515 ಓವರ್ ಎಸೆದ ಬಳಿಕ ಸಣ್ಣ ತಪ್ಪು ಮಾಡಿದ ಭುವಿ

Public TV
2 Min Read
BHUVANESHAWAR KUMAR

ಕೊಲಂಬೋ: ಭಾರತ ಮತ್ತು ಶ್ರೀಲಂಕಾ ನಡುವಿನ ಏಕದಿನ ಸರಣಿಯನ್ನು ಭಾರತ ಕೈವಶ ಮಾಡಿಕೊಂಡಿದೆ. ಈ ನಡುವೆ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ತಂಡದ ಉಪನಾಯಕ ಭುವನೇಶ್ವರ್ ಕುಮಾರ್ 5 ವರ್ಷಗಳಲ್ಲಿ 515 ಓವರ್ ಎಸೆದ ನಂತರ ಇದೀಗ ಸಣ್ಣ ತಪ್ಪೊಂದನ್ನು ಮಾಡಿದ್ದಾರೆ.

bhuvaneshwar kumar medium

ಹೌದು ಬೌಲರ್ ಎಸೆಯುವ ನೋ ಬಾಲ್‍ನಿಂದಾಗಿ ಅದೆಷ್ಟೊ ಪಂದ್ಯಗಳ ಚಿತ್ರಣ ಬದಲಾಗಿದೆ. ಹಾಗಾಗಿ ಬೌಲರ್ ನೋ ಬಾಲ್ ಎಸೆಯದೇ ಇರಲು ಸಾಕಷ್ಟು ಶ್ರಮವಹಿಸುತ್ತಾರೆ. ಅದರಲ್ಲೂ ನಿಗದಿತ ಓವರ್‍ ಗಳ ಪಂದ್ಯದಲ್ಲಿ ನೋ ಬಾಲ್‍ಗೆ ಹೆಚ್ಚಿನ ಬೆಲೆ ತೆರಬೇಕಾಗುತ್ತದೆ. ಒಂದು ನೋ ಬಾಲ್ ಮಾಡಿದರೆ ಅದು ಎದುರಾಳಿ ತಂಡಕ್ಕೆ ವರದಾನ ಒಂದು ಫ್ರೀ ಹಿಟ್ ಅವಕಾಶ ದೊರೆಯುತ್ತದೆ. ಹಾಗಾಗಿ ಸಾಕಷ್ಟು ಬೌಲರ್‍ ಗಳು ನೋ ಬಾಲ್ ಎಸಯದೇ ಇರಲು ಪ್ರಯತ್ನಿಸುತ್ತಾರೆ. ಇದನ್ನೂ ಓದಿ: 8ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿ ದಾಖಲೆ ನಿರ್ಮಿಸಿದ ದೀಪಕ್ ಚಹರ್

BHUVANESHWAR KUMAR 1 medium

ಭಾರತ ವೇಗಿ ಭುವನೇಶ್ವರ್ ಕುಮಾರ್ ಕೂಡ ನೋಬಾಲ್ ಬಗ್ಗೆ ಹೆಚ್ಚಿನ ಗಮನಹರಿಸಿದ್ದಾರೆ. ಇದಕ್ಕೆ ಉತ್ತಮ ನಿದರ್ಶನ ಅವರು ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ಬರೋಬ್ಬರಿ 5 ವರ್ಷಗಳ ಬಳಿಕ ಒಂದು ನೋ ಬಾಲ್ ಎಸೆದಿದ್ದಾರೆ.

ಭುವಿ ಈ ಹಿಂದೆ 2015ರ ಅಕ್ಟೋಬರ್ ನಲ್ಲಿ ನಡೆದ ಪಂದ್ಯವೊಂದರಲ್ಲಿ ನೋ ಬಾಲ್ ಎಸೆದಿದ್ದರು. ಆ ಬಳಿಕ 5 ವರ್ಷಗಳು ಕಳೆದಿದೆ. ಈ ನಡುವೆ 3093 ಎಸೆತಗಳನ್ನು ಎಸೆದಿದ್ದಾರೆ. ಆದರೆ ಒಂದೇ ಒಂದು ನೋಬಾಲ್ ಕೂಡ ಮಾಡಿರಲಿಲ್ಲ. ಇದೀಗ ಶ್ರೀಲಂಕಾ ಸರಣಿಯಲ್ಲಿ ಒಂದು ನೋ ಬಾಲ್ ಮಾಡುವ ಮೂಲಕ 5 ವರ್ಷಗಳ ಬಳಿಕ ಗೆರೆದಾಟಿ ಬೌಲಿಂಗ್ ಮಾಡಿ ಎದುರಾಳಿ ತಂಡಕ್ಕೆ ಫ್ರೀ ಹಿಟ್ ಅವಕಾಶ ನೀಡಿದ್ದಾರೆ.

ಇದನ್ನು ಗಮನಿಸುತ್ತಿದ್ದಂತೆ ಭುವಿ ತಮ್ಮ ಬೌಲಿಂಗ್ ಬಗ್ಗೆ ಎಷ್ಟು ಚಾಕಚಕ್ಯತೆ ಹೊಂದಿದ್ದಾರೆ ಎಂಬುದರ ಬಗ್ಗೆ ನೆಟ್ಟಿಗರು ಚರ್ಚೆಗಿಳಿದಿದ್ದಾರೆ. ಭುವನೇಶ್ವರ್ ನೋ ಬಾಲ್ ಎಸೆಯದೆ 5 ವರ್ಷಗಳಾಗಿತ್ತು ಇದೀಗ ಅ ತಪಸ್ಸು ಭಂಗವಾಗಿದೆ, ಕೊನೆಗೂ ನೋ ಬಾಲ್ ಎಸೆದಿದ್ದಾರೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ, ಭುವನೇಶ್ವರ್ ಕ್ರಿಕೆಟ್ ಬಗ್ಗೆ ಇರುವಂತಹ ಬದ್ಧತೆ ಇದರಿಂದ ತಿಳಿಯುತ್ತದೆ ಎಂದು ಅಭಿಮಾನಿಯೊಬ್ಬರು ಹೊಗಳಿದ್ದಾರೆ. ಹೀಗೆ ಅನೇಕ ಮೆಚ್ಚುಗೆಯ ಮಾತುಗಳು ಕ್ರಿಕೆಟ್‍ವಲಯದಲ್ಲಿ ಕೇಳಿ ಬಂದಿದೆ.

Share This Article