Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಆಗುಂಬೆ ಘಾಟ್- ಒಂದು ಬಾರಿ ಹೋದ್ರೆ ಮತ್ತೆ ಮತ್ತೆ ಸೆಳೆಯುವ ಏಕೈಕ ಸ್ಥಳ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | States | Karnataka | ಆಗುಂಬೆ ಘಾಟ್- ಒಂದು ಬಾರಿ ಹೋದ್ರೆ ಮತ್ತೆ ಮತ್ತೆ ಸೆಳೆಯುವ ಏಕೈಕ ಸ್ಥಳ

Karnataka

ಆಗುಂಬೆ ಘಾಟ್- ಒಂದು ಬಾರಿ ಹೋದ್ರೆ ಮತ್ತೆ ಮತ್ತೆ ಸೆಳೆಯುವ ಏಕೈಕ ಸ್ಥಳ

Public TV
Last updated: February 23, 2024 4:03 pm
Public TV
Share
3 Min Read
AGUMBE GHAT
SHARE

ಕರಾವಳಿಯಂತೆ ಶಿವಮೊಗ್ಗದಲ್ಲಿಯೂ ಸಾಕಷ್ಟು ಅದ್ಭುತ ಪ್ರವಾಸಿ ತಾಣಗಳಿವೆ. ಅವುಗಳಲ್ಲಿ ಆಗುಂಬೆ ಘಾಟ್ ಕೂಡ ಒಂದು. ಇದು ಭಾರತದಲ್ಲಿ ಅತಿ ಹೆಚ್ಚು ಮಳೆ ಬೀಳುವ ಸ್ಥಳಗಳಲ್ಲಿ ಒಂದಾಗಿದ್ದು, ಈ ಹಿನ್ನೆಲೆಯಲ್ಲಿ ಆಗುಂಬೆಯನ್ನು ದಕ್ಷಿಣದ ಚಿರಾಪುಂಜಿ ಎಂದೂ ಕರೆಯುತ್ತಾರೆ. ಚಾರಣಪ್ರಿಯರಿಗೆ ಹೇಳಿ ಮಾಡಿಸಿದ ಜಾಗ ಈ ಆಗುಂಬೆ ಘಾಟ್. ಹೀಗಾಗಿ ಪ್ರಕೃತಿಯ ಈ ಸೌಂದರ್ಯವನ್ನು ಸವಿಯಲು ನೀವು ಈ ಸ್ಥಳಕ್ಕೆ ಭೇಟಿ ನೀಡಲೇಬೇಕು. ಈ ಸ್ಥಳಕ್ಕೆ ನೀವು ಒಂದು ಬಾರಿ ಭೇಟಿ ಕೊಟ್ಟರೆ ಮತ್ತೆ ಮತ್ತೆ ಹೋಗಬೇಕು ಎನ್ನುವ ಅದ್ಭುತ ಸ್ಥಳ ಇದಾಗಿದೆ.

