Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: 5ನೇ ಲೆಕ್ಕಪರಿಶೋಧನಾ ದಿವಸ – 2025 ಉದ್ಘಾಟಿಸಿದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | 5ನೇ ಲೆಕ್ಕಪರಿಶೋಧನಾ ದಿವಸ – 2025 ಉದ್ಘಾಟಿಸಿದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್

Bengaluru City

5ನೇ ಲೆಕ್ಕಪರಿಶೋಧನಾ ದಿವಸ – 2025 ಉದ್ಘಾಟಿಸಿದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್

Public TV
Last updated: November 21, 2025 7:23 pm
Public TV
Share
8 Min Read
Shalini Rajaneesh Audit Diwas 2025 2
SHARE

ಬೆಂಗಳೂರು: ಭಾರತೀಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯ ವತಿಯಿಂದ ಹಮ್ಮಿಕೊಳ್ಳಲಾದ 5ನೇ ಲೆಕ್ಕಪರಿಶೋಧನಾ ದಿವಸ – 2025 (Audit Diwas 2025) ಹಾಗೂ ಲೆಕ್ಕಪರಿಶೋಧನಾ ವಾರವನ್ನು ಇಂದು ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದ ಡಾ. ಶಾಲಿನಿ ರಜನೀಶ್ (Dr Shalini Rajneesh)  ಉದ್ಘಾಟಿಸಿದರು.

ʼಬದಲಾವಣೆಯನ್ನು ಮುನ್ನಡೆಸುವುದು ಮತ್ತು ಮೌಲ್ಯಗಳನ್ನು ಪುನಃ ಸ್ಥಾಪಿಸುವುದು: ನಂಬಿಕೆ, ನವೀನತೆ, ಸ್ಥಿರತೆ ಮತ್ತು ಹೊಣೆಗಾರಿಕೆʼ ಈ ವರ್ಷದ ಆಯ್ಕೆಯ ವಿಷಯವಾಗಿದೆ ಎಂದು ತಿಳಿಸಿದ ಮುಖ್ಯ ಕಾರ್ಯದರ್ಶಿಗಳು, 5ನೇ ಲೆಕ್ಕಪರಿಶೋಧನಾ ದಿವಸ 2025ರ ಉದ್ಘಾಟನೆಗೆ ಭಾರತೀಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪರಿಶೋಧನಾ ಇಲಾಖೆಯ ಅಧಿಕಾರಿಗಳೊಂದಿಗೆ ಭಾಗವಹಿಸುವ ಅವಕಾಶ ನನಗೆ ಅಪಾರ ಸಂತೋಷ ನೀಡಿದೆ. ಉತ್ತಮ ಆಡಳಿತಕ್ಕಾಗಿ ಲೆಕ್ಕಪರಿಶೋಧನಾ ಕ್ಷೇತ್ರದ ಸಮರ್ಪಿತ ಸೇವೆಯನ್ನು ನಾನು ಶ್ಲಾಘಿಸುತ್ತೇನೆ ಎಂದು ತಿಳಿಸಿದರು.

Shalini Rajaneesh Audit Diwas 2025

ಲೆಕ್ಕಪರಿಶೋಧನೆಯು ಸಾರ್ವಜನಿಕ ಹಿತವನ್ನು ಕಾಯುವ ನೈತಿಕ ದಿಕ್ಸೂಚಿಯಂತೆ, ಸಾರ್ವಜನಿಕ ಸೇವಕರು ಸತ್ಯ ಮತ್ತು ಸತ್ಯನಿಷ್ಠೆಯ ಮಾರ್ಗದಲ್ಲಿ ನಡೆಯುವಂತೆ ಮಾಡುತ್ತದೆ. ಸಾರ್ವಜನಿಕ ಸಂಸ್ಥೆಗಳ ಮೇಲೆ ನಾಗರೀಕರ ನಂಬಿಕೆ ಉಳಿಯುವುದಕ್ಕೆ, ತೆರಿಗೆದಾರರ ಹಣವನ್ನು ಅತ್ಯಂತ ಪ್ರಾಮಾಣಿಕವಾಗಿ ಬಳಸುವುದು ಪ್ರತಿಯೊಬ್ಬ ಅಧಿಕಾರಿಯ ಜವಾಬ್ದಾರಿಯಾಗಿದೆ ಎಂದರು.

ಲೆಕ್ಕಪರಿಶೋಧನಾ ದಿವಸ ಕೇವಲ ಆಚರಣೆಗೆ ಸೀಮಿತವಾದ ದಿನವಲ್ಲ- ಇದು ಸಾಂವಿಧಾನಿಕ ದೃಷ್ಟಿಕೋನದ ಜ್ಞಾಪನೆಯಾಗಿದೆ. ಡಾ. ಬಿ.ಆರ್. ಅಂಬೇಡ್ಕರ್ ಅವರು ನಿಯಂತ್ರಕರು ಮತ್ತು ಮಹಾ ಲೆಕ್ಕಪರಿಶೋಧಕರವರನ್ನು ʼಬಹುಶಃ ಸಂವಿಧಾನದ ಅತ್ಯಂತ ಮಹತ್ವದ ಅಧಿಕಾರಿʼ ಎಂದು ವರ್ಣಿಸಿದ್ದರು. ಸಾರ್ವಜನಿಕ ನಂಬಿಕೆಯ ರಕ್ಷಕ ಮತ್ತು ಸರ್ಕಾರಿ ಹಣಕಾಸಿನ ಪಾಲಕ ಎಂದೂ ಸಹ ಹೇಳಬಹುದು ಎಂದು ನುಡಿದರು.

ಭಾರತದ ಸಂವಿಧಾನಿಕ ವಿನ್ಯಾಸದಲ್ಲಿ ಲೆಕ್ಕಪರಿಶೋಧಕ ಹಾಗೂ ಮಹಾ ಲೆಕ್ಕಪರಿಶೋಧಕರ (CAG) ಸ್ಥಾನ ಅತ್ಯಂತ ಮಹತ್ವದ್ದಾಗಿದೆ. ಸಂವಿಧಾನದ 148 ರಿಂದ 151ನೇ ಅನುಚ್ಛೇದಗಳ ಅಡಿಯಲ್ಲಿ ನೀಡಲಾದ ಅಧಿಕಾರದಂತೆ, ಸರ್ಕಾರಗಳ ಹಣಕಾಸು ವ್ಯವಹಾರಗಳಲ್ಲಿ ಪಾರದರ್ಶಕತೆ, ಹೊಣೆಗಾರಿಕೆ ಮತ್ತು ಶಿಷ್ಟಾಚಾರವನ್ನು ಕಾಪಾಡುವುದು ಸಿಎಜಿ ಅವರ ಜವಾಬ್ದಾರಿಯಾಗಿದೆ. ಆದಾಯ, ವೆಚ್ಚ ಮತ್ತು ಸಾರ್ವಜನಿಕ ವಲಯ ಸಂಸ್ಥೆಗಳ ಪಕ್ಷಪಾತರಹಿತ ಲೆಕ್ಕಪರಿಶೋಧನೆ ನಡೆಸುವ ಮೂಲಕ, ಸಿಎಜಿ ಶಾಸನಾತ್ಮಕ ಮೇಲ್ವಿಚಾರಣೆಯನ್ನು ಬಲಪಡಿಸುತ್ತಾರೆ ಮತ್ತು ಪ್ರಜಾಪ್ರಭುತ್ವ ಆಡಳಿತದ ಮೇಲಿನ ನಂಬಿಕೆಯನ್ನು ದೃಢವಾಗಿಸುತ್ತಾರೆ ಎಂದು ತಿಳಿಸಿದರು.

Shalini Rajaneesh Audit Diwas 2025 1

ಸಿಎಜಿ ನಡೆಸುವ ಕಾರ್ಯಕ್ಷಮತೆ, ಅನುಸರಣೆ ಮತ್ತು ಹಣಕಾಸು ಲೆಕ್ಕಪರಿಶೋಧನೆಗಳು ವ್ಯವಸ್ಥಾತ್ಮಕ ಕೊರತೆಗಳನ್ನು ಗುರುತಿಸಲು, ಸಂಪನ್ಮೂಲಗಳ ಪರಿಣಾಮಕಾರಿ ಬಳಕೆಯನ್ನು ಉತ್ತೇಜಿಸಲು ಮತ್ತು ಸಾರ್ವಜನಿಕ ಆಡಳಿತದಲ್ಲಿ ಆರ್ಥಿಕತೆ ಹಾಗೂ ಪರಿಣಾಮಕಾರಿ ತತ್ವಗಳನ್ನು ಕಾಪಾಡಲು ನೆರವಾಗುತ್ತವೆ. ಸಿಎಜಿ ಅವರ ಸ್ವತಂತ್ರ ಪಾತ್ರವು ಸಾರ್ವಜನಿಕ ಹಿತಾಸಕ್ತಿಯನ್ನು ಕಾಪಾಡುವುದಷ್ಟೇ ಅಲ್ಲ, ಸರ್ಕಾರಿ ಇಲಾಖೆಗಳು ಉತ್ತಮ ಹಣಕಾಸು ಶಿಸ್ತಿನಿಂದ ಕಾರ್ಯನಿರ್ವಹಿಸಲು ಮತ್ತು ಸೇವಾ ವಿತರಣೆಯನ್ನು ಸುಧಾರಿಸಲು ದಾರಿದೀಪವಾಗುತ್ತದೆ. ಹೊಣೆಗಾರಿಕೆಗೆ ಸಂಬಂಧಿಸಿದ ಈ ಅಚಲ ಬದ್ಧತೆಯೇ, ಸಿಎಜಿ ಅನ್ನು ಭಾರತದ ಪ್ರಜಾಸತ್ತಾತ್ಮಕ ಮತ್ತು ಆಡಳಿತಾತ್ಮಕ ರಚನೆಯ ಅತ್ಯವಶ್ಯಕ ಸ್ತಂಭವಾಗಿಸಿದೆ. ಇಂದು ವೇಗವಾಗಿ ಬದಲಾಗುತ್ತಿರುವ ಪರಿಸರ ಮತ್ತು ಸಂಕೀರ್ಣ ಆಡಳಿತ ಸವಾಲುಗಳ ನಡುವಲ್ಲಿ, ಈ ಪಾತ್ರದ ಮಹತ್ವ ಇನ್ನಷ್ಟು ಹೆಚ್ಚಾಗಿದೆ ಎಂದರು.

ಸಿಎಜಿಯವರ ಲೆಕ್ಕ ಪರಿಶೋಧನಾ ವರದಿಗಳು ನಮ್ಮ ಸರ್ಕಾರಿ ಇಲಾಖೆಗಳು ಮತ್ತು ಸಾರ್ವಜನಿಕ ಸಂಸ್ಥೆಗಳ ಕಾರ್ಯಕ್ಷಮತೆಯನ್ನು ಇನ್ನಷ್ಟು ಬಲಪಡಿಸಲು ಅಮೂಲ್ಯವಾದ ಒಳನೋಟಗಳು ಮತ್ತು ಪ್ರಾಯೋಗಿಕವಾಗಿ ಉಪಯೋಗಿಸಬಹುದಾದ ಶಿಫಾರಸ್ಸುಗಳನ್ನು ಒದಗಿಸುತ್ತವೆ. ಈ ವರದಿಗಳು ಕೇವಲ ಹೊಣೆಗಾರಿಕೆಯ ಸಾಧನಗಳಷ್ಟೇ ಅಲ್ಲ, ಅವು ಪಾರದರ್ಶಕತೆಯನ್ನು ಹೆಚ್ಚಿಸುತ್ತವೆ. ಸಾರ್ವಜನಿಕ ನಂಬಿಕೆಯನ್ನು ನಿರ್ಮಿಸುತ್ತವೆ. ಆಡಳಿತದಲ್ಲಿ ನಾಗರೀಕರ ನಿಷ್ಠೆ ಮತ್ತು ಪಾಲ್ಗೊಳ್ಳುವಿಕೆಯನ್ನು ಗಾಢಗೊಳಿಸುತ್ತವೆ ಎಂದು ಹೇಳಿದರು.

