Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Latest

ಭಾರತದ ಅತೀ ಉದ್ದದ ರಸ್ತೆ ಸುರಂಗ ಮಾರ್ಗ ಶೀಘ್ರದಲ್ಲೇ ಲೋಕಾರ್ಪಣೆ- ಎಷ್ಟು ಉದ್ದವಿದೆ? ವಿಶೇಷತೆ ಏನು?

Public TV
Last updated: March 25, 2017 5:55 pm
Public TV
Share
3 Min Read
tunnel 1
SHARE

ನವದೆಹಲಿ: ಏಷ್ಯಾದಲ್ಲೇ ಅತೀ ಉದ್ದವಾದ ರಸ್ತೆ ಸುರಂಗ ಮಾರ್ಗವನ್ನು ಭಾರತದಲ್ಲಿ ನಿರ್ಮಿಸಲಾಗಿದ್ದು, ಶೀಘ್ರದಲ್ಲೇ ಲೋಕಾರ್ಪಣೆಯಾಗಲಿದೆ. ಈ ಸುರಂಗದ ವಿಶೇಷತೆ ಏನು? ಎಷ್ಟು ಉದ್ದವಿದೆ? ನಿರ್ಮಾಣ ವೆಚ್ಚ ಎಷ್ಟು ಎಂಬ ಎಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

1. ಎಲ್ಲಿ ನಿರ್ಮಾಣವಾಗಿದೆ?
ಜಮ್ಮು ಕಾಶ್ಮೀರದ ಉಧಾಮ್‍ಪುರ್ ಜಿಲ್ಲೆಯ ಚೆನಾನಿ ಮತ್ತು ರಾಂಬನ್ ಜಿಲ್ಲೆಯ ನಶ್ರಿ ನಡುವೆ ಈ ಸುರಂಗ ಮಾರ್ಗ ನಿರ್ಮಾಣವಾಗಿದೆ. ಜಮ್ಮು ಕಾಶ್ಮೀರದ ರಾಷ್ಟ್ರೀಯ ಹೆದ್ದಾರಿ 44ರ 286 ಕಿಮೀ ಉದ್ದದ ಚತುಷ್ಪಥ ರಸ್ತೆ ಯೋಜನೆಯ ಭಾಗವಾಗಿ ಸುರಂಗ ಮಾರ್ಗ ನಿರ್ಮಾಣವಾಗಿದೆ.

                             tunnel 3

2. ಎಷ್ಟು ಉದ್ದವಿದೆ?
ಈ ಸುರಂಗ 9.2 ಕಿ.ಮೀ ಉದ್ದವಿದೆ. ಎರಡು ಟ್ಯೂಬ್‍ಗಳ ಈ ಸುರಂಗ ಸಮುದ್ರಮಟ್ಟದಿಂದ 1200 ಮೀಟರ್ ಎತ್ತರದಲ್ಲಿದೆ. ಸುರಂಗದ ಪಕ್ಕದಲ್ಲೇ ಪಾರು ಸುರಂಗ(ಎಸ್ಕೇಪ್ ಟನಲ್) ಕೂಡ ಇದೆ.

tunnel 5

3. ನಿರ್ಮಾಣ ಕಾರ್ಯ ಶುರುವಾಗಿದ್ದು ಯಾವಾಗ?
2011ರ ಮೇ 23ರಂದು ಹಿಮಾಲಯದ ಕೆಳ ಪರ್ವತ ಶ್ರೇಣಿಯಲ್ಲಿ ಸುರಂಗ ನಿರ್ಮಾಣ ಕಾರ್ಯ ಆರಂಭಿಸಲಾಯ್ತು. ಇದೀಗ 6 ವರ್ಷಗಳ ಬಳಿಕ ಯೋಜನೆ ಪೂರ್ಣಗೊಂಡಿದ್ದು, ಉದ್ಘಾಟನೆಗೆ ಸಿದ್ಧವಾಗಿದೆ. 2017ರ ಮಾಚ್ 9 ಹಾಗೂ ಮಾರ್ಚ್ 15ರ ನಡುವೆ ಟ್ರಯಲ್ ರನ್ ಕೂಡ ಯಶಸ್ವಿಯಾಗಿ ನಡೆಸಲಾಗಿದೆ.