ಆಗುಂಬೆ ಘಾಟ್ ಎಲ್ಲಿದೆ?: ಪಶ್ಚಿಮ ಘಟ್ಟದಲ್ಲಿರುವ ಆಗುಂಬೆ ಘಾಟ್ ಉಡುಪಿ ಜಿಲ್ಲೆ ಮತ್ತು ಶಿವಮೊಗ್ಗ ಜಿಲ್ಲೆಗಳನ್ನು ಸಂಪರ್ಕಿಸುತ್ತದೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನಲ್ಲಿ ಈ ಪ್ರವಾಸಿ ಸ್ಥಳ ಬರುತ್ತದೆ. ಇಲ್ಲಿನ ಪ್ರಕೃತಿ ಸೌಂದರ್ಯ ಎಂಥವರನ್ನೂ ಮಂತ್ರಮುಗ್ಧರನ್ನಾಗಿಸುತ್ತದೆ. ಆಗುಂಬೆಯು ಸೂರ್ಯಾಸ್ತ, ಟ್ರಕ್ಕಿಂಗ್, ಫೋಟೋಗ್ರಫಿ, ವಾತಾವರಣ, ರಾಜ ನಾಗರಹಾವಿನ ಸಂಶೋಧನಾ ಕೇಂದ್ರ ಹಾಗೂ ಔಷಧೀಯ ಸಸ್ಯಗಳಿಗೆ ಹೆಸರುವಾಸಿಯಾಗಿದೆ. ಎಲ್ಲದಕ್ಕಿಂತಲೂ ಮುಖ್ಯವಾಗಿ ಸಂಜೆಯ ವೇಳೆ ಸೂರ್ಯಾಸ್ತವಾಗುವ ದೃಶ್ಯವನ್ನು ಕಾಣಲು ಸಾವಿರಾರು ಮಂದಿ ಇಲ್ಲಿಗೆ ಆಗಮಿಸುತ್ತಾರೆ. ಮಳೆಗಾಲದಲ್ಲಿ ಕಾದು ಕುಳಿತು ಸೂರ್ಯಾಸ್ತವನ್ನು ಕಣ್ತುಂಬಿಕೊಳ್ಳುವುದೇ ಸಡಗರವಾಗಿರುತ್ತದೆ. ಹೆಚ್ಚಿನ ಪ್ರವಾಸಿಗರು ಆಗುಂಬೆಯನ್ನು ಅದರ ಕಾಡುಗಳ ಮೂಲಕ ಚಾರಣ ಮಾಡಲು ಅಥವಾ ಜಲಪಾತಗಳನ್ನು ವೀಕ್ಷಿಸಲು ಭೇಟಿ ನೀಡುತ್ತಾರೆ.

agumbe ghat photo

ತಲುಪುವುದು ಹೇಗೆ?: ಆಗುಂಬೆ ಘಾಟ್‍ಗೆ ತೆರಳಲು ವಿಮಾನದಲ್ಲಿ ಬರುವವರಾದರೆ ನೀವು ಮಂಗಳೂರು ವಿಮಾನ ನಿಲ್ದಾಣಕ್ಕೆ ಬರಬೇಕು. ನಂತರ ಅಲ್ಲಿಂದ ಬಸ್ಸಿನ ಮೂಲಕ ಸುಮಾರು 100 ಕಿ.ಮೀ ದೂರ ಸಾಗಿದರೆ ಆಗುಂಬೆ ಘಾಟ್ (Agumbe Ghat) ಸಿಗುತ್ತದೆ. ಇನ್ನು ರೈಲಿನ ಮೂಲಕ ಬರುವವರಾದರೆ ಮಂಗಳೂರು ಮತ್ತು ಶಿವಮೊಗ್ಗ ಹತ್ತಿರದ ರೈಲು ನಿಲ್ದಾಣಗಳಿವೆ. ಇದನ್ನೂ ಓದಿ: ಪ್ರಕೃತಿ ರಮಣೀಯ ನರಹರಿ ಪರ್ವತದ ಸೌಂದರ್ಯ ಸವಿಯಲು ನೀವೂ ಭೇಟಿ ಕೊಡಿ

ಭೇಟಿ ನೀಡಬೇಕಾದ ಪ್ರಮುಖ ಸ್ಥಳಗಳು: ಆಗುಂಬೆಯು ಕರ್ನಾಟಕದ ಒಂದು ಗಿರಿಧಾಮವಾಗಿದ್ದು, ಇದು ಹಚ್ಚ ಹಸಿರಿನ ಜೊತೆಗೆ ಬೆರಗುಗೊಳಿಸುವ ಸೂರ್ಯಾಸ್ತಗಳಿಗೆ ಹೆಸರುವಾಸಿಯಾಗಿದೆ. ವಾರಾಂತ್ಯದಲ್ಲಿ ಸ್ನೇಹಿತರು ಅಥವಾ ಕುಟುಂಬದೊಂದಿಗೆ ವಿಹಾರಕ್ಕೆ ಭೇಟಿ ನೀಡಲು ಇದು ಸೂಕ್ತ ಸ್ಥಳವಾಗಿದೆ. ಆಗುಂಬೆಯ ಜೊತೆಗೆ, ನೀವು ಭೇಟಿ ನೀಡಬಹುದಾದ ಕುಂದಾದ್ರಿ ಬೆಟ್ಟಗಳು, ಶೃಂಗೇರಿ ಮತ್ತು ಕುಪ್ಪಳ್ಳಿಯಂತಹ ಅನೇಕ ಹತ್ತಿರದ ಆಕರ್ಷಣೆಗಳಿವೆ. ಈ ಸ್ಥಳಗಳು ಅದ್ಭುತ ನೋಟಗಳು, ದೇವಾಲಯಗಳು, ಜಲಪಾತಗಳು, ವನ್ಯಜೀವಿಗಳು ಮತ್ತು ಸಾಹಸ ಚಟುವಟಿಕೆಗಳನ್ನು ನೀಡುತ್ತವೆ.

