ಬೆಂಗಳೂರು: ಮನೆಯಲ್ಲಿ ಅಡುಗೆ ಸಿಲಿಂಡರ್ ಸ್ಪೋಟವಾಗಿ ನಾಲ್ವರು ಮಕ್ಕಳು ಹಾಗೂ ಆರು ಜನರಿಗೆ ಗಂಭೀರ ಗಾಯಗೊಂಡಿರುವ ಘಟನೆ ಬೆಂಗಳೂರಿನ ಪೀಣ್ಯಾ ಸಮೀಪದ ದಾಸರಹಳ್ಳಿಯಲ್ಲಿ ನಡೆದಿದೆ.
ದೇವರಾಜು(38), ಲಕ್ಷಮ್ಮ (35), ವೆಂಕಟೇಶ್(38), ಮಹೇಳ್ವರಮ್ಮ(35), ಹೋನ್ನೂರಪ್ಪ(70), ಸೋಮಶೇಖರ್(16), ನಿರಂಜನ್(7), ಸಂಗೀತ(16) ಹಾಗೂ ದೇವಿಕ(4) ಸಿಲಿಂಡರ್ ಸ್ಫೋಟದಿಂದ ಗಾಯಗೊಂಡಿದ್ದಾರೆ.
ಈ ಕುಟುಂಬ ಪಾವಗಡ ಮೂಲದವರಾಗಿದ್ದು, ದೇವರಾಜು ನಗರದಲ್ಲಿ ಸೆಕ್ಯುರಿಟಿ ಕೆಲಸ ಮಾಡುತ್ತಿದ್ದರು. ಅಷ್ಟೇ ಅಲ್ಲದೇ ಮನೆಗೆ ನೆಂಟರು ಬಂದಿದ್ದು ಎಲ್ಲರು ಮಲಗಿದ್ದರು. ದೇವರಾಜು ರಾತ್ರಿ ನೈಟ್ ಶಿಫ್ಟ್ ಕೆಲಸ ಮುಗಿಸಿ ಮನೆಗೆ ವಾಪಸ್ ಬಂದಿದ್ದರು. ಮನೆಗೆ ಬಂದು ಬಾಗಿಲು ತಟ್ಟಿದ ಸಮಯದಲ್ಲಿ ಒಳಗಿಂದ ಲೈಟ್ ಅನ್ ಮಾಡಿದ್ದಾಗ ಈ ಘಟನೆ ಸಂಭವಿಸಿದೆ.
ಇಂದು ಮುಂಜಾನೆ ಸುಮಾರು 4:30ಕ್ಕೆ ಈ ಘಟನೆ ನಡೆದಿದ್ದು, ಮನೆಯವರು ಮಲಗುವಾಗ ಗ್ಯಾಸ್ ಸಿಲಿಂಡರ್ ಆಫ್ ಮಾಡದೆ ಮಲಗಿದ್ದರು. ಮುಂಜಾನೆ ಎದ್ದು ಲೈಟ್ ಆನ್ ಮಾಡಿದಾಗ ಸಿಲಿಂಡರ್ ಸ್ಫೋಟಗೊಂಡಿದೆ.
ಘಟನೆಯಲ್ಲಿ ಗಾಯಗೊಂಡಿದ್ದ ನಾಲ್ವರು ಮಕ್ಕಳು ಸೇರಿ ಆರು ಜನರು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದು, ಪೀಣ್ಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.