4. ವೆಚ್ಚ ಎಷ್ಟು?
ಈ ಯೋಜನೆಗೆ ಸುಮಾರು 2,519 ಕೋಟಿ ರೂ. ವೆಚ್ಚ ಮಾಡಲಾಗಿದೆ.

tunnel

5. ಲಾಭ ಏನು?
* ಈ ಸುರಂಗ ಮಾರ್ಗದಿಂದ ಜಮ್ಮು ಮತ್ತು ಶ್ರೀನಗರ ನಡುವಿನ ಸಂಚಾರದ ಸಮಯ ಕಡಿಮೆಯಾಗಲಿದ್ದು, ಪ್ರವಾಸಿಗರು ಕಣಿವೆಯನ್ನು ತಲುಪಲು ಅನುಕೂಲವಾಗಲಿದೆ.
* ಜಮ್ಮುವಿನಿಂದ ಶ್ರೀನಗರಕ್ಕಿರುವ ಪ್ರಯಾಣ ದೂರ 41 ಕಿ.ಮೀ ನಷ್ಟು ಕಡಿಮೆಯಾಗಲಿದೆ.
* ಸಂಚಾರದ ಸಮಯ ಸುಮಾರು 2 ಗಂಟೆಯಷ್ಟು ಕಡಿಮೆಯಾಗಲಿದೆ.
* ಪ್ರತಿದಿನ 27 ಲಕ್ಷ ರೂ. ಮೌಲ್ಯದ ಇಂಧನ ಉಳಿತಾಯವಾಗಲಿದೆ.
* ಮಂಜು ಹಾಗೂ ಭೂಕುಸಿತದಿಂದ ಚಳಿಗಾಲದ ಬಹುತೇಕ ಸಮಯ ಜಮ್ಮು ಕಾಶ್ಮೀರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿತ್ತು. ಆದ್ರೆ ಇನ್ಮುಂದೆ ಸುರಂಗ ಮಾರ್ಗದಲ್ಲಿ ಎಲ್ಲಾ ಹವಾಮಾನಗಳಲ್ಲೂ ಸಂಚರಿಸಬಹುದಾಗಿದ್ದು, ಕಣಿವೆಯಲ್ಲಿ ವಾಣಿಜ್ಯೋದ್ಯಮಕ್ಕೆ ಉತ್ತೇಜನ ಸಿಗಲಿದೆ.

tunnel 6

6. ವಿಶೇಷತೆ ಏನು?
ಪ್ರಬಲ ಭೂಕಂಪ ವಲಯದಲ್ಲಿ ಸುರಂಗ ನಿರ್ಮಾಣ ಮಾಡಿರುವುದೇ ಒಂದು ಅದ್ಭುತ. ಭಾರತದಲ್ಲೇ ಮೊದಲ ಬಾರಿಗೆ ಈ ಸುರಂಗದಲ್ಲಿ ಅಂತರಾಷ್ಟ್ರೀಯ ದರ್ಜೆಯ ಇಂಟಿಗ್ರೇಟೆಡ್ ಟನಲ್ ಕಂಟ್ರೋಲ್ ಸಿಸ್ಟಮ್ ಅಳವಡಿಸಲಾಗಿದೆ. ಇದರ ಸಹಾಯದಿಂದ ಗಾಳಿ, ಅಗ್ನಿ ನಿಯಂತ್ರಣ, ಸಿಗ್ನಲ್‍ಗಳು, ಸಂವಹನ ಹಾಗೂ ವಿದ್ಯುತ್ ವ್ಯವಸ್ಥೆ ಸ್ವಯಂಚಾಲಿತವಾಗಿ ಕಾರ್ಯ ನಿರ್ವಹಿಸುತ್ತವೆ. 75 ಮೀಟರ್ ಅಂತರದಲ್ಲಿ ಒಂದರಂತೆ ಒಟ್ಟು 124 ಸಿಸಿಟಿವಿಗಳನ್ನ ಅಳವಡಿಲಾಗಿದೆ. ಎಲ್ಲಾ ಹವಾಮಾನದಲ್ಲೂ ಕಣಿವೆಗೆ ಹೋಗಲು ಈ ರಸ್ತೆ ಸಮರ್ಪಕವಾಗಿರಲಿದೆ.