ಇದರ ಜೊತೆಗೆ ಗೋಪಾಲಕೃಷ್ಣ ದೇವಾಲಯ, ಸನ್ಸೆಟ್ ಪಾಯಿಂಟ್ ಗಳಿಗೆ ಭೇಟಿ ನೀಡಿದರೆ ನಿಮಗೆ ಅದ್ಭುತ ಅನುಭವ ಸಿಗುವುದರಲ್ಲಿ ಎರಡು ಮಾತಿಲ್ಲ. ಇದರ ಜೊತೆಗೆ ಒಂದಷ್ಟು ಜಲಪಾತಗಳಿಗೂ ಭೇಟಿ ಕೊಟ್ಟು ಎಂಜಾಯ್ ಮಾಡಬಹುದು. ಅವುಗಳೆಂದರೆ ಕುಂಚಿಕಲ್ ಜಲಪಾತ, ಬರ್ಕಾನ ಜಲಪಾತ, ಒನಕೆ ಅಬ್ಬಿ ಜಲಪಾತ, ಜೋಗಿಗುಂಡಿ ಹಾಗೂ ಕೂಡ್ಲು ತೀರ್ಥ ಜಲಪಾತ.

AGUMBE 222

ಇಷ್ಟು ಮಾತ್ರವಲ್ಲದೇ ಆಗುಂಬೆಯಲ್ಲಿ ನಾರಿಷ್ಮ ಪರ್ವತ ಅನ್ನುವ ಎತ್ತರದ ಶಿಖರವಿದೆ. ಕೆಲಸದ ಜಂಜಾಟದಲ್ಲಿದ್ದವರು ಮನಸ್ಸಿಗೆ ಏಕಾಂತವನ್ನು ಬಯಸುವವರು ಹಾಗೂ ವಿಶ್ರಾಂತಿ ತೆಗೆದುಕೊಳ್ಳಬೆಕೆಂಬ ಬಯಕೆ ಇರುವವರಿಗೆ ಈ ಚಾರಣವು ಬಹಳಷ್ಟು ಮುದ ನೀಡುತ್ತದೆ. ಇದು ಎತ್ತರದ ಹುಲ್ಲುಗಾವಲು ಮತ್ತು ದಟ್ಟವಾದ ಅರಣ್ಯ ಪ್ರದೇಶವನ್ನು ಹೊಂದಿದೆ. ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಒಳಗೆ ಹಲವಾರು ಬಗೆಯ ಪಕ್ಷಿಗಳು ಮತ್ತು ಇತರ ಪ್ರಾಣಿಗಳನ್ನು ನೋಡಬಹುದು.

