ಸಿಹಿ ಹಂಚಿ ರೇಪ್ – 30 ಮಕ್ಕಳ ಮೇಲೆ ಅತ್ಯಾಚಾರಗೈದವ ಕೊನೆಗೂ ದೋಷಿಯಾದ

Public TV
1 Min Read
Court

ನವದೆಹಲಿ: ಮಕ್ಕಳ ಮೇಲೆ ಅತ್ಯಾಚಾರ (Rape) ಎಸಗಿ ಬಳಿಕ ಹತ್ಯೆಗೈಯುತ್ತಿದ್ದ ಆರೋಪಿ ರವೀಂದರ್ ಕುಮಾರ್‌ನನ್ನು ದೆಹಲಿಯ (Delhi) ರೋಹಿಣಿ ನ್ಯಾಯಾಲಯವು (Rohini Court) ಶನಿವಾರ ಅಪರಾಧಿ ಎಂದು ಘೋಷಿಸಿದೆ.

ಅಪರಾಧಿಯು ಉತ್ತರ ಪ್ರದೇಶದ ಕಾಸ್‌ಗಂಜ್ ಮೂಲದವನಾಗಿದ್ದು ಸುಮಾರು 30 ಮಕ್ಕಳ ಮೇಲೆ ಅತ್ಯಾಚಾರ ಎಸಗಿ ಹತ್ಯೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಆತ ದೆಹಲಿ-ಎನ್‌ಸಿಆರ್ ಮತ್ತು ಪಶ್ಚಿಮ ಉತ್ತರಪ್ರದೇಶದಲ್ಲಿ ಅಪರಾಧಗಳನ್ನು ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಇದನ್ನೂ ಓದಿ: ಸೇನಾ ವಾಹನದ ಮೇಲೆ ದಾಳಿ – ಓರ್ವ ಉಗ್ರನ ಹತ್ಯೆ

ಅಪರಾಧಿ ಮದ್ಯ ಮತ್ತು ಮಾದಕವ್ಯಸನಿಯಾಗಿದ್ದು, ಅಮಲೇರಿದ ಸ್ಥಿತಿಯಲ್ಲಿ ಅಪರಾಧಗಳನ್ನು ಮಾಡುತ್ತಿದ್ದ. ಅಲ್ಲದೇ ಮಕ್ಕಳಿಗೆ ಸಿಹಿ ತಿಂಡಿ ಆಮಿಷವೊಡ್ಡಿ ಅತ್ಯಾಚಾರ ಮಾಡಿ ಕೊಲೆ ಮಾಡುತ್ತಿದ್ದ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಕ್ರೇಜ್‌ಗಾಗಿ 300km ವೇಗದಲ್ಲಿ ಸೂಪರ್‌ ಬೈಕ್‌ ರೈಡಿಂಗ್‌ – ಯೂಟ್ಯೂಬರ್‌ ಸಾವು

ಈ ಕುರಿತು ಹೆಚ್ಚುವರಿ ಸಿಪಿ ವಿಕ್ರಮಜಿತ್ ಸಿಂಗ್, ಅಂತಿಮಾಗಿ ನ್ಯಾಯ ದೊರಕಿದೆ. ಎಷ್ಟೋ ಅಮಾಯಕ ಆತ್ಮಗಳು ಈಗ ನೆಮ್ಮದಿಯಿಂದ ಇರಬಹುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಭಾರತ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದ ಖಲಿಸ್ತಾನಿ ಕಮಾಂಡೋ ಹತ್ಯೆ

Share This Article