗೇಟ್‍ಗಳನ್ನು ಮಹಾರಾಷ್ಟ್ರ ರೈತರು ಕಿತ್ತು ಹಾಕಿದ್ದಾರೆ. ಉಮರೇಜ್ ಬ್ಯಾರೇಜ್‍ನ ಗೇಟ್ ಗಳನ್ನು ತಗೆಯಲು ಯತ್ನಿಸಿದಾಗ ಚಡಚಣ ಪೋಲಿಸರು ಸ್ಥಳಕ್ಕೆ ದೌಡಾಯಿಸಿ ಆರೋಪಿಗಳನ್ನು ಸೆರೆ ಹಿಡಿದಿದ್ದಾರೆ. ಈ ಕೃತ್ಯವನ್ನು ಮಹಾರಾಷ್ಟ್ರದ ಚನೇಗಾಂವ್ ಬಳಿಯ ಬರೂರು ಗ್ರಾಮದ ರೈತರು ಎಸಗಿದ್ದಾರೆ ಎಂದು ಹೇಳಲಾಗುತ್ತಿದೆ. ಸದ್ಯ ಗೇಟ್ ಕಿತ್ತಾಕಿದ 30 ಜನರನ್ನು ಚಡಚಣ ಪೊಲೀಸರು ಬಂಧಿಸಿದ್ದು, ತನಿಖೆ ಮುಂದುವರಿಸಿದ್ದಾರೆ.

BIJ DAM ARREST AV 1

ಮಹಾರಾಷ್ಟ್ರ ರೈತರ ಈ ಕೃತ್ಯವನ್ನು ವಿಜಯಪುರ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷ ಪಂಚಪ್ಪ ಕಲಬುರ್ಗಿ ಖಂಡಿಸಿದ್ದು, ಈ ಘಟನೆಗೆ ರಾಜ್ಯ ಸರಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿದ್ದಾರೆ. ಅಲ್ಲದೆ ಕೂಡಲೆ ನಮ್ಮ ಬ್ಯಾರೇಜ್ ಗಳಿಗೆ ಪೋಲಿಸ್ ಭದ್ರತೆ ಒದಗಿಸಬೇಕೆಂದು ರಾಜ್ಯ ಸರಕಾರಕ್ಕೆ ಒತ್ತಾಯಿಸಿದ್ದಾರೆ.

BIJ 8

BIJ 4

BIJ 7

Share This Article
Leave a Comment

Leave a Reply

Your email address will not be published. Required fields are marked *