ಸ್ವರ್ಗದ ಅನುಭವ: ನೀವು ಕಾಡಿನೊಳಗೆ ಹೋಗುತ್ತಿದ್ದಂತೆಯೇ ನಿಮಗೆ ಸ್ವರ್ಗದ ಅನುಭವಾಗುತ್ತದೆ. ಸುತ್ತಮುತ್ತಲೂ ಹಚ್ಚ ಹಸುರಿನಿಂದ ಕಂಗೊಳಿಸುವ ಮರಗಳು, ಪಕ್ಷಿಗಳ ಕೂಗು.. ಅಲ್ಲಲ್ಲಿ ಝುಳು ಝುಳು ನೀರಿನ ಶಬ್ಧ ಇವೆಲ್ಲವೂ ನಿಮ್ಮ ಮನಸ್ಸಿನ ಭಾರವನ್ನು ಇಳಿಯುವಂತೆ ಮಾಡುತ್ತವೆ. ಈ ಜಾಡು ನಿಮ್ಮನ್ನು ದಟ್ಟವಾದ ಕಾಡುಗಳ ಮೂಲಕ ಕರೆದೊಯ್ಯುತ್ತದೆ. ಹೀಗೆ ಸಾಗುವಾಗ ಕೆಲವರು ವಿವಿಧ ಸಸ್ಯ ಮತ್ತು ಪ್ರಾಣಿಗಳನ್ನು ವೀಕ್ಷಿಸಬಹುದು, ಇನ್ನೂ ಕೆಲವರು ದಾರಿಯಲ್ಲಿರುವ ಜಲಪಾತಗಳಲ್ಲಿ ಆನಂದಿಸಬಹುದು ಅಥವಾ ವಿಶ್ರಾಂತಿ ಪಡೆಯಬಹುದು.

ಕೊನೆಯದಾಗಿ ನೀವು ಸೂರ್ಯಾಸ್ತದ ಸ್ಥಳಕ್ಕೆ ಗಿರಿಧಾಮಕ್ಕೆ ಚಾರಣ ಮಾಡಬಹುದು. ನೀವು ಹೋಗುವ ಸಂದರ್ಭದಲ್ಲಿ ಮಂಜು ಕಡಿಮೆ ಇದ್ದರೆ ಅರಬ್ಬಿ ಸಮುದ್ರದ ಸುಂದರವಾದ ದೂರದ ನೋಟವನ್ನು ಸವಿಯಬಹುದು. ಇಲ್ಲಿ ವಿಶ್ರಾಂತಿಯನ್ನು ಪಡೆದುಕೊಳ್ಳಬಹುದು. ಪ್ರಶಾಂತವಾದ ವಾತಾವರಣದ ನಡುವೆ ಕುಳಿತು ಅದ್ಭುತ ನೋಟಗಳು ನಿಮ್ಮನ್ನೇ ನೀವು ಮರೆಯುಂತೆ ಮಾಡುತ್ತದೆ.

agumbe ghat 1

ಉತ್ತಮ ಸಮಯ: ಆಗುಂಬೆಗೆ ನೀವು ಯಾವಾಗ ಬೇಕಾದರೂ ಭೇಟಿ ಕೊಡಬಹುದು. ಯಾಕೆಂದರೆ ಈ ಸ್ಥಳ ತಂಪಾದ ವಾತಾವರಣವನ್ನು ಹೊಂದಿದೆ. ಮಳೆಗಾಲ ಮತ್ತು ಚಳಿಗಾಲವು ಆಗುಂಬೆಗೆ ಭೇಟಿ ನೀಡಲು ಉತ್ತಮ ತಿಂಗಳುಗಳಾಗಿವೆ. ಈ ಸಮಯದಲ್ಲಿ ಪ್ರಕೃತಿ ವಿಸ್ಮಯವನ್ನು ನೀವು ಆನಂದಿಸಬಹುದು. ಅಕ್ಟೋಬರ್‍ನಿಂದ ಫೆಬ್ರವರಿ ನಡುವೆ ಯಾವಾಗ ಬೇಕಾದರೂ ಭೇಟಿ ನೀಡಬಹುದು, ಇದು ಸರಾಸರಿ ಮಾನ್ಸೂನ್ ಋತುವಾಗಿದೆ, ಇದು ಸೌಮ್ಯವಾದ ಮತ್ತು ಶುಷ್ಕ ಋತುವಾಗಿದ್ದು, ಪಾದಯಾತ್ರೆಗೆ ಸೂಕ್ತವಾಗಿದೆ.

