ಏಪ್ರಿಲ್ ಆರಂಭದಲ್ಲಿಯೇ ರಾಜ್ಯದಲ್ಲಿ ಬಿಸಿಲಿನ ತಾಪ ಹೆಚ್ಚಾಗಿದೆ. ಮುಂದಿನ 3 ತಿಂಗಳು ಬಿಸಿಲಿನ ಕಾಟ ಇರಲಿದ್ದು, ಉತ್ತರ ಒಳನಾಡಿಗೆ ಉಷ್ಣಗಾಳಿಯ ಕೆಟ್ಟ ಪರಿಣಾಮ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 36 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಯಾದಗಿರಿಯಲ್ಲಿ ಗರಿಷ್ಠ ತಾಪಮಾನ 42 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.
ನಗರಗಳ ಹವಾಮಾನ ವರದಿ:
ಬೆಂಗಳೂರು: 36-22
ಮಂಗಳೂರು: 32-26
ಶಿವಮೊಗ್ಗ: 38-22
ಬೆಳಗಾವಿ: 37-23
ಮೈಸೂರು: 38-22
ಮಂಡ್ಯ: 38-22
ಮಡಿಕೇರಿ: 32-19
ರಾಮನಗರ: 38-23
ಹಾಸನ: 36-21
ಚಾಮರಾಜನಗರ: 38-22
ಚಿಕ್ಕಬಳ್ಳಾಪುರ: 37-22
ಕೋಲಾರ: 36-22
ತುಮಕೂರು: 37-22
ಉಡುಪಿ: 33-26
ಕಾರವಾರ: 33-25
ಚಿಕ್ಕಮಗಳೂರು: 35-20
ದಾವಣಗೆರೆ: 39-23
ಹುಬ್ಬಳ್ಳಿ: 39-22
ಚಿತ್ರದುರ್ಗ: 38-23
ಹಾವೇರಿ: 39-23
ಬಳ್ಳಾರಿ: 41-27
ಗದಗ: 39-24
ಕೊಪ್ಪಳ: 39-25
ರಾಯಚೂರು: 41-27
ಯಾದಗಿರಿ: 42-28
ವಿಜಯಪುರ: 39-27
ಬೀದರ್: 39-28
ಕಲಬುರಗಿ: 41-28
ಬಾಗಲಕೋಟೆ: 41-26