ಸಿಎಜಿ ಲೆಕ್ಕ ಪರಿಶೋಧನೆಗಳು ಕೇವಲ ದೋಷಗಳನ್ನು ಗುರುತಿಸುವುದು ಅಥವಾ ವ್ಯತ್ಯಾಸಗಳನ್ನು ಸೂಚಿಸುವುದಕ್ಕೆ ಮಾತ್ರ ಸೀಮಿತವಾಗಿಲ್ಲ ಎಂಬುದನ್ನು ನಾವೆಲ್ಲರೂ ಮನಗಾಣುವುದು ಅತ್ಯಂತ ಮುಖ್ಯ. ವಾಸ್ತವವಾಗಿ ಕಾರ್ಯಕ್ಷಮತಾ ಲೆಕ್ಕಪರಿಶೋಧನೆಗಳು ಇದಕ್ಕಿಂತ ಭಿನ್ನವಾಗಿವೆ. ಅವು ಯೋಜನೆಗಳು, ನೀತಿಗಳು ಮತ್ತು ಕಾರ್ಯಕ್ರಮಗಳನ್ನು ಹೇಗೆ ಜಾರಿಗೊಳಿಸಲಾಗುತ್ತಿದೆ ಎಂಬುದರ ಕುರಿತು ರಚನಾತ್ಮಕ, ಸಾಕ್ಷ್ಯಾಧಾರಿತ ಮೌಲ್ಯಮಾಪನಗಳನ್ನು ಒದಗಿಸುತ್ತವೆ ಮತ್ತು ವ್ಯವಸ್ಥೆಗಳ ಸುಧಾರಣೆಗಾಗಿ, ಹಾಗೂ ನಮ್ಮ ಜನತೆಗೆ ಉತ್ತಮ ಫಲಿತಾಂಶಗಳನ್ನು ನೀಡಲು ಸ್ಪಷ್ಟ ಜಾರಿಗೆ ತರುವಂತ ಶಿಫಾರಸುಗಳನ್ನು ನೀಡುತ್ತವೆ ಎಂದರು.

ಲೆಕ್ಕಪರಿಶೋಧನಾ ದಿವಸವನ್ನು ಆಚರಿಸುತ್ತಿರುವ ಈ ಸಂದರ್ಭದಲ್ಲಿ, ಸಿಎಜಿ ಮತ್ತು ಸರ್ಕಾರದ ನಡುವಿನ ದೀರ್ಘಕಾಲದ ಬಾಂಧವ್ಯವನ್ನು ನಾವು ಗಟ್ಟಿಗೊಳಿಸಲು ಇದು ಸೂಕ್ತ ಸಮಯ – ಪರಸ್ಪರ ಗೌರವ ಮತ್ತು ಸಹಕಾರವನ್ನು ಬೆಳೆಸುವ ಬಂಧವಾಗಿದೆ ಎಂದು ನುಡಿದರು.

ರಾಜ್ಯದ ಹಣಕಾಸು ಲೆಕ್ಕಪರಿಶೋಧನಾ ವರದಿ:
ಪ್ರಜಾಪ್ರಭುತ್ವ ಮಾದರಿ ಆಡಳಿತ ವ್ಯವಸ್ಥೆಯಲ್ಲಿ ರಾಜ್ಯದ ಕಾರ್ಯಗಳು ತೆರಿಗೆದಾರರ ಹಣದಿಂದ ನಡೆಯುತ್ತವೆ. ಅನುದಾನಗಳ ನಿರ್ವಹಣೆ ಮತ್ತು ನೀತಿಗಳ ಜಾರಿಯು ಅನುಮೋದನೆಗೊಂಡ ಆಯವ್ಯಯಕ್ಕೆ ಅನುಗುಣವಾಗಿ ಹಣವನ್ನು ಬಳಸಲಾಗುತ್ತಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಸಮರ್ಪಕ ಮೇಲ್ವಿಚಾರಣೆ ಮತ್ತು ಪರಿಶೀಲನೆಯ ಅಗತ್ಯವಿದೆ. ಜೊತೆಗೆ, ವಿವೇಕಪೂರ್ಣ ಹಣಕಾಸು ನಿರ್ವಹಣೆಗೆ ರಾಜ್ಯವು ನಿಗದಿಪಡಿಸಿರುವ ಹಣಕಾಸು ಮಾನದಂಡಗಳನ್ನು ಪಾಲಿಸುತ್ತಿದೆಯೇ ಎಂಬುದೂ ಬಹುಮುಖ್ಯವಾಗಿದೆ ಎಂದರು.

ಆದುದರಿಂದ, ಪ್ರತಿ ವರ್ಷ ರಾಜ್ಯದ ಹಣಕಾಸುಗಳ ಕುರಿತು ವಿವರವಾದ ವರದಿಗಳನ್ನು ಪ್ರಕಟಿಸುತ್ತಿರುವ ಮಹಾಲೇಖಾಪಾಲರ ಕಚೇರಿಯನ್ನು ನಾನು ಅಭಿನಂದಿಸುತ್ತೇನೆ. ಈ ವರದಿಗಳು ರಾಜ್ಯದ ಹಣಕಾಸು, ಆಯವ್ಯಯ ನಿರ್ವಹಣೆ ಮತ್ತು ಲೆಕ್ಕಪರಿಶೋಧನೆಗಳ ಗುಣಮಟ್ಟದ ಸಮಗ್ರ ಅವಲೋಕನವನ್ನು ನೀಡುವುದಲ್ಲದೆ, ಹಣಕಾಸಿನ ಸ್ಥಿರತೆಯ ಕುರಿತ ಪ್ರಮುಖ ಒಳನೋಟಗಳನ್ನು ಸಹ ಒದಗಿಸುತ್ತವೆ ಎಂದು ತಿಳಿಸಿದರು.