TAGGED:Agumbe GhatTourist placetrekking placeಆಗುಂಬೆಆಗುಂಬೆ ಘಾಟ್ಚಾರಣ ಸ್ಥಳಪ್ರವಾಸಿ ತಾಣ
Share This Article
Facebook Whatsapp Whatsapp Telegram

Cinema news

Dileep Chinmayi Sripada
ಲೈಂಗಿಕ ದೌರ್ಜನ್ಯ ಕೇಸ್ ಮಲಯಾಳಂ ನಟ ಖುಲಾಸೆ : ಗಾಯಕಿ ಚಿನ್ಮಯಿ ವಿಡಂಬನೆ
Cinema Latest Top Stories
Suri Annas Nee Nanna Devi song release 2
ಸೂರಿ ಅಣ್ಣನ ನೀ ನನ್ನ ದೇವತೆ ಸಾಂಗ್ ರಿಲೀಸ್
Cinema Latest Sandalwood
Alpha Movie
ಟೀಸರ್‌ನಲ್ಲಿ ಕುತೂಹಲ ಹೆಚ್ಚಿಸಿದ ಹೇಮಂತ್ ನಟನೆಯ ʻಆಲ್ಫಾʼ
Cinema Latest Sandalwood Top Stories
javara movie
ದುನಿಯಾ ವಿಜಯ್ ಮಗಳ ಹೊಸ ಚಿತ್ರಕ್ಕೆ ಮುಹೂರ್ತ: ರಿಷಿ ನಾಯಕ
Cinema Latest Sandalwood Top Stories

You Might Also Like

Starlink
Latest

ಭಾರತಕ್ಕೆ ಬಂತು ಸ್ಟಾರ್‌ಲಿಂಕ್‌ ಇಂಟರ್‌ನೆಟ್‌ – ತಿಂಗಳಿಗೆ 8,600 ರೂ. ಪ್ಯಾಕ್‌ ಬಿಡುಗಡೆ

Public TV
By Public TV
7 minutes ago
PM Modi 1
Latest

ರಾಷ್ಟ್ರವನ್ನು ಒಗ್ಗೂಡಿಸಿದ್ದರಿಂದ ಜನರು ವಂದೇ ಮಾತರಂಗೆ ಋಣಿಯಾಗಿರಬೇಕು: ಮೋದಿ

Public TV
By Public TV
12 minutes ago
Suryakumar Yadav
Cricket

ಸಾಕಷ್ಟು ಅವಕಾಶ ಕೊಟ್ಟಿದ್ದೇವೆ, ಯಾವ್ದೇ ಕ್ರಮಾಂಕದಲ್ಲೂ ಬ್ಯಾಟಿಂಗ್‌ ಮಾಡೋಕೆ ರೆಡಿ ಇರ್ಬೇಕು: ಸಂಜು ಬಗ್ಗೆ ಸೂರ್ಯ ಮಾತು

Public TV
By Public TV
32 minutes ago
Basavaraj Horatti Nagaraj Yadav
Belgaum

ಸಭಾಪತಿ ಹೊರಟ್ಟಿ ವಿರುದ್ಧ ನಾಗರಾಜ್ ಯಾದವ್ ನೇಮಕಾತಿ ಅಕ್ರಮ ಆರೋಪ

Public TV
By Public TV
47 minutes ago
Puttur Mahalingeshwara Temple
Dakshina Kannada

ಸದ್ಯ ಪ್ರಸಾದ್ ಯೋಜನೆಯಡಿ ಪುತ್ತೂರು ಮಹಾಲಿಂಗೇಶ್ವರ ದೇವಾಲಯ ಪರಿಗಣನೆಯಲ್ಲಿಲ್ಲ: ಕೇಂದ್ರ

Public TV
By Public TV
1 hour ago
IndiGo
Latest

ಇಂಡಿಗೋ ಸಮಸ್ಯೆ – 9,55,591 ಟಿಕೆಟ್‌ ರದ್ದು, 827 ಕೋಟಿ ರೂ. ರೀ ಫಂಡ್

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?