Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Bengaluru City

ಬಿಎಸ್‌ವೈ ಸಿಎಂ ಆಗಿದ್ದಾಗ ಅಡುಗೆಯವರಿಂದ ಡ್ರೈವರ್‌ವರೆಗೂ ಲಿಂಗಾಯತರೇ ಇದ್ದರು: ಬೇಳೂರು ಗೋಪಾಲಕೃಷ್ಣ

Public TV
Last updated: October 2, 2023 5:12 pm
Public TV
Share
3 Min Read
Belur Gopalakrishna
SHARE

ಬೆಂಗಳೂರು: ಯಡಿಯೂರಪ್ಪ (BS Yediyurappa) ಸಿಎಂ ಆಗಿದ್ದಾಗ ಅಡುಗೆಯವರಿಂದ ಹಿಡಿದುಕೊಂಡು ಕಾರ್ ಡ್ರೈವರ್‌ವರೆಗೂ ಲಿಂಗಾಯತರನ್ನೆ (Lingayats) ಇಟ್ಟುಕೊಂಡಿದ್ದರು. ಯಡಿಯೂರಪ್ಪಗೆ ನಾಚಿಕೆ ಮಾನ ಮರ್ಯಾದೆ ಇದೆಯಾ ಎಂದು ಯಡಿಯೂರಪ್ಪ ವಿರುದ್ಧ ಏಕವಚನದಲ್ಲಿ ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ (Belur Gopalakrishna) ವಾಗ್ದಾಳಿ ನಡೆಸಿದ್ದಾರೆ.

ಲಿಂಗಾಯತ ಅಧಿಕಾರಿಗಳಿಗೆ ಈ ಸರ್ಕಾರದಲ್ಲಿ ಅನ್ಯಾಯ ಆಗುತ್ತಿದೆ ಎಂಬ ಶಾಮನೂರು (Shamanur Shivashankarappa) ಹೇಳಿಕೆಗೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಸಿಎಂ ಅವರು ಆದ್ಯತೆ ಮೇರೆಗೆ ಅಧಿಕಾರಿಗಳ ವರ್ಗಾವಣೆ ಮಾಡುತ್ತಾರೆ. ಜಾತಿ ಆಧಾರದಲ್ಲಿ ಅಧಿಕಾರಿಗಳನ್ನು ನೇಮಕಾತಿ ಮಾಡೋದಿಲ್ಲ. ಏನು ಲಿಂಗಾಯತ ಜಾತಿಯವರು ಒಬ್ಬರೇ ಇರ್ತಾರಾ? ಎಲ್ಲಾ ಜಾತಿಯವರು ಇರೋದಿಲ್ವಾ? ಎಲ್ಲಾ ಜಾತಿಗೂ ಕೊಡಬೇಕಾಗುತ್ತದೆ. ಶಾಮನೂರು ಎಲ್ಲಾ ಜಾತಿಯವರ ಪರ ಮಾತನಾಡಬೇಕಿತ್ತು. ಇಲ್ಲ ಅಂದರೆ ನಮ್ಮ ಜಾತಿಯನ್ನು ಕಡೆಗಣಿಸುತ್ತಿದ್ದಾರೆ ಅಂತ ನಾವು ಹೇಳಬೇಕಾಗುತ್ತದೆ ಎಂದು ಶಾಮನೂರು ವಿರುದ್ಧ ಕಿಡಿಕಾರಿದರು. ಇದನ್ನೂ ಓದಿ:‌ ಈ ಬಾರಿ ಖರ್ಗೆ ಬದಲಾಗಿ ರಾಧಾಕೃಷ್ಣಗೆ ಕಲಬುರಗಿ ಎಂಪಿ ಟಿಕೆಟ್: ಚಿಂಚನಸೂರು

