ಪತ್ನಿ ಜೊತೆಗೂಡಿ ಗೋಕರ್ಣದಲ್ಲಿ ವಿಶೇಷ ಪೂಜೆ ಸಲ್ಲಿಸಿದ ದಿಗ್ವಿಜಯ್‌ ಸಿಂಗ್‌

Public TV
1 Min Read
Congress leader Digvijaya Singh visits Gokarna Mahabaleshwar Temple

ಕಾರವಾರ: ಮಾಜಿ ಕೇಂದ್ರ ಸಚಿವ, ಹಾಲಿ ರಾಜ್ಯಸಭಾ ಸದಸ್ಯ ದಿಗ್ವಿಜಯ್ ಸಿಂಗ್ (Digvijaya Singh) ಪತ್ನಿಯೊಂದಿಗೆ ಗೋಕರ್ಣದ ಮಹಾಬಲೇಶ್ವರ ದೇವಸ್ಥಾನಕ್ಕೆ (Gokarna Mahabaleshwar Temple) ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಶುಕ್ರವಾರ ರಾತ್ರಿ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದ ಮಹಾಬಲೇಶ್ವರ ದೇವಸ್ಥಾನಕ್ಕೆ ಪತ್ನಿ ಅಮೃತ ರೈ (Amrita Rai) ಜೊತೆ ಆಗಮಿಸಿದ ದಿಗ್ವಿಜಯ್‌ ಸಿಂಗ್‌ ಆತ್ಮಲಿಂಗಕ್ಕೆ ವಿಶೇಷ ಪೂಜೆ ಸಲ್ಲಿಸಿ ಮಾಧ್ಯಮಗಳ ಜೊತೆ ಮಾತನಾಡಿದರು. ಇದನ್ನೂ ಓದಿ: ಗೂಂಡಾ ಕಾಯ್ದೆ ಅಡಿ ಪುನೀತ್‌ ಕೆರೆಹಳ್ಳಿ ಅರೆಸ್ಟ್‌ – 1 ವರ್ಷ ಸಿಗಲ್ಲ ಜಾಮೀನು

ಮಣಿಪುರದಲ್ಲಿ (Manipura) ಮೂರು ತಿಂಗಳಿಂದ ಜನಾಂಗೀಯ ಹಿಂಸಾಚಾರ ನಡೆಯುತ್ತಿದೆ. ಈ ಬಗ್ಗೆ ಪ್ರಧಾನಿ ಮಾತನಾಡದೇ ಸುಮ್ಮನಿದ್ದಾರೆ. ಮಣಿಪುರಕ್ಕೆ ನೀವು ಹೋಗಿಲ್ಲ ಯಾಕೆ ಎಂದು ನಾವು ಪ್ರಶ್ನೆ ಕೇಳಿದ್ದೇವೆ ಎಂದು ತಿಳಿಸಿದರು.

ನಮ್ಮ ಪ್ರಶ್ನೆಗೆ ಮೋದಿ ಉತ್ತರ ನೀಡಿಲ್ಲ. ಮೋದಿಯವರು ಮಣಿಪುರಕ್ಕೆ ಸೈನ್ಯ ಕಳುಹಿಸಿ ಶಾಂತಿ ಕಾಪಾಡಲಿ ಎಂದು ಹೇಳಿದರು.


Web Stories

Share This Article