ಫಲಿತಾಂಶಕ್ಕೂ ಮೊದಲೇ ಕುರ್ಚಿಗಾಗಿ ಸರ್ಕಸ್- ಯಾವ ರಾಜ್ಯದಿಂದ ಯಾರೆಲ್ಲಾ ಸಂಭವನೀಯ ಸಿಎಂ ಅಭ್ಯರ್ಥಿಗಳು?

Public TV
2 Min Read
probable cm candidates

ನವದೆಹಲಿ: ಫಲಿತಾಂಶಕ್ಕೂ ಮೊದಲೇ ಸಿಎಂ ಸ್ಥಾನಕ್ಕಾಗಿ ಉತ್ತರ ಪ್ರದೇಶದಲ್ಲಿ ಭಾರೀ ಪೈಪೋಟಿ ನಡೀತಿದೆ. ಜೊತೆಗೆ ಉಳಿದ ರಾಜ್ಯಗಳಲ್ಲಿ ಯಾರೆಲ್ಲಾ ಸಿಎಂ ಸಂಭವನೀಯ ಅಭ್ಯರ್ಥಿಗಳಿದ್ದಾರೆ ಅನ್ನೋದನ್ನ ನೋಡೋದಾದ್ರೆ;

1. ಉತ್ತರಪ್ರದೇಶ
* ಯೋಗಿ ಆದಿತ್ಯನಾಥ್: ಪೂರ್ವಾಂಚಲ ಭಾಗದ ಪ್ರಬಲ ಮುಖಂಡರಾಗಿರೋ ಇವರಿಗೆ ಆರ್‍ಎಸ್‍ಎಸ್ ಆರ್ಶೀವಾದವಿದೆ. ಸನ್ಯಾಸಿ ಹಾಗೂ ಹೈಕಮಾಂಡ್‍ಗೆ ತುಂಬಾ ಹತ್ತಿರ.

* ಕೇಶವ ಮಯೂರ: ಹಿಂದುಳಿದ ವರ್ಗಗಳ ಮುಖಂಡ, ಕುರ್ಮಿ ಜನಾಂಗದ ನಾಯಕ. ವಿಹೆಚ್‍ಪಿ ಹಿನ್ನೆಲೆ ಇದ್ದು, ಕೇಂದ್ರ ಸಚಿವರಾಗಿದ್ದಾರೆ. ಪೂರ್ವಾಂಚಲ ಭಾಗದ ಮುಖಂಡರಾಗಿರೀ ಇವರು ಅನುಭವಿ ರಾಜಕಾರಣಿ.

* ಡಾ.ಮಹೇಶ್ ಶರ್ಮಾ: ಆರ್‍ಎಸ್‍ಎಸ್‍ಗೆ ಹತ್ತಿರ. ಉತ್ತಮ ಶೈಕ್ಷಣಿಕ ಹಿನ್ನೆಲೆ ಹೊಂದಿದ್ದಾರೆ. ಹಾಲಿ ಕೇಂದ್ರ ಸಚಿವರಾಗಿದ್ದಾರೆ.

* ಕಲ್‍ರಾಜ್ ಮಿಶ್ರಾ: ಬ್ರಾಹ್ಮಣ ಮುಖಂಡ, ಉತ್ತಮ ರಾಜಕಾರಣಿ. ಇವರಿಗೆ ರಾಷ್ಟ್ರ ರಾಜಕಾರಣದ ಅನುಭವವಿದೆ.

2. ಪಂಜಾಬ್
ಕಾಂಗ್ರೆಸ್‍ನಿಂದ ಅಮರೀಂದರ್ ಸಿಂಗ್ ಸಿಎಂ ರೇಸ್‍ನಲ್ಲಿದ್ದರೆ, ನವಜೋತ್ ಸಿಂಗ್ ಸಿಧು ಸಂಭವನೀಯ ಡಿಸಿಎಂ ಅಭ್ಯರ್ಥಿಯಾಗಿದ್ದಾರೆ. ಬಿಜೆಪಿ, ಅಕಾಲಿದಳದಿಂದ ಪ್ರಕಾಶ್ ಸಿಂಗ್ ಬಾದಲ್ ಇದ್ದಾರೆ.

