Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಶೇ.98ರಷ್ಟು ಖಾತೆಗಳು ಸ್ವಯಂ ಚಾಲಿತವಾಗಿ ಬದಲಾವಣೆಯಾಗುತ್ತಿವೆ – ಮಧ್ಯವರ್ತಿಗಳಿಲ್ಲದೆ ಆಟೋ ಮ್ಯುಟೇಶನ್: ಕೃಷ್ಣಭೈರೇಗೌಡ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಶೇ.98ರಷ್ಟು ಖಾತೆಗಳು ಸ್ವಯಂ ಚಾಲಿತವಾಗಿ ಬದಲಾವಣೆಯಾಗುತ್ತಿವೆ – ಮಧ್ಯವರ್ತಿಗಳಿಲ್ಲದೆ ಆಟೋ ಮ್ಯುಟೇಶನ್: ಕೃಷ್ಣಭೈರೇಗೌಡ

Bengaluru City

ಶೇ.98ರಷ್ಟು ಖಾತೆಗಳು ಸ್ವಯಂ ಚಾಲಿತವಾಗಿ ಬದಲಾವಣೆಯಾಗುತ್ತಿವೆ – ಮಧ್ಯವರ್ತಿಗಳಿಲ್ಲದೆ ಆಟೋ ಮ್ಯುಟೇಶನ್: ಕೃಷ್ಣಭೈರೇಗೌಡ

Public TV
Last updated: March 18, 2026 5:00 pm
Public TV
Share
3 Min Read
Krishna Byregowda
SHARE

ಬೆಂಗಳೂರು: ಆಸ್ತಿ ನೋಂದಣಿ ನಂತರ ಖಾತೆಗಳು ಸ್ವಯಂ ಚಾಲಿತವಾಗಿ ಬದಲಾವಣೆಯಾಗಬೇಕು ಎಂಬ ನಿಟ್ಟಿನಲ್ಲಿ ಆಟೋ ಮ್ಯುಟೇಶನ್ ವ್ಯವಸ್ಥೆ ಜಾರಿಗೆ ತಂದಿದ್ದು, ಪ್ರಸ್ತುತ ಶೇ.98ರಷ್ಟು ಖಾತೆಗಳು ಸ್ವಯಂ ಚಾಲಿತವಾಗಿ ಬದಲಾವಣೆಯಾಗುತ್ತಿವೆ ಎಂದು ಸಚಿವ ಕೃಷ್ಣಬೈರೇಗೌಡ (Krishna Byregowda) ತಿಳಿಸಿದ್ದಾರೆ.

ವಿಧಾನ ಪರಿಷನ್ ಪ್ರಶ್ಮೋತ್ತರ ಕಲಾಪದಲ್ಲಿ ರಾಮೋಜಿಗೌಡ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರ ನೀಡಿದ ಅವರು, ಆಸ್ತಿ ನೋಂದಣಿಯ ನಂತರ ಖಾತೆ ಬದಲಾವಣೆ ವಿಳಂಬವಾಗುತ್ತಿದೆ ಎಂಬ ಬಗ್ಗೆ ದೂರು ಇದೆ. ಈ ನಿಟ್ಟಿನಲ್ಲಿ ಕಳೆದ ಒಂದು ವರ್ಷದಿಂದ ಎರಡು ಹಂತದಲ್ಲಿ ಸುಧಾರಣೆಗಳನ್ನು ತರಲಾಗಿದೆ. ಮೊದಲ ಹಂತದಲ್ಲಿ ಕಳೆದ ವರ್ಷ ಒಟ್ಟು ಖಾತೆ ಬದಲಾವಣೆ ಪೈಕಿ ಶೇ.66ರಷ್ಟು ಖಾತೆಗಳನ್ನು ಆಟೋ ಮ್ಯುಟೇಶನ್ ಮಾಡುವ ಮೂಲಕ ಸ್ವಯಂ ಚಾಲಿತವಾಗಿ ಖಾತೆ ಬದಲಾವಣೆ ಜಾರಿ ಮಾಡಿದ್ದೇವೆ. ಕಳೆದ ತಿಂಗಳು ಮತ್ತೆ ಒಂದು ಹೆಜ್ಜೆ ಮುಂದಿಡಲಾಗಿದ್ದು, ಶೇ.98ರಷ್ಟು ಖಾತೆಗಳು ಸ್ವಯಂ ಚಾಲಿತವಾಗಿ ಖಾತೆ ಬದಲಾವಣೆಯಾಗಲು ಆಟೋ ಮ್ಯುಟೇಶನ್ ಜಾರಿಗೆ ತಂದಿದ್ದೇವೆ ಎಂದು ತಿಳಿಸಿದರು.ಇದನ್ನೂ ಓದಿ: ಪತ್ನಿ ಜೊತೆ ಅನೈತಿಕ ಸಂಬಂಧ – ಕೊಡಲಿಯಿಂದ ಕೊಚ್ಚಿ ಪ್ರಿಯಕರನ ಹತ್ಯೆಗೈದಿದ್ದ ಇಬ್ಬರು ಅರೆಸ್ಟ್

