ಬೆಂಗ್ಳೂರಲ್ಲಿ ನಿರ್ಭಯಾ ಕೇಸ್‍ಗಿಂತ ಭೀಕರ ಪ್ರಕರಣ ಬೆಳಕಿಗೆ- 5 ವರ್ಷದ ಮಗುವಿನ ಮೇಲೆ ಮನೆ ಮಾಲೀಕನಿಂದ ಅತ್ಯಾಚಾರ, ಮಗು ಸಾವು

Public TV
2 Min Read
bengaluru rape 4

ಬೆಂಗಳೂರು: ನಗರದಲ್ಲಿ ಇಡೀ ಮಾನವ ಕುಲವೇ ತಲೆ ತಗ್ಗಿಸುವಂತಹ ಪೈಶಾಚಿಕ ಕೃತ್ಯವೊಂದು ನಡೆದಿದೆ. ದೆಹಲಿ ನಿರ್ಭಯಾ ಕೇಸ್ ಗಿಂತ ಭೀಕರ ಪ್ರಕರಣ ಬಯಲಾಗಿದೆ. ಐದು ವರ್ಷದ ಮಗುವಿನ ಮೇಲೆ ಕಾಮುಕ ಮನೆ ಮಾಲಿಕ ಅತ್ಯಾಚಾರವೆಸಗಿದ್ದು, ಮಗು ಈಗ ಸಾವನ್ನಪ್ಪಿದೆ.

ಆಗಸ್ಟ್ 17 ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮನೆ ಮಾಲೀಕ ಮಲ್ಲಿಕಾರ್ಜುನ ಈ ನೀಚ ಕೃತ್ಯವೆಸಗಿದ ಆರೋಪಿ. ಮನೆಯಲ್ಲಿ ಯಾರೂ ಇಲ್ಲದ ವೇಳೆ ತಿಂಡಿ ಕೊಡಿಸುವ ನೆಪದಲ್ಲಿ ಮಗುವನ್ನ ಕರೆದುಕೊಂಡು ಹೋಗಿ ಅತ್ಯಾಚಾರವೆಸಗಿದ್ದಾನೆ. ಘಟನೆಯಿಂದ ಶಾಕ್‍ಗೆ ಒಳಗಾಗಿದ್ದ ಮಗುವನ್ನ ಸೆಂಟ್ ಜಾನ್ಸ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಮಗು ಸಾವನ್ನಪ್ಪಿದೆ.

bengaluru rape 1

ಮೃತ ಮಗುವಿನ ತಾಯಿ ಭಾಗಮ್ಯ ಆರೋಪಿ ಮಲ್ಲಿಕಾರ್ಜುನ ಹಾಗೂ ಚಂದನ ಎಂಬವರ ಬಳಿ ಮಗುವನ್ನು ಬಿಟ್ಟಿದ್ದರು. ಚಂದನ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ಆರೋಪಿ ಮಲ್ಲಿಕಾರ್ಜುನ ನಿತ್ಯ ಮಗುವಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ. ಚಂದನ ವೃತ್ತಿಯಲ್ಲಿ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದು, ಈಕೆಯ ಜೊತೆಗಿದ್ದ ಮಲ್ಲಿಕಾರ್ಜುನ್ ಪಿಂಪ್ ಕೆಲಸ ಮಾಡ್ತಿದ್ದ. ಮಗು ಬೇಡವಾಗಿದ್ದ ಹಿನ್ನೆಲೆ ಯಾರಾದ್ರೂ ಸಾಕಿಕೊಳ್ಳಲಿ ಅಂತಾ ಭಾಗ್ಯಮ್ಮ ಮಗುವನ್ನ ಮಲ್ಲಿಕಾರ್ಜುನ್‍ಗೆ ನೀಡಿದ್ದರು. ಆದ್ರೆ ಮಲ್ಲಿಕಾರ್ಜುನ್ ಮಗುವಿಗೆ ಕಳೆದ ಎರಡು ತಿಂಗಳಿಂದ ಸರಿಯಾಗಿ ಊಟ ನೀಡ್ತಿರಲಿಲ್ಲ. ಹೀಗಾಗಿ ಮಗು ಅಲ್ಸರ್‍ನಿಂದ ಸಹ ಬಳಲುತ್ತಿತ್ತು. ಮೊದಲೇ ಅಲ್ಸರ್‍ನಿಂದ ಬಳುತ್ತಿದ್ದ ಮಗು ಮೇಲೆ ಅತ್ಯಾಚಾರ ನಡೆದು ಆಕೆಯ ಪರಿಸ್ಥಿತಿ ವಿಕೋಪಕ್ಕೆ ಹೋಗಿತ್ತು.

