– ಎರಡು ಗುಂಪುಗಳಾಗಿ ಕಳ್ಳತನ
ಭುವನೇಶ್ವರ: ಎಂಟು ಮಂದಿ ದರೋಡೆಕೋರರನ್ನು ಬಂಧಿಸುವಲ್ಲಿ ಒಡಿಶಾದ ಅವಳಿ ನಗರದ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗಳಿಂದ ಮೊಬೈಲ್, ಲ್ಯಾಪ್ಟಾಪ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಬಂಧಿತರನ್ನು ರಂಜನ್ ಸತ್ಪತಿ (20), ಸಂಜಯ್ ಬೆಹೆರಾ (23), ಮಂಟು ಪೈಕ್ರೆ (38), ಚಂದನ್ ಪ್ರಧಾನ್ (27), ಪ್ರಸಾದ್ ಮೋಹಪಾತ್ರ (32), ಜಾವೇದ್ (37), ಅಲೋಕ್ ಬೆಹೆರಾ (28), ಮತ್ತು ಪ್ರದೀಪ್ ದಾಸ್ (33) ಎಂದು ಗುರುತಿಸಲಾಗಿದೆ.
ಆರೋಪಿಗಳು ಎರಡು ಗುಂಪುಗಳಾಗಿ ವಿಗಂಡಣೆಯಾಗಿ ದರೋಡೆ ಮಾಡುತ್ತಿದ್ದರು. ಒಂದು ಗುಂಪು ನಗರದ ಖಂಡಗಿರಿ ಮತ್ತು ಟೊಮಾಂಡೋ ಪ್ರದೇಶಗಳಲ್ಲಿ ಲ್ಯಾಪ್ಟಾಪ್ ಮತ್ತು ಮೊಬೈಲ್ ಫೋನ್ಗಳನ್ನು ಕದಿಯುತ್ತಿದ್ದರು. ನಂತರ ಅದನ್ನು ಮಾರಾಟ ಮಾಡುತ್ತಿದ್ದರು. ಅದರಿಂದ ಬಂದ ಹಣದಿಂದ ಐಷಾರಾಮಿ ಜೀವನ ನಡೆಸುತ್ತಿದ್ದರು.
ಮತ್ತೊಂದು ಗುಂಪು ಮುಂಜಾನೆ ವಾಕಿಂಗ್ ಬರುತ್ತಿದ್ದ ಜನರನ್ನು ಟಾರ್ಗೆಟ್ ಮಾಡುತ್ತಿದ್ದರು. ಅವರನ್ನು ಬೆದರಿಸಿ ಮೊಬೈಲ್ ಫೋನ್ ಮತ್ತು ಬೈಕ್ಗಳನ್ನು ಕಸಿದುಕೊಳ್ಳುವಲ್ಲಿ ತೊಡಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತ ಆರೋಪಿಗಳಿಂದ ಬರೋಬ್ಬರಿ 70 ಸ್ಮಾರ್ಟ್ಫೋನ್ಗಳು, 23 ಲ್ಯಾಪ್ಟಾಪ್ಗಳು ಮತ್ತು 9 ಬೈಕ್ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.