ಜಮೀರ್ ಅಹ್ಮದ್ ಪಾಕಿಸ್ತಾನ ಸರ್ಕಾರದ ಸಚಿವ: ಸಿದ್ದಲಿಂಗ ಸ್ವಾಮೀಜಿ ಕಿಡಿ

Public TV
1 Min Read
zameer ahmed siddalinga swamiji

ಕಲಬುರಗಿ: ಜಮೀರ್ ಅಹ್ಮದ್ (Zameer Ahmed) ನಮ್ಮ ರಾಜ್ಯ ಸರ್ಕಾರದ ಸಚಿವ ಅಲ್ಲ. ಪಾಕಿಸ್ತಾನ ಸರ್ಕಾರದ ಸಚಿವ ಎಂದು ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ (Siddalinga Swamiji) ಕಿಡಿಕಾರಿದರು.

ಕಲಬುರಗಿಯಲ್ಲಿ (Kalaburagi) ವಕ್ಫ್ ಹಠಾವೋ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಓರ್ವ ಅವಿವೇಕಿ ಸಚಿವ ಮಾಡಿದ್ದ ಹುನ್ನಾರ ಎಂದು ಸಚಿವ ಜಮೀರ್ ಅವರ ವಿರುದ್ಧ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಸಿದ್ದರಾಮಯ್ಯ ಸರ್ಕಾರ ಬುದ್ಧಿಗೇಡಿ ಸರ್ಕಾರ: ರವಿಕುಮಾರ್

zameer ahmed

ಭಾರತಕ್ಕೆ ಸ್ವಾತಂತ್ರ‍್ಯ ಸಿಕ್ಕು 100 ವರ್ಷಕ್ಕೆ ಇಸ್ಲಾಂ ರಾಷ್ಟ್ರ ಮಾಡೋ ಹುನ್ನಾರ ನಡೆದಿದೆ. ರೈತರ ಜಮೀನು ನುಂಗಿ ನೀರು ಕುಡಿಯುತ್ತಿದ್ದಾರೆ. ಮಠ ಮಂದಿರಗಳ ರಕ್ಷಣೆಗಾಗಿ ಬೀದಿಗಿಳಿದಿದ್ದೇವೆ ಎಂದು ತಿಳಿಸಿದರು.

ಕಾಂಗ್ರೆಸ್ ಸರ್ಕಾರ ಮುಸ್ಲಿಮರಿಗೆ ದೇಶವನ್ನೇ ಪುಕ್ಕಟೆಯಾಗಿ ನೀಡುತ್ತೆ. ರಾಜ್ಯ ಸರ್ಕಾರ ಮುಸ್ಲಿಂ ತುಷ್ಟೀಕರಣ ಮಾಡುತ್ತಿದೆ. ದಲಿತ ಕುಟುಂಬಗಳ ಆಸ್ತಿಗಳಿಗೆ ವಕ್ಫ್ ಕಣ್ಣು ಹಾಕಿದ್ರು. ಕಲಬುರಗಿ ಜಿಲ್ಲಾ ಉಸ್ತುವಾರಿ ಕಣ್ಣಿಗೆ ಕಾಣ್ತಿಲ್ಲ. ನಾನು ಕಲಬುರಗಿ ಬಿಟ್ಟು ಹೋಗದಂತೆ ಚಾರ್ಜ್‌ಶೀಟ್‌ ಹಾಕಿಲ್ಲ. ಕೋರ್ಟ್‌ನ ಒಂದು ಸಣ್ಣ ಆದೇಶ ಇಟ್ಟು, ಇಲ್ಲಿನ ಇನ್‌ಸ್ಪೆಕ್ಟರ್ ಚಾರ್ಜ್‌ಶೀಟ್‌ ಹಾಕ್ತಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಬಿಜೆಪಿ ಮೇಲೆ ಆಪರೇಷನ್ ಕಮಲದ ಆರೋಪ ಮಾಡ್ತಿರೋ ರವಿ ಗಣಿಗ ಧರ್ಮಸ್ಥಳದಲ್ಲಿ ಪ್ರಮಾಣ ಮಾಡಲಿ: ರೇಣುಕಾಚಾರ್ಯ ಸವಾಲ್

ಹಿಂದೆ ಮಾಡಿದ ಭಾಷಣಕ್ಕಾಗಿ ನ್ಯಾಯಲಯ ಚಾರ್ಜ್ಶೀಟ್ ಹಾಕಿದ್ದು, ಜಿಲ್ಲೆ ಬಿಟ್ಟು ಹೋಗದಂತೆ ಹೇಳಿದೆ. ಅದನ್ನ ಇಟ್ಟುಕೊಂಡು ಆರು ತಿಂಗಳು ಕಳೆದ್ರು ಚಾರ್ಜ್‌ಶೀಟ್‌ ಹಾಕ್ತಿಲ್ಲ ಎಂದರು.

Share This Article