ಕಾರವಾರ: ಆಹಾರ ಹುಡುಕಿಕೊಂಡು ಪೊಲೀಸ್ ವಸತಿ ನಿಲಯಕ್ಕೆ ಬಂದಿದ್ದ ಹಾವನ್ನ 12 ವರ್ಷದ ಬಾಲಕ ರಕ್ಷಿಸಿ ಕಾಡಿಗೆ ಬಿಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದಲ್ಲಿ ನೆಡೆದಿದೆ.
- Advertisement 2-
- Advertisement 3-
ಅಂಕೋಲದ ಪೊಲೀಸ್ ವಸತಿ ನಿಲಯಕ್ಕೆ ಆಹಾರ ಅರಸಿ ಕೇರೆ ಹಾವೊಂದು ಬಂದಿದ್ದು ಇದರಿಂದಾಗಿ ಹೆದರಿದ ಅಲ್ಲಿನ ನಿವಾಸಿಗಳು ಹಾವನ್ನ ಕೊಲ್ಲಲು ಮುಂದಾಗಿದ್ರು. ಆದ್ರೆ ಇದನ್ನು ನೋಡಿದ 12 ವರ್ಷದ ಬಾಲಕ ಗಗನ್ ಈ ಹಾವನ್ನು ತನ್ನ 10 ವರ್ಷದ ತಂಗಿ ಭೂಮಿಕಾ ಸಹಾಯ ದಿಂದ ಹಿಡಿದು ಕಾಡಿಗೆ ಬಿಟ್ಟಿದ್ದಾನೆ.
- Advertisement 4-
ಹಾವುಗಳು ಎಲ್ಲೇ ಕಂಡರೂ ಅದನ್ನು ಕೊಲ್ಲಬೇಡಿ ರಕ್ಷಿಸಿ ಅಂತ ಜನರಿಗೆ ಕಿವಿಮಾತು ಹೇಳುವ ಮಾಲಕ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾನೆ ಈ ಪೋರ.