ರಾಮೇಶ್ವರಂ ಕೆಫೆ ಸಾರ್ವಜನಿಕ ಸೇವೆಗೆ ಮುಕ್ತ – ಮಾಲೀಕರು ಹೇಳಿದ್ದೇನು?

Public TV
2 Min Read
Rameshwaram Kefe

– ಈ ಪ್ರಕರಣದಿಂದ ಹೋಟೆಲ್‌ಗೆ ಸಾವಿರಪಟ್ಟು ಸಹಾಯವಾಗಿದೆ: ದಿವ್ಯಾ ರಾಘವೇಂದ್ರ ರಾವ್

ಬೆಂಗಳೂರು: ಬಾಂಬ್‌ ಸ್ಫೋಟ ಸಂಭವಿಸಿದ ನಂತರ ಸ್ಥಗಿತಗೊಂಡಿದ್ದ ರಾಮೇಶ್ವರಂ ಕೆಫೆ ಹೋಟೆಲ್‌ ಪುನರಾರಂಭ ಆಗಿದ್ದು, ಎಂದಿನಂತೆ ಹೋಟೆಲ್‌ ಸಾರ್ವಜನಿಕರ ಸೇವೆ ಮುಕ್ತವಾಗಿದೆ. ಶನಿವಾರ ಬೆಳಗ್ಗೆ 6 ಗಂಟೆಗೆ ಆರಂಭವಾಗಲಿದ್ದು ಎಂದಿನಂತೆ ಕೆಲಸ ನಿರ್ವಹಿಸಲಿದೆ.

ಈ ಬಗ್ಗೆ ರಾಮೇಶ್ವರಂ ಕೆಫೆ ಮಾಲೀಕರಾದ ರಾಘವೇಂದ್ರ ರಾವ್ ಹಾಗೂ ದಿವ್ಯಾ ರಾಘವೇಂದ್ರ ರಾವ್ ಅವರಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಇದನ್ನೂ ಓದಿ: ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣ- ನಾಲ್ವರನ್ನು ವಶಕ್ಕೆ ಪಡೆದ NIA

ದಿವ್ಯಾ ರಾಘವೇಂದ್ರ ರಾವ್ ಮಾತನಾಡಿ, ನಮ್ಮ ಗ್ರಾಹಕರಿಗೆ, ಸರ್ಕಾರ ಹಾಗೂ ಪೋಲಿಸ್ ಇಲಾಖೆಗೆ ಧನ್ಯವಾದ ತಿಳಿಸುತ್ತೇನೆ. ಮಾರ್ಚ್ 8ರಂದು ಕೆಫೆ ಪುನರಾರಂಭಿಸಲು ಅವಕಾಶ ಕಲ್ಪಿಸಿದ ಪೋಲಿಸ್ ಇಲಾಖೆಗೆ ಧನ್ಯವಾದಗಳು. ಶನಿವಾರದಿಂದ ಎಂದಿನಂತೆ ಬೆಳಗ್ಗೆ 6 ಗಂಟೆಯಿಂದ ಹೋಟೆಲ್‌ ಸಾರ್ವಜನಿಕ ಸೇವೆಗೆ ಮುಕ್ತವಾಗಿರಲಿದೆ. ನಮ್ಮ ಈ ಯಶಸ್ಸಿನ ಹಿಂದೆ ಲಕ್ಷಾಂತರ ಜನ ಇದ್ದಾರೆ ಎಂದು ಶ್ಲಾಘಿಸಿದರು.

ಈ ತರಹ ಬಾಂಬ್‌ ಕೃತ್ಯದಿಂದ ಸಾವಿರಾರು ಪಟ್ಟು ನಮ್ಮ ಹೋಟೆಲ್‌ಗೆ ಸಹಾಯವಾಗಿದೆ. ಇನ್ಮುಂದೆ ಮೆಟಲ್‌ ಡಿಕೆಕ್ಟರ್‌, ಆರ್ಮಿ ಆಫೀಸರ್‌ಗಳ ನೇತೃತ್ವದಲ್ಲಿ ಸರ್ವೈಲೆನ್ಸ್‌ ನಡೆಯುತ್ತೆ. ರಾಮೇಶ್ವರಂ ಕೆಫೆಗೆ ಯಾರು ಏನೂ ಮಾಡೋಕೆ ಆಗಲ್ಲ ಎಂದು ಹೇಳಿದರು. ಇದನ್ನೂ ಓದಿ:  ಬಳ್ಳಾರಿ ಬಸ್‌ ನಿಲ್ದಾಣದಲ್ಲಿ ಬಾಂಬರ್ ಓಡಾಟ- NIAಯಿಂದ ಮತ್ತೆರಡು CCTV ದೃಶ್ಯ ಬಿಡುಗಡೆ

ರಾಮೇಶ್ವರಂ ಕೆಫೆ ಮಾಲೀಕ ರಾಘವೇಂದ್ರ ರಾವ್ ಮಾತನಾಡಿ, ಇವತ್ತು ನಮ್ಮ ‌ಜವಾಬ್ದಾರಿ ಮತ್ತಷ್ಟು ಹೆಚ್ಚಿದೆ. ಪ್ರತಿಯೊಬ್ಬರೂ ನಮ್ಮ ಜೊತೆ ಇದ್ದಾರೆ. 2012 ರಲ್ಲಿ ಮರಳುಗಾಡಿನಿಂದ ಆರಂಭವಾದ ಜರ್ನಿ, ಇಲ್ಲಿಗೆ ತಂದು ನಿಲ್ಲಿಸಿದೆ. ಒಬ್ಬರಿಗೊಬ್ಬರು ಕೈ ಜೋಡಿಸೋಣ. ನಿಜವಾದ ಭಾರತೀಯರು ಈ ತರಹ ಕೃತ್ಯ ಮಾಡಲ್ಲ. ನಿಮ್ಮೆಲ್ಲರ ಆರ್ಶೀವಾದ ಇಲ್ಲ ಅಂದ್ರೇ ನಾವು ಇರೋದಕ್ಕೆ ಆಗುತ್ತಿರಲಿಲ್ಲ ಎಂದು ಭಾವುಕರಾದರು.

ನಾವು ಭಾರತೀಯರು ಅನ್ನೋಕೆ ಹೆಮ್ಮೆ ಇದೆ. ನಮ್ಮ ಆತ್ಮಸಂತೃಪ್ತಿಗೆ ಕೆಲಸ ಮಾಡ್ತಾ ಇದ್ದೇವೆ. ನಮ್ಮ ಭಾರತೀಯ ಸಂಸ್ಕೃತಿಯನ್ನು ಊಟದಲ್ಲಿ ತೋರಿಸಲು ಈ ಕೆಫೆ ಆರಂಭಿಸಿದ್ದೇವೆ. ಯಾವುದೇ ಲಾಭದ ಉದ್ದೇಶಕ್ಕಾಗಿ ಅಲ್ಲ ಎಂದು ತಿಳಿಸಿದ್ದಾರೆ.

Share This Article