ಬೆಂಗಳೂರು: ರಾಜ್ಯಾದ್ಯಂತ 25ಕ್ಕೂ ಹೆಚ್ಚು ಕಡೆ ಲೋಕಾಯುಕ್ತ ಪೊಲೀಸರು (Lokayukta Police) ಸರ್ಕಾರಿ ಅಧಿಕಾರಿಗಳ ಮನೆ ಮೇಲೆ ದಾಳಿ ನಡೆಸಿದ್ದು, ಬೆಂಗಳೂರಿನಲ್ಲಿ ನಾಲ್ಕು ಎಫ್ಐಆರ್ ಸಂಬಂಧ 10 ಕಡೆ ದಾಳಿ ನಡೆಸಲಾಗಿದೆ.
- Advertisement -
ಮಹದೇವಪುರ ಬಿವಿಎಂಪಿ ವಲಯದ ಆರ್ಐ ನಟರಾಜ್ರ (RI Nataraj) ಬನಶಂಕರಿಯ ಅವಲಹಳ್ಳಿಯ ಮನೆ ಮೇಲೆ ದಾಳಿ ನಡೆದಿದೆ. ಆಗಸ್ಟ್ 4 ರಂದು 79 ಫ್ಲ್ಯಾಟ್ ಖಾತೆ ಮಾಡಲು 5 ಲಕ್ಷ ಹಣ ಪಡೆಯುವಾಗ ನಟರಾಜ್ ಟ್ರ್ಯಾಪ್ ಆಗಿದ್ದ. ಖಾಸಗಿ ವ್ಯಕ್ತಿ ಪವನ್ ಮೂಲಕ ಹಣಕ್ಕೆ ಡಿಮ್ಯಾಂಡ್ ಮಾಡಿದ್ದ. ಈ ಬಗ್ಗೆ ಮಂಜುನಾಥ್ ಎಂಬವರು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಇದನ್ನೂ ಓದಿ: ಸಣ್ಣ ನೀರಾವರಿ ಇಲಾಖೆ, ಬಿಬಿಎಂಪಿ ಅಧಿಕಾರಿಗಳ ಮನೆ ಮೇಲೆ ಲೋಕಾಯುಕ್ತ ದಾಳಿ – ಅಪಾರ ಚಿನ್ನಾಭರಣ, ಹಣ ಪತ್ತೆ
- Advertisement -
- Advertisement -
ಪ್ರತಿ ಫ್ಲ್ಯಾಟ್ಗೆ 10 ಸಾವಿರದಂತೆ ಲಂಚ ಆರ್ಐ ನಟರಾಜ್ ಕೇಳಿದ್ದ ಅಲ್ಲದೆ 79 ಫ್ಲ್ಯಾಟ್ಗೆ 7 ಲಕ್ಷದ 90 ಸಾವಿರ ಲಂಚ ಕೇಳಿದ್ದ. 60 % ಹಣ ಅಡ್ವಾನ್ಸ್ ಅಂದ್ರೆ 5 ಲಕ್ಷ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದ. ಈ 5 ಲಕ್ಷ ಹಣ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಟ್ರ್ಯಾಪ್ ಆಗಿದ್ದ.
- Advertisement -
Web Stories