ಶಾಮನೂರು ಹಿರಿತನಕ್ಕೆ ಗೌರವ ಕೊಡಬೇಕು. ಹೀಗೆ ಹೇಳಿಕೆ ಕೊಡೋದು ತಪ್ಪು. ಅದಕ್ಕೆ ಯಡಿಯೂರಪ್ಪ ಅವರು ಸಾಥ್ ಕೊಡುತ್ತೇನೆ ಎನ್ನುತ್ತಾರೆ. ಯಡಿಯೂರಪ್ಪ ಅಡುಗೆಯವರಿಂದ ಹಿಡಿದು ಡ್ರೈವರ್, ಕ್ಲೀನರ್‌ವರೆಗೂ ಲಿಂಗಾಯತರನ್ನು ಇಟ್ಟುಕೊಂಡಿದ್ದರು. ಯಡಿಯೂರಪ್ಪ ಶಾಮನೂರು ಮಾತಿಗೆ ಸಾಥ್ ಕೊಡ್ತೀನಿ ಅಂತಾರೆ. ಯಡಿಯೂರಪ್ಪಗೆ ಮಾನ ಮರ್ಯಾದೆ ಇದೆಯಾ? ಅವರು ಯಾವ ಜಾತಿಯವರನ್ನು ಇಟ್ಟುಕೊಂಡಿದ್ರು ಕೇಳಿ ಮೊದಲು ಎಂದು ಏಕವಚನದಲ್ಲಿ ಮಾತನಾಡಿದರು. ಇದನ್ನೂ ಓದಿ: ಕೆಲವರಿಗೆ ಹುಚ್ಚು ಹಿಡಿದು ಸಿಎಂ ಸ್ಥಾನದ ಬಗ್ಗೆ ಮಾತಾಡ್ತಾರೆ: ಕೊತ್ತೂರು ಮಂಜುನಾಥ್

ಯಡಿಯೂರಪ್ಪನ ಆಫೀಸ್‌ನಲ್ಲಿ ಪೂರ್ತಿ ಲಿಂಗಾಯತರು ಇದ್ದರು. ಶಾಮನೂರು ಅವರು ಹಿರಿಯರು. ಸಿಎಂ ಅವರು ಯಾರಿಗೆ ನೇಮಕ ಮಾಡಬೇಕು ಎಂದು ನಿರ್ಧಾರ ಮಾಡುತ್ತಾರೆ. ಸಿಎಂ ಆದ ಮೇಲೆ ಸಿದ್ದರಾಮಯ್ಯ ಕುರುಬರ ಅಧಿಕಾರಿಗಳನ್ನು ಸ್ವಲ್ಪ ತಮ್ಮ ಸುತ್ತಮುತ್ತು ಮಾಡಿಕೊಂಡು ಇರುತ್ತಾರೆ. ಇಲ್ಲ ಅನ್ನೋಕೆ ಆಗಲ್ಲ. ಯಡಿಯೂರಪ್ಪ ಯಾರನ್ನು ಮಾಡಿದ್ರು ನೋಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಧರ್ಮ ಇಲ್ಲ ಎಂದು ಹೇಳುವವರನ್ನ ಗಲ್ಲಿಗೇರಿಸಬೇಕು – ಶಾಸಕ ಕೊತ್ತೂರು ಮಂಜುನಾಥ್

