ಸಕಲೇಶಪುರದ ಗ್ರಾಮದೊಳಗೆ ಎಂಟ್ರಿ ಕೊಟ್ಟ ಗಜಪಡೆ – ಗುಂಪಿನಲ್ಲಿ ಸೇರಿಕೊಂಡ ಅರ್ಜುನನನ್ನು ಕೊಂದ ಪುಂಡಾನೆ

Public TV
1 Min Read
ELEPHANT 1

ಹಾಸನ: ಹಾಡಹಗಲೇ ಸಕಲೇಶಪುರದ (Sakleshpura) ಚಿಕ್ಕಕಲ್ಲೂರು ಗ್ರಾಮಕ್ಕೆ ಆನೆಗಳ ಹಿಂಡು (Elephant) ಲಗ್ಗೆ ಇಟ್ಟಿವೆ. ಈ ಗುಂಪಿನಲ್ಲಿ ಅರ್ಜುನನನ್ನು ತಿವಿದು ಕೊಂದಿರುವ ಪುಂಡಾನೆಯೂ ಸೇರಿಕೊಂಡಿದ್ದು ಜನರಲ್ಲಿ ಆತಂಕ ಮೂಡಿಸಿದೆ.

ಆನೆಗಳ ಗುಂಪಿನಲ್ಲಿ ನಾಲ್ಕು ಸಲಗಗಳು ಹಾಗೂ ಒಂದು ಮರಿ ಸೇರಿಕೊಂಡಿವೆ. ಆನೆಗಳು ಓಡಾಡುವ ವೀಡಿಯೋ ಮೊಬೈಲ್‍ನಲ್ಲಿ ಸೆರೆಯಾಗಿದ್ದು, ಈ ಗುಂಪಿನಲ್ಲಿ ಅರ್ಜುನನ್ನು ಕೊಂದಿರುವ ಆನೆ ಸೇರಿಕೊಂಡಿರುವುದನ್ನು ಅರಣ್ಯ ಇಲಾಖೆಯ (Forest Department) ಆರ್‌ಆರ್‌ಟಿ ಹಾಗೂ ಇಟಿಎಫ್ ಸಿಬ್ಬಂದಿ ಗುರುತಿಸಿದ್ದಾರೆ. ಆನೆಗಳು ಈಗ ಮರಡಿಕೆರೆ ಗ್ರಾಮದ ಬಳಿ ಬೀಡುಬಿಟ್ಟಿದ್ದು, ಗ್ರಾಮಸ್ಥರಿಗೆ ಎಚ್ಚರಿಕೆಯಿಂದ ಇರುವಂತೆ ಅರಣ್ಯ ಸಿಬ್ಬಂದಿ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಅರ್ಜುನನ ಸಾವಿನ ರಹಸ್ಯ ಬಿಚ್ಚಿಟ್ಟ ಮಾವುತನ ಬಾಮೈದಾ- ಮತ್ತೊಂದು ಆಡಿಯೋ ವೈರಲ್

ಕಾಡಾನೆಗಳಿಂದ ಯಸಳೂರು, ಚಿಕ್ಕಕಲ್ಲೂರು, ಮರಡಿಕೆರೆ ಗ್ರಾಮಸ್ಥರು ಆತಂಕಗೊಂಡಿದ್ದು, ಜೀವ ಭಯದಿಂದ ಕಾಫಿ ತೋಟದ ಕೆಲಸಕ್ಕೆ ಹೋಗಲು ಕಾರ್ಮಿಕರು ಹಿಂದೇಟು ಹಾಕುತ್ತಿದ್ದಾರೆ. ವಾಹನ ಸವಾರರು ಜೀವಭಯದಲ್ಲಿ ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದನ್ನೂ ಓದಿ: ಅರ್ಜುನನನ್ನು ಕಳೆದುಕೊಂಡಿದ್ದು ಮಗನನ್ನೇ ಕಳೆದುಕೊಂಡಂತಾಗಿದೆ: ಮಾವುತನ ಕಣ್ಣೀರು

Share This Article