tunnel 2

7. ಟೋಲ್ ಶುಲ್ಕ ಎಷ್ಟು?
* ಲೈಟ್ ಮೋಟಾರ್ ವಾಹನಗಳಿಗೆ ಒಂದು ಕಡೆಗೆ ಹೋಗಲು 55 ರೂ. ಕೊಡ್ಬೇಕು. ಹೋಗಿ ವಾಪಸ್ ಬರಲು 85 ರೂ., ಹಾಗೆ 1870 ರೂ. ನೀಡಿದ್ರೆ ಒಂದು ತಿಂಗಳು ಪೂರ್ತಿ ಸಂಚರಿಸಬಹುದು.
* ಮಿನಿ ಬಸ್‍ಗಳು ಒಂದು ಕಡೆಗೆ ಸಂಚರಿಸಲು 90 ರೂ., ಎರಡೂ ಕಡೆಗೆ 135 ರೂ. ಕೊಡ್ಬೇಕು.
* ದೊಡ್ಡ ಬಸ್ ಮತ್ತು ಟ್ರಕ್‍ಗಳು ಒಂದು ಕಡೆಗೆ ಸಂಚರಿಸಲು 190 ರೂ ಕೊಡಬೇಕು. ಹಾಗೂ ಎರಡೂ ಕಡೆಯ ಟೋಲ್‍ಗೆ 285 ರೂ. ಕಟ್ಟಬೇಕು.
* ಸುರಂಗದೊಳಗೆ ವಾಹನಗಳು ಗಂಟೆಗೆ 50 ಕಿ.ಮೀ ವೇಗದಲ್ಲಿ ಚಲಿಸಬೇಕು. ಲೋ ಬೀಮ್‍ನಲ್ಲಿ ಹೆಡ್‍ಲೈಟ್‍ಗಳನ್ನ ಬಳಸಬೇಕು.
* ಪೆಟ್ರೋಲ್, ಡೀಸೆಲ್ ಟ್ಯಾಂಕರ್ ಸೇರಿದಂತೆ ಬೆಂಕಿ ಹೊತ್ತಿಕೊಳ್ಳಬಹುದಾದ ವಸ್ತುಗಳನ್ನ ಹೊತ್ತೊಯ್ಯುವ ವಾಹನಗಳಿಗೆ ಸುರಂಗನೊಳಗೆ ಪ್ರವೇಶವಿಲ್ಲ.

8. ಉದ್ಘಾಟನೆ ಯಾವಾಗ?
ಏಪ್ರಿಲ್ 2ರಂದು ಪ್ರಧಾನಿ ನರೇಂದ್ರ ಮೋದಿ ಈ ಸುರಂಗ ಮಾರ್ಗವನ್ನು ಉದ್ಘಾಟನೆ ಮಾಡಲಿದ್ದಾರೆ.

9. ವಿಶ್ವದ ಅತೀ ಉದ್ದದ ರಸ್ತೆ ಸುರಂಗ ಮಾರ್ಗ ಯಾವುದು? ಎಲ್ಲಿದೆ?
ನಾರ್ವೇಯಲ್ಲಿರುವ 24.51 ಕಿ.ಮೀ ಉದ್ದದ ಲೇರ್ಡಲ್ ಸುರಂಗ ಮಾರ್ಗ ವಿಶ್ವದ ಅತೀ ಉದ್ದದ ರಸ್ತೆ ಸುರಂಗ ಮಾರ್ಗ.