Shalini Rajaneesh Audit Diwas 2025 3

ಕರ್ನಾಟಕದಲ್ಲಿ ಪ್ರಾಥಮಿಕ ಶಿಕ್ಷಣ ಸಂಸ್ಥೆಗಳಕಾರ್ಯನಿರ್ವಹಣೆ ಕುರಿತು ಕಾರ್ಯಕ್ಷಮತಾ ಲೆಕ್ಕಪರಿಶೋಧನೆ:
ರಾಜ್ಯ ಸರ್ಕಾರದ ಸೇವೆಗಳು ಹಂತ ಹಂತವಾಗಿ ಡಿಜಿಟಲ್ ಆಗುತ್ತಿರುವ ಸಂದರ್ಭದಲ್ಲಿ ಮಹಾಲೇಖಾಧಿಕಾರಿಗಳ ಕಚೇರಿಗಳು ತಮ್ಮ ಲೆಕ್ಕಪರಿಶೋಧನೆ ಕಾರ್ಯಗಳಲ್ಲಿ ತಾಂತ್ರಿಕ ನವೀನತೆಗಳನ್ನು ಅಳವಡಿಸಿಕೊಂಡಿರುವುದು ಸಂತೋಷಕರವಾದ ಸಂಗತಿ. ಇತ್ತೀಚೆಗೆ ಮಂಡನೆಯಾದ ಕರ್ನಾಟಕದ ಪ್ರಾಥಮಿಕ ಶಿಕ್ಷಣ ಸಂಸ್ಥೆಗಳ ಕಾರ್ಯನಿರ್ವಹಣೆಯಕುರಿತು ಮಂಡಿಸಲಾದ ಕಾರ್ಯಕ್ಷಮತಾ ಲೆಕ್ಕಪರಿಶೋಧನೆ ಅದಕ್ಕೆ ಉತ್ತಮ ಉದಾಹರಣೆಯಾಗಿದೆ. ವಿಭಾಗೀಯ ದತ್ತಾಂಶದ ಕೊರತೆ ಇರುವ ಹಿನ್ನೆಲೆಯಲ್ಲಿ, ಲೆಕ್ಕಪತ್ರಾಧಿಕಾರಿಗಳು ಕರ್ನಾಟಕ ಶಾಲಾ ಗುಣಮಟ್ಟ ಮೌಲ್ಯಮಾಪನ ಮತ್ತು ಮಾನ್ಯತೆ ಮಂಡಳಿ (KSQAAC) ಅವರ ಸಹಕಾರದಲ್ಲಿ ಕಲಿಕೆ ಮೌಲ್ಯಮಾಪನಗಳನ್ನು ಕೈಗೊಂಡು, ನಿವಾಸ ಪ್ರದೇಶಗಳನ್ನು ಶಾಲೆಗಳೊಂದಿಗೆ ನಕ್ಷೆಗೊಳಿಸಲು GIS ತಂತ್ರಜ್ಞಾನವನ್ನು ಬಳಸುವಂತಹ ಪರ್ಯಾಯ ವಿಧಾನಗಳನ್ನು ಅನುಸರಿಸಿರುವುದು ತಿಳಿದು ಬಂದಿದೆ ಎಂದರು.

ಕರ್ನಾಟಕ ಸ್ಟೇಟ್ ಎಲೆಕ್ಟ್ರಾನಿಕ್ಸ್ ಡೆವಲಪ್‌ಮೆಂಟ್ ಕಾರ್ಪೊರೇಷನ್ (KEONICS) ಮೂಲಕ ಸರಕುಗಳ ಖರೀದಿಗೆ ಸಂಬಂಧಿಸಿದ ವಿಷಯ ವೀಕ್ಷಣಾಧಾರಿತ ಅನುಸರಣಾ ಲೆಕ್ಕಪತ್ರ. ಕಿಯೋನಿಕ್ಸ್‌ ಮೂಲಕ ನಡೆದ ಖರೀದಿಗಳ ಈ ಲೆಕ್ಕಪತ್ರವು ಲೆಕ್ಕಪರಿಶೋಧನೆಯು ಹೇಗೆ ಆಡಳಿತ ವ್ಯವಸ್ಥೆಯ ಸುಧಾರಣೆಗೆ ನೇರವಾಗಿ ಕೊಡುಗೆ ನೀಡಬಹುದು ಎಂಬುದಕ್ಕೆ ಮತ್ತೊಂದು ಉದಾಹರಣೆ. ಈ ಲೆಕ್ಕಪತ್ರದಲ್ಲಿ ಖರೀದಿ ಆದೇಶಗಳನ್ನು ವಿಭಜಿಸುವುದು, ಯೋಗ್ಯವಲ್ಲದ ಐಟಿ ರಹಿತ ವಸ್ತುಗಳ ಖರೀದಿ, ಕಲಂ 4(ಜಿ) ಅಡಿ ನೀಡಲಾದ ವಿನಾಯಿತಿಯಲ್ಲಿ ನಡೆದ ವ್ಯತ್ಯಾಸಗಳು, ಹೆಚ್ಚಿಸಿದ ಬೆಲೆಗಳು, ಮೂರನೇ ವ್ಯಕ್ತಿಯ ಪರಿಶೀಲನಾ ವರದಿಗಳ ಕೃತಕ ರಚನೆ ಮೊದಲಾದ ಹಲವು ಅಕ್ರಮಗಳನ್ನು ಬಹಿರಂಗಪಡಿಸಿದೆ. ಇವು ಖರೀದಿ ವ್ಯವಸ್ಥೆಯಲ್ಲಿದ್ದ ದುರ್ಬಲತೆಗಳನ್ನು ಸ್ಪಷ್ಟಪಡಿಸಿದ ಕಣ್ಣೆದುರಿನ ಸತ್ಯಗಳಾಗಿವೆ ಎಂದು ಅಭಿಪ್ರಾಯವ್ಯಕ್ತಪಡಿಸಿದರು.

