ಆರು ರಾಜ್ಯಗಳ ರಾಜ್ಯಪಾಲರ ನೇಮಕ

Public TV
1 Min Read
governor

ನವದೆಹಲಿ: ಆರು ರಾಜ್ಯಗಳ ರಾಜ್ಯಪಾಲರ ನೇಮಕಕ್ಕೆ ಇಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅಂಕಿತ ಹಾಕಿದ್ದಾರೆ. ಆನಂದಿ ಪಟೇಲ್ ಅವರನ್ನು ಉತ್ತರ ಪ್ರದೇಶದ ರಾಜ್ಯಪಾಲರನ್ನಾಗಿ ನೇಮಕ ಮಾಡಲಾಗಿದೆ. ಪಶ್ಚಿಮ ಬಂಗಾಳದ ರಾಜ್ಯಪಾಲರನ್ನಾಗಿ ಜಗದೀಪ್ ಧನಖಡ್ ನೇಮಿಸಲಾಗಿದೆ.

ಗುಜರಾತ್ ಮಾಜಿ ಸಿಎಂ ಆಗಿರುವ ಆನಂದಿಬೆನ್ ಪಟೇಲ್ ಈ ಮೊದಲು ಮಧ್ಯಪ್ರದೇಶದ ರಾಜ್ಯಪಾಲರಾಗಿದ್ದರು. ಇದೀಗ ಆನಂದಿಬೆನ್ ಅವರಿಗೆ ಉತ್ತರ ಪ್ರದೇಶದ ಜವಾಬ್ದಾರಿಯನ್ನ ವಹಿಸಲಾಗಿದೆ. ಬಿಹಾರ ರಾಜ್ಯಪಾಲರಾಗಿದ್ದ ಲಾಲಜೀ ಟಂಡನ್ ಅವರಿಗೆ ಮಧ್ಯಪ್ರದೇಶದ ಜವಾಬ್ದಾರಿ ನೀಡಲಾಗಿದೆ.

ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ತ್ರಿಪುರ ಮತ್ತು ನಾಗಾಲ್ಯಾಂಡ್ ರಾಜ್ಯಗಳ ರಾಜ್ಯಪಾಲರ ಸೇವಾವಧಿ ಅಂತ್ಯಗೊಂಡ ಹಿನ್ನೆಲೆಯಲ್ಲಿ ಕ್ರಮವಾಗಿ ಆನಂದಿಬೆನ್ ಪಟೇಲ್, ಜಗದೀಪ್ ಧನಖಡ್, ರಮೇಶ್ ಬೈಂಸ್ ಮತ್ತು ಆರ್ಯನ್ ರವಿ ಅವರನ್ನು ನೇಮಕಗೊಳಿಸಲಾಗಿದೆ. ಬಿಹಾರಕ್ಕೆ ಫಗು ಚೌಹಾಣ್ ಅವರನ್ನು ರಾಜ್ಯಪಾಲರಾಗಿ ನೇಮಿಸಲಾಗಿದೆ.

ಆಗಸ್ಟ್ ನಲ್ಲಿ ಮತ್ತೆ ಐದು ರಾಜ್ಯಗಳ ರಾಜ್ಯಪಾಲರು ನಿವೃತ್ತಿ ಹೊಂದಲಿದ್ದಾರೆ. ಮಹಾರಾಷ್ಟ್ರದ ವಿದ್ಯಾಸಾಗರ್ ರಾವ್ (ಆಗಸ್ಟ್ 29), ಗೋವಾದ ಮೃದುಲಾ ಸಿನ್ಹಾ (ಆಗಸ್ಟ್ 30), ಕರ್ನಾಟಕದ ವಜೂಭಾಯಿ ವಾಲಾ (ಆಗಸ್ಟ್ 31), ರಾಜಸ್ಥಾನದ ಕಲ್ಯಾಣ್ ಸಿಂಗ್ (ಸೆಪ್ಟೆಂಬರ್ 3) ಮತ್ತು ಕೇರಳದ ಪಿ.ಸದಾಶಿವಂ (ಸೆಪ್ಟೆಂಬರ್ 4) ರಾಜ್ಯಪಾಲರು ನಿವೃತ್ತಿ ಹೊಂದಲಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *