ಸ್ವಾತಂತ್ರ್ಯೋತ್ಸವ ದಿನ ಸಾವರ್ಕರ್‌ಗೆ ಜೈಘೋಷ – ಕ್ಷಮೆ ಕೇಳಿದ ಮುಖ್ಯ ಶಿಕ್ಷಕಿ

Public TV
1 Min Read
Jai Veer Savarkar Chants By Dakshina kannada bantwal Students Irk Parents School Teacher Apologies

ಮಂಗಳೂರು: ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಬಂಟ್ವಾಳದ ಮಂಚಿ ಸರ್ಕಾರಿ ಶಾಲೆಯಲ್ಲಿ (Government School) ಸ್ವಾತಂತ್ರ್ಯೋತ್ಸವದ ದಿನ (Independence Day) ಮಕ್ಕಳಿಂದ ವೀರ ಸಾವರ್ಕರ್‌ಗೆ (Veer Savarkar) ಜೈಘೋಷ ಹಾಕಿಸಿದ್ದು ಇದೀಗ ಭಾರೀ ವಿವಾದಕ್ಕೆ ಕಾರಣವಾಗಿದೆ.

ಅಂದು ಶಾಲಾ ಸ್ವಾತಂತ್ರ್ಯ ಕಾರ್ಯಕ್ರಮದಲ್ಲಿ ಎಲ್ಲಾ ಸ್ವಾತಂತ್ರ್ಯ ಹೋರಾಟಗಾರರಿಗೆ ಜೈಕಾರ ಹಾಕಿಸಿದ್ದು ವೀರ ಸಾವರ್ಕರ್ ಗೂ ಜೈಕಾರ ಹಾಕಿಸಿದ್ದರು. ಈ ವೇಳೆ ಸ್ಥಳೀಯ ವ್ಯಕ್ತಿಯೋರ್ವ ವೀಡಿಯೋ ಮಾಡಿ ಮುಸ್ಲಿಂ ವಿದ್ಯಾರ್ಥಿನಿಯರಲ್ಲಿ ವೀರ ಸಾವರ್ಕರ್ ಗೆ ಜೈಕಾರ ಹಾಕಿಸಿದ್ದಾರೆಂದು ಆರೋಪಿಸಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಮಾಡಿದ್ದ. ಇದನ್ನೂ ಓದಿ: ಡಿಕೆಶಿ ರಾಜ್ಯದ ಸೂಪರ್ ಸಿಎಂ, ಸಿದ್ದರಾಮಯ್ಯರನ್ನ ಮುಗಿಸುವ ಎಲ್ಲ ಪ್ಲ್ಯಾನ್ ಮಾಡಿದ್ದಾರೆ: ಯತ್ನಾಳ್ ಬಾಂಬ್

ಈ ವಿವಾದದ ಹಿನ್ನಲೆಯಲ್ಲಿ ಶಾಲೆಯಲ್ಲಿ ಪೋಷಕರ ಹಾಗೂ ಶಿಕ್ಷಕರ ಸಭೆ ನಡೆದಿದ್ದು,ಮುಖ್ಯ ಶಿಕ್ಷಕಿಯನ್ನು(Teacher) ತರಾಟೆಗೆ ತೆಗೆದುಕೊಂಡು ಕ್ಷಮೆ ಕೇಳುವಂತೆ ಮುಸ್ಲಿಂ ವಿದ್ಯಾರ್ಥಿಗಳ ಪೋಷಕರು ಹಾಗೂ ಕೆಲ ರಾಜಕೀಯ ಮುಖಂಡರು ಆಗ್ರಹಿಸಿ ಗಲಾಟೆ ನಡೆಸಿದ್ದರು. ಕೊನೆಗೆ ಮನ ನೊಂದು ಮುಖ್ಯ ಶಿಕ್ಷಕಿ ಕ್ಷಮೆಯಾಚಿಸಿದ್ದರು.

ಶಾಲೆಯಲ್ಲಿ ಆದ ವಿಚಾರವನ್ನು ವಿಡಿಯೋ ಮಾಡಿ ವೈರಲ್ ಮಾಡಿರುವ ಬಗ್ಗೆ ಅಸಮಧಾನ ಹೊಂದಿದ್ದ ಮುಖ್ಯ ಶಿಕ್ಷಕಿ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Web Stories

Share This Article