bengaluru rape 2

ಗುಪ್ತಾಂಗಕ್ಕೆ ರಾಡ್ ಹಾಕಿದ್ದ ಪಾಪಿ: ಮಲ್ಲಿಕಾರ್ಜುನ ಮಗುವಿನ ಮೇಲೆ ಮೃಗದಂತೆ ವರ್ತಿಸಿದ್ದಾನೆ. ಮಗುವಿನ ಗುಪ್ತಾಂಗಕ್ಕೆ ಕಬ್ಬಿಣದ ರಾಡ್ ಹಾಕಿದ್ದಾನೆ. ಮಗುವಿನ ದೇಹವನ್ನು ಸಿಗರೇಟ್ ನಿಂದ ಸುಟ್ಟಿದ್ದಾನೆ. ಮಗು ದಿನಾ ಅಳುತ್ತಿದ್ರಿಂದ ಮಗುವಿನ ತಾಯಿ ಹತ್ತಿರದ ಮೂರ್ನಾಲ್ಕು ಖಾಸಗಿ ಆಸ್ಪತ್ರೆಗೆ ತೋರಿಸಿದ್ದರು. ಗುಪ್ತಾಂಗಕ್ಕೆ ರಾಡ್ ಹಾಕಿದ್ರಿಂದ ಮಗು ತೀವ್ರ ನೋವು ಅನುಭವಿಸಿತ್ತು. ತಲಘಟ್ಟಪುರ ಪೊಲೀಸ್ ಠಾಣೆಯ ಮಹಿಳಾ ಪೇದೆಯೊಬ್ಬರು ಮಗುವಿನ ಮೇಲೆ ರೇಪ್ ಆಗಿರೋದನ್ನ ಕನ್ಫರ್ಮ್ ಮಾಡಿದ್ದಾರೆ.

bengaluru rape

ಘಟನೆ ಬಳಿಕ ಮಗುವನ್ನ ಮೊದಲು ಆರ್‍ಆರ್ ನಗರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ತಾಯಿ ಇಂದಿರಾಗಾಂಧಿ ಆಸ್ಪತ್ರೆಗೆ ದಾಖಲಿಸಿದ್ದರು. ತೀವ್ರರಕ್ತ ಸ್ರಾವ ಹಿನ್ನೆಲೆಯಲ್ಲಿ ಸಂತ್ರಸ್ತ ಬಾಲಕಿಯ ತಾಯಿ ಮಗುವನ್ನ ಹುಳಿ ಮಾವು ಆಸ್ಪತ್ರೆಗೆ ದಾಖಲಿಸಿದ್ದರು. ನಂತರ ಸೆಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆದ್ರೆ ಮುಗ್ಧ ಕಂದಮ್ಮ ಈಗ ಸಾವನ್ನಪ್ಪಿದೆ.

bengaluru rape 5

ಈ ಬಗ್ಗೆ ಮಾತನಾಡಿದ ಡಿಸಿಪಿ ಶರಣಪ್ಪ, ಆಗಸ್ಟ್ 17ರಂದು ಭಾಗ್ಯಮ್ಮ ದೂರು ನೀಡಿದ್ದರು. ಪರಿಚಯಸ್ಥ ಮಲ್ಲಿಕಾರ್ಜುನ್‍ಗೆ ಮಗುವನ್ನ ನೀಡಿದ್ದರು. ಚಂದನ ಜೊತೆ ಸೇರಿಕೊಂಡು ಮಲ್ಲಿಕಾರ್ಜುನ ಮಗುವಿನ ಮೇಲೆ ಹಲ್ಲೆ ಮಾಡುತ್ತಿದ್ದ. ಅಲ್ಲದೇ ಮಲ್ಲಿಕಾರ್ಜುನ ಮಗುವನ್ನು ಅಸಭ್ಯವಾಗಿ ಮುಟ್ಟುತ್ತಿದ್ದ ಅಂತ ದೂರು ನೀಡಿದ್ದರು. ಈಗಾಗಲೇ ಇಬ್ಬರು ಆರೋಪಿಗಳನ್ನ ಬಂಧಿಸಿದ್ದೇವೆ. ಸೆಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಗು ನಿನ್ನೆ ರಾತ್ರಿ ಮೃತಪಟ್ಟಿದೆ ಅಂತ ಹೇಳಿದ್ರು

bengaluru rape 3

ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಮಲ್ಲಿಕಾರ್ಜುನನ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಸದ್ಯ ಪೊಲೀಸರು ಚಂದನ ಮತ್ತು ಮಲ್ಲಿಕಾರ್ಜುನ್‍ನನ್ನು ವಶಕ್ಕೆ ಪಡೆದಿದ್ದಾರೆ. ಇದೀಗ ಮಗು ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ ಕೊಲೆ ಪ್ರಕರಣ ದಾಖಲಿಸಿಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.

Share This Article
Leave a Comment

Leave a Reply

Your email address will not be published. Required fields are marked *