8 ವರ್ಷದ ಬಾಲಕನಿಗೆ ಮಲತಾಯಿಯಿಂದ ಕಿರುಕುಳ – ಮಹಿಳಾ ಆಯೋಗದಿಂದ ರಕ್ಷಣೆ

Public TV
1 Min Read
boy

ದೆಹಲಿ: ಮಲತಾಯಿಯಿಂದ ಕಿರುಕುಳಕ್ಕೆ ಒಳಗಾಗಿದ್ದ 8 ವರ್ಷದ ಬಾಲಕನನ್ನು ದೆಹಲಿ ಮಹಿಳಾ ಆಯೋಗ ರಕ್ಷಿಸಿದೆ.

ಈ ವಿಚಾರವಾಗಿ ಮಾಹಿತಿ ದೊರೆತ ದೆಹಲಿ ಮಹಿಳಾ ಆಯೋಗ ತಂಡ, ಪಶ್ಚಿಮ ದೆಹಲಿಯ ಹರಿ ನಗರದಲ್ಲಿರುವ ಬಾಲಕನ ನಿವಾಸಕ್ಕೆ ತಲುಪಿ ಆತನನ್ನು ತನ್ನ ಮಲತಾಯಿಯಿಂದ ರಕ್ಷಿಸಿ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ.

police app

ಬಳಿಕ ವಿಚಾರಣೆ ವೇಳೆ ಬಾಲಕ ಮಲತಾಯಿ ಹೊರಗೆ ಹೋಗುವಾಗ ಹಗ್ಗಗಳಿಂದ ತನ್ನ ಕೈಗಳನ್ನು ಕಟ್ಟಿ ಹೋಗುತ್ತಿದ್ದರು. ತನ್ನನ್ನು ಹೊರಗೆ ಹೋಗಲು ಮತ್ತು ಯಾರೊಂದಿಗೂ ಬೆರೆಯಲು ಬಿಡುತ್ತಿರಲಿಲ್ಲ. ನನ್ನನ್ನು ನೆಲದ ಮೇಲೆ ಮಲಗಿಸುತ್ತಿದ್ದರು. ಅಲ್ಲದೆ ಸರಿಯಾಗಿ ಊಟ ಕೂಡ ನೀಡುತ್ತಿರಲಿಲ್ಲ ಎಂದು ದೂರಿದ್ದಾನೆ.

ಬಾಲಕನ ದೇಹದಲ್ಲಿ ಸಣ್ಣ-ಪುಟ್ಟ ಗಾಯಗಳಾಗಿದ್ದು, ಆತನ ಬೆನ್ನಿನ ಮೇಲೆ ಕೆಲವು ಗೀರುಗಳ ಗುರುತುಗಳು ಪತ್ತೆಯಾಗಿದೆ. ನಂತರ ಬಾಲಕನನ್ನು ದೆಹಲಿ ಮಹಿಳಾ ಆಯೋಗ ವೈದ್ಯಕೀಯ ಪರೀಕ್ಷೆಗೆ ಕರೆದೊಯ್ದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *