ಚೀನಾದಲ್ಲಿ ಕೊರೊನಾಗೆ 908 ಮಂದಿ ಬಲಿ – ಕೇರಳದಲ್ಲೂ ಹೆಚ್ಚಿದ ಭೀತಿ

Public TV
2 Min Read
coronavirus 1

ಬೀಜಿಂಗ್: ದಿನೇ ದಿನೇ ಮಹಾಮಾರಿ ಕೊರೊನಾ ವೈರಸ್‍ಗೆ ಬಲಿಯಾಗುತ್ತಿರುವವ ಸಂಖ್ಯೆ ಹೆಚ್ಚಾಗುತ್ತಿದ್ದು, ಭಾನುವಾರ 800 ಮಂದಿ ಚೀನಾದಲ್ಲಿ ಕೊರೊನಾಗೆ ಸಾವನ್ನಪ್ಪಿದ್ದರೆ ಈ ಸಂಖ್ಯೆ ಸೋಮವಾರ 908ಕ್ಕೆ ತಲುಪಿದೆ.

ಭಾನುವಾರ 3 ಸಾವಿರ ಹೊಸ ಪ್ರಕರಣ ಚೀನಾದಲ್ಲಿ ದಾಖಲಾಗಿದ್ದು, ಈವರೆಗೆ ಚೀನಾದಲ್ಲಿ ಒಟ್ಟು 40 ಸಾವಿರ ಮಂದಿಗೆ ಕೊರೊನಾ ಸೋಂಕು ತಗುಲಿದೆ ಎಂದು ವರದಿಯಾಗಿದೆ. ದಿನೇ ದಿನೇ ಸಾವಿನ ಸಂಖ್ಯೆ ಏರಿಕೆ ಆಗುತ್ತಿರುವುದು ಚೀನಾದಲ್ಲಿ ಭೀತಿ ಹೆಚ್ಚಿಸಿದ್ದು, ಈ ಬಗ್ಗೆ ಚೀನಾ ಸರ್ಕಾರ ಅಗತ್ಯ ಕ್ರಮಕೈಗೊಳ್ಳುತ್ತಿದ್ದು, ಸೋಂಕು ಹರಡದಂತೆ ನಿಗವಹಿಸುತ್ತಿದೆ. ಇದನ್ನೂ ಓದಿ: 10 ದಿನದಲ್ಲಿ 1 ಸಾವಿರ ಬೆಡ್ ಸಾಮರ್ಥ್ಯದ ಆಸ್ಪತ್ರೆ ನಿರ್ಮಾಣಗೊಂಡಿದ್ದು ಹೇಗೆ? ಚೀನಾದ ಜೈವಿಕ ಅಸ್ತ್ರ ಕೊರೋನಾ?

coronavirus 2

2002-2003ರಲ್ಲಿ ಸಾರ್ಸ್ ಹೆಸರಿನ ವೈರಸ್ ಚೀನಾದಲ್ಲಿ 650 ಮಂದಿಯನ್ನು ಬಲಿ ಪಡೆದಿತ್ತು. ಆದರೆ ಕೊರೊನಾ ವೈರಸ್ ಈ ದಾಖಲೆ ಮುರಿದು ತನ್ನ ಕರಾಳತೆಯನ್ನು ಮುಂದುವರಿಸಿದೆ. ಚೀನಾದಿಂದ ಸುಮಾರು 20 ಇತರೆ ರಾಷ್ಟ್ರಗಳಿಗೂ ಕೊರೊನಾ ಹರಡಿದೆ. ಈ ಹಿನ್ನೆಲೆ ಭಾರತದ ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಚೀನಾದಿಂದ ಬರುವ ಪ್ರಯಾಣಿಕರು ಮತ್ತು ಚೀನಾಗೆ ತೆರಳುವ ಪ್ರಯಾಣಿಕರ ಮೇಲೂ ನಿರ್ಬಂಧ ವಿಧಿಸಲಾಗಿದ್ದು, ಮುಂಜಾಗೃತ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಇದನ್ನೂ ಓದಿ: ಕೊರೊನಾ ವೈರಸ್ ಎಂದರೇನು? ಹೇಗೆ ಹರಡುತ್ತೆ? ರೋಗ ಲಕ್ಷಣವೇನು?

