ಆತ್ಮೀಯ ಗೆಳೆಯನ ಜೊತೆಗೆ ತನ್ನ ಪತ್ನಿಯ ರಾಸಲೀಲೆ ನೋಡಿದ ಪತಿ ಮಟಾಶ್

Public TV
1 Min Read
VIJAYAPURA MURDER copy

ವಿಜಯಪುರ: ಆತ್ಮೀಯ ಗೆಳೆಯ ಮತ್ತು ತನ್ನ ಪತ್ನಿಯ ರಾಸಲೀಲೆಗೆ ಪತಿ ಬಲಿಯಾದ ಘಟನೆ ನಡೆದಿದೆ.

ವಿಜಯಪುರ (Vijayapura) ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಚಟ್ಟರಕಿ ಗ್ರಾಮದಲ್ಲಿ ಘಟನೆ ನಡೆದಿದೆ. ಆತ್ಮೀಯ ಗೆಳಯ ಅಬ್ಬಾಸ್ ಅಲಿ ಮತ್ತು ಪತ್ನಿ ರಾಜ್ಮಾಳ ರಾಸಲೀಲೆಯನ್ನ ಕಣ್ಣಾರೆ ಕಂಡ ಪತಿ ಸೈಫನ್ ಹತ್ಯೆಗೀಡಾಗಿದ್ದಾನೆ. ಇದನ್ನೂ ಓದಿ: ಕಾಣೆಯಾದ ಕವಿತಾ ಶವವಾಗಿ ಪತ್ತೆ- ಗೆಳೆಯ ಸಲೀಂನಿಂದಲೇ ಹತ್ಯೆ

police jeep 1

ಕಳೆದ ತಿಂಗಳ ವಿಧಾನಸಭೆ ಮತದಾನದ ದಿನ ಮೇ 10 ರಂದು ಸೈಫನ್ ಮನೆಯಲ್ಲಿ ಫ್ಯಾನ್ ನ ಕರೆಂಟ್ ಶಾಕ್ ನಿಂದ ಸಾವಿಗೀಡಾದ ಬಗ್ಗೆ ತಿಳಿದು ಕುಟುಂಬಸ್ಥರು ಸಹಜ ಸಾವು ಎಂದು ಸೈಫನ್ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ. ಆದರೆ ನಂತರದ ದಿನಗಳಲ್ಲಿ ಸೈಫನ್ ಸಾವಿನ ಬಗ್ಗೆ ಅನುಮಾನ ಮೂಡಿ ಸೈಫನ್ ಸಾವು ಸಹಜ ಸಾವಲ್ಲ. ಇದು ಒಂದು ಹತ್ಯೆ. ಇದಕ್ಕೆ ಅಬ್ಬಾಸ್ ಅಲಿ ಮತ್ತು ಪತ್ನಿ ರಾಜ್ಮಾನೇ ಕಾರಣ ಅಂತಾ ಆರೋಪಿಸಿ ದೇವರಹಿಪ್ಪರಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಕಾರಣ ಇದೀಗ ತಹಶೀಲ್ದಾರ್ ನೇತೃತ್ವದಲ್ಲಿ ಸೈಫನ್ ದೇಹ ಮರು ಪರೀಕ್ಷೆಗೆ ಮಣ್ಣಿನಡಿಯಿಂದ ಸೈಫನ್ ದೇಹವನ್ನ ಹೊರತಗೆಯಲಾಗಿದೆ. ಸೈಫನ್ ಸಾವಿನ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಪೊಲೀಸರ ಪಾರದರ್ಶಕ ತನಿಖೆ ನಡೆಸಿದ್ದಲ್ಲಿ ಸತ್ಯ ಹೊರಬೀಳುತ್ತಾ ಅಂತಾ ಕುಟುಂಬಸ್ಥರು ಸೇರಿದಂತೆ ಗ್ರಾಮಸ್ಥರು ಕಾದು ಕುಳಿತಿದ್ದಾರೆ.

Share This Article