ಪ್ರಸ್ತುತ ಖಾತೆ ಬದಲಾವಣೆ ಪೈಕಿ ಶೇ.98ರಷ್ಟು ಸ್ವಯಂ ಚಾಲಿತವಾಗಿಯೇ ಖಾತೆ ಬದಲಾವಣೆ ಆಗುತ್ತಿದೆ. ಕೆಲವು ಅರ್ಜಿ ನೀಡಿದ ಮೂರು ಗಂಟೆ, ಕೆಲವು 8ನೇ ದಿನ, ಇನ್ನೂ ಕೆಲವು 16ನೇ ದಿನ ಕಾನೂನು ಪ್ರಕಾರವಾಗಿ ಖಾತೆ ಬದಲಾವಣೆ ಆಗುತ್ತವೆ. ಈ ಬಗ್ಗೆ ತಕರಾರು ದಾಖಲಾದರೆ ಮಾತ್ರ ಖಾತೆ ಬದಲಾವಣೆ ವಿಳಂಬವಾಗುತ್ತದೆ. ಇನ್ನುಳಿದಂತೆ ಯಾರನ್ನೂ ಭೇಟಿ ಮಾಡದೆ, ಮಧ್ಯವರ್ತಿಗಳ ಹಾವಳಿ ಇಲ್ಲದೆ ಈ ಸೇವೆಯನ್ನು ಪಡೆಯಬಹುದಾಗಿದ್ದು, ದೇಶದ ಇತಿಹಾಸದಲ್ಲೇ ಇದೊಂದು ಪ್ರಗತಿಪರ ಹೆಜ್ಜೆ ಎಂದು ಸಂತಸ ವ್ಯಕ್ತಪಡಿಸಿದರು.

ಖಾತೆ ಬದಲಾವಣೆ ಸಂಬಂಧ ಆರ್‌ಐ (ಕಂದಾಯ ನಿರೀಕ್ಷಕರು) ಅಧಿಕಾರಿಯನ್ನು ಭೇಟಿಯಾಗದಿದ್ದರೆ ಅವರೇ ತಕರಾರು ಸಲ್ಲಿಸುತ್ತಾರೆ ಎಂಬ ಬಗೆಗಿನ ದೂರಿಗೂ ಪರಿಷತ್‌ನಲ್ಲಿ ವಿವರಣೆ ಸಚಿವರು, ಸರ್ಕಾರದ ಹಿತಾಸಕ್ರಿ ಇದ್ದರೆ ಮಾತ್ರ ಆರ್‌ಐ ತಕರಾರು ಸಲ್ಲಿಸಬಹುದು. ಖಾಸಗಿ ಸ್ವತ್ತಿನ ತಕರಾರು ಅವರ ಬಂಧುಗಳೇ ಹಾಕಬೇಕೆ ವಿನಃ ಆರ್‌ಐ ಹಾಕುವಂತಿಲ್ಲ. ಈ ಹಿಂದೆ ಇದ್ದ ಈ ವ್ಯವಸ್ಥೆಯನ್ನು ಇದೀಗ ಬಂದ್ ಮಾಡಿದ್ದೇವೆ. ಆರ್‌ಐ ತಮ್ಮ ಕಡೆಯವರಿಂದ ತಕರಾರು ಹಾಕುತ್ತಿದ್ದಾರೆ ಎಂಬ ಬಗ್ಗೆಯೂ ಆರೋಪ ಇತ್ತು. ಹೀಗಾಗಿ ತಕರಾರು ಹಾಕುವವರಿಗೆ ಆಧಾರ್ ಇಕೆವೈಸಿಯನ್ನು ಕಡ್ಡಾಯ ಮಾಡಲಾಗಿದೆ. ಹೀಗಾಗಿ ಒಂದೇ ವ್ಯಕ್ತಿ ಮೂರು ನಾಲ್ಕು ತಕರಾರು ಅರ್ಜಿ ಹಾಕಿದ್ರೆ ಆತನನ್ನು ಪ್ರಶ್ನೆ ಮಾಡಬಹುದಾಗಿದೆ. ಇಂತಹ ಪ್ರಗತಿಪರ ಬದಲಾವಣೆಗಳ ಮೂಲಕ ಇಲಾಖೆಯಲ್ಲಿ ಸುಧಾರಣೆ ತಂದು ಮೂಗರ್ಜಿ ತಕರಾರುಗಳಿಗೆ ಸಂಪೂರ್ಣ ಕಡಿವಾಣ ಹಾಕಿದ್ದೇವೆ. ಪರಿಣಾಮ ತಳಮಟ್ಟದಲ್ಲಿ ಸುಧಾರಣೆಯನ್ನೂ ಕಾಣಲಾಗುತ್ತಿದೆ ಎಂದು ವಿವರಿಸಿದರು.