ಈ ಸೋಂಕಿನ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸಲು ವಿಶ್ವ ಆರೋಗ್ಯ ಸಂಸ್ಥೆಯ ತಜ್ಞರು ಶೀಘ್ರವೇ ಚೀನಾಗೆ ಭೇಟಿ ನೀಡುವ ಸಾಧ್ಯತೆ ಇದೆ ಎನ್ನುವ ಮಾಹಿತಿ ಇದ್ದು, ಈ ಭೀಕರ ವೈರಸ್‍ಗೆ ಔಷಧ ಕಂಡು ಹಿಡಿಯುವ ಪ್ರಯತ್ನ ನಡೆಯುತ್ತಿದೆ.

corona virus 2

ಕೇರಳದಲ್ಲೂ ಕೊರನಾ ಭೀತಿ:
ಕೇರಳದಲ್ಲೂ ಕೊರೊನಾ ವೈರಸ್ ಭೀತಿ ಮುಂದುವರಿದಿದೆ. 3,252 ಮಂದಿಯನ್ನು ಪರಿಶೀಲನೆಯಲ್ಲಿ ಇಡಲಾಗಿದೆ. ಕೊರೊನಾ ವೈರಸ್ ಭೀತಿ ತಗುಲಿದೆ ಎಂದು ಹೇಳಲಾದ 345 ಜನರ ರಕ್ತ ಪರೀಕ್ಷೆ ಮಾಡಲಾಗಿದ್ದು, ಇವರಲ್ಲಿ 326 ಮಂದಿಗೆ ಕೊರನಾ ವೈರಸ್ ಸೋಂಕು ತಗುಲಿಲ್ಲ ಎನ್ನುವುದು ಧೃಡಪಟ್ಟಿದೆ. ಇದನ್ನೂ ಓದಿ: ಕೊರೊನಾ ವೈರಸ್‍ನಿಂದ ಆಸ್ಪತ್ರೆ ಸೇರಿದ ತಂದೆ – ಹಸಿವಿನಿಂದ ಬಳಲಿ ಶವವಾದ ವಿಶೇಷಚೇತನ ಮಗ

ಔಷಧಿ ಕಂಡುಹಿಡಿಯುತ್ತಿರುವ ಭಾರತೀಯ ವಿಜ್ಞಾನಿ:
ಆಸ್ಟ್ರೇಲಿಯಾದ ಪ್ರಮುಖ ವೈಜ್ಞಾನಿಕ ಸಂಸ್ಥೆಯಾದ ಸಿಎಸ್‍ಐಆರ್‍ಓ(ಕಾಮನ್ವೆಲ್ತ್ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಸಂಸ್ಥೆ)ಯಲ್ಲಿ ಕೊರೊನಾಗೆ ಔಷಧಿ ಕಂಡುಹಿಡಿಯುವ ಪ್ರಯತ್ನ ನಡೆಸಲಾಗುತ್ತಿದೆ. ಇದರ ನೇತೃತ್ವವನ್ನು ಭಾರತೀಯ ವಿಜ್ಞಾನಿ ಎಸ್.ಎಸ್ ವಾಸನ್ ವಹಿಸಿದ್ದಾರೆ. ವಾಸನ್ ಅವರು ಆಕ್ಸ್‍ಫರ್ಡ್ ವಿಶ್ವವಿದ್ಯಾಲಯದ ಸ್ಕಾಲರ್ ಹಾಗೂ ಬೆಂಗಳೂರಿನ ಐಐಎಸ್‍ಸಿ(ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಸೈನ್ಸ್) ನ ಹಳೆಯ ವಿದ್ಯಾರ್ಥಿಯಾಗಿದ್ದಾರೆ.

Professor S S Vasan

ಇವರ ನೇತೃತ್ವದ ತಂಡ ಆಸ್ಟ್ರೇಲಿಯಾದ ಸಿಎಸ್‍ಐಆರ್‍ಓನಲ್ಲಿ ಚಿಕಿತ್ಸಾತ್ಮಕವಾಗಿ ಮೊದಲ ಹಂತದಲ್ಲಿ ಕೊರೊನಾ ವೈರಸ್‍ಗಳನ್ನು ಬೆಳೆಸಿದೆ. ಮಾನವ ದೇಹದಿಂದ ಪಡೆದ ಸ್ಯಾಂಪಲ್ ಕೊರೊನಾ ವೈರಸ್‍ಗಳನ್ನು ವಿನಾಶಗೊಳಿಸಲು ಮೊದಲ ಹಂತದಲ್ಲಿ ಯಶಸ್ವಿಯಾಗಿದೆ. ಈ ಹಿಂದೆ ಎಸ್.ಎಸ್ ವಾಸನ್ ತಂಡದ ನೇತೃತ್ವದಲ್ಲೇ ಡೆಂಗ್ಯೂ, ಚಿಕನ್ ಗುನ್ಯಾ ಸೇರಿ ಹಲವು ರೋಗಗಳಿಗೆ ಔಷಧಿ ಕಂಡುಹಿಡಿಯಲಾಗಿತ್ತು.

Share This Article
Leave a Comment

Leave a Reply

Your email address will not be published. Required fields are marked *