ಹೋಳಿಯಾಟವಾಡಿ ನದಿ ಸ್ನಾನಕ್ಕೆ ಹೋದವ ಶವವಾದ

Public TV
1 Min Read
KPL HOLI DEATH 1

ಕೊಪ್ಪಳ: ಹೋಳಿ ಹಬ್ಬದಂದು ಬಣ್ಣದ ಓಕುಳಿ ಆಡಿ ನಂತರ ನದಿ ಸ್ನಾನಕ್ಕೆ ಹೋದ ಯುವಕ ಜಲಸಮಾಧಿ ಆದ ಘಟನೆ ಕೊಪ್ಪಳ ತಾಲೂಕಿನ ನೇಲಗಿಪುರ ಗ್ರಾಮದಲ್ಲಿ ಭಾನುವಾರ ನಡೆದಿದೆ.

KPL HOLI DEATH 2

25 ವರ್ಷದ ಬಸವರಾಜ್ ಮ್ಯಾಳಿ ಮೃತ ಯುವಕ. ಭಾನುವಾರದಂದು ಹೋಳಿ ಆಡಿದ ನಂತರ ಬಸವರಾಜ್ ಮತ್ತು ಆತನ ಸ್ನೇಹಿತರು ತುಂಗಭದ್ರಾ ಡ್ಯಾಂನ ಹಿನ್ನೀರಿನಲ್ಲಿ ಸ್ನಾನಕ್ಕೆಂದು ತೆರಳಿದ್ದರು. ಈ ವೇಳೆ ಬಸವರಾಜ್ ಮತ್ತು ಮಾರುತಿ ಎಂಬ ಇಬ್ಬರು ಯುವಕರು ನೀರಿನಲ್ಲಿ ಮುಳುಗಿದ್ದಾರೆ. ನದಿಯ ದಡದಲ್ಲಿದ್ದ ಮೀನುಗಾರರು ಮಾರುತಿಯನ್ನು ರಕ್ಷಣೆ ಮಾಡಿದ್ದಾರೆ. ಆದ್ರೆ ಬಸವರಾಜ್ ಮೃತಪಟ್ಟಿದ್ದಾರೆ.

KPL HOLI DEATH 3

ಬಸವರಾಜ್ ಮೃತ ದೇಹಕ್ಕಾಗಿ ಸುಮಾರು 30 ಕ್ಕೂ ಹೆಚ್ಚು ನುರಿತ ಈಜುಗಾರರು ಕಾರ್ಯಾಚರಣೆ ಮಾಡಿದ್ದರೂ ಮೃತ ದೇಹ ಇನ್ನೂ ಪತ್ತೆಯಾಗಿಲ್ಲ. ಭಾನುವಾರ ಕತ್ತಲಾದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿತ್ತು. ಇಂದು ಬೆಳಗ್ಗೆ ಪುನಃ ಕಾರ್ಯಾಚರಣೆ ಆರಂಭಗೊಂಡಿದೆ.

KPL HOLI DEATH 6

ಸಾಮಾನ್ಯವಾಗಿ ಈ ಭಾಗದ ಯುವಕರು ಹೋಳಿ ನಂತರ ಸ್ನಾನಕ್ಕೆ ನದಿಗೆ ಹೋಗುತ್ತಾರೆ. ಆದ್ರೆ ಈ ಬಾರಿ ನದಿಯಲ್ಲಿ ಹೆಚ್ಚು ಹೂಳಿರುವುದರಿಂದ ಹೊಳಿನಲ್ಲಿ ಬಸವರಾಜ ಮೃತ ದೇಹ ಸಿಕ್ಕಿ ಹಾಕಿಕೊಂಡಿರುವ ಸಾಧ್ಯತೆ ಇದೆ. ಅಳವಂಡಿ ಠಾಣಾ ಪೊಲೀಸರು ಸ್ಥಳದಲ್ಲಿ ಬೀಡು ಬಿಟ್ಟು, ಪರಶೀಲನೆ ನಡೆಸಿದ್ದಾರೆ.

 

KPL HOLI DEATH 5

KPL HOLI DEATH 4 1

 

Share This Article
Leave a Comment

Leave a Reply

Your email address will not be published. Required fields are marked *