ಆರ್ಟಿಸಿ ಕರೆಕ್ಷನ್ ಬಗ್ಗೆಯೂ ಗಮನ ಸೆಳೆದ ಅವರು, ಆರ್ಟಿಸಿ ಕರೆಕ್ಷನ್ ತಿದ್ದುಪಡಿ ಮಾಡುವುದರಲ್ಲಿ ತೊಂದರೆ ಆಗುತ್ತಿರುವುದು ನಿಜ. ಆರ್ಟಿಸಿ ಕರೆಕ್ಷನ್ ಅನ್ನು ಅರ್ಥ ಮಾಡಿಕೊಳ್ಳುವುದೇ ಕಷ್ಟು ಇತ್ತು. ಹೀಗಾಗಿ ಆರ್ಟಿಸಿ ಕರೆಕ್ಷನ್ ಅನ್ನೂ ಸಹ ಆನ್ಲೈನ್ ಮೂಲಕ ತಿದ್ದುಪಡಿ ಮಾಡುವ ವ್ಯವಸ್ಥೆ ಜಾರಿಗೆ ತರಲಾಗಿದೆ. ಈ ಮೂಲಕ ತಿದ್ದುಪಡಿಗೆ ಯಾವ ದಿನ ಅರ್ಜಿ ಬಂದಿದೆ, ಎಷ್ಟು ದಿನಗಳಿಂದ ಆ ಅರ್ಜಿ ಬಾಕಿ ಇದೆ ಎಂದು ಫಾಲೋ ಮಾಡಿ, ಹೆಚ್ಚು ದಿನ ಬಾಕಿ ಇದ್ದ ಪ್ರಕರಣಗಳನ್ನು ಪರಿಶೀಲಿಸಿ ಇತ್ಯರ್ಥಪಡಿಸಲು ಸಹಕಾರಿಯಾಗುತ್ತದೆ. ಇದರಲ್ಲೂ ಸಾಕಷ್ಟು ಸುಧಾರಣೆ ತರಲಾಗಿದೆ ಎಂದರು.

ಇದಲ್ಲದೇ ನಾವು ಜವಾಬ್ದಾರಿ ಸ್ವೀಕರಿಸುವ ಮುನ್ನ ತಹಶೀಲ್ದಾರ್ ನ್ಯಾಯಾಲಯದಲ್ಲಿ ಅವಧಿ ಮೀರಿದ 10,774 ತಕರಾರು ಪ್ರಕರಣಗಳು ಬಾಕಿ ಇದ್ದವು. ಈ ಪೈಕಿ ಪ್ರಸ್ತುತ 137 ಪ್ರಕರಣಗಳು ಮಾತ್ರ ಬಾಕಿ ಇವೆ. ಎಸಿ ನ್ಯಾಯಾಲಯಗಳಲ್ಲಿ 73,634 ಪ್ರಕರಣಗಳು ಬಾಕಿ ಇದ್ದವು. ಈ ಪೈಕಿ ಪ್ರಸ್ತುತ 10,255 ಪ್ರಕರಣಗಳು ಬಾಕಿ ಇವೆ. ಇನ್ನೂ ಐದು ವರ್ಷಕ್ಕೂ ಮೀರಿದ 32,787 ಪ್ರಕರಣಗಳ ಪೈಕಿ 2894 ಪ್ರಕರಣಗಳು ಮಾತ್ರ ಬಾಕಿ ಇವೆ. ಅಸಲಿಗೆ ಕಂದಾಯ ಇಲಾಖೆಯಲ್ಲಿ ಎಲ್ಲೆಲ್ಲಿ ಈ ಸಮಸ್ಯೆ ಇದೆ ಹುಡುಕಿ ಪರಿಹಾರ ಮಾಡುತ್ತಿದ್ದೇವೆ. ಕೇಸ್ ವಿಲೇವಾರಿಗೆ ಬೆಂಗಳೂರಿಗೆ ಮಾತ್ರ 8 ಜನ ವಿಶೇಷ ಜಿಲ್ಲಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ರಾಜ್ಯಾದ್ಯಂತ 27 ವಿಶೇಷ ಎಸಿಗಳನ್ನು ನೇಮಕ ಮಾಡಲಾಗಿದೆ. ಈ ಮೂಲಕ ಹತ್ತಾರು ವರ್ಷಗಳಿಂದ ಬಾಕಿ ಇದ್ದ ಶೇ.90ರಷ್ಟು ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದೆ. ಜನರನ್ನು ಮಧ್ಯವರ್ತಿಗಳಿಂದ ರಕ್ಷಿಸಲಾಗುತ್ತಿದೆ ಎಂದರು.ಇದನ್ನೂ ಓದಿ: ಬೇರೆ ರಾಜ್ಯಗಳಲ್ಲಿ ಯುಗಾದಿ ಆಚರಣೆ ಹೇಗೆ?

