ಬೆಂಗಳೂರು: ದಲಿತರಿಗೆ ಅಪಮಾನ ಮಾಡಿದ ಆರೋಪವನ್ನು ನಟ ಉಪೇಂದ್ರ ಎದುರಿಸ್ತಿದ್ದಾರೆ. ಭಾರೀ ಟೀಕೆಗಳು ಕೇಳಿಬರುತ್ತಿವೆ. ಇದೇ ಹೊತ್ತಲ್ಲಿ ಸಚಿವ ಎಸ್ಎಸ್ ಮಲ್ಲಿಕಾರ್ಜುನ್ (SS Mallikarjun) ಕೂಡ ಉಪೇಂದ್ರರಂತೆಯೇ ಹೇಳಿಕೆ ಕೊಟ್ಟಿರುವ ವೀಡಿಯೋ ವೈರಲ್ ಆಗಿದೆ.
ಈ ವೀಡಿಯೋದಿಂದ ಯಾರ ಭಾವನೆಗಳಿಗೂ ಧಕ್ಕೆ ಆಗಿಲ್ವಾ. ತಾಕತ್ ಇದ್ರೆ ಕ್ರಮ ತಗೊಳಿ ಎಂದು ಪ್ರಜಾಕೀಯ ಕಾರ್ಯಕರ್ತರು ಸವಾಲ್ ಹಾಕ್ತಿದ್ದಾರೆ. ಆದ್ರೆ, ಇದು ತಿರುಚಿದ ವಿಡಿಯೋ ನಾನು ಅಂಥಾ ಹೇಳಿಕೆ ನೀಡಿಲ್ಲ ಎಂದು ತೋಟಗಾರಿಕಾ ಸಚಿವರು ಜಾರಿಕೊಂಡಿದ್ದಾರೆ.
ಆದರೆ ದಿವಾಕರ್ ಎಂಬವರು ಎಸ್ಎಸ್ ಮಲ್ಲಿಕಾರ್ಜುನ್ ಹೇಳಿಕೆ ಖಂಡಿಸಿ ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸದ್ಯ ಎನ್ಸಿಆರ್ ಹಾಕಿರುವ ಪೊಲೀಸರು ಈ ಪ್ರಕರಣವನ್ನು ವಿಧಾನಸೌಧ ಪೊಲೀಸ್ ಠಾಣೆಗೆ ವರ್ಗಾಯಿಸಲು ಸಿದ್ಧತೆ ನಡೆಸಿದ್ದಾರೆ. ಅತ್ತ ನಟ ಉಪೇಂದ್ರ (Upendra) ವಿರುದ್ಧ ಹಲಸೂರು ಗೇಟ್ ಠಾಣೆಯಲ್ಲಿ ದಾಖಲಾದ ಎರಡನೇ ಎಫ್ಐಆರ್ ಅನ್ನು ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣೆಗೆ ವರ್ಗಾಯಿಸಲು ಪೊಲೀಸರು ನಿರ್ಧರಿಸಿದ್ದಾರೆ.
Web Stories