3. ಗೋವಾ
ಗೋವಾದಲ್ಲಿ ಸದ್ಯಕ್ಕೆ ಬಿಜೆಪಿ ಆಡಳಿತವಿದೆ. ಮತ್ತೊಂದು ಬಾರಿಗೆ ಅಧಿಕಾರಕ್ಕೆ ಬರುತ್ತೆ ಅಂತ ಚುನವಣೋತ್ತರ ಸಮೀಕ್ಷೆ ಹೇಳ್ತಿದೆ. ಹಾಗಾದ್ರೆ, ಗೋವಾಕ್ಕೆ ಯಾರು ಸಿಎಂ..? ನಾಯಕರ ಹಿನ್ನೆಲೆ ಏನು ಅಂತ ನೋಡೋದಾದ್ರೆ;
* ಬಿಜೆಪಿಯಿಂದ ಮನೋಹರ್ ಪರಿಕ್ಕರ್ (ಅನುಭವಿ ರಾಜಕಾರಣಿ, ಕೇಂದ್ರ ಸಚಿವ)
* ಬಿಜೆಪಿಯಿಂದ ಲಕ್ಷ್ಮಿಕಾಂತ್ ಪರ್ಸೇಕರ್ (ಹಾಲಿ ಸಿಎಂ, ಗೆಲುವಿನ ರೂವಾರಿ)
* ಬಿಜೆಪಿಯಿಂದ ಫ್ರಾನ್ಸಿಸ್ ಡಿಸೋಜಾ (ಕ್ರಿಶ್ಚಿಯನ್ ಲೀಡರ್)
* ಲೂಸಿನೋ ಫೆಲೈರೋ ( ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ )

4. ಉತ್ತರಾಖಂಡ್
ಉತ್ತರಾಖಂಡ್‍ನಲ್ಲಿ ಕಾಂಗ್ರೆಸ್‍ನ ಹರೀಶ್ ರಾವತ್ ವಿರೋಧಿ ಅಲೆ ಇದೆ. ಹೀಗಾಗಿ, ನಾವು ಪಟ್ಟಕ್ಕೇರ್ತೇವೆ ಅನ್ನೋದು ಬಿಜೆಪಿ ನಾಯಕರ ನಿರೀಕ್ಷೆ. ಹಾಗಾಗಿ, ಉತ್ತರಾಖಂಡ್‍ಗೆ ಯಾರು ಸಿಎಂ..? ನಾಯಕರ ಹಿನ್ನೆಲೆ ಏನು..?
* ಬಿಜೆಪಿಗೆ ಸ್ಪಷ್ಟ ಬಹುಮತ ಸಾಧ್ಯತೆ
* ಬಿಜೆಪಿಯಿಂದ ಬಿಸಿ ಖಂಡೂರಿ ರೇಸ್‍ನಲ್ಲಿದ್ದಾರೆ. 2007 ರಿಂದ 2009, 2011 ರಿಂದ 2012 ರವರೆಗೆ ಸಿಎಂ ಆಗಿದ್ದ ಅನುಭವ ಇವರಿಗಿದೆ.

5. ಮಣಿಪುರ
ಪುಟ್ಟರಾಜ್ಯ ಮಣಿಪುರದಲ್ಲಿ ಸತತವಾಗಿ ಹ್ಯಾಟ್ರಿಕ್ ಸಿಎಂ ಆಗಿದ್ದ ಕಾಂಗ್ರೆಸ್‍ನ ಒಕರಾಮ್ ಇಬೋಬಿ ಸಿಂಗ್‍ಗೆ ಬಿಜೆಪಿ ಪ್ರಬಲ ಪೈಪೋಟಿ ನೀಡಿದೆ. ಮಣಿಪುರದಲ್ಲಿ ಬಿಜೆಪಿ ಸಿಎಂ ಕ್ಯಾಂಡಿಡೇಟ್ ಯಾರು? ಅವರ ಹಿನ್ನೆಲೆ ಏನು ಅನ್ನೋದನ್ನ ನೋಡೋದಾದ್ರೆ;

ಚವೋಬ ಸಿಂಗ್
* ಚುನಾವಣಾ ನಿರ್ವಹಣಾ ಸಮಿತಿ ಮುಖ್ಯಸ್ಥ
* ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ
* ಪಕ್ಷ ಬೆಳವಣಿಗೆ ರೂವಾರಿ
ಇವರ ಜೊತೆಗೆ ಹಾಲಿ ಬಿಜೆಪಿ ರಾಜ್ಯಾಧ್ಯಕ್ಷ ಬಾಬಾನಂದ ಸಿಂಗ್ ಹೆಸರು ಕೇಳಿ ಬಂದಿದೆ. ಇವರು ಪ್ರಧಾನಿ ಮೋದಿಯ ಕಟ್ಟಾ ಆರಾಧಕ.

Share This Article
Leave a Comment

Leave a Reply

Your email address will not be published. Required fields are marked *