ಈ ಪ್ರಕ್ರಿಯೆಯ ವಿಶೇಷತೆಯಾಗಿ ಹೊರಹೊಮ್ಮಿದ್ದು ಮಹಾಲೇಖಾಧಿಕಾರಿಗಳು ಮತ್ತು ಸರ್ಕಾರದ ನಡುವಿನ ಸಕಾರಾತ್ಮಕ ಹಾಗೂ ಪರಸ್ಪರಪೂರಕ ಸಂಬಂಧ. ಕರಡು ವರದಿ ಹೊರಬಂದ ತಕ್ಷಣವೇ, ಸರ್ಕಾರ ಈ ವಿಷಯಗಳ ಗಂಭೀರತೆಯನ್ನು ಮನಗಂಡು ತಕ್ಷಣ ಕ್ರಮ ಕೈಗೊಂಡಿತು. ಸ್ವತಂತ್ರ ತನಿಖಾ ಸಮಿತಿಯನ್ನು ಈಗಾಗಲೇ ರಚಿಸಲಾಗಿದ್ದು, ಟೆಂಡರ್‌ನಿಂದ ಹಿಡಿದು ಸರಕು ವಿತರಣೆಯ ತನಕ ಮತ್ತು ಪಾವತಿವರೆಗೆ ಸಂಪೂರ್ಣ ಖರೀದಿ ಪ್ರಕ್ರಿಯೆಯನ್ನು ಸರಳಗೊಳಿಸಲು ಸಮಗ್ರ ಪ್ಮಾಣೀಕೃತ ಕಾರ್ಯವಿಧಾನ (SOP)ಗಳನ್ನು ಸಿದ್ಧಪಡಿಸುವ ಕಾರ್ಯವನ್ನೂ ಸಹ ಪ್ರಾರಂಭಿಸಲಾಗಿದೆ ಎಂದು ಹೇಳಿದರು.

ಸಾರ್ವಜನಿಕ ಲೆಕ್ಕಪತ್ರ ಸಮಿತಿ (PAC), ಸಾರ್ವಜನಿಕ ಸಂಸ್ಥೆಗಳ ಸಮಿತಿ (COPU) ಮತ್ತು ಸ್ಥಳೀಯ ಸಂಸ್ಥೆಗಳ (LB) ಸಮಿತಿಗಳು:
ಮಹಾಲೇಖಾಧಿಕಾರಿ, ವಿಧಾನಮಂಡಲ ಸಮಿತಿಗಳೊಂದಿಗೆ ಹೊಂದಿರುವ ಆಪ್ತ ಮತ್ತು ರಚನಾತ್ಮಕ ಸಹಕಾರದ ಮೂಲಕ ಮೇಲ್ವಿಚಾರಣೆಯ ರಕ್ಷಕರಾಗಿ ಕಾರ್ಯನಿರ್ವಹಿಸುತ್ತಾರೆ. ಕರ್ನಾಟಕದಲ್ಲಿ ಸಾರ್ವಜನಿಕ ಖಾತೆಗಳ ಸಮಿತಿ (PAC), ಸಾರ್ವಜನಿಕ ಸಂಸ್ಥೆಗಳ ಸಮಿತಿ (COPU) ಮತ್ತು ಸ್ಥಳೀಯ ಸಂಸ್ಥೆಗಳ ಹಾಗೂ ಪಂಚಾಯತ್ ರಾಜ್ ಸಂಸ್ಥೆಗಳ ಸಮಿತಿ-ಇವು ದೇಶದಲ್ಲೇ ಅತ್ಯಂತ ಸಕ್ರಿಯವಾಗಿರುವ ಸಮಿತಿಗಳಾಗಿದ್ದು, ಹೊಣೆಗಾರಿಕೆಯನ್ನು ಬಲಪಡಿಸುವಲ್ಲಿ ಮುಂಚೂಣಿಯಲ್ಲಿವೆ ಎಂದು ನುಡಿದರು.

ಸಂಖ್ಯೆಗಳನ್ನೇ ನೋಡಿದರೆ ಈ ವರ್ಷದೊಳಗಾಗಿ PAC 22 ಸಭೆಗಳು, COPU 28 ಸಭೆಗಳು ಹಾಗೂ LB ಸಮಿತಿ 27 ಸಭೆಗಳನ್ನು ನಡೆಸಿ, ಭಾರತ ಮಹಾಸೌದ ಲೆಕ್ಕಪತ್ರಾಧಿಕಾರಿಗಳಿಂದ (CAG) ಪ್ರಕಟವಾದ ಲೆಕ್ಕಪತ್ರ ವರದಿಗಳ ಕುರಿತು ಚರ್ಚೆ ನಡೆಸಿವೆ. ಇಲ್ಲಿ ಸಮಿತಿಗಳು ಹಣಕಾಸಿನ ವ್ಯತ್ಯಾಸಗಳು, ಪ್ರಕ್ರಿಯಾತ್ಮಕ ಅಕ್ರಮಗಳು ಮತ್ತು ವ್ಯವಸ್ಥಾತ್ಮಕ ಸವಾಲುಗಳನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ಅಗತ್ಯವಾದ ಲೆಕ್ಕಪತ್ರ ಸಾಕ್ಷ್ಯಗಳು, ತಾಂತ್ರಿಕ ಸ್ಪಷ್ಟಿಕರಣಗಳು ಮತ್ತು ವಿಶ್ಲೇಷಣಾತ್ಮಕ ಒಳನೋಟಗಳನ್ನು ಒದಗಿಸುವಲ್ಲಿ ಮಹಾಲೇಖಾಧಿಕಾರಿಗಳ ಕಚೇರಿ ಮಹತ್ತರ ಪಾತ್ರ ವಹಿಸಿದೆ ಎಂದರು.