TAGGED:Chenaniindiajammu kashmirlongest Road tunnel in asiamodiNashriPublic TVSrinagarಜಮ್ಮು ಕಾಶ್ಮೀರನರೇಂದ್ರ ಮೋದಿಪಬ್ಲಿಕ್ ಟಿವಿರಸ್ತೆ ಸುರಂಗ ಮಾರ್ಗಶ್ರೀನಗರ
Share This Article
Facebook Whatsapp Whatsapp Telegram

Cinema Updates

ileana 1 4
2ನೇ ಮಗುವಿನ ನಿರೀಕ್ಷೆಯಲ್ಲಿ ನಟಿ ಇಲಿಯಾನಾ
26 minutes ago
drithi puneeth rajkumar 1 1
ನ್ಯೂಯಾರ್ಕ್‌ನ ಸೆಂಟ್ರಲ್ ಪಾರ್ಕ್‌ನಲ್ಲಿ ಅಣ್ಣಾವ್ರ ಮೊಮ್ಮಕ್ಕಳು
1 hour ago
hrithik roshan prithviraj sukumaran
ಹೃತಿಕ್ ರೋಷನ್‌ಗೆ ಪೃಥ್ವಿರಾಜ್ ಸುಕುಮಾರನ್ ಆ್ಯಕ್ಷನ್ ಕಟ್?
2 hours ago
ranjani raghavan
ಗೆಳೆಯನ ಜೊತೆ ರಂಜನಿ ರಾಘವನ್ ಲಾಂಗ್ ಡ್ರೈವ್
2 hours ago

You Might Also Like

Kamal Haasan 2
Bengaluru City

ಕಮಲ ಹಾಸನ್ ಭಾವಚಿತ್ರಕ್ಕೆ ಬೆಂಕಿ ಹಚ್ಚಿದ ಇಬ್ಬರ ವಿರುದ್ಧ ಎಫ್‌ಐಆರ್

Public TV
By Public TV
11 minutes ago
Mangaluru UT Khader
Bengaluru City

ದಕ್ಷಿಣ ಕನ್ನಡದಲ್ಲಿ ಗುಡ್ಡ ಕುಸಿತ, ಪ್ರಾಣಹಾನಿ – ರಕ್ಷಣಾ ಕಾರ್ಯಕ್ಕೆ ಯು.ಟಿ ಖಾದರ್ ಸೂಚನೆ

Public TV
By Public TV
23 minutes ago
Salman Khurshid
Latest

ಆರ್ಟಿಕಲ್‌-370 ರದ್ದತಿ ಬಳಿಕ ಕಾಶ್ಮೀರ ಸಮೃದ್ಧಿ ಕಂಡಿದೆ – ಕಾಂಗ್ರೆಸ್‌ ನಾಯಕ ಸಲ್ಮಾನ್ ಖುರ್ಷಿದ್

Public TV
By Public TV
34 minutes ago
bengaluru police commissioner b dayanand
Bengaluru City

ಮಂಡ್ಯ ಬಾಲಕಿ ಸಾವು ಕೇಸ್ | ಎಚ್ಚೆತ್ತ ಬೆಂಗಳೂರು ಪೊಲೀಸರಿಂದ ಹೊಸ ಎಸ್‌ಒಪಿ ಜಾರಿ

Public TV
By Public TV
48 minutes ago
G Parameshwar
Bengaluru City

ನಾವು ಕೈಕಟ್ಟಿ ಕೂರಲ್ಲ, ದಕ್ಷಿಣ ಕನ್ನಡ ಜಿಲ್ಲೆ ಶಾಂತಿಯಿಂದಿರಬೇಕು ಅಷ್ಟೇ: ಪರಮೇಶ್ವರ್

Public TV
By Public TV
1 hour ago
mangaluru Rain Death
Dakshina Kannada

ದ.ಕನ್ನಡ | ಭಾರೀ ಮಳೆಗೆ ಗುಡ್ಡ, ಮನೆ ಕುಸಿತ – ಬಾಲಕಿ ಸೇರಿ ಇಬ್ಬರು ಸಾವು

Public TV
By Public TV
2 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?