ಶಾಮನೂರು ಹಾಗೆ ಮಾತನಾಡಬಾರದು. ರಾಜ್ಯದ ಮುಖ್ಯಮಂತ್ರಿಗಳು ಏನು ಬೇಕೋ ಅದನ್ನು ಮಾಡುತ್ತಾರೆ. ನಮಗೆ ಬೇಜಾರು ಆಗಿದ್ದು ಯಡಿಯೂರಪ್ಪ ಸಾಥ್ ಅಂದಿದ್ದು. ತಮ್ಮ ಇಡೀ ಆಡಳಿತದಲ್ಲಿ ಲಿಂಗಾಯತರನ್ನ ಇಟ್ಟುಕೊಂಡು ಆಡಳಿತ ಮಾಡಿದ್ದು ಯಡಿಯೂರಪ್ಪ. ಈಗ ಶಾಮನೂರು ಹೇಳಿಕೆಗೆ ಸಾಥ್ ಕೊಡುತ್ತೇನೆ ಅಂದರೆ ಯಡಿಯೂರಪ್ಪಗೆ ನಾಚಿಕೆ ಆಗಬೇಕು. ಲಿಂಗಾಯತರೇ ಇರೋದಾ ಈ ರಾಜ್ಯದಲ್ಲಿ? ಬೇರೆಯವರು ಇಲ್ವಾ? ಎಲ್ಲಾ ಜಾತಿಯವರಿಗೂ ಅವಕಾಶ ಕೊಡಬೇಕು. ಎಲ್ಲಾ ಜಾತಿ ಓಟು ಕೊಟ್ಟು 135 ಸ್ಥಾನ ಬಂದಿದೆ. ಕುರುಬ, ಒಕ್ಕಲಿಗ, ಈಡಿಗ ಎಲ್ಲರಿಗೂ ಅವಕಾಶ ಕೊಡಲಿ. ಶಾಮನೂರು ಮಗನಿಗೆ ಅಧಿಕಾರ ಕೊಟ್ಟಿದ್ದಾರೆ. ಯಾಕೆ ಅವರು ಹಾಗೆ ಮಾತನಾಡುತ್ತಾರೋ ಗೊತ್ತಿಲ್ಲ. ರಾಜ್ಯದ ಸಿಎಂ, ಡಿಸಿಎಂ ಯಾರಿಗೆ ಅಧಿಕಾರ ಕೊಡಬೇಕು ಅಂತ ತೀರ್ಮಾನ ಮಾಡುತ್ತಾರೆ. ಇವರು ಹೀಗೆ ಮಾತನಾಡುವುದು ಸರಿಯಲ್ಲ ಎಂದು ಹರಿಹಾಯ್ದರು. ಇದನ್ನೂ ಓದಿ: ಸೌಹಾರ್ದಯುತ ಈದ್ ಮಿಲಾದ್ ಹಬ್ಬದಂದೇ ಕಿಡಿಗೇಡಿಗಳು ಶಾಂತಿ ಭಂಗಕ್ಕೆ ಯತ್ನಿಸಿದ್ದಾರೆ: ಉಮೇಶ್ ಜಾಧವ್

ಇನ್ನು 6 ತಿಂಗಳು ಸರ್ಕಾರ ಇರಲ್ಲ ಎಂಬ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಧಮ್ ಇದ್ರೆ ತಾಕತ್ ಇದ್ದರೆ ನಮ್ಮ ಪಕ್ಷಕ್ಕೆ ಕೈ ಹಾಕಲಿ ನೋಡೋಣ. ಸರ್ಕಾರ ಬೀಳುತ್ತೆ ಅನ್ನೋದು ಹಗಲುಗನಸು ಕಾಣಬೇಕು. ಹೆಚ್‌ಡಿಕೆ ಇರಬಹುದು, ಯೋಗೇಶ್ವರ್ ಇರಬಹುದು. ಹಿಂದೆ 16 ಜನ ಎತ್ತುಕೊಂಡು ಹೋದ್ರಲ್ಲ. ಆ ತಾಕತ್ತು, ಆ ಧಮ್ಮು ನಮ್ಮ ಸಿಎಂ, ಡಿಸಿಎಂಗೆ ಇದೆ. ಅದನ್ನು ತಡೆಯೋಕೆ ಅವಕಾಶ ಇದೆ. ಧಮ್ ಇದ್ದರೆ ತಾಕತ್ ಇದ್ದರೆ ಕೈ ಹಾಕಲಿ ನೋಡೋಣ. ಆಗ ಏನು ಮಾಡಬೇಕು ಅಂತ ನಮಗೆ ಗೊತ್ತಿದೆ ಎಂದು ಸವಾಲ್ ಹಾಕಿದರು. ಇದನ್ನೂ ಓದಿ: ಕರ್ನಾಟಕ ಮತ್ತೊಂದು ಬಿಹಾರ ಆಗ್ತಿದೆ ಅನಿಸುತ್ತಿದೆ: ಆರ್. ಅಶೋಕ್