ಬಹುತೇಕ ಸಮಿತಿಗಳ ಚರ್ಚೆಗಳು ಇತ್ತೀಚೆಗೆ ಮಂಡನೆಯಾದ ಲೆಕ್ಕಪತ್ರ ವರದಿಗಳಿಗೆ ಸಂಬಂಧಿಸಿದುದಾಗಿದ್ದರೂ, ಪ್ರಸ್ತುತ ಸ್ಥಳೀಯ ಸಂಸ್ಥೆಗಳು ಮತ್ತು ಪಂಚಾಯತ್ ರಾಜ್ ಸಮಿತಿಯು ಬಾಕಿ ಇರುವ ಹಳೆಯ ವರದಿಗಳನ್ನು ತೆರವುಗೊಳಿಸುವ ಮಹತ್ತರ ಕೆಲಸವನ್ನೂ ಕೈಗೊಂಡಿದೆ. 1998-99ರಿಂದ ಆರಂಭವಾಗಿರುವ ಅತ್ಯಂತ ಹಳೆಯ ಬಾಕಿ ವರದಿಗಳನ್ನೂ ಸಮಿತಿ ಚರ್ಚೆಗೆ ತೆಗೆದುಕೊಂಡಿದೆ. ಈ ಚರ್ಚೆಗಳ ಮೂಲಕ, ಯಾವುದೇ ಬಾಕಿ ವಿಷಯ ಎಷ್ಟು ಹಳೆಯದಾಗಿದ್ದರೂ ಸರ್ಕಾರಕ್ಕೆ ಸಂಭವಿಸಿದ ನಷ್ಟವನ್ನು ವಸೂಲಿ ಮಾಡುವ ಕ್ರಮವನ್ನು ಕೈಗೊಳ್ಳಲಾಗುತ್ತದೆ ಎಂಬ ಸಂದೇಶವನ್ನು ಸಮಿತಿಯು ಸಂಬಂಧಿಸಿದ ಇಲಾಖೆಗಳಿಗೆ ಸ್ಪಷ್ಟವಾಗಿ ತಿಳಿಸಿದೆ ಎಂದು ಹೇಳಿದರು.

Shalini Rajaneesh Audit Diwas 2025 4

ಲೆಕ್ಕಗಳು ಮತ್ತು ಹಕ್ಕುಸ್ಥಾನ ಕಾರ್ಯ:
ಮಹಾಲೇಖಾಧಿಕಾರಿ (ಲೆಕ್ಕಗಳು ಮತ್ತು ಹಕ್ಕುಸ್ಥಾನ) ಕಚೇರಿ ನಮ್ಮ ರಾಜ್ಯದ ಹಣಕಾಸಿನ ಅಡಿಪಾಯವನ್ನು ಬಲಪಡಿಸುವಲ್ಲಿ ಮಾದರಿಯ ಸೇವೆಯನ್ನು ಒದಗಿಸುತ್ತದೆ. ಮಹಾಲೇಖಾಧಿಕಾರಿ (A&E) ಅವರು ನಿಖರವಾದ ಮಾಸಿಕ ಲೆಕ್ಕಗಳು, ಹಣಕಾಸು ಲೆಕ್ಕಗಳು (Finance Accounts) ಮತ್ತು ಅನುದಾನ ಲೆಕ್ಕಗಳು (Appropriation Accounts) ಮೂಲಕ ರಾಜ್ಯದ ಹಣಕಾಸನ್ನು ಸದೃಢಗೊಳಿಸುವಲ್ಲಿ ಕೇಂದ್ರೀಯ ಪಾತ್ರ ವಹಿಸುತ್ತಿದ್ದಾರೆ. ಇದರಿಂದಾಗಿ, ಹಣಕಾಸಿನ ವರದಿಗಾರಿಕೆಯಲ್ಲಿ ಪೂರ್ಣ ಪಾರದರ್ಶಕತೆ ಸಾಧ್ಯವಾಗಿದೆ. ಅದೇ ರೀತಿ, ನಿವೃತ್ತಿ ವೇತನಗಳು, ಜಿಪಿಎಫ್ ಹಾಗೂ ಇತರ ಹಕ್ಕುಸ್ಥಾನ ಸಂಬಂಧಿತ ಕಾರ್ಯಗಳನ್ನು ಪರಿಣಾಮಕಾರಿ ರೀತಿಯಲ್ಲಿ ನಿರ್ವಹಿಸುವ ಮೂಲಕ ನೌಕರರ ಹಕ್ಕುಗಳನ್ನು ಈ ಕಚೇರಿ ವಿಶ್ವಾಸಾರ್ಹವಾಗಿ ಕಾಪಾಡುತ್ತಿದೆ. ಕಚೇರಿಯು e-PPOಗಳನ್ನು ಜಾರಿ ಮಾಡುವುದು, ಜಿಪಿಎಫ್ ದಾಖಲೆಗಳನ್ನು ಡಿಜಿಟೈಸ್ ಮಾಡುವುದು, ರಾಜ್ಯದ e-HRMS ಪೋರ್ಟಲ್ ಅನ್ನು GEMS ಮೊಡ್ಯೂಲ್‌ಗೆ ಏಕೀಕರಿಸುವುದು ಮೊದಲಾದ ಕ್ರಮಗಳ ಮೂಲಕ ಹಣಕಾಸು ಪ್ರಕ್ರಿಯೆಗಳ ಡಿಜಿಟಲೀಕರಣದಲ್ಲಿ ಮುಂಚೂಣಿಯಲ್ಲಿದೆ ಎಂಬುದು ತಿಳಿದು ಸಂತೋಷವಾಗಿದೆ ಎಂದು ತಿಳಿಸಿದರು.

