ಬೆಂಗಳೂರು: ನಗರದ ನಗರ್ತಪೇಟೆಯ ಎಂಜೆ ರೋಡ್ನಲ್ಲಿ ಭಾನುವಾರ ಸಂಜೆ ತನ್ನ ಮೊಬೈಲ್ ಶಾಪ್ನಲ್ಲಿ ಹನುಮಾನ್ ಚಾಲೀಸ್ ಹಾಕಿದ್ದಕ್ಕೆ ಮುಸ್ಲಿಂ ಯುವಕರ ಗುಂಪು ಗಲಾಟೆ ಮಾಡಿತ್ತು.
ಮೊಬೈಲ್ ಶಾಪ್ ಮಾಲಿಕ ಮುಕೇಶ್ ಮೇಲೆ ಮರಣಾಂತಿಕ ಹಲ್ಲೆ ಮಾಡಿದ್ರು. ಈ ಸಂಬಂಧ ಹಲಸೂರು ಗೇಟ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಪ್ರಕರಣ ಬೆನ್ನಲ್ಲೇ ಬಿಜೆಪಿ ಸಂಸದರಾದ ಪಿ.ಸಿ ಮೋಹನ್, ತೇಜಸ್ವಿ ಸೂರ್ಯ, ಶಾಸಕರಾದ ಉದಯ್ ಗರುಡಚಾರ್, ಸಿಕೆ ರಾಮಮೂರ್ತಿ ಸೇರಿದಂತೆ ಅನೇಕರು ಮೊಬೈಲ್ ಶಾಪ್ಗೆ ಭೇಟಿ ನೀಡಿದ್ದರು. ಹಲ್ಲೆಗೆ ಒಳಗಾದ ಮುಕೇಶ್ ಆರೋಗ್ಯವನ್ನು ವಿಚಾರಿಸಿದ್ರು.
- Advertisement
- Advertisement
ಬೆಂಗಳೂರು ಕೇಂದ್ರ ಡಿಸಿಪಿಗೆ ಕರೆ ಮಾಡಿದ ತೇಜಸ್ವಿ ಸೂರ್ಯ ನಾಳೆ ವೇಳೆಗೆ ಹಲ್ಲೆ ಮಾಡಿದ ಆರೋಪಿಗಳನ್ನ ಬಂಧಿಸದಿದ್ದರೆ ನಗರ್ತಪೇಟೆ ಬಂದ್ ಮಾಡೋದಾಗಿ ತೇಜಸ್ವಿ ಸೂರ್ಯ (Tejasvi Surya) ಎಚ್ಚರಿಕೆ ನೀಡಿದ್ದಾರೆ. ಆದರೆ ಮೂವರನ್ನು ಬಂಧಿಸಿರೋದಾಗಿ ಪೊಲೀಸರು ಹೇಳಿದ್ದಾರೆ. ಗಾಯಗೊಂಡಿರೋ ಮುಕೇಶ್ ಘಟನೆಯನ್ನು ವಿವರಿಸಿದ್ದಾರೆ. ಇದನ್ನೂ ಓದಿ: ಪಶ್ಚಿಮ ಬಂಗಾಳದ ನೂತನ ಡಿಜಿಪಿಯಾಗಿ ವಿವೇಕ್ ಸಹಾಯ್ ನೇಮಕ