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]


follow icon

TAGGED:Belur GopalakrishnabengaluruBS YediyurappacongressLingayatsshamanur shivashankarappaಕಾಂಗ್ರೆಸ್ಬಿಎಸ್ ಯಡಿಯೂರಪ್ಪಬೆಂಗಳೂರುಬೇಳೂರು ಗೋಪಾಲಕೃಷ್ಣಲಿಂಗಾಯತರುಶಾಮನೂರು ಶಿವಶಂಕರಪ್ಪ
Share This Article
Facebook Whatsapp Whatsapp Telegram

Cinema News

Santhosh balaraj 1
ಸ್ಯಾಂಡಲ್‌ವುಡ್‌ನ ಯುವ ನಟ ಸಂತೋಷ್ ಬಾಲರಾಜ್ ನಿಧನ
Cinema Latest Sandalwood Top Stories
Ramya Prajwal Devaraj
ರಮ್ಯಾಗೆ ಅಶ್ಲೀಲ ಮೆಸೇಜ್ ಕೇಸ್: ಪ್ರಜ್ವಲ್ ಕಿಡಿ
Cinema Latest Sandalwood Top Stories
Ramya Case 2 arrested by ccb police
ನಟಿ ರಮ್ಯಾಗೆ ಅಶ್ಲೀಲ ಕಾಮೆಂಟ್ – ಸಿಸಿಬಿ ಪೊಲೀಸರಿಂದ ಇನ್ನಿಬ್ಬರು ಅರೆಸ್ಟ್
Cinema Latest Sandalwood Top Stories
Kantara 2 1
ಕಾಂತಾರದಲ್ಲಿ ಕಾಣಿಸಲಿದ್ದಾರೆ ಸೂಪರ್‌ಸ್ಟಾರ್!
Cinema Latest
Coolie 2
ಸೂಪರ್‌ಸ್ಟಾರ್ ರಜನಿಕಾಂತ್ ಕೂಲಿಗೆ ಭಾರಿ ಡಿಮ್ಯಾಂಡ್
Bollywood Cinema Latest South cinema Top Stories

You Might Also Like

Modi 2
Latest

ʻಜೈ ಶ್ರೀರಾಮ್‌, ಹರಹರ ಮಹದೇವ್ʼ ಘೋಷಣೆ ನಡುವೆ ಪ್ರಧಾನಿ ಮೋದಿಗೆ ಸನ್ಮಾನ

Public TV
By Public TV
4 minutes ago
Spying
Crime

ಪಾಕ್ ಪರ ಬೇಹುಗಾರಿಕೆ – ಮತ್ತೊಬ್ಬ ಶಂಕಿತನ ಬಂಧನ

Public TV
By Public TV
6 minutes ago
Gurmeet Ram Rahim singh
Court

ರೇಪ್‌ ಅಪರಾಧಿ ರಾಮ್ ರಹೀಮ್‌ಗೆ 14ನೇ ಪೆರೋಲ್ – 3 ತಿಂಗಳ ಬಳಿಕ ಮತ್ತೆ 40 ದಿನ ರಜೆ!

Public TV
By Public TV
25 minutes ago
Ramalinga Reddy
Bengaluru City

ಸಾರಿಗೆ ಮುಷ್ಕರ | ಬಿಜೆಪಿ ಸರ್ಕಾರ 2023ರಲ್ಲೇ ವೇತನ ಪರಿಷ್ಕರಣೆ ಮಾಡಿ ಆದೇಶ ಹೊರಡಿಸಿದೆ: ರಾಮಲಿಂಗ ರೆಡ್ಡಿ

Public TV
By Public TV
30 minutes ago
Namma Metro
Bengaluru City

ಸಾರಿಗೆ ನೌಕರರ ಮುಷ್ಕರದ ಎಫೆಕ್ಟ್ – ನಮ್ಮ ಮೆಟ್ರೋಗೆ ಜನವೋ ಜನ

Public TV
By Public TV
1 hour ago
narendra modi trump
Latest

ಭಾರತದಿಂದ ಖರೀದಿಸುವ ಎಲ್ಲ ಸರಕುಗಳಿಗೂ ಸುಂಕ – ಭಾರತ ಕೌಂಟರ್‌ಗೆ ಟ್ರಂಪ್‌ ಬಿಗ್‌ ವಾರ್ನಿಂಗ್‌

Public TV
By Public TV
1 hour ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?