ಈ ಎಲ್ಲಾ ಮಹತ್ವದ ಕಾರ್ಯ ಚಟವಟಿಕೆಗಳೊಂದಿಗೆ, ಭಾರತೀಯ ಲೆಕ್ಕಪತ್ರ ಮತ್ತು ಲೆಕ್ಕಾಧಿಕಾರಿಗಳ ಇಲಾಖೆ ತಾನೇ ಒಂದು ಶ್ರೀಮಂತ ಪರಂಪರೆಯನ್ನು ಹೊಂದಿದೆ. ಅದು ನಮ್ಮ ಸಂಸ್ಥೆಗಳ ಮೂಲ ಮೌಲ್ಯಗಳಾದ ನೈತಿಕತೆ, ಸ್ವಾಯತ್ತತೆ ಮತ್ತು ಹೊಣೆಗಾರಿಕೆಯನ್ನು ನಿರಂತರವಾಗಿ ಪುನರುಚ್ಚರಿಸುತ್ತದೆ. ಜೊತೆಗೆ, ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಬದ್ಧತೆ ಸ್ಪಷ್ಟವಾಗಿ ಕಾಣುತ್ತದೆ, ವಿಶೇಷವಾಗಿ ಲೆಕ್ಕಪತ್ರ ಹಾಗೂ ಲೆಕ್ಕಪರಿ ಕಾರ್ಯಗಳನ್ನು ಬಲಪಡಿಸುವ ಡಿಜಿಟಲ್ ಸಾಧನಗಳ ಬಳಕೆಯಲ್ಲಿ ಈ ಡಿಜಿಟಲ್ ಪರಿವರ್ತನೆಯ ಒಂದು ಮೈಲುಗಲ್ಲಾಗಿದೆ. ಸಿಎಜಿ ಸಂಪರ್ಕ ಭಾರತದಾದ್ಯಂತ ಸುಮಾರು 10 ಲಕ್ಷ ಲೆಕ್ಕಪತ್ರಕ್ಕೆ ಒಳಪಟ್ಟ ಘಟಕಗಳನ್ನು ಲೆಕ್ಕಪರಿಶೋಧನಾ ಕಚೇರಿಗಳೊಂದಿಗೆ ನೈಜ ಸಮಯದಲ್ಲಿ ಸಂಪರ್ಕಿಸುವ ಡಿಜಿಟಲ್ ಪರಿಸರ ಮತ್ತು ಪರಿಸರ ವ್ಯವಸ್ಥೆ. ಪ್ರತಿ ವರ್ಷ 20,000ಕ್ಕೂ ಹೆಚ್ಚು ಲೆಕ್ಕ ಪರಿಶೀಲನಾ ವರದಿಗಳನ್ನು ಹೊರತರುವ ಇಲಾಖೆಗೆ, ಈ ವೇದಿಕೆ ಅಪೂರ್ವ ಮಟ್ಟದ ಸಂವಹನ ಮತ್ತು ಅಗತ್ಯ ಕ್ರಮಗಳನ್ನು ತರಲಿದೆ. ಇನ್ನಷ್ಟು ಮಹತ್ವದ ಸಂಗತಿಯೆಂದರೆ, ಇದು ಇಲಾಖೆಯನ್ನು ಪರಂಪರೆಯಲ್ಲಿರುವ ವಿರಳ ಸಂವಹನ ಮಾದರಿಯಿಂದ ಹೊರಬಂದು, ಲೆಕ್ಕಪತ್ರಕ್ಕೆ ಒಳಪಡುವ ಘಟಕಗಳೊಂದಿಗೆ ನಿರಂತರ ಸಂವಾದದ ಸಂಸ್ಕೃತಿಯನ್ನು ಅಳವಡಿಸಿಕೊಳ್ಳಲು ಉತ್ತೇಜನ ನೀಡುತ್ತದೆ. ಇದರಿಂದ ಸಮಯೋಚಿತ ಹಾಗೂ ಕ್ರಿಯಾತ್ಮಕ ಪ್ರತಿಕ್ರಿಯೆಗಳ ಸಲ್ಲಿಕೆಯನ್ನು ಖಚಿತಪಡಿಸುತ್ತದೆ ಎಂದರು. ‌

ಲೆಕ್ಕಪರಿಶೋಧನೆ ಎನ್ನುವುದು ಕೇವಲ ಬಾಹ್ಯ ಪರಿಶೀಲನೆ ಅಲ್ಲ, ಅದು ಆಡಳಿತ ವ್ಯವಸ್ಥೆಯ ಅವಿಭಾಜ್ಯ ಭಾಗವಾಗಿದ್ದು, ಸರ್ಕಾರವನ್ನು ಹೆಚ್ಚು ಹೊಣೆಗಾರಿಕೆಯಿಂದ, ಪರಿಣಾಮಕಾರಿಯಾಗಿ ಮತ್ತು ನಾಗರೀಕ ಕೇಂದ್ರೀಕೃತ ಆಡಳಿತದತ್ತ ಗಮನಸೆಳೆಯುವ ಸಹಭಾಗಿಯಾಗಿರುತ್ತದೆ ಎಂದು‌ ಈ ಸಮಯದಲ್ಲಿ ಒತ್ತಿ ಹೇಳ ಬಯಸುತ್ತೇನೆ ಎಂದು ತಿಳಿಸಿದರು.

