ರಾಜ್ಯದ ಮೇಲೆ ವರುಣ ಮತ್ತೆ ಕೃಪೆ ತೋರಿದ್ದಾನೆ. ಇಂದಿನಿಂದ ರಾಜ್ಯದ ಹಲವು ಭಾಗಗಳಲ್ಲಿ ಅ.24ರ ವರೆಗೆ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ರಾಜ್ಯದ ಸುಮಾರು 14ಕ್ಕೂ ಅಧಿಕ ಜಿಲ್ಲೆಗಳಲ್ಲಿ ಮಳೆಯಾಗಲಿದೆ. ಕೊಡಗು, ವಿರಾಜಪೇಟೆ, ಹಾಗೂ ಮೈಸೂರಿನಲ್ಲಿ ಹೆಚ್ಚಿನ ಪ್ರಮಾಣದ ಮಳೆಯಾಗಲಿದೆ. ಇದರಿಂದಾಗಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಕರಾವಳಿ ಭಾಗಗಳಾದ ದಕ್ಷಿಣ ಕನ್ನಡ, ಉಡುಪಿ, ಯಲ್ಲಾಪುರ, ಕದ್ರಾ, ಗೋಕರ್ಣ, ಉತ್ತರ ಕನ್ನಡ, ಮಂಗಳೂರು ವಿಮಾನ ನಿಲ್ದಾಣ, ಪಣಂಬೂರು, ಮಾಣಿ, ಬೆಳ್ತಂಗಡಿ, ಧರ್ಮಸ್ಥಳ, ಕೋಟ, ಕೊಲ್ಲೂರು, ಕಡೂರು, ತರೀಕೆರೆ ಸೇರಿದಂತೆ ಮಲೆನಾಡಿನ ಭಾಗಗಳಾದ ಶಿವಮೊಗ್ಗ, ಶೃಂಗೇರಿಯಲ್ಲೂ ಮಳೆಯಾಗುವ ಸಾಧ್ಯತೆ ಇದೆ.
ಬೆಳಗಾವಿ, ಧಾರವಾಡ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಹಾಸನ, ಮಂಡ್ಯ, ಟಿ ನರಸೀಪುರ, ಹುಣಸೂರು, ಅರಕಲಗೂಡು, ಬೆಳ್ಳೂರು ಮತ್ತು ಕುಣಿಗಲ್ ಭಾಗಗಳಲ್ಲೂ ಮಳೆಯಾಗಲಿದೆ. ಬೆಂಗಳೂರಿನಲ್ಲಿ ಮಧ್ಯಾಹ್ನದ ವೇಳೆಗೆ ಮಳೆ ಬೀಳಲಿದೆ ಎಂದು ಇಲಾಖೆ ವರದಿ ಮಾಡಿದೆ.
ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 31 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 19 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ 17 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ.
ನಗರಗಳ ಹವಾಮಾನ ವರದಿ:
ಬೆಂಗಳೂರು: 31-19
ಮಂಗಳೂರು: 31-26
ಶಿವಮೊಗ್ಗ: 33-22
ಬೆಳಗಾವಿ: 32-21
ಮೈಸೂರು: 31-20
ಮಂಡ್ಯ: 32-20
ಮಡಿಕೇರಿ: 27-17
ರಾಮನಗರ: 32-20
ಹಾಸನ: 30-19
ಚಾಮರಾಜನಗರ: 31-19
ಚಿಕ್ಕಬಳ್ಳಾಪುರ: 32-19
ಕೋಲಾರ: 30-19
ತುಮಕೂರು: 32-20
ಉಡುಪಿ: 32-25
ಕಾರವಾರ: 32-26
ಚಿಕ್ಕಮಗಳೂರು: 29-18
ದಾವಣಗೆರೆ: 34-22
ಹುಬ್ಬಳ್ಳಿ: 34-22
ಚಿತ್ರದುರ್ಗ: 33-21
ಹಾವೇರಿ: 34-22
ಬಳ್ಳಾರಿ: 36-24
ಗದಗ: 34-22
ಕೊಪ್ಪಳ: 36-23
ರಾಯಚೂರು: 35-23
ಯಾದಗಿರಿ: 35-23
ವಿಜಯಪುರ: 35-23
ಬೀದರ್: 32-21
ಕಲಬುರಗಿ: 34-22
ಬಾಗಲಕೋಟೆ: 36-23
Web Stories