TAGGED:bengaluruKrishna ByregowdaRevenue Departmentಕಂದಾಯ ಇಲಾಖೆಕೃಷ್ಣಭೈರೇಗೌಡಬೆಂಗಳೂರು
Share This Article
Facebook Whatsapp Whatsapp Telegram

Cinema news

darshan vijayalakshmi
ಕೋರ್ಟ್ ಆದೇಶವಿದ್ರೂ ದರ್ಶನ್‌ಗೆ ಒಳ ಸಂದರ್ಶನಕ್ಕಿಲ್ಲ ಅವಕಾಶ – ಹೆಂಡ್ತಿ, ಮಗನ ಭೇಟಿ ಇಲ್ಲ
Cinema Latest Sandalwood Top Stories
Sarse Ninna Seraga Sarse song jogi prem
ಜೋಗಿ ಪ್ರೇಮ್‌ಗೆ ಬಿಗ್‌ ಶಾಕ್‌ – ‘ಸರ್ಸೆ ಸೆರಗ ಸರ್ಸೆ’ ವಿವಾದಿತ ಹಾಡು ಬ್ಯಾನ್
Cinema Latest Main Post Sandalwood
Mahesh Babus AMB Cinemas
ಯುಗಾದಿಗೆ ಬಂಪರ್ ಆಫರ್ ಕೊಟ್ಟ ಮಹೇಶ್ ಬಾಬು ‘ಎಎಂಬಿ ಸಿನಿಮಾಸ್’
Cinema Latest South cinema Top Stories
Ranveer Singh in Dhurandhar 2
ಜಾಗಿಂಗ್‌ ಮಾಡುತ್ತಾ ‘ಧುರಂಧರ್’‌ ಸಿನಿಮಾ ಬಗ್ಗೆ ಮಾತನಾಡಿದ ಕೆನಡಾ ಪ್ರಧಾನಿ, ಫಿನ್‌ಲ್ಯಾಂಡ್‌ ಅಧ್ಯಕ್ಷ
Bollywood Cinema Latest Main Post World

You Might Also Like

Oil tanker heading to China makes U turn Russian oil is coming to Mangaluru
Dakshina Kannada

ಚೀನಾಗೆ ತೆರಳುತ್ತಿದ್ದ ಟ್ಯಾಂಕರ್‌ ದಿಢೀರ್‌ ಯೂಟರ್ನ್‌ – ಮಂಗಳೂರಿಗೆ ಬರುತ್ತಿದೆ ರಷ್ಯಾ ತೈಲ

Public TV
By Public TV
13 minutes ago
Raichuru crime 1
Crime

ಪತ್ನಿ ಜೊತೆ ಅನೈತಿಕ ಸಂಬಂಧ – ಕೊಡಲಿಯಿಂದ ಕೊಚ್ಚಿ ಪ್ರಿಯಕರನ ಹತ್ಯೆಗೈದಿದ್ದ ಇಬ್ಬರು ಅರೆಸ್ಟ್

Public TV
By Public TV
30 minutes ago
Ugadi
Latest

ಬೇರೆ ರಾಜ್ಯಗಳಲ್ಲಿ ಯುಗಾದಿ ಆಚರಣೆ ಹೇಗೆ?

Public TV
By Public TV
56 minutes ago
Indore Fire Accident
Latest

ಶಾರ್ಟ್ ಸರ್ಕ್ಯೂಟ್‌ನಿಂದ ಇವಿ ಚಾರ್ಜಿಂಗ್ ಪಾಯಿಂಟ್‌ನಲ್ಲಿ ಬೆಂಕಿ – 7 ಮಂದಿ ಸಜೀವ ದಹನ

Public TV
By Public TV
1 hour ago
KH Muniyappa 1
Bengaluru City

ಒಂದು ವಾರ ಸಹಕಾರ ಕೊಟ್ಟರೆ ಹೋಟೆಲ್‌ಗಳಿಗೆ ಸಿಲಿಂಡರ್ ಕೊಡ್ತೀವಿ: ಕೆ.ಹೆಚ್. ಮುನಿಯಪ್ಪ

Public TV
By Public TV
2 hours ago
RAMALINGA REDDY
Bengaluru City

ವೈಷ್ಣೋದೇವಿ ಯಾತ್ರೆಗೂ ಸರ್ಕಾರದಿಂದ ಸಹಾಯ ಧನ: ರಾಮಲಿಂಗಾರೆಡ್ಡಿ

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?