ಈ ಲೆಕ್ಕಪರಿಶೋಧನಾ ದಿನವು ಮಹಾಲೇಖಪಾಲರ ಸಾರ್ವಜನಿಕರ ಹಿತಕ್ಕಾಗಿ ನೈಜತೆಗೆ ಸಮರ್ಪಿತರು ಎಂಬ ಧೈಯವಾಕ್ಯವನ್ನು ನಿಭಾಯಿಸುವ ನಿಮ್ಮ ಬದ್ಧತೆಯನ್ನು ಮತ್ತಷ್ಟು ಗಾಢಪಡಿಸುವ ಸಂದರ್ಭವಾಗಲಿ. ಈ ಮೂಲಕ, ನಾನು ಲೆಕ್ಕಪತ್ರ ದಿನ 2025 ಅನ್ನು ಅಧಿಕೃತವಾಗಿ ಘೋಷಿಸುತ್ತಿದ್ದೇನೆ ಎಂದರು.

ನಾವೀನ್ಯತೆಗಾಗಿ ರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದುಕೊಂಡಿರುವ ಮಹಾಲೇಖಾಧಿಕಾರಿಗಳ ಕಚೇರಿಗಳನ್ನು ಮತ್ತು ಭಾರತೀಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯ ಸಂಪೂರ್ಣ ತಂಡವನ್ನು ಅವರ ಶ್ರಮದ ಕಾರ್ಯಕ್ಕಾಗಿ ಹೃತ್ತೂರ್ವಕವಾಗಿ ಅಭಿನಂದಿಸುತ್ತೇನೆ ಎಂದು ತಿಳಿಸಿದ ಮುಖ್ಯ ಕಾರ್ಯದರ್ಶಿಗಳು ಈ ಲೆಕ್ಕಪತ್ರ ದಿನಾಚರಣೆಯು ಯಶಸ್ವಿಯಾಗಲಿ ಎಂದು ಹಾರೈಸಿ ಕರ್ನಾಟಕದ ಸಮೃದ್ಧ ಮತ್ತು ಸಹನಶೀಲ ಭವಿಷ್ಯ ನಿರ್ಮಾಣಕ್ಕಾಗಿ – ನಾವು ಕೈಜೋಡಿಸಿ, ಒಂದಾಗಿ ಮುಂದುವರಿಯೋಣ ಎಂದು ತಿಳಿಸಿದರು.

TAGGED:Audit Diwas 2025bengalurukarnatakashalini rajneesh
Share This Article
Facebook Whatsapp Whatsapp Telegram

Cinema news

Jailer
ತಲೈವಾ ನಟನೆಯ ಜೈಲರ್-2 ಸಿನಿಮಾಗೆ ವಿದ್ಯಾ ಬಾಲನ್ ಎಂಟ್ರಿ!
Bollywood Cinema Latest South cinema Top Stories
Samantha Ruth Prabhu Raj Nidimoru
ಮದ್ವೆ ಬಳಿಕ ಕಾಣಿಸಿಕೊಂಡ ಸಮಂತಾ-ರಾಜ್ ನಿಡಿಮೋರು..!
Cinema Latest Top Stories
Miraj
ʻದೇವರು ರುಜು ಮಾಡಿದನುʼ ಚಿತ್ರದ ಸಾಂಗ್ ರಿಲೀಸ್ – ವಿರಾಜ್ ಬಿಂದಾಸ್ ಕುಣಿತ
Cinema Latest Sandalwood
gilli rajat
ರಜತ್‌ ಆಚೆ ಕಳಿಸಿಯೇ ನಾನು ಆಚೆ ಹೋಗೋದು: ಸುದೀಪ್‌ ಎದುರೇ ಗಿಲ್ಲಿ ಸವಾಲ್‌
Cinema Latest Top Stories TV Shows

You Might Also Like

Shamanuru
Bengaluru City

ಶಾಮನೂರು ಅಂತ್ಯಕ್ರಿಯೆಗೆ ಸ್ಥಳ ನಿಗದಿ – ಸೋಮವಾರ 12 ಗಂಟೆವರೆಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ

Public TV
By Public TV
6 hours ago
Shamanur Shivashankarappa
Bengaluru City

ಕಾಂಗ್ರೆಸ್‌ನ ಹಿರಿಯ ಶಾಸಕ, ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ವಿಧಿವಶ

Public TV
By Public TV
6 hours ago
Team India 3
Cricket

ಧರ್ಮಶಾಲಾದಲ್ಲಿ ಟೀಂ ಇಂಡಿಯಾ ದರ್ಬಾರ್‌ – ಆಫ್ರಿಕಾ ವಿರುದ್ಧ 7 ವಿಕೆಟ್‌ಗಳ ಜಯ, ಸರಣಿ 2-1 ಮುನ್ನಡೆ

Public TV
By Public TV
7 hours ago
Nitin Nabin
Latest

ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷರಾಗಿ ಬಿಹಾರ ಸಚಿವ ನಿತಿನ್ ನಬಿನ್ ನೇಮಕ

Public TV
By Public TV
7 hours ago
Davangere DC office
Davanagere

ಶಾಮನೂರು ನಿಧನ – ಸೋಮವಾರ ದಾವಣಗೆರೆಯ ಎಲ್ಲಾ ಶಾಲೆಗಳಿಗೆ ರಜೆ ಘೋಷಣೆ

Public TV
By Public TV
7 hours ago
Shamanur Shivashankarappa 2
Bengaluru City

ದಾವಣಗೆರೆ ಧಣಿ ಶಾಮನೂರು ಶಿವಶಂಕರಪ್ಪ ನಿಧನ – ಸಿದ್ರಾಮಯ್ಯ, ದೇವೇಗೌಡ, ರಾಹುಲ್‌ ಗಾಂಧಿ ಸೇರಿ ಗಣ್ಯರಿಂದ ಸಂತಾಪ

